Skip to main content

Posts

ಶಾಂತವೇರಿ ಗೋಪಾಲಗೌಡರನ್ನು ದ್ವಿತೀಯ ಮಹಾ ಚುನಾವಣೆ 1957 ರಲ್ಲಿ ಸೋಲಿಸಿದ ಸಾಗರ - ಹೊಸನಗರ- ತೀಥ೯ಳ್ಳಿ ವಿದಾನ ಸಭಾ ಕ್ಷೇತ್ರದ ಮತದಾರರು, ಇದೊಂದು ರಾಜಕೀಯ ದುರಂತದ ಇತಿಹಾಸ

#ದ್ವಿತೀಯ_ಮಹಾ_ಚುನಾವಣೆ_1957. #ಶಾ೦ತವೇರಿ_ಗೋಪಾಲ_ಗೌಡರ_ಸೋಲು #ಆನಂದಪುರದ_ಕಾಂಗ್ರೇಸ್_ಅಭ್ಯಥಿ೯_ಬದರಿನಾರಾಯಣ_ಅಯ್ಯಂಗಾರರ_ಗೆಲುವು. 1957 ರ ದ್ವಿತೀಯ ಮಹಾ ಚುನಾವಣೆಯಲ್ಲಿ ಪುನಃ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಸೋಷಲಿಸ್ಟ್ ಪಾಟಿ೯ಯಿಂದ ಶಾಂತವೇರಿ ಗೋಪಾಲಗೌಡರು ವಿದಾನ ಸಭೆಗೆ ಸ್ಪರ್ದಿಸುತ್ತಾರೆ.   ಪ್ರತಿಸ್ಪದಿ೯ಯಾಗಿ ಪುನಃ ಕಾಂಗ್ರೇಸ್ ನಿಂದ ಆನಂದಪುರದ ಎ.ಆರ್. ಬದರಿನಾರಾಯಣ ಅಯ್ಯಂಗಾರರು ಸ್ಪರ್ಧಿಸುತ್ತಾರೆ.   ಭೂ ಮಾಲಿಕರುಗಳೆಲ್ಲ ಸಂಘಟಿತರಾಗಿರುತ್ತಾರೆ, ಚುನಾವಣೆಗೆ ಬೇಕಾದ ಸಂಪನ್ಮೂಲ ಸಂಗ್ರಹಿಸಿರುತ್ತಾರೆ ಈ ಮೂಲಕ ಒಗ್ಗಟ್ಟಿನಿಂದ ಗೇಣಿದಾರರಾದ ದೀವರ ಮತ ವಿಭಜನೆ ಮಾಡುತ್ತಾರೆ.   ಇದಕ್ಕೆ ವಾಮ ಮಾರ್ಗವೂ ಬಳಸುತ್ತಾರೆ ಹೊಸನಗರ ತಾಲ್ಲೂಕಿನ ಕೊಡಸೆಯ ದೀವರ ನಾಯಕರ ಮನೆಯ ಮದಲೆ ಚೌಡಿ ಹಬ್ಬ ಇದಕ್ಕೆ ವೇದಿಕೆ ಆಗಿ ಬಳಸಿಕೊಳ್ಳುತ್ತಾರೆ 50 ರಿಂದ 70 ಕುರಿಗಳ ಬಾಡು ಊಟದ ಔತಣ ಕೂಟದಲ್ಲಿ ನೂರಾರು ದೀವರ ಮುಖಂಡರು ಮತ್ತು ಸಾವಿರಾರು ಜನರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಬದರಿನಾರಾಯಣ ಅಯ್ಯಂಗಾರರಿಗೆ ಮತ ನೀಡುವ ಭರವಸೆ ನೀಡುತ್ತಾರೆ ಅದರಂತೆ ನಡೆಯುತ್ತಾರೆ ಇದು ಗೋಪಾಲಗೌಡರ ಸೋಲಿಗೆ ಕಾರಣ ಆಗುತ್ತದೆ.   ಮುಂದೆ ಬದರಿನಾರಾಯಣ ಅಯ್ಯಂಗಾರರು ಅನೇಕ ಬಾರಿ ಶಾಸಕರಾಗುತ್ತಾರೆ, ಒಮ್ಮೆ ವಿದಾನ ಪರಿಷತ್ ಸದಸ್ಯರಾಗುತ್ತಾರೆ, ರಾಜ್ಯದ ವಿದ್ಯಾ ಮಂತ್ರಿಗಳಾಗುತ್ತಾ...

