Skip to main content

Blog 2318. ಆನಂದಪುರಂನ ದೈವಭಕ್ತ ಉಪಕಾರಿ ಮದುಸೂದನ ಬೇಕಲ್

#ಮದುಸೂದನ್_ಬೇಕಲ್
ಕೃಷ್ಣ ಸ್ಟೋರ್ ಮಾಲಿಕರು
ಆನಂದಪುರಂ

ಹೆಸರು ಪ್ರಚಾರಕ್ಕೆ ಆಸೆ ಪಡದ 

ನಿಸ್ವಾರ್ಥಿ ದೈವ ಭಕ್ತ



#Anandapuram #sagar #shivamogga #bakal #kerala #Kumble #kasaragodnews #kasaragod #ayyappaswamy #shabarimala #temple 

  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಹೊಸನಗರ ರಸ್ತೆಯಲ್ಲಿರುವ  ಯಡೇಹಳ್ಳಿ ಎಂಬ ನಮ್ಮೂರ ಪುರದೈವ ವರಸಿದ್ಧಿ ವಿನಾಯಕ ಸ್ವಾಮಿಯ ಹಿಂದಿನ ವರ್ಷದ ರಥೋತ್ಸವದ ಒಂದು ಬೆಳಗಿನ ಫೋಟೋ ನೋಡಿ. 

ಇಲ್ಲಿನ ರಥ ಬೀದಿಯಲ್ಲಿ ಕಸ ಗುಡಿಸುತ್ತಿರುವವರು,ಉದ್ದನಾದ ಕಸಬರಿಗೆ ಹಿಡಿದುಕೊಂಡಿರುವವರೇ ಮಧುಸೂದನ್ ಬೇಕಲ್.

ಆನಂದಪುರಂನ ಶ್ರೀಮಂತ ಸುಸಂಸ್ಕೃತ ವ್ಯಾಪಾರಿ ಮನೆತನದ ಕಾಸರಗೋಡು ಮೂಲದ ದಿವಂಗತ ಜಲ ಕೃಷ್ಣಣ್ಣರ ಜೇಷ್ಠ ಪುತ್ರ ಇವರು.

   60ರ ದಶಕದಲ್ಲಿ ಇವರ ತಂದೆ ಆನಂದಪುರಂಗೆ ಬಂದು ಪ್ರಾರಂಬಿಸಿದ  ಕೃಷ್ಣ ಸ್ಟೋರ್ ಎಂಬ ದಿನಸಿ ಅಂಗಡಿ ಇಡೀ ಆನಂದಪುರಂಗೆ ಹೆಸರುವಾಸಿ ಆಯಿತು.

   ಈ ಅಂಗಡಿ ಈಗಲೂ ಮುಂದುವರೆದಿದೆ, ಮೂಲ  ಮಾಲೀಕರಾದ ಇವರ ತಂದೆ ಬೇಕಲ್ ಜಲಕೃಷ್ಣಣ್ಣ ಈಗಿಲ್ಲ ಅವರು ಮತ್ತು ಅವರ ಹೆಂಡತಿಯ ತಮ್ಮ ಕೊರಗಣ್ಣ ಈ ಅಂಗಡಿ ಖ್ಯಾತಿಗೆ ಕಾರಣರಾಗಿದ್ದರು.

ಈಗ ಈ ಅಂಗಡಿಯನ್ನು  ಮಧುಸೂದನ್ ಬೇಕಲ್ ನಡೆಸಿಕೊಂಡು ಹೋಗುತ್ತಿದ್ದಾರೆ.

ಇವರ ಸಹೋದರ ಸಂತೋಷ್ ಬೇಕಲ್ ಮತ್ತು ಗಿರೀಶ್ ಬೇಕಲ್ ಪ್ರತ್ಯೇಕವಾಗಿದ್ದಾರೆ ಮೂವರು ಸಹೋದರಿಯರು ವಿವಾಹವಾಗಿ ಅವರವರ ಪತಿಯ ಮನೆಗಳಲ್ಲಿ ಇದ್ದಾರೆ

  ಒಬ್ಬ ಸಹೋದರ ಸಂತೋಷ್ ಬೇಕಲ್ ಮಂಗಳೂರಲ್ಲಿ ವಿದ್ಯುತ್ ಗುತ್ತಿಗೆದಾರನಾಗಿ ಮುಂದುವರೆದರೆ ಇನ್ನೊಬ್ಬ ಸಹೋದರ ಗಿರೀಶ್ ಬೇಕಲ್ ಆನಂದಪುರಂನಲ್ಲೇ ನೆಲೆಸಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಲೀಡಿಂಗ್ ಎಲ್ಐಸಿ ಪ್ರತಿನಿಧಿ ಎಂಬ ಖ್ಯಾತಿ ಪಡೆದಿದಾರೆ.

ಕೇರಳದ ಕಾಸರಗೋಡು ಕುಂಬಳೆ ಸಮೀಪದ ಬೇಕಲ್ ಇವರ ಸ್ವಂತ ಊರು.

   ಇವತ್ತು ಅಲ್ಲಿನ ಬೇಕಲ್ ಕೋಟೆ ವಿಶ್ವವಿಖ್ಯಾತ,ಅದನ್ನು ನಿರ್ಮಿಸಿದವರು ಕೆಳದಿ ಅರಸರು.

 ರಾಮಕ್ಷತ್ರಿಯರು ಕೆಳದಿ ಅರಸರಿಗೆ ಕೋಟೆಕಾರರಾಗಿ, ಗೆರಿಲ್ಲಾ  ಯುದ್ದ ತಂತ್ರಜ್ಞಾನ, ಟಂಕಸಾಲೆ ಮತ್ತು ರಾಜರ ದರ್ಬಾರುಗಳ ಸಭೆ, ಸಮಾರಂಭಗಳ ಪ್ರೋಟೋಕಾಲ್ ನೋಡುತ್ತಿದ್ದವರು.

ಮಹಾರಾಷ್ಟ್ರದ ವಿಜಯ ದುರ್ಗದ ಅರಸ ಅಪ್ರತಿಮ ಸಾಹಸಿ ಆತ ಅಯೋಧ್ಯದಲ್ಲಿ ಶ್ರೀರಾಮ ವನವಾಸಕ್ಕೆ ಹೋದಾಗ ಅಯೋದ್ಯೆ ಮೇಲೆ ದಂಡೆತ್ತಿ ಹೋಗುತ್ತಾರೆ ಭರತನಿಂದ ಸೋತಾಗ ಅಯೋಧ್ಯೆಯ ಸೈನ್ಯ ವಿಜಯ ದುರ್ಗ ಕೋಟೆ ವಶ ಪಡೆಯುತ್ತದೆ.

 ಅಯೋಧ್ಯೆಯಿಂದ ಮಹಾರಾಷ್ಟ್ರದ ರತ್ನಗಿರಿ ಸಮೀಪದ ವಿಜಯದುರ್ಗ ಕೋಟೆಗೆ ಬಂದು ಆಡಳಿತ ನಡೆಸಿದ ಶ್ರೀ ರಾಮನ ಸೈನ್ಯದ ಯೋದರಾದ್ದರಿಂದ ಸ್ಥಳಿಯ ಕ್ಷತ್ರಿಯರು ಇವರನ್ನ ರಾಮಕ್ಷತ್ರಿಯರೆಂದು ಕರೆದರು.

 ಇವರು ಕೋಟೆ ನಿರ್ಮಾಣದಲ್ಲಿ ಇವರದ್ದು ಎತ್ತಿದ ಕೈ ಆದ್ದರಿಂದ ಕೋಟೆಕಾರರೆಂದು ಕರೆಯುತ್ತಾರೆ.

  ಪೋರ್ಚುಗೀಸರ ದಾಳಿ ಮತ್ತು ಮತಾಂತರದ ಪ್ರಯತ್ನ ವಿರೋದಿಸಿ ರಾಮಕ್ಷತ್ರಿಯರು ಗೋವಾದಿಂದ ವಿಜಯನಗರ ಸಂಸ್ಥಾನಕ್ಕೆ ಆಸರೆ ಕೇಳಿ ಬಂದ ಯೋದರು.

ವಿಜಯನಗರ ಅರಸರು ಅವರ ವ್ಯಾಪ್ತಿಯ ಅನೇಕ ರಾಜರುಗಳಿಗೆ ರಾಮಕ್ಷತ್ರಿಯ ಸೈನ್ಯದ ತುಕಡಿಗಳನ್ನು ಕಳಿಸಿಕೊಡುತ್ತಾರೆ.

  ಈ ರೀತಿ ಕೆಳದಿ ಅರಸರ ಆಶ್ರಯ ಪಡೆದು ಕೆಳದಿ ರಾಜ್ಯ ವಿಸ್ತಾರಕ್ಕೆ ಕಾರಣರಾದವರು ಈ ರಾಮ ಕ್ಷತ್ರಿಯರು.

   ರಾಮಕ್ಷತ್ರಿಯ ವಂಶಸ್ಥರಾದ ಬೇಕಲ್ ಮೂಲದ ಮಧುಸೂದನ್ ಬೇಕಲ್ ಆನಂದಪುರಂ ಹೋಬಳಿಯಲ್ಲಿ ತಮ್ಮ ವೃತ್ತಿಯ ಜೊತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಸಹಾಯ ಮಾಡುವ ದೈವ ಭಕ್ತರಾಗಿದ್ದಾರೆ.

   ಅವರು ನಮ್ಮ ಊರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯ ಮುಖ್ಯಸ್ಥರು ಹೌದು.

   ಅಷ್ಟೇ ಅಲ್ಲ ಇವರು ಹಿಂದೂ ಧರ್ಮೀಯರ ರುದ್ರ ಭೂಮಿ ಸ್ಮಶಾನಗಳನ್ನು ಆಧುನಿಕರಣ ಗೊಳಿಸುವ ಕೆಲಸ ಪ್ರಾರಂಬಿಸಿದ್ದಾರೆ.

 ಹಿಂದೂ ರುದ್ರಭೂಮಿಗಳು ಎಲ್ಲಾ ಊರಿನಲ್ಲೂ ನಿರ್ಲಕ್ಷಕ್ಕೆ ಒಳಗಾಗಿರುವುದು ಕೂಡ ಹೌದಾಗಿದೆ.

  ಸುತ್ತಮುತ್ತಲಿನ ಯಾವುದೇ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಇದ್ದರೆ ಇವರು ಯಾವುದೇ ಆಹ್ವಾನ ಇಲ್ಲದೆ ಅಲ್ಲಿ ಪ್ರತ್ಯಕ್ಷರಾಗಿ ತಮ್ಮ ಸೇವೆಯನ್ನು ಮಾಡಿ ತೆರಳುತ್ತಾರೆ.

 ಆದರೆ ಇವರ ಸಹಾಯ ಮತ್ತು ಇವರ ಕೆಲಸ ಮಾತ್ರ ಯಾರಿಗೂ ಗೊತ್ತಾಗದ ಹಾಗೆ ಪ್ರಚಾರವಿಲ್ಲದೆ ದೇವರಿಗೆ ಮಾತ್ರ ಸಲ್ಲಿಸುವ ಕೆಲಸ ಇವರು ಮಾಡುತ್ತಾರೆ.

   ಆದ್ದರಿಂದಲೇ ಆನಂದಪುರಂನ  ಜನ ಅತ್ಯಂತ ಹೆಚ್ಚು ಗೌರವ ಇವರಿಗೆ ನೀಡುತ್ತಾರೆ ಇವರೂ ಅದಕ್ಕೆ ಅಹ೯ರಾಗಿದ್ದಾರೆ.

  ನೀವು ಅವರ ಫೋನ್ ನಂಬರ್  99011 41900 ಕ್ಕೆ ಕರೆ ಮಾಡಿ ಅಭಿನಂದಿಸಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...