#ನಮಗಾಗಿ_ನಮ್ಮ_ನಮ್ಮದೇ_ಆರೋಗ್ಯ_ಕವಚ_ನಿರ್ಮಿಸಿಕೊಳ್ಳೋಣ #ಮನೆಯ_ಒಳಗೆ_ಯಾರನ್ನೂ_ಸೇರಿಸಬೇಡಿ_ನೀವೂ_ಇನ್ನೊಬ್ಬರ_ಮನೆಗೆ_ಹೋಗಬೇಡಿ #ನಿಮ್ಮ_ಅಂದು_ಬಂದುಗಳು_ಕೊರಾನಾಕ್ಕೆ_ಹೊರತಲ್ಲ #ನಮ್ಮ_ಆನಂದಪುರಂ_ಹೋಬಳಿ_ಇವತ್ತಿಂದ_ಒಂದು_ವಾರ_ಸಂಪೂರ್ಣ_ಲಾಕ್_ಡೌನ್. #ಎಲ್ಲಾ_ಊರು_ಕೇರಿ_ಅಷ್ಟೆ_ಅಲ್ಲ_ನಮ್ಮ_ಮನೆಯಲ್ಲೂ_ಜಾರಿ_ಆಗಲಿ. ಸಕಾ೯ರ - ಮೋದಿ - ಯಡೂರಪ್ಪ ಅಂತೆಲ್ಲ ನೆಪ ನೆವಗಳನ್ನು ಹೇಳುತ್ತಾ ತಾವೂ ರೋಗ ತಡೆಯುವ ಮುಂಜಾಗೃತ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸರ್, ಲಸಿಕೆ ಮತ್ತು ಪರಸ್ಪರ ಅಂತರ ಕಾಪಾಡದೆ ತಮ್ಮ ಮನೆಗಳಿಗೆ ಕೊರಾನಾ ವೈರಸ್ ಹರಡಿ ಅನಾಹುತ ಆದ ನಂತರ ಪಶ್ಚಾತ್ತಾಪ ಮತ್ತು ಪಾಪ ಪ್ರಜ್ಞೆಯಿಂದ ನರಳುತ್ತಾ ಇರುವ ನಮ್ಮ ಜನ (ಇದು ಇಡೀ ದೇಶಕ್ಕೆ ಅನ್ವಯ) ಈಗ ವಾಸ್ತವವಾದಿಗಳಾಗುತ್ತಿದ್ದಾರೆ. ಪತ್ರಕರ್ತರು, ವೈದ್ಯರು, ಮಂತ್ರಿಗಳು ಕೂಡ ಕೊರಾನಾಕ್ಕೆ ಬಲಿ ಆಗಿದ್ದಾರೆ ಈಗ ಎರಡನೆ ಅಲೆಯಲ್ಲಿ ನಮ್ಮ ಊರು ಮನೆಯಲ್ಲಿಯೇ ಸಾವಿನ ಸುದ್ದಿ ಕೇಳುತ್ತಿದ್ದೇವೆ ಆದರೂ ಬುದ್ದಿಗೇಡಿ ಜನರು ಈ ಕಾಯಿಲೆ ನಿಯಂತ್ರಣಕ್ಕೆ ಸಹಕರಿಸದೇ ದಿನೇ ದಿನೇ ಸಾವು ನೋವಿಗೆ ಕಾರಣರಾಗುತ್ತಿದ್ದಾರೆ. ಪ್ರತಿಯೊಬ್ಬನಿಂದ, ಪ್ರತಿ ಕುಟುಂಬದಿಂದ, ಪ್ರತಿಹಳ್ಳಿಯಿಂದ ದೇಶ ಎನ್ನುವುದನ್ನು ಸ್ಮರಿಸೋಣ. ಪ್ರತಿಯೊಬ್ಬರು ತಮ್ಮ ತಮ್ಮ ಕುಟುಂಬದ ಆರೋಗ್ಯ ಕವಚ ರಚಿಸಿಕೊಳ್ಳಬೇಕು, ಕಾಯಿಲೆ ಬಂದ ನಂತರದ ತಯಾರಿಗಿಂತ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು...