Skip to main content

Posts

ಲಕ್ಷ್ಮಣ್ ಕೊಡಸೆ ನಮ್ಮ ಜಿಲ್ಲೆಯವರು ಪ್ರಜಾವಾಣಿ ಮುಖ್ಯ ವರದಿಗಾರರು, ಉಪ ಸಂಪಾದಕರಾಗಿದ್ದವರು, ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಸ್ತುನಿಷ್ಟವಾಗಿ ವಿಮಶೆ೯ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಕೊಡಸೆ ಎಂಬ ಊರಿನ ಲಕ್ಷ್ಮಣ್ ಕೊಡಸೆ ವಿದ್ಯಾವಂತರು, ಇವರ ಅನೇಕ ಪುಸ್ತಕ ಪ್ರಕಟ ಆಗಿದೆ.  ರಾಜ್ಯದ ಪ್ರತಿಷ್ಠಿತ ಪ್ರಜಾವಾಣಿ ಪತ್ರಿಕೆ ಮುಖ್ಯ ವರದಿ ಗಾರರಾಗಿ ಉಪ ಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ಹೆಸರಾದವರು  ನಮ್ಮ ಜಿಲ್ಲೆಯವರಾದ ಇವರ ಬಗ್ಗೆ ನನಗೆ ಅಪಾರ ಗೌರವ, ಪೇಸ್ ಪುಸ್ತಕದಲ್ಲಿ ಪರಸ್ಪರ ಸ್ನೇಹ ನಮ್ಮದು.  ನನ್ನ ಮೊದಲ ಕಾದಂಬರಿ ಓದಿ ಪ್ರೋತ್ಸಾಹದ ನುಡಿ ಬರೆದಿದ್ದಾರೆ ಇದು ನನ್ನ ಕಾದಂಬರಿಗೊಂದು ಮುಕುಟ ಇಟ್ಟ೦ತೆ ಇದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ.      ಅವರು ಬರೆದ ಅನಿಸಿಕೆ ನಿಮಗಾಗಿ ಅರುಣ್ ಪ್ರಸಾದ್ ಅವರ ಬೆಸ್ತರ ರಾಣಿ ಚಂಪಕಾ  ಎಚ್.ಎಲ್.ನಾಗೇಗೌಡರು ಅಧ್ಯಯನ ಮಾಡಿ ಹೊರತಂದ `ಪ್ರವಾಸಿ ಕಂಡ ಇಂಡಿಯಾ' ಕೃತಿಯಲ್ಲಿ ಪ್ರಸ್ತಾಪವಾದ ಎಷ್ಟೋ ಸಂಗತಿಗಳು ದೇಶದ ರಾಜಕೀಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತವೆ. ಅದರಲ್ಲಿನ ಒಬ್ಬ ಪ್ರವಾಸಿಯ ಅನುಭವದ ಪ್ರಸ್ತಾಪವನ್ನು ಆಧರಿಸಿ ಕೆಳದಿ ಸಂಸ್ಥಾನದ ಅರಸು ಮನೆತನದ ಒಂದು ಪ್ರೇಮ ಕಥೆಯನ್ನು ಕೆ.ಅರುಣ್ ಪ್ರಸಾದ್ ಕಾದಂಬರಿಯಾಗಿ ವಿಸ್ತರಿಸಿದ್ದಾರೆ. ಕೆಳದಿಯ ರಾಜಾ ವೆಂಕಟಪ್ಪನಾಯಕ ಬೆಸ್ತರ ಹುಡುಗಿ ಚಂಪಕಾಳನ್ನು ಆಕೆಯ ರಂಗೋಲಿಯ ಕಲೆಗೆ ಮನಸೋತು ಮದುವೆಯಾಗುವ ಸ್ವಾರಸ್ಯಕರ ಸಂಗತಿಯನ್ನು ಆಧರಿಸಿದೆ ಈ ಕಾದಂಬರಿ. ಈಗ ಆನಂದಪುರದಲ್...

