Skip to main content

ಕುಂಸಿಯಲ್ಲಿ 50 ವಷ೯ದಿಂದ ಜನರ ವ್ಯಾಜ್ಯ ಸ್ಥಳಿಯವಾಗಿ ಬಗೆಹರಿಸುವ ಪಂಚಾಯಿತಿದಾರ ಜೋಡಿ ಸಂಜೀವಪ್ಪ ಮತ್ತು ರಾಮಪ್ಪ .

#ಕುಂಸಿ_ಎಂಬ_ಮಿನಿಭಾರತ 
#ಸತತ_50_ವಷ೯ದಿಂದ_ಜನರ_ವ್ಯಾಜ್ಯ_ಬಗೆಹರಿಸುವ_ಪಂಚಾಯಿತಿದಾರ_ಜೋಡಿ
#ಕುಂಸಿ_ಸಂಜೀವಪ್ಪ_ಮತ್ತು_ರಾಮಪ್ಪ

  ಶಿವಮೊಗ್ಗ ಸಾಗರ ಮಾಗ೯ದ ಕುಂಸಿ ಬಗ್ಗೆ ತಿಳಿದಷ್ಟು ಕಡಿಮೆ, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ನಿಲ್ದಾಣ ಹೊಂದಿರುವ ಈ ಊರು ತಾಲ್ಲೂಕ್ ಕೇಂದ್ರ ಆಗಬೇಕೆಂಬ ಬಹುಕಾಲದ ಜನರ ಒತ್ತಾಯ ಇನ್ನೂ ಈಡೇರಿಲ್ಲ.
  ಈ ಊರಲ್ಲಿ ಜಾತಿಗೊಂದು ಕೇರಿ ಮತ್ತು ಕೇರಿಗೊಂದು ಜಾತಿಯ ದೇವಾಲಯ ಇದೆ.
 ಬಹುಶಃ ಜಾತಿ ವ್ಯವಸ್ಥೆಯ ಊರಿನ ಕೇರಿಗಳು ಉಳಿದಿರುವ ರಾಜರ ಕಾಲದ ಪಳಿಯುಳಿಕೆ ಈ ಊರು.
  ಉದಾಹರಣೆ ಉಪ್ಪಾರ ಕೇರಿ ಅಲ್ಲಿ ಆ ಸಮಾಜದ ದುಗ೯ಮ್ಮ ದೇವಾಲಯ,ಕುರುಬರ  ಎರೆಡು ಕೇರಿ  ಅಲ್ಲಿ ಮಾಯಮ್ಮ ಮತ್ತು ಸಿದ್ದೇಶ್ವರ ದೇವಾಲಯ, ಮಡಿವಾಳರ ಕೇರಿ ಅಲ್ಲಿ ಮಾಚಿದೇವರು ಮತ್ತು ಹಳದಮ್ಮ ದೇವಾಲಯ ಇದೆ, ಲಿಂಗಾಯಿತರ ಎರೆಡು ಕೇರಿ ಅಲ್ಲಿ ವೀರಭದ್ರ ಮತ್ತು ಬಸವಣ್ಣ ದೇವಾಲಯ ಇದೆ, ಬ್ರಾಹ್ಮಣರ ಕೇರಿ ಅಲ್ಲಿ ಆಂಜನೇಯ ಮತ್ತು ತಿರುಪತಿ ಶ್ರೀನಿವಾಸ, ಮೈಸೂರು ರಾಜಾಶ್ರಯದ ಜಟ್ಟಿಗಳ ಕೇರಿ ಅಲ್ಲಿ ನಿಂಬುಜಾ ದೇವಿ ದೇವಸ್ಥಾನ, ವಡ್ಡ ಬೋವಿ ಕಾಲೋನಿ ಅಲ್ಲಿ ಗುಳ್ಳಮ್ಮ ಮತ್ತು ದುರ್ಗಮ್ಮ ದೇವಸ್ಥಾನ, ಬ್ಯಾಡರ ಕೇರಿ ಅಲ್ಲಿ ದುರ್ಗಮ್ಮ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ, ಗಂಗಾಮತಸ್ಥರ ಕೇರಿ ಅಲ್ಲಿ ಗಂಗಾ ಪರಮೇಶ್ವರಿ ದೇವಸ್ಥಾನ, ಚೆಲುವಾದಿಯರಕೇರಿ, ಮೇದಾರ ಕೇರಿ, ಹರಿಜನರ ಕೇರಿಯಲ್ಲಿ ಯಾವುದೇ ದೇವಸ್ಥಾನ ಇಲ್ಲ, ಮುಸ್ಲಿಂ ರ ಕೇರಿ ಅಲ್ಲಿ 2 ಮಸೀದಿಗಳಿದೆ.
 ಕುಂಸಿ ಇತಿಹಾಸ ಹೇಳುವ ಕುಂಬೇಶ್ವರ ದೇವಸ್ಥಾನ ಕೂಡ ಇಲ್ಲಿದೆ.
  ಇಲ್ಲಿನವರೇ ಈಗ ಶಿವಮೊಗ್ಗದ ಖ್ಯಾತ ಉದ್ದಿಮೆದಾರರಾದ ಮಥುರಾ ಹೋಟೇಲ್ ಮಾಲಿಕರಾದ ನಾಗರಾಜರಾಯರ ಬಗ್ಗೆ ಇಡೀ ಕುಂಸಿಯಲ್ಲಿ ವಿಶಿಷ್ಟ ಗೌರವಾದಾರ ಇದೆ.
 ಶಿವಮೊಗ್ಗದ Y H ನಾಗರಾಜ್ ಸಹೋದರರು ಮೂಲ ಕುಂಸಿಯವರೆ ಹಾಲಿ ಬೆಂಗಳೂರಿನ ಖ್ಯಾತ ಉದ್ದಿಮೆದಾರ ಆರ್.ಚಂದ್ರಪ್ಪ ಇಲ್ಲಿಯವರೆ.
  ಹೀಗಿದ್ದರು ಕುಂಸಿಯಲ್ಲಿ ಸುಮಾರು 50 ವರ್ಷದಿಂದ ಊರಿನ ಮನೆ ಹಿಸ್ಸೆ, ಜಮೀನು ವ್ಯಾಜ್ಯ, ತರಲೆ ತಾಪತ್ರಾಯ ಗಳನ್ನು ಕಟ್ಟೆ ಪಂಚಾಯಿತಿ ಮಾಡಿ ಬಗೆಹರಿಸುವ ಜೋಡಿ ಪಂಚಾಯಿತಿದಾರರೆಂದರೆ ರಾಮಪ್ಪ ಮತ್ತು ಸಂಜೀವಪ್ಪ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.
  ಇವರಿಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದವರು ಮತ್ತು ಪಿ.ಎಲ್.ಡಿ. ಬ್ಯಾ೦ಕ್ ಅಧ್ಯಕ್ಷರಾಗಿದ್ದವರು ಇವರಿಬ್ಬರ ದಿನಚರಿ ಪ್ರಾರಂಭ ಆಗುವುದೇ ಊರಿನ ಒಬ್ಬರಲ್ಲ ಒಬ್ಬರ ಪಂಚಾಯಿತಿಯಿಂದ ಮತ್ತು ಮುಗಿಯುವುದು ಹಾಗೆ.
  ಇಡೀ ಕುಂಸಿಯ ಯಾವುದೇ ಹಿಸ್ಸೆ ಪಂಚಾಯಿತಿ, ಕೌಟುಂಬಿಕ ಬಿನ್ನಾಭಿಪ್ರಾಯಗಳಲ್ಲಿ ಇವರಿಬ್ಬರ ಹೆಸರು ಇದ್ದೇ ಇದೆ ಅಂದರೆ ಇವರಿಬ್ಬರ ಅನಿವಾಯ೯ತೆ ಅಥ೯ವಾದೀತು.
  ಇವರಿಬ್ಬರೂ ಕಾಂಗ್ರೇಸ್ ಪಕ್ಷ ಆದರೆ ಪಂಚಾಯಿತಿ ರಾಜೀಕಬೂಲಿಗೆ ಪಕ್ಷವಿಲ್ಲ.
  ಇವರ ಪೋಟೋಗಾಗಿ ಕುಂಸಿ ಗೆಳೆಯ ಕುಲದೀಪ್ ಸಿಂಗ್ ಗೆ ಪೋನ್ ಮಾಡಿ ಪಡೆದೆ ಅವರೂ ಹೇಳುವ ಅಭಿಪ್ರಾಯ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬಡವ ಅಥವ ಶ್ರೀಮಂತ ಬೇದ ಇಲ್ಲದೆ ಕುಂಸಿಯ ಎಲ್ಲಾ ಜನರು ಇವರಿಬ್ಬರನ್ನ ಗೌರವಿಸುತ್ತಾರೆ ಮತ್ತು ಊರಿನ ಪಂಚಾಯಿತಿಗೆ ಇವರಿಬ್ಬರು ಬೇಕೇ ಬೇಕು ಅಂತ.
  ಬಹುಶಃ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಸತತ 50 ವರ್ಷದಿಂದ ನಿರಂತರ ಜನರ ವ್ಯಾಜ್ಯ ಬಗೆಹರಿಸುತ್ತಿರುವ ರಾಮಪ್ಪ ಮತ್ತು ಸಂಜೀವಪ್ಪರಂತ ಜೋಡಿ ಇನ್ನೊಂದಿಲ್ಲ.
  ಕಟ್ಟೆ ಪಂಚಾಯಿತಿ ತೀಮಾ೯ನಗಳು ಗ್ರಾಮೀಣ ಜನರ ಮಾನಸಿಕ ಮತ್ತು ಆಥಿ೯ಕ ಸಮಾದಾನ ತರುತ್ತದೆಂದು ಒವ೯ ಸುಪ್ರಿಂ ಕೋಟ್೯ ಜಡ್ಜ್ ಬಹಳ ಹಿಂದೆ ನೀಡಿದ ಹೇಳಿಕೆ ಈ ಸಂದಭ೯ದಲ್ಲಿ ನೆನಪಿಸಿಕೊಳ್ಳಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...