2011 ರ ನನ್ನ ಎತ್ತಿನಗಾಡಿ ಯಾತ್ರೆ, ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಏಳು ದಿನಗಳ ಕಾಲ ಸುಮಾರು 360 ಕಿ.ಮಿ ಜನ ಜಾಗೃತಿಗಾಗಿ ನಡೆಯಿತು

#ಹತ್ತು_ವರ್ಷ_ಹಿಂದಿನ_ನೆನಪು #2011ರ_ನನ್ನ_ಎತ್ತಿನ_ಗಾಡಿ_ಯಾತ್ರೆಯಲ್ಲಿ_ಶರಾವತಿ_ನದಿ_ದಾಟಿಸುವ_ತುಮರಿಯ_ಲಾಂಚ್_ನವರು #ಎತ್ತಿನ_ಗಾಡಿ_ಸಾಗಿಸಲು_ನಿರಾಕರಿಸಿದ್ದರು!?     2011ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತದ ಜನ ಜಾಗೃತಿಗಾಗಿ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯ೦ತ ಸುಮಾರು ಏಳು ದಿನ ಎತ್ತಿನ ಗಾಡಿಯಲ್ಲಿ ಜಾತ ನಡೆಸಿದ್ದೆವು.          ಬೆಳೆಗ್ಗೆಯಿಂದ ರಾತ್ರಿ ತನಕ ಅನೇಕ ಸಭೆಗಳು ನಡೆಸಿದೆವು.    ಸ್ಥಳಿಯ ಪ್ರಗತಿ ಪರ ಚಿಂತನೆಯವರು, ಸಂಘಟನೆಗಳು ನಮಗೆ ಬೆಂಬಲಿಸಿ ಸಹಕರಿಸಿದರು, ಮಾಹಿತಿ ಹಕ್ಕಿನಲ್ಲಿ ಅಜಿ೯ಸಲ್ಲಿಸಿ ಮಾಹಿತಿ ಪಡೆಯುವುದು, ದಾಖಲೆ ಸಮೇತ ಅವ್ಯವಹಾರಗಳನ್ನ ಲೋಕಾಯುಕ್ತಕ್ಕೆ ಹೇಗೆ ದೂರು ನೀಡುವುದು ಇತ್ಯಾದಿ ಮಾಹಿತಿ ನೀಡುತ್ತಾ ಹೋಗಿದ್ದು ಒಂದು ವಿಶಿಷ್ಟ ಅನುಭವ.     ರಾಜಕೀಯ ಗುರುಗಳಾದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪನವರು ಎತ್ತಿನ ಗಾಡಿಯಲ್ಲಿ ಗಾದಿ ಹಾಸಿ ಕುಳಿತುಕೊಳ್ಳಬಾರದು ಕೇವಲ ಕಂಬಳಿ ಹಾಸಿ ಕುಳಿತು ಈ ಯಾತ್ರೆ ಮುಗಿಸಲು ತಾಕೀತು ಮಾಡಿದ್ದರು ಅದರಂತೆ ಮಾಡಿದೆ, ಹೊಸನಗರದಲ್ಲಿ ನನ್ನ ಗಾಡಿ ಏರಿದ ಮಾಜಿ ಜಿ.ಪಂ.ಸದಸ್ಯ ಗೆಳೆಯ ಬಿ.ಪಿ. ರಾಮಚಂದ್ರ ಕುಳಿತು ಕೊಳ್ಳಲಾಗದೆ ಇಳಿದರು, ನೀವು ಹ್ಯಾಗೆ 8 ದಿನದಿಂದ ಗಾಡಿಲಿ ಕುಳಿತೇ ಇದ್ದಿರಾ ಅಂತ ಆಶ್ಚಯ೯ ಪಟ್...