ಐತಿಹಾಸಿಕ ತಾವರೇಕೆರೆ ಹೆಸರಿನ ನಮ್ಮ ಊರಿನ ಗೌರಿಕೆರೆ ಸ್ವಚ್ಚಗೊಳಿಸಿದ (9- ನವೆಂಬರ್ -2014) ರ ನೆನಪು

      ತಾವರೇ ಕೆರೆ ಈಗ ಗೌರಿಕೆರೆ ಚಾಲುಕ್ಯರ ಜಯಕೇಶಿ ಕಾಲದಲ್ಲಿ ನಿಮಿ೯ಸಿದ ಕೆರೆ ಎಂಬ ಪ್ರತೀತಿ ಇದೆ, ಇದನ್ನು ಕೆಳದಿ ಅರಸರ ಆಳ್ವಿಕೆ ಕಾಲದಲ್ಲಿ ಅಭಿವೃದ್ದಿ ಪಡಿಸಿ ಹೆಚ್ಚು ಕೃಷಿಗೆ ಅವಕಾಶ ಮಾಡಲಾಯಿತೆನ್ನುತ್ತಾರೆ.   ಎರೆಡು ಸಮುದ್ರ ಸೇರುವ ಈ ಕೆರೆ ನೀರು       ಸಮುದ್ರ ಸೇತು ಆಗಿದೆ. ಈ ಕೆರೆಯ ವಿಶೇಷ ಎರೆಡು ತೂಬುಗಳಿದೆ ಇಲ್ಲಿಂದ ಫಲವತ್ತಾದ ಗುಂಡಿಬೈಲು ಎಂಬ ಬತ್ತದ ಕಣಜದ ಗದ್ದೆಗಳಿಗೆ ನೀರುಣಿಸಿ ಅಲ್ಲಿಂದ ಕಾಲುವೆ ಮೂಲಕ ಅಂಬ್ಲಿಗೋಳ ಜಲಾಶಯ ಹಾದು ತುಂಗಭದ್ರ ಸೇರಿ ಅಲ್ಲಿಂದ ಕೃಷ್ಣ ಗೋದಾವರಿ ಮೂಲಕ ಬಂಗಾಳಕೊಲ್ಲಿ ಸಮುದ್ರ ಸೇರಿದರೆ ಈ ಕೆರೆಯು ತುಂಬಿದಾಗ ಕೋಡಿಯಿ೦ದ ಹರಿಯುವ ನೀರು ಶರಾವತಿ ನದಿ ಸೇರಿ ಜೋಗ ಜಲಪಾತವಾಗಿ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.         ಯಡೇಹಳ್ಳಿ ಶ್ರೀ ವರಸಿದ್ಧಿ ವಿನಾಯಕ ದೇವರ ತೆಪ್ಪೊತ್ಸವಕ್ಕಾಗಿ ಕೆರೆ ಸ್ವಚ್ಚ ಕಾಮಗಾರಿ    ಊರ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದ ಪ್ರತಿಷ್ಟಾಪನಾ ನೇತೃತ್ವ ವಹಿಸಿ ಹಾಲಿ ದೇವಾಲಯದ ಟ್ರಸ್ಟ್ ನ ಗೌರವಾಧ್ಯಕ್ಷ ರಾದ ಬೆಂಗಳೂರಿನ ವಿಜಯನಗರ ವಾಸಿ ಜೋತಿಷಿ ಡಾ.ಎನ್.ಎಸ್.ವಿಶ್ವ ಪತಿ ಶಾಸ್ತ್ರಿ ಅವರಿಗೆ ಈ ಕೆರೆಯಲ್ಲಿ ದೇವರ ತೆಪ್ಪೊತ್ಸವ ಮಾಡಬೇಕಂಬ ಸಂಕಲ್ಪ 2006 ರಿ೦ದ ಇತ್ತು ಅದನ್...

