Skip to main content

ಓದುಗನ ಹೃದಯದ ಬಾಗಿಲು ತಟ್ಟುತ್ತದಾ ನನ್ನ ಕಾದಂಬರಿ ಅಂತ ನನ್ನ ಅಂತರಂಗ ಅನುಮಾನಿಸುತ್ತಿತ್ತು,ಈಗಬೆಸ್ತರ ರಾಣಿ ಚಂಪಕಾ ಕಾದಂಬರಿ ಈ ಅನುಮಾನ ಸುಳ್ಳಾಗಿಸಿದೆ ಇದು ಬರಹಗಾರನಿಗೆ ಸಾಥ೯ಕತೆ ನೀಡಿದಂತಾಗಿದೆ.

#ಜಿ_ಟಿ_ಸತ್ಯನಾರಾಯಣ್_ಚಂಪಕ_ಸರಸ್ಸುನಲ್ಲಿ

 ಒಬ್ಬ ಲೇಖಕನಿಗೆ ತನ್ನ ಬರಹ ಓದುಗನ ಹೃದಯದ ಬಾಗಿಲು ತಟ್ಟಿತೆಂದರೆ ಅದಕ್ಕಿ೦ತ ಸಾಥ೯ಕತೆ ಬೇರೆ ಇರಲಿಕ್ಕಿಲ್ಲ.
 ಇದೆಲ್ಲ ಯಾಕೆಂದರೆ 10 ವರ್ಷದ ಹಿಂದೆ ನಾನು ಬರೆದ ಕಾದಂಬರಿ ಪ್ರಕಟ ಆದ ