Skip to main content

Posts

ಆವಿನಹಳ್ಳಿ ನೇಗಿಲು ಬಯಲು ಮಾಡಿದ ಕೃಷಿ ಇಲಾಖೆಯ ಸಾವಿರಾರು ಕೋಟಿ ಹಗರಣ.

ಸಕಾ೯ ರ ದ ಕೃಷಿ ಇಲಾಖೆಯ ಸಾವಿ ರಾರು ಕೋ ಟಿ ಹಣದ ಲೂ ಟಿ ಬಯ ಲಾದ ನನ್ನ  ಹೋರಾಟ.   ಹೊಸದಾಗಿ ಜಿಲ್ಲಾ ಪಂಚಾಯತ ಸದಸ್ಯನಾದ ಹುಮ್ಮಸ್ಸು, ಗ್ರಾಮ ಪಂಚಾಯತನಲ್ಲಿ ಉಪಾಧ್ಯಕ್ಷನಾಗಿದ್ದಾಗ ರಾಜ್ಯದ ಮೊದಲ ಬಗರ ಹುಕುಂ ಹಕ್ಕು ಪತ್ರ ವಿತರಣೆಗೆ ಕಾರಣ ಕತ೯ನಾಗಿ ಕಾಗೋಡು ತಿಮ್ಮಪ್ಪರಿಂದ ಸದಾ ಹೊಗಳಿಕೆಗಳಿಂದ ನನ್ನ ಕಾಲು ನೆಲದ ಮೇಲೆ ಇರಲಿಲ್ಲ.   ಇದೇ ಸಂದಭ೯ದಲ್ಲಿ ಕಾಗೋಡು ಜೊತೆ ಹಳ್ಳಿ ಬೇಟೆಗಳಲ್ಲಿ ಎಲ್ಲಿ ಹೋದರೂ ಕೃಷಿ ಇಲಾಖೆ, ಭೂ ಸಾರ ಸಂರಕ್ಷಣಾ ಇಲಾಖೆಯ ಮೇಲೆ ರೈತರ ದೂರು ಆದರೆ ಸ್ಥಳಿಯ ಪಕ್ಷದ ಮುಖಂಡರು ಮಾತ್ರ ಕಾಗೋಡು ಹತ್ತಿರ ದೂರು ನೀಡಿದವರ ಮೇಲೆಯೇ ಆಪಾದನೆ ಮಾಡಿ ಇದು ಸುಳ್ಳು ಎನ್ನುತ್ತಿದ್ದರು.   ಒಂದು ದಿನಾ ಆಚಾಪುರ ಗ್ರಾಮ ಪಂಚಾಯತ ಭೇಟಿಯಲ್ಲಿ ಪುನಃ ಇದೇ ವಿಚಾರ ಮರುಕಳಿಸಿದಾಗ ಕಾಗೋಡು ನನಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೇಗ್ ಗೆ ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಹೇಳಿದ್ದರು.   ಈ ಬಗ್ಗೆ ಕಾಯ೯ ನಿರತರಾದ ನಾವು ಇಲಾಖೆಯಿಂದ ನಿಮಿ೯ಸಲ್ಪಟ್ಟ ಪಿಕ್ ಅಪ್ ಗಳು ಎಷ್ಟು ಅಂತ ಮಾಹಿತಿ ಕೇಳಿದಾಗ ತಾಲ್ಲೂಕಿನಲ್ಲಿ 5 ವಷ೯ದಲ್ಲಿ ಸುಮಾರು 220 ನಿಮಿ೯ಸಿದ್ದನ್ನ ತಿಳಿಸಿದರು, ಈ ಬಗ್ಗೆ ತುಂಬಾ ಒತ್ತಾಯ ಮಾಡಿದ ನಂತರ ನಕ್ಷೆ ನೀಡಿದರು ಸದರಿ ನಕ್ಷೆ ಹಿಡಿದು ಸ್ಥಳಕ್ಕೆ ಹೋದರೆ ಅಲ್ಲಿ ಪಿಕ್ ಅಪ್ ಗಳೆ ಇಲ್ಲ!? ಒಂದೆರಡು ಕಡೆ ಇದ್ದರು ಕಳಪೆ.   ಈ ಸಂದಭ೯ದಲ್ಲೇ ಸಾಗರದ ಕೃಷಿ ಇಲಾಖೆ ...

#ತ್ಯಾಜ್ಯ ವಿಲೇವಾರಿ ಮತ್ತು ಮಳೆ ನೀರು ಇಂಗಿಸುವ ನಮ್ಮ ಸವಾಲುಗಳಿಗೆ ನಮ್ಮ ಜವಾಬು#

ನಮ್ಮಲ್ಲಿ ಎರೆಡು ರೆಸ್ಟೋರಂಟ್, ಒಂದು ಕಲ್ಯಾಣ ಮಂಟಪ ಮತ್ತು ಎರೆಡು ಮನೆಗಳ ತ್ಯಾಜ್ಯ ವಿಲೆವಾರಿ ನಿತ್ಯ ಆಗಬೇಕು.   ಪ್ಲಾಸ್ಟಿಕ್, ಗಾಜು, ಹಸಿ ಕಸ ಹೀಗೆ ಪ್ರತ್ಯೇಕ ಡಬ್ಬಿಗಳಲ್ಲಿ ಹಾಕಿ ನಿತ್ಯ ಅವುಗಳನ್ನ ವಿಲೇವಾರಿ ಮಾಡುತ್ತೇವೆ.   ಪ್ಲಾಸ್ಟಿಕ್ ಖಾಲಿ ಬಾಟಲ್, ಹಾಲು ಎಣ್ಣೆ ಖಾಲಿ ಕವರ್, ಪಿನಾಯಿಲ್, ಡೆಟಾಲ್ ಖಾಲಿ ಕ್ಯಾನ್ಗಳನ್ನು ದೊಡ್ಡ ಚೀಲದಲ್ಲಿ ಹಾಕಿ ವಾರಕೊಮ್ಮೆ ರಿಸೈಕ್ಲಿOಗ್ ಘಟಕಕ್ಕೆ ಕಳಿಸುತ್ತೇವೆ.   ಸಣ್ಣ ಪೇಪರ್ಗಳು, ಬಳಸಿದ ನ್ಯಾಪ್ಕಿನ್ಗಳನ್ನ ನಮ್ಮದೆ ಸಣ್ಣ ಸುಡುವ ಘಟಕದಲ್ಲಿ ಸುಡಲಾಗುತ್ತದೆ. ಮಾಂಸಹಾರಿ ಹೋಟೆಲ್ ತ್ಯಾಜ್ಯ ಮತ್ತು ಸಸ್ಯಹಾರಿ ಹೋಟೆಲ್ ತ್ಯಾಜ್ಯ ನಿತ್ಯ ರಾತ್ರಿ ಹಂದಿ ಸಾಕಣೆ ಕೇಂದ್ರದವರಿಗೆ ನೀಡುತ್ತೇನೆ.   ಕಲ್ಯಾಣ ಮಂಟಪದ ಊಟದ ಎಲೆ, ತರಕಾರಿ ಸಿಪ್ಪೆ, ಉಳಿದ ಆಹಾರಗಳನ್ನ 10 ಅಡಿ ಅಗಲ ಮತ್ತು 3 ಅಡಿ ಎತ್ತರದ ಟ್ಯಾಂಕ್‌ಗೆ ಹಾಕಿ ಕೆಲ ದಿನ ಕೊಳೆಯಲು ಬಿಟ್ಟು ನಂತರ ನೀರು ತುಂಬಿಸಿ ಒಂದೆರೆಡು ದಿನದ ನಂತರ ಕೆಳಗಿನ ಟ್ಯಾಂಕ್‌ಗೆ ಬಿಟ್ಟು ಶೇಖರಿಸಿ ನಂತರ ಈ ಸಾವಯವ ಗೊಬ್ಬರದ ನೀರನ್ನ ನಮ್ಮ ರಬ್ಬರ್ ತೋಟಕ್ಕೆ ಹಾಕುತ್ತೇವೆ.   2006 ರಿಂದ ಈ ವರೆಗೆ ಒಂದು ಸಣ್ಣ ಕಸ ಕೂಡ ನಮ್ಮ ಸಂಸ್ಥೆ ಮತ್ತು ಮನೆಯಿಂದ ಎಲ್ಲೋ ಹೊರ ಚೆಲ್ಲಿದ ಉದಾಹರಣೆ ಇಲ್ಲ ಈ ಬಗ್ಗೆ ನನಗೆ ಹೆಮ್ಮೆ ಇದೆ. ಮಳೆಗಾಲದಲ್ಲಿ ಎಲ್ಲಾ ನೀರುಗಳನ್ನ ಕಾಲುವೆ ಮುಖಾಂತರ ನಮ್ಮ ಬೋರ್ ವೆಲ್ ಸಮೀಪ 12 ಅಡಿ ಅಗಲ 15 ಅಡಿ...

# ಬೂದು ಗುಂಬಳ ಬಹು ಉಪಯೋಗಿ ಮತ್ತು ಔಷದಿ#

    ಬೂದು ಗುಂಬಳದಲ್ಲಿ ಒಳಬಾಗ ತುರಿದು ಹಿಂಡಿ ನೀರನ್ನ ಕುಡಿದರೆ ಚಮ೯ ರೋಗ ಮತ್ತು ನರ ಸಂಬಂದಿ ರೋಗಕ್ಕೆ ಮದ್ದ೦ತೆ, ನೀರು ಹಿಂಡಿದ ನಂತರದ ತುರಿಯಿ೦ದ ಹಲ್ವಾ ಮಾಡಿ ಹಾಗು ಸಿಪ್ಪೆಯನ್ನ ಸಂಡಿಗೆ ಮಾಡುವ ಉತ್ತರ ಭಾರತದ ಜನತೆ ಇದರ ಪೂಣ೯ ಉಪಯೋಗ ಕಂಡಿದ್ದಾರೆ.   ನಮ್ಮ ಭಾಗದಲ್ಲಿ ಬೂದುಗುಂಬಳ ಅಂದರೆ ಭಾರೀ ಭಯ, ಭಕ್ತಿ. ಇದು ಮೇಲ್ ಜಾತಿಯವರು ಮಾತ್ರ ಬಳಸುವ ಪದಾಥ೯ ಅಂತ ಆಗಿಬಿಟ್ಟಿದೆ. ನಮ್ಮ ಕಲ್ಯಾಣ ಮಂಟಪದಲ್ಲಿ ಬೂದುಗುಂಬಳ ಮದುವೆಯಲ್ಲಿ ಬಳಸುವ ವಿಚಾರದಲ್ಲಿ ಒಳ್ಳೆ ಚಚೆ೯ ಆಗುತ್ತೆ, ನಾನು ಬೂದುಗುoಬಳ ಕಡಿಮೆ ದರ ಅಂತ ಬರೆಸಿದರೆ, ಅಡುಗೆ ಭಟ್ಟರು ಒಂದು ಹುಳ ಬಿಟ್ಟಿರುತ್ತಾರೆ ಇದನ್ನ ನೀವೆಲ್ಲ ಬಳಸುವಂತಿಲ್ಲ ಅಂತ ಆದರೂ ಅವರ ಮಾತು ಕೇಳದೆ ಬಳಸಲು ತೀಮಾ೯ನಿಸಿದರೆ ಮದುವೆ ಮನೆ ಹಿರಿಯರಲ್ಲಿ ಇದು ಮಂಗಳ ಕಾಯ೯ ಬೂದು ಗು೦ಬಳ ಸರಿ ಅಲ್ಲ ಅಂದರೆ ಆಯಿತು ಬೂದುಗುಂಬಳಕ್ಕೆ ಗೇಟ್ ಪಾಸ್ ಸಿಕ್ಕ೦ತೆ ಈ ರೀತಿ ಶೂದ್ರರಲ್ಲಿ ಒಂದು ಭಯ ಹೊಕ್ಕಿದೆ. ಈಗ ಮುಸ್ಲಿಂ ಜನರು ಬಿರಿಯಾನಿ, ಗೀ ರೈಸ್ ಜೊತೆಯ ದಾಲ್ ನಲ್ಲಿ ಬೂದುಗುಂಬಳ ಹಾಕಲು ಶುರು ಮಾಡಿದ್ದಾರೆ. ಸೊರ್ಯಾಸೀಸ್ ಎ೦ಬ ತೀವ್ರ ಚಮ೯ದ ರೋಗದಿಂದ ಬಳಲುತ್ತಿದ್ದ ನನ್ನ ಕ್ಲಾಸ್ ಮೇಟ್ ಒಬ್ಬರು ಎಲ್ಲಾ ಚಿಕಿತ್ಸೆ ಮಾಡಿ ಹಣ ಸಮಯ ಹಾಳು ಮಾಡಿಕೊಂಡು ಹತಾಶರಾಗಿದ್ದರು ಆಗ ಆಯುವೆ೯ದ ವೈದ್ಯರ ಸಲಹೆಯಂತೆ ಬೂದುಗುಂಬಳದ ನೀರು ನಿತ್ಯ ಕುಡಿಯಲು ಪ್ರಾರಂಬಿಸಿ ರೋಗ ಮುಕ್ತರಾಗಿದ್ದಾರೆ.  29...