ನಡೆ ನುಡಿ ಎಲ್ಲದರಲ್ಲೂ ಶಿಸ್ತಿನ ಸಿಪಾಯಿ ನಮ್ಮ ಗುರುಗಳಾದ ಕಾಳೇಶ್ವರ ದಮ೯ಪ್ಪ ಸಾಹೇಬರು

#ದಮ೯ಪ್ಪ_ಸಾಹೇಬರೆಂದರೆ_ರಾಜಕುಮಾರ್_ಇದ್ದ೦ತೆ.   ಅವರ ಜೀವನ ಅಷ್ಟು ಶಿಸ್ತುಬದ್ದ. 1978ರಲ್ಲಿ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿ ಇಂಗ್ಲೀಷ್ ಮೀಡಿಯಂ ಗೆ ನನ್ನ ತಂದೆ ಸೇರಿಸಿದ್ದರು, ಅಲ್ಲಿದ್ದ ಮ್ಯಾನೇಜರ್ ನಮ್ಮೂರ ಸಮೀಪದ ನಂದಿಗದ ಗುಂಡಪ್ಪನವರು (ಸಾಗರದ ಗೋಪಾಲರ ದೊಡ್ಡಪ್ಪ) ಬಿಟ್ಟರೆ ಬೇರಾರು ಗೊತ್ತಿರಲಿಲ್ಲ.  7 ನೇ ತರಗತಿ ತನಕ ಇಂಗ್ಲೀಷ್ ಮೀಡಿಯಂ ಓದಿದವರು 8ನೇ ತರಗತಿಗೆ ಇಲ್ಲಿಗೆ ಮತ್ತು ಅನುಕೂಲಸ್ಥರು ಪ್ರಭಾವಿಗಳು ಖಾಸಾಗಿ ಶಾಲೆ ಆದ ಶಿವಲಿಂಗಪ್ಪ ಹೈಸ್ಕೂಲ್ ಗೆ ಸೇರಿಸುತ್ತಿದ್ದರು.   ನಮ್ಮ ಊರಿನ ಹೈಸ್ಕೂಲ್ ಶಿಕ್ಷಕರು ನಮ್ಮ ತಂದೆಗೆ ಸಾಗರದ ಮುನ್ಸಿಪಲ್ ಹೈಸ್ಕೂಲ್ ಸೇರಿಸಲು ಸಲಹೆ ನೀಡಿ ಅವರ ಮಗನನ್ನ ಈ ಖಾಸಾಗಿ ಶಾಲೆಗೆ ಸೇರಿಸಿದ್ದರ ಉದ್ದೇಶ ಅನೇಕ ವರ್ಷದ ನಂತರ ಗೊತ್ತಾಯಿತು.   ಹಳ್ಳಿಯಲ್ಲಿ ಮಾತೃ ಬಾಷೆ ಕನ್ನಡ ಮಾದ್ಯಮದಲ್ಲಿ ಓದಿ ಶಾಲೆಗೆ ಪ್ರಥಮರಾಗುತ್ತಿದ್ದ ನನಗೆ ಸಾಗರದ 8ನೇ ತರಗತಿ ಒಂದು ರೀತಿ ಉಸಿರುಕಟ್ಟಿಸುತ್ತಿತ್ತು, ಇಂಗ್ಲೀಷ್ ಮಾಧ್ಯಮದಲ್ಲೇ ಒಂದನೇ ತರಗತಿಯಿಂದ ಓದಿ ಬಂದವರ ನಡುವೆ 5 ನೇ ತರಗತಿಯಿಂದ ಮಾತ್ರ ಒಂದು ವಿಷಯ ಇಂಗ್ಲೀಷ್ ಕಲಿಯಲು ಪ್ರಾರ೦ಬಿಸಿ 8 ನೇ ತರಗತಿಗೆ ದಿಡೀರ್ ಇಂಗ್ಲೀಷ್ ಮಾಧ್ಯಮಕ್ಕೆ ಬಂದಿದ್ದು ನನಗೆ ಕೀಳರಮಿ ಉಂಟು ಮಾಡಿತ್ತು.  ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಆ ಪರಿಸ್ಥಿತಿಯಲ್ಲಿ ನನ್ನದು ಅಂಗಿ ಚಡ್ಡಿ ಮತ್ತು ಹವಾಯಿ ಚಪ...

ಕೆಳದಿ ಇತಿಹಾಸದ ಬಗ್ಗೆ ಅಧಿಕೃತವಾಗಿ ಮಾತಾಡುವ ಬರೆಯುವ ಕೆಲವೇ ಜನರಲ್ಲಿ ಶಿವಮೊಗ್ಗದ ಬಿದನೂರು ನಗರವಾಸಿ ನಿವೃತ್ತ ಕೆಪಿಸಿ ವ್ಯವಸ್ಥಾಪಕರಾಗಿದ್ದ " ಕೆಳದಿಯ ಕುಲ ತಿಲಕ ವೆಂಕಟಪ್ಪ ನಾಯಕ " ಸಂಶೋದನಾ ಕೃತಿ ಬರೆದಿರುವ ಅಂಬ್ರಯ್ಯ ಮಠ ನನ್ನ ಕಾದಂಬರಿ ಓದಿ ವಿಮಶಿ೯ಸಿದ್ದಾರೆ

#ಅ೦ಬ್ರಯ್ಯಮಠ_ಬಿದನೂರುನಗರವಾಸಿ_ಅವರು_ನನ್ನ_ಕಾದಂಬರಿ_ಓದಿ_ಪ್ರತಿಕ್ರಿಯಿಸಿದ್ದು_ನನಗೆ_ಸಂತೋಷ_ತಂದಿದೆ ಕಾರಣ ಇವರು ಅನೇಕ ಪ್ರಸ್ತಕ ಬರೆದವರು (20ಕ್ಕೂ ಹೆಚ್ಚು ಪುಸ್ತಕ ಪ್ರಕಟ ಆಗಿದೆ) ಇವರು ಬರೆದ ''ಕೆಳದಿಯ ಕುಲ ತಿಲಕ ವೆಂಕಟಪ್ಪ ನಾಯಕ " ವಿಶೇಷವಾದದ್ದು ಇದರಲ್ಲಿ ಚಂಪಕಾಳ ಬಗ್ಗೆ ಬರೆದಿದ್ದಾರೆ, ಇತಿಹಾಸದಲ್ಲಿ ಬರುವ ಚಂಪಕಾಳ ಮ್ಲೇಚ್ಚಾ ಜಾತಿ ಎಂಬ ಬಗ್ಗೆ ವೈದಿಕ ಶಾಸ್ತ್ರದ ಅಥ೯ ಹಳೆಗನ್ನಡದ ಅಥ೯ದ ಬಗ್ಗೆ ಅನೇಕ ವಿದ್ವಾಂಸರಲ್ಲಿ ವಿಚಾರ ವಿನಿಮಯ ಮಾಡಿದ ಬಗ್ಗೆ ಪೋನಿನಲ್ಲಿ ತಿಳಿಸಿದರು.   ಕನಾ೯ಟಕ ಪವರ್ ಕಾರ್ಪೊರೇಷನ್ ನಲ್ಲಿ ವೃತ್ತಿ ಮಾಡಿ ವ್ಯವಸ್ಥಾಪಕರಾಗಿ ನಿವೃತ್ತರಾಗಿ ಶಿವಮೊಗ್ಗ ಜಿಲ್ಲೆಯ ನಗರದಲ್ಲಿ ನೆಲೆಸಿದ್ದಾರೆ, ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿದವರು.   ಕೆಳದಿ ಅರಸೊತ್ತಿಗೆಯ ಇತಿಹಾಸದ ಬಗ್ಗೆ ಅದಿಕೃತವಾಗಿ ಮಾತಾಡುವ ಬರೆಯುವ ಕೆಲವೇ ಕೆಲವರಲ್ಲಿ ಅಂಬ್ರಯ್ಯ ಮಠ ಮುಂಚೂಣಿಯಲ್ಲಿದ್ದಾರೆ, ದೇಶ ವಿದೇಶ ಯಾತ್ರೆ ಮಾಡಿರುವ ಇವರು ನನ್ನ ಕಾದಂಬರಿ ಬಗ್ಗೆ ಏನು ಬರೆದಿದ್ದಾರೆ ನೋಡಿ. #ಬೆಸ್ತರರಾಣಿ_ಚಂಪಕಾ” ಕಾದಂಬರಿ ಕುರಿತು  ಒಂದು ಪ್ರತಿಕ್ರಿಯೆ  ಶ್ರೀ ಕೆ.ಅರುಣ್ ಪ್ರಸಾದ್ ಅವರು ಬರೆದ “ಬೆಸ್ತರರಾಣಿ ಚಂಪಕಾ” ಸಂಪೂರ್ಣವಾಗಿ  ಓದಿದೆ. ಓದಿದೆ ಎನ್ನುವುದಕ್ಕಿಂತ  ಕೃತಿ ಓದಿಸಿಕೊಂಡುಹೋಯಿತು ಎನ್ನುವುದು ಹೆಚ್...

ಕುಂಸಿಯಲ್ಲಿ 50 ವಷ೯ದಿಂದ ಜನರ ವ್ಯಾಜ್ಯ ಸ್ಥಳಿಯವಾಗಿ ಬಗೆಹರಿಸುವ ಪಂಚಾಯಿತಿದಾರ ಜೋಡಿ ಸಂಜೀವಪ್ಪ ಮತ್ತು ರಾಮಪ್ಪ .

#ಕುಂಸಿ_ಎಂಬ_ಮಿನಿಭಾರತ  #ಸತತ_50_ವಷ೯ದಿಂದ_ಜನರ_ವ್ಯಾಜ್ಯ_ಬಗೆಹರಿಸುವ_ಪಂಚಾಯಿತಿದಾರ_ಜೋಡಿ #ಕುಂಸಿ_ಸಂಜೀವಪ್ಪ_ಮತ್ತು_ರಾಮಪ್ಪ   ಶಿವಮೊಗ್ಗ ಸಾಗರ ಮಾಗ೯ದ ಕುಂಸಿ ಬಗ್ಗೆ ತಿಳಿದಷ್ಟು ಕಡಿಮೆ, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ನಿಲ್ದಾಣ ಹೊಂದಿರುವ ಈ ಊರು ತಾಲ್ಲೂಕ್ ಕೇಂದ್ರ ಆಗಬೇಕೆಂಬ ಬಹುಕಾಲದ ಜನರ ಒತ್ತಾಯ ಇನ್ನೂ ಈಡೇರಿಲ್ಲ.   ಈ ಊರಲ್ಲಿ ಜಾತಿಗೊಂದು ಕೇರಿ ಮತ್ತು ಕೇರಿಗೊಂದು ಜಾತಿಯ ದೇವಾಲಯ ಇದೆ.  ಬಹುಶಃ ಜಾತಿ ವ್ಯವಸ್ಥೆಯ ಊರಿನ ಕೇರಿಗಳು ಉಳಿದಿರುವ ರಾಜರ ಕಾಲದ ಪಳಿಯುಳಿಕೆ ಈ ಊರು.   ಉದಾಹರಣೆ ಉಪ್ಪಾರ ಕೇರಿ ಅಲ್ಲಿ ಆ ಸಮಾಜದ ದುಗ೯ಮ್ಮ ದೇವಾಲಯ,ಕುರುಬರ  ಎರೆಡು ಕೇರಿ  ಅಲ್ಲಿ ಮಾಯಮ್ಮ ಮತ್ತು ಸಿದ್ದೇಶ್ವರ ದೇವಾಲಯ, ಮಡಿವಾಳರ ಕೇರಿ ಅಲ್ಲಿ ಮಾಚಿದೇವರು ಮತ್ತು ಹಳದಮ್ಮ ದೇವಾಲಯ ಇದೆ, ಲಿಂಗಾಯಿತರ ಎರೆಡು ಕೇರಿ ಅಲ್ಲಿ ವೀರಭದ್ರ ಮತ್ತು ಬಸವಣ್ಣ ದೇವಾಲಯ ಇದೆ, ಬ್ರಾಹ್ಮಣರ ಕೇರಿ ಅಲ್ಲಿ ಆಂಜನೇಯ ಮತ್ತು ತಿರುಪತಿ ಶ್ರೀನಿವಾಸ, ಮೈಸೂರು ರಾಜಾಶ್ರಯದ ಜಟ್ಟಿಗಳ ಕೇರಿ ಅಲ್ಲಿ ನಿಂಬುಜಾ ದೇವಿ ದೇವಸ್ಥಾನ, ವಡ್ಡ ಬೋವಿ ಕಾಲೋನಿ ಅಲ್ಲಿ ಗುಳ್ಳಮ್ಮ ಮತ್ತು ದುರ್ಗಮ್ಮ ದೇವಸ್ಥಾನ, ಬ್ಯಾಡರ ಕೇರಿ ಅಲ್ಲಿ ದುರ್ಗಮ್ಮ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ, ಗಂಗಾಮತಸ್ಥರ ಕೇರಿ ಅಲ್ಲಿ ಗಂಗಾ ಪರಮೇಶ್ವರಿ ದೇವಸ್ಥಾನ, ಚೆಲುವಾದಿಯರಕೇರಿ, ಮೇದಾರ ಕೇರಿ, ಹರಿಜನರ ಕೇರಿಯಲ್ಲಿ ಯ...

ತೊಟ್ಟಿಲ ಮಗುವಿನ ಜೊತೆ ವಾಸವಾಗಿದ್ದ ನಾಗರ ಹಾವು 1960 ರ ದಶಕದಲ್ಲಿ ದೊಡ್ಡ ವಿಸ್ಮಯ ಸುದ್ದಿ ಆಗಿತ್ತು ಅದೇ ವ್ಯಕ್ತಿಯ ಜೊತೆ 60 ವರ್ಷದ ನಂತರ ಸಂದಶ೯ನ

#1960ರ_ದಶಕದಲ್ಲಿ_ಇಡೀ_ರಾಜ್ಯಕ್ಕೆ_ವಿಸ್ಮಯವಾಗಿದ್ದ_ಪ್ರಕರಣದ_ವ್ಯಕ್ತಿ_ಇವರು #ಪ್ರಜಾವಾಣಿ_ದಿನಪತ್ರಿಕೆಯಲ್ಲಿ_60_ವಷ೯ದ_ಹಿಂದೆ_ಸುದ್ದಿ_ಆದ_ವ್ಯಕ್ತಿ_ಸಂದಶ೯ನ      ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಹೊಸಕೊಪ್ಪದಲ್ಲಿನ ಒಂದು ರೈತನ ಮನೇಲಿ ದೊಡ್ಡದಾದ ನಾಗರ ಹಾವು ತೊಟ್ಟಲಲ್ಲಿ ಮಲಗಿರುವ ಶಿಶುವಿನ ಜೊತೆ ಸದಾ ಮಲಗಿರುತ್ತೆ ಎಂಬ ಸುದ್ದಿ ಆ ಕಾಲದಲ್ಲಿ ಜನರಿಂದ ಜನರಿಗೆ ಹರಡಿ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ಸುದ್ದಿ ಆಗಿತ್ತ೦ತೆ.   ಇದು ನಾನು ಸಣ್ಣಕ್ಕಿದ್ದಾಗ ನಮ್ಮ ತಂದೆ ಅವರ ಗೆಳೆಯರ ಜೊತೆ ಇದನ್ನೆಲ್ಲ ಮಾತಾಡುವುದು ಕೇಳಿದ್ದೆ ನ0ತರ ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಾಗರ ಹಾವಿನ ಸಹಪಾಟಿ ಆಗಿ ಸುದ್ದಿ ಆಗಿದ್ದ ವ್ಯಕ್ತಿ ತಲಾಷ್ ಮಾಡಿದ್ದೆ.   ಶ್ರೀಮತಿ ಚೆನ್ನಮ್ಮ ಮತ್ತು ಬಡಿಯಪ್ಪ ದಂಪತಿಗಳು ಹೊಸಗುಂದದಿಂದ ಹೊಸಕೊಪ್ಪ ಎಂಬ ಹಳ್ಳಿಗೆ ವಲಸೆ ಬಂದು ಹುಲ್ಲಿನ ಮಾಡಿನ ಮತ್ತು ಬಿದಿರ ತಟ್ಟಿಯ ಗೋಡೆಯ ಗುಡಿಸಲು ಮಾಡಿ ಬಡತನದಿಂದ ಜೀವಿಸುತ್ತಿದ್ದರು ಅವರಿಗೆ ಒಂದು ಹೆಣ್ಣು ಮಗು ಇತ್ತು.   ಇಲ್ಲಿಗೆ ಬಂದ ಮೇಲೆ ಪುತ್ರ ಸಂತಾನವಾಯಿತು ಮಗುವನ್ನು ಮಾತ್ರ ನಾಗರ ಹಾವು ಬಿಟ್ಟು ದೂರ ಹೋಗುತ್ತಿರಲಿಲ್ಲವಂತೆ, ಹಾಲು ಕುಡಿಸುವಾಗ ಮಾತ್ರ ದೂರ ಇರುತ್ತಿತ್ತಂತೆ ಹಾಗಾಗಿ ಮಗುವಿಗೆ ನಾಗರಾಜ ಅಂತ ಹೆಸರಿಡುತ್ತಾರೆ. ...

2014 ನವೆಂಬರ್ 1 ರಿಂದ ಶಿಮೊಗ್ಗ ಅಧಿಕೃತವಾಗಿ ಶಿವಮೊಗ್ಗ ಎಂದು ಬದಲಾಗಿದೆ

#ನೆನಪಿರಲಿ_2014_ನವೆಂಬರ್_1_ರಿಂದ_ನಮ್ಮ_ಶಿಮೊಗ್ಗ_ಶಿವಮೊಗ್ಗ_ಎಂದು_ಅಧಿಕೃತವಾಗಿ_ಬದಲಾಗಿದೆ.     2014 ರಲ್ಲಿ ರಾಜ್ಯ ಸಕಾ೯ರ ನಮ್ಮ ಜಿಲ್ಲೆ ಶಿಮೊಗ್ಗ ಎಂಬ ಹೆಸರನ್ನು ಶಿವಮೊಗ್ಗ ಎಂದು ಬದಲಿಸಿದ್ದಕ್ಕೆ ಆಗಿನ ಶಿಮೊಗ್ಗದ ಶಾಸಕರಾದ ಪ್ರಸನ್ನ ಕುಮಾರ್ ಆಗಿನ ಮುಖ್ಯಮ೦ತ್ರಿಗಳಾದ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದ ಈ ಆರು ವರ್ಷದ ಹಿಂದಿನ ಪೋಸ್ಟ್ ನೆನಪಿಗಾಗಿ.