ಭಗವಾನ್ ಶ್ರೀಧರ ಸ್ವಾಮಿ ಮತ್ತು ಮಹಾರಾಷ್ಟ್ರದ ಪ್ರಸಿದ್ದ ಮರಾಠ ಪತ್ರಿಕೆಯ ಸಂಪಾದಕರಾದ ಆಚಾಯ೯ ಆತ್ರೆಯವ ಬೇಟಿಯ ಹಾಗೂ ಆಶ್ರೀವಾದದ ಚಿತ್ರ ಅಂಬೇಡ್ಕರ್ ಶ್ರೀಧರ ಸ್ವಾಮಿಯವರದ್ದೆಂದು ತಪ್ಪಾಗಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

#ಅ೦ಬೆಡ್ಕರ್_ಭಗವಾನ್_ಶ್ರೀಧರ_ಸ್ವಾಮಿ_ಬೇಟಿ_ಆಗಿಲ್ಲ #ನಿನ್ನೆಯಿಂದ_ಮೊದಲ_ಚಿತ್ರ_ಅಂಬೇಡ್ಕರ್_ಶ್ರೀಧರ_ಸ್ವಾಮಿಗಳ_ಆಶ್ರೀವಾದ_ಪಡೆದದ್ದು ಎಂಬ ತಪ್ಪು ಮಾಹಿತಿ ಹೆಚ್ಚು ಸಾಮಾಜಿಕ ತಾಣದಲ್ಲಿ ಪ್ರಸಾರ ಆಗುತ್ತಿದೆ ಆದರೆ ಅವರು ಅಂಬೇಡ್ಕರ್ ಅಲ್ಲ ಅಂಬೇಡ್ಕರ್ ರೀತಿ ಕಾಣುವ ಮಹಾರಾಷ್ಟ್ರದ ಸುಪ್ರಸಿದ್ಧ ಮರಾಠ ಪತ್ರಿಕೆಯ ಸಂಪಾದಕರಾದ ಆಚಾಯ೯ ಆತ್ರೆಯವರು.   ಆತ್ರೆಯವರ ಮತ್ತು ಭಗವಾನ್ ಶ್ರೀಧರರ ಬೇಟಿಯ ಪೋಟೋ ಮತ್ತು ಲೇಖನ ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆಯಲ್ಲಿ ಪ್ರಕಟವಾಗಿದೆ ಅದನ್ನು ಇಲ್ಲಿ ಕೆಳಗೆ ಪೋಸ್ಟ್ ಮಾಡಿದೆ ಮತ್ತು ಸರಿಯಾದ ಎರಡನೆ ಚಿತ್ರ ಕೂಡ. ಭಗವಾನರು ಮುಂಬೈಗೆ ಬಂದಿಳಿದ ಕೂಡಲೇ ಅನೇಕ ಭಕ್ತಾದಿಗಳು ಆದರದ ಸ್ವಾಗತ ಕೋರಿದರು. ಅಲ್ಲಿ ಮಾಮಾ ಕಾಣೆಯವರ ಮನೆಯಲ್ಲಿ ಭಗವಾನರ ಮುಕ್ಕಾಂ ಅಯಿತು. ಕೊಂಕಣ ದೇಶದಲ್ಲಿ ಆಗ ಬಿರುಗಾಳಿಯಿಂದ ಪೀಡಿತರಾದ ಜನರ ಸಹಾಯಕ್ಕಾಗಿ ಏರ್ಪಡಿಸಿದ್ದ ನಾಟಕವನ್ನು ಭಗವಾನರು ವೀಕ್ಷಿಸಿ, ಅದರ ಪಾತ್ರಧಾರಿಗಳಿಗೆ ಬಹುಮಾನವನ್ನು ನೀಡಿದರು. ಭಗವಾನರು ಅಲ್ಲಿನ ಸಂಕಷ್ಟ ಪೀಡಿತ ಜನರಿಗೆ ನೂರು ರೂಪಾಯಿಗಳ ದಾನ ನೀಡಿದರು. ಪ್ರವಚನವನ್ನು ನೀಡುತ್ತಾ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮವಾಗುವಂತಹ ನಾಟಕ ಸಿನೆಮಾಗಳನ್ನು ಮಾಡಬೇಕೆಂದು ಸಲಹೆ ನೀಡಿದರು. ಅಂದಿನ ಸಮಾರಂಭವನ್ನು ಮಹಾರಾಷ್ಟ್ರದಲ್ಲಿಯ ಸುಪ್ರಸಿದ್ಧ ಮರಾಠ ಪತ್ರಿಕೆಯ ಸಂಪಾದಕರಾದ ಆಚಾರ್ಯ ಅತ್ರೆಯವರು ಏರ್ಪಡಿಸಿದ್ದರು. ಭಗವಾನರ ಅ...

ಸ್ವಾತಂತ್ರ ಭಾರತದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸಾಗರ-ಹೊಸನಗರ-ತೀಥ೯ಳ್ಳಿ ಕ್ಷೇತ್ರದಿಂದ ಮೊದಲ ಶಾಸಕರಾಗಿ ಆಯ್ಕೆ ಆದ ಶಾಂತವೇರಿ ಗೋಪಾಲಗೌಡರು ಅವರ ಗೆಲುವಿಗೆ ಕಾರಣರಾದ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ

#ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪ #ಭಾರತೀಯ_ರೈತ_ನಾಯಕರು_3 #ಸ್ವಾತಂತ್ರ_ಭಾರತದ_ಮೊದಲ_ಚುನಾವಣೆ_1952 #ಸಾಗರ_ಹೊಸನಗರ_ತೀಥ೯ಹಳ್ಳಿ_ತಾಲ್ಲೂಕ್_ಸೇರಿ_ಒಂದು_ವಿಧಾನಸಭಾ_ಕ್ಷೇತ್ರ.   1952 ರ ಪ್ರಥಮ ಚುನಾವಣೆ ಅಧಿಕೃತ ಘೋಷಣೆಯಿಂದ ಸೋಷಿಲಿಸ್ಟ್ ಪಕ್ಷ ಚುನಾವಣೆಗೆ ಹೆಚ್ಚಿನ ಗಮನ ಹರಿಸಿತು, ರಾಜ್ಯ ಸಮಾಜವಾದಿ ಪಕ್ಷದ ಕಾಯ೯ದಶಿ೯ ಜಿ.ಸದಾಶಿವ ರಾಯರು ಜೈಲಿನಲ್ಲಿದ್ದ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರನ್ನು ಬೇಟಿ ಮಾಡಿ ಚುನಾವಣೆ ಬಂದಿರುವುದರಿಂದ ಇನ್ನು ಜೈಲಲ್ಲಿ ಇರುವ ಅಗತ್ಯ ಇಲ್ಲ, ಮುಚ್ಚಳಿಕೆ ಬರೆದು ಕೊಟ್ಟು ಹೊರ ಬರಬೇಕೆಂದು ವಿನಂತಿಸುತ್ತಾರೆ, ಅವರ ಮನವಿ ಮೇರೆಗೆ ಎಲ್ಲಾ ಸತ್ಯಾಗ್ರಹಿಗಳು ಮುಚ್ಚಳಿಕೆ ಬರೆದು ಕೊಟ್ಟು ಜೈಲಿಂದ ಹೊರಬರುತ್ತಾರೆ.  ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಾಟಿ೯ ಅಭ್ಯಥಿ೯ ಆಗಿ 13722 ಮತ ಪಡೆದು ತಮ್ಮ ಎದುರಾಳಿ ಕಾಂಗ್ರೇಸ್ ಪಕ್ಷದ ಅಭ್ಯಥಿ೯ ಆನಂದಪುರದ A.R. ಬದರಿನಾರಾಯಣರನ್ನು ಸೋಲಿಸುತ್ತಾರೆ, ಬದರಿನಾರಾಯಣರು ಈ ಚುನಾವಣೆಯಲ್ಲಿ ಪಡೆದ ಮತ 11485 .    ಈ ಚುನಾವಣೆಯಲ್ಲಿ ರೈತ ಸಂಘ ಹಾಗೂ ರೈತ ನೇತಾರ ಗಣಪತಿಯಪ್ಪರ ಸಹಕಾರ ಅಪಾರ.   ಗೋಪಾಲಗೌಡರು ಜನರ ಅಪಾರ ಪ್ರೀತಿ - ಗೌರವ - ಅಭಿಮಾನವನ್ನು, ನಿಲ್ಲದ ಕಾಗೋಡು ಸತ್ಯಾಗ್ರಹ ಬಗೆಹರಿಯದ ವಿವಾದವನ್ನು ಹೊತ್ತು, ವಿದಾನ ಸಭೆ ಪ್ರವೇಶಿಸಿದರು.   ವಿದಾನಸಭೆ ಅವರ ಚಿಂತನೆ, ಘ...

ಕೊರಾನ ಎಲ್ಲಿದೆ?ಎಂದು ವಿತಂಡವಾದ ಮಾಡದಿರಿ ಗೆಳೆಯರೆ,ಕೊರಾನ ಮೊದಲ ಅಲೆ ಎದುರಿಸಿ ಬದುಕಿದ್ದೇವೆ ಈಗ ಎರಡನೇ ಅಲೆಗೆ ಸೋಲಬೇಡಿ

#ಕೊರಾನಾ_ಎಲ್ಲಿದೆ? #ಮಾಸ್ಕ್_ಯಾಕೆ? #ಅ೦ತೆಲ್ಲ_ವಾದಿಸುವ_ಗೆಳೆಯರೆ_ಈ_ವಿಡಿಯೋ_ನೋಡಿ.  ಇದು ದೂರದ ಊರಿನ ವಿಡಿಯೋ ಅಲ್ಲ ನಮ್ಮ ಊರಿಂದ 10 ಕಿ.ಮಿ. ದೂರದ ರಿಪ್ಪನ್ ಪೇಟೆಯದ್ದು.   ಇದು ಹೋದ ವರ್ಷದ್ದಾ? ಅಲ್ಲ ಇವತ್ತಿಂದು (14- ಏಪ್ರಿಲ್ -2021 ರ ಬುಧವಾರದ್ದು )    ಇದೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ ನನ್ನ ಗೆಳೆಯ, ರಿಪ್ಪನ್ ಪೇಟೆಯ ಗ್ರಾ.ಪಂ.ನ ಮಾಜಿ ಸದಸ್ಯ, ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಕಾಮಗಾರಿಗೆ ಒತ್ತಾಯಿಸಿ 2001ರಲ್ಲಿ ದೆಹಲಿ ಚಲೋ ಕಾಯ೯ಕ್ರಮದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿದ ಯೋಗಿಶ್ ಗೌಡರು ಇಹಲೋಕ ತ್ಯಜಿಸಿದ್ದಾರೆ.   ಅವರ ಆತ್ಮಕ್ಕೆ ಸದ್ಗತಿ ಹಾಗು ಸ್ವಗ೯ ಪ್ರಾಪ್ತಿಗೆ ದೇವರಲ್ಲಿ ಪ್ರಾಥಿ೯ಸುತ್ತೇನೆ.   ಕ್ರಿಯಾಶೀಲ, ಚಟುವಟಿಕೆಯಿಂದ ಇರುವ ಪ್ರತಿನಿತ್ಯ ವಾಕಿಂಗ್ ಮಾಡುತ್ತಿದ್ದ ಆರೋಗ್ಯವಂತರಾಗಿದ್ದ ಗೆಳೆಯ ಕೋವಿಡ್ ಎರಡನೆ ಅಲೆಗೆ ಬಲಿಯಾದದ್ದು ವಿಪಯಾ೯ಸ.   ಒಂದೂವರೆ ವರ್ಷದ ಹಿಂದೆ ನನ್ನ ಮಗಳ ಮದುವೆಗೆ ಬಂದು ಶುಭ ಹಾರೈಸಿದ್ದರು.   #45ವರ್ಷ_ಮೇಲ್ಪಟ್ಟವರು_ತಕ್ಷಣ_ನಿಮ್ಮ_ಸಮೀಪದ #ಆರೋಗ್ಯ_ಕೇಂದ್ರದಲ್ಲಿ_ಲಸಿಕೆ_ಪಡೆಯಿರಿ #ಮಾಸ್ಕ್_ದರಿಸಿ #ತಿರುಗಾಟ_ನಿಲ್ಲಿಸಿ #ಸ್ಯಾನಿಟೈಸರ್_ಸೋಪು_ಬಳಸಿ_ಕೈ_ಆಗಾಗ್ಗೆ_ತೊಳೆಯಿರಿ   ಆದರೂ ನಮ್ಮ ಗೆಳೆಯರು ಅನೇಕರು ಇನ್ನೂ ಕೊರಾನಾ ಎಲ್ಲಿದೆ? ಮಾಸ್ಕ್ ಏಕೆ? ಅನ್ನುತ್ತಿದ್ದಾರೆ ಅವ...

ಲೋಕನಾಯಕ ಜಯಪ್ರಕಾಶ್ ನಾರಾಯಣರು ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರನ್ನು ಸಾಗರದ ಜೈಲಲ್ಲಿ ಬೇಟಿ ಮಾಡಿ ಗಣಪತಿಯಪ್ಪರ ದಿನಚರಿ ಪುಸ್ತಕದಲ್ಲಿ ದಾಖಲಿಸಿದ "ಮೇರಿ ಹಾದಿ೯ಕ್ ಶುಭ ಕಾಮನ " ಒಂದು ಐತಿಹಾಸಿಕ ದಾಖಲೆ ಆಗಿದೆ.

#ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪ #ಭಾರತೀಯ_ರೈತ_ನಾಯಕ #ನೆನಪು_2   21- ಸೆಪ್ಟೆಂಬರ್ -1951ರಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಕಾಗೋಡು ಸತ್ಯಾಗ್ರಹಕ್ಕೆ ಬೆಂಬಲಿಸಲು ಬರುತ್ತಾರೆ  ಅವರ ಜೊತೆ ಅವರ ದಮ೯ಪತ್ನಿ ಶ್ರೀಮತಿ ಪ್ರಭಾವತಿ ದೇವಿ, ಜನ ನಾಯಕ ಜಾಜ್೯ ಪನಾ೯೦ಡೀಸ್ ಮತ್ತು ಸಮಾಜವಾದಿ ದುರೀಣ ಜಿ.ಸದಾಶಿವ ರಾಯರು ಒಂದಾಗಿ ಬರುತ್ತಾರೆ.   ಲೋಹಿಯಾರು ಬಂದು ಮೂರು ತಿಂಗಳ ನಂತರ ಇವರ ಬೇಟಿ ಇದಾಗಿರುತ್ತದೆ.   ಸಾಗರಕ್ಕೆ ಬಂದವರೇ ನೇರವಾಗಿ ಸಾಗರದ ಜೈಲಿನಲ್ಲಿ ಇದ್ದ ಗಣಪತಿಯಪ್ಪರನ್ನು ಬೇಟಿಯಾಗಲು ದೌಡಾಯಿಸುತ್ತಾರೆ, ಇವರು ಜೈಲಿಗೆ ಬೇಟಿ ನೀಡುವ ಸುದ್ದಿಯನ್ನು ಜೈಲಿನಲ್ಲಿದ್ದ ಸತ್ಯಾಗ್ರಹಿಗಳಿಗೆ ಮೊದಲೇ ತಿಳಿಸಲಾಗಿರುತ್ತದೆ.   ಸಾಗರದ ಜೈಲಿನ ಬಾಗಿಲಿಗೆ ಬಂದವರೇ ಜೈಲಿನ ಕಾವಲುಗಾರ ಸಿಬ್ಬಂದಿಗೆ "ಕಿಸಾನ್ ನೇತಾರ ಕಹಾಃ ಹೈ?" ಎನ್ನುತ್ತಾ ಒಳಗೆ ಬರುತ್ತಾರೆ, ಜೈಲಿನ ಒಳಗಡೆ ಇದ್ದ ಸತ್ಯಾಗ್ರಹಿ ಬಂಧಿಗಳೆಲ್ಲ ಸಾಲಾಗಿ ಅವರಿಗೆ ಗೌರವ ಸೂಚಿಸುತ್ತಾರೆ.   " ಜಯಪ್ರಕಾಶ್ ನಾರಾಯಣ್ ಜಿಂದಾಬಾದ್ "   " ಪ್ರಭಾವತಿ ದೇವಿ ಜಿಂದಾಬಾದ್" ಎಂದು ಘೋಷಣೆ ಹಾಕುತ್ತಾರೆ, ರೈತ ಸತ್ಯಾಗ್ರಹಿಗಳು ಇವರೇ ನಮ್ಮ ನಾಯಕ #ಗಣಪತಿಯಪ್ಪ ಎಂದು ಪರಿಚಯಿಸುತ್ತಾರೆ.     ಕೂಡಲೇ ಜೆ ಪಿ ಯವರು ತಮ್ಮ ಎರಡೂ ಬಾಹುಗಳಿಂದ ಗಣಪತಿಯಪ್ಪನವರನ್ನು ತಬ್ಬಿಕೊಂಡು "ನಿಮ್ಮ ಹೋರಾಟದ ವಿಷಯ ಇಡ...

ಕಾಗೋಡು ಭೂಮಿ ಹೋರಾಟದ ಚಳವಳಿಯ ನೇತಾರ ಗಣಪತಿಯಪ್ಪ

ಕಾಗೋಡು ರೈತ ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ, ಭಾರತೀಯ ರೈತ ನಾಯಕ ನೆನಪು - 1 .  ಕಾಗೋಡು ರೈತ ಹೋರಾಟಕ್ಕೆ 13 - 6 - 1951ರಲ್ಲಿ ಡಾ.ರಾಮಮನೋಹರ ಲೋಹಿಯಾ ಭಾಗವಾಹಿಸಿ ಕಾಗೋಡಿನ ಅರಳಿ ಮರದ ಕಟ್ಟೆಯ ಮೇಲೆ ಮಾಡಿದ ಭಾಷಣ "ನಿಮ್ಮ ಹೋರಾಟ ನ್ಯಾಯಬದ್ದವಾಗಿದೆ ಆದ್ದರಿಂದ ನಿಮಗೆ ನನ್ನ ಬೆಂಬಲ,ನ್ಯಾಯ ಸಿಗುವವರೆಗೆ ಹೋರಾಟ ನಡೆಯಲಿ, ಸರಕಾರ ಭೂಮಾಲಿಕರ ಪರವಹಿಸಿ ಕಳಂಕಿತವಾಗಿದೆ" ಎಂಬ ವಾಕ್ಯದೊಂದಿಗೆ ಉಳುವವನೇ ಹೊಲದೊಡೆಯ ಘೋಷಣೆ ಮಾಡಿ ಕಾಗೋಡು ಒಡೆಯರ ಗದ್ದೆಗೆ ಪ್ರವೇಶಿಸಿದರು.   ಸೇರಿದ್ದ ಜನಸ್ತೋಮ " ಲೋಹಿಯಾ ಜಿಂದಾಬಾದ್ " " ಸೋಷಿಲಿಸ್ಟ ಪಾಟಿ೯ ಜಿಂದಾಬಾದ್ " " ಗೋಪಾಲ ಗೌಡ ಜಿಂದಾಬಾದ್ " " ಗಣಪತಿಯಪ್ಪ ಜಿಂದಾಬಾದ್' ಘೋಷಣೆ ಮುಗಿಲು ಮುಟ್ಟಿತ್ತು.   ಇದು ಸ್ವಾತಂತ್ರ ಭಾರತದ ಮೊದಲ ಗೇಣಿ ರೈತ ಚಳವಳಿ ಇದರ ನೇತಾರ ಹೆಚ್.ಗಣಪತಿಯಪ್ಪರು ಸಾಗರದ ಜೈಲಿನಲ್ಲಿದ್ದರು ಕಾಗೋಡಿಗೆ ತೆರಳುವ ಮುನ್ನ ಲೋಹಿಯಾರು ಸಾಗರ ಜೈಲಿಗೆ ತೆರಳಿ ಗಣಪತಿಯಪ್ಪರ ಯೋಗ ಕ್ಷೇಮ ವಿಚಾರಿಸಿ "ಇದೊಂದು ದೇಶದಲ್ಲೇ ಮಹತ್ವಪೂಣ೯ವಾದ ಹೋರಾಟವನ್ನು ಪ್ರಾರಂಬಿಸಿರುವುದು ನಮಗೆಲ್ಲ ಆನಂದವಾಗಿದೆ, ಈ ಹೋರಾಟದಲ್ಲಿ ಜಯ ನಿಮ್ಮದಾಗುತ್ತದೆ, ಭಯ ಪಡಬೇಡಿ" ಎನ್ನುತ್ತಾರೆ.   ಸತ್ಯಾಗ್ರಹ ಸ್ಥಳದಲ್ಲಿ ಲೋಹಿಯಾರನ್ನು ಪೋಲಿಸರು ಬಂದಿಸಲಾಗದೆ ನಿಸ್ಸಾಹಯಕರಾಗುತ್ತಾರೆ ಆದರೆ ಅವತ್ತಿನ ರಾತ್ರಿ ಪೋಲಿಸರು ಕಾ...