#ಮುಂಗಾರು ಪತ್ರಿಕೆ ಮತ್ತು ವಡ್ಡಸೆ೯ ರಘುರಾಮ ಶೆಟ್ಟರ ಬೇಟಿಯ ನೆನಪು#

  ಮುಂಗಾರು ನೆನಪು ಹೇಗೆಂದರೆ ನನ್ನ ಅಣ್ಣ ಅದರ ವರದಿಗಾರ ಮತ್ತು ಆನಂದಪುರಂ (ಸಾಗರ ತಾ)ನ ಪತ್ರಿಕಾ ಏಜೆಂಟರೂ ಆಗಿದ್ದರು. ಕಾಗೋಡು ತಿಮ್ಮಪ್ಪಾ ಬಂಗಾರಪ್ಪ ಮುಖ್ಯಮಂತ್ರಿ ಆದಾಗ ಹೌಸಿಂಗ್ ಬೋಡ್೯ ಅಧ್ಯಕ್ಷರ...

#ದಲಿತ ಶೂದ್ರರ ಕೈಯ ಸ್ಪಷ೯ದಲ್ಲಿ ಪೂಜಿಸುವ ಏಕೈಯ ದೇವಾಲಯ ಕನಾ೯ಟಕದ ಗೋಕಣ೯#

#ಕನಾ೯ಟಕ ರಾಜ್ಯದಲ್ಲಿ ಶೂದ್ರ ದಲಿತರು ದೇವರ ವಿಗ್ರಹ ಸ್ಪಷಿ೯ಸಿ ಪೂಜೆ ಮಾಡುವ ಏಕೈಕ ಪುರಾಣ ಪ್ರಸಿದ್ದ ಸ್ಥಳ ಗೋಕಣ೯#   ದೇವರಿಗೆ ಜಾತಿ ಇಲ್ಲ, ಜಾತಿಯತೆ ಇದ್ದಲ್ಲಿ ದೇವರಿಲ್ಲ ಹೀಗೆ ಎಷ್ಟೆಲ್ಲ ವೇದಾಂತ ಹೇ...

# ಹೆಗ್ಗೋಡಿನ ಚರಕ ಎಂಬ ಖಾದಿ ಸಂಸ್ಥೆ ಹುಟ್ಟು ಹಾಕಿ ದಲಿತ ಮಹಿಳೆಯರನ್ನ ತರಬೇತಿ ನೀಡಿ ಚರಕ ಎಂಬ ಬ್ರಾಂಡ್ ಪ್ರಸಿದ್ಧಿಗೊಳಿಸಿದ ರಂಗ ಕಮಿ೯ ಪ್ರಸನ್ನ#

#ಹೆಗ್ಗೋಡಿನ ಚರಕ ಸಂಸ್ಥೆಯ ಪ್ರಸನ್ನ#      ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಇವರು ಕೆ.ವಿ.ಸುಬ್ಬಣ್ಣರ ಮೇಲೆ ಯಾವುದೋ ಬಿನ್ನಾಭಿಪ್ರಾಯದಿ೦ದ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾಗ ಹೆಗ್ಗ...

# ವಿಪತ್ತುಗಳು ಉಂಟಾದಾಗ ಅವರಿಗೆ ಪರಿಹಾರ ನೀಡುವುದಾಗಿ ನಿಧಿ ಸಂಗ್ರಹಿಸಿ ಪರಿಹಾರ ನೀಡದೇ ಇರುವುದು ಎಷ್ಟು ಸರಿ ?#

#ಹೀಗೂ ಉಂಟೆ# ಶಿವಮೊಗ್ಗ ಜಿಲ್ಲೆಯ ರಾಮ ಚಂದ್ರ ಮಠದ ಸ್ವಾಮಿಗಳು ಈ ಹಿಂದಿನ ಉತ್ತರ ಕನಾ೯ಟಕದ ನೆರೆ ಪರಿಹಾರಕ್ಕೆ 5000 ಮನೆ ಕಟ್ಟಿಸುವ ಭರವಸೆ ನೀಡಿ ಮನೆ ಕಟ್ಟೆಸಿಲ್ಲ ಹಾಗಾಗಿ ಈ ಬಾರಿ ಸದರಿ ಮಠದವರಿಗೆ ನೆರೆ ಪರ...