BLOG NUMBER 982. ವರದಳ್ಳಿ ಶ್ರೀದರ ಸ್ವಾಮಿ ಆಶ್ರಮದ ನೂತನ ಅಧ್ಯಕ್ಷರಾಗಿರುವ ನನ್ನ ಆತ್ಮೀಯ ಮಿತ್ರ ಸಜ್ಜನ ಎಂ.ಜಿ.ಕೃಷ್ಣಮೂರ್ತಿ ಅವರಿಗೆ ಅಭಿನಂದನೆಗಳು
#ಹಿರಿಯ_ಸಜ್ಜನ_ಮಾಜಿ_ಜಿಲ್ಲಾಪಂಚಾಯತ್_ಸದಸ್ಯ_ಎಂ_ಜಿ_ಕೃಷ್ಣಮೂರ್ತಿ #ವರದಳ್ಳಿ_ಶ್ರೀದರಾಶ್ರಮದ_ನೂತನ_ಅಧ್ಯಕ್ಷರು. #ಜಿಲ್ಲಾಪಂಚಾಯತ್_ಸಭೆಯಲ್ಲಿ_ನನ್ನ_ಜೊತೆಗಾರರು. #ಮಹಾರಾಜ_ಕಾಲೇಜಿನಲ್ಲಿ_ಉನ್ನತ_ವ್ಯಾಸಂಗ_ಮಾಡಿದವರು #ವರದಳ್ಳಿಯಲ್ಲಿ_2011ರಲ್ಲಿ_ನನ್ನ_ಎತ್ತಿನಗಾಡಿ_ಯಾತ್ರೆ_ಸಂದರ್ಭದಲ್ಲಿ #ಶೂದ್ರ_ದಲಿತರ_ಜೊತೆ_ಸಾಮೂಹಿಕ_ಬೋಜನ_ಮಾಡಿದ್ದರು. #ಶ್ರೀಧರ_ಸ್ವಾಮಿಗಳು_ಶೂದ್ರರಿಗೆ_ಪ್ರತ್ಯೇಕ_ಪಂಕ್ತಿ_ಊಟ_ಬಡಿಸಲು_ಹೇಳಿದ್ದಾರೆಂಬುದು_ಸತ್ಯವಾ? #ನೂತನ_ಅಧ್ಯಕ್ಷರು_ಈ_ತಾರತಮ್ಯ_ಬದಲಿಸ_ಬಹುದಾ? 1995-2000 ಇಸವಿಯಲ್ಲಿ ಎಂ.ಜಿ. ಕೃಷ್ಣಮೂರ್ತಿ ಯಡಜಿಗಳೆಮನೆ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯರು ನಾನು ಆನಂದಪುರಂ ಕ್ಷೇತ್ರದಿಂದ ಇಬ್ಬರೂ 5 ವರ್ಷ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಒಟ್ಟಿಗೆ ಕುಳಿತು ಕಲಾಪ ನಡೆಸಿದ್ದೆವು. ಈಗ ಎಂ.ಜಿ. ಕೃಷ್ಣಮೂರ್ತಿ ಸಾಗರ ತಾಲ್ಲೂಕಿನ ವರದಳ್ಳಿಯ ಶ್ರೀದರ ಸ್ವಾಮಿಗಳ ಆಶ್ರಮದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ. ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ ನಾನು ತಪಸ್ವಿಯಾದ ಶ್ರೀದರ ಸ್ವಾಮಿಗಳ ಭಕ್ತನೂ ಹೌದು. ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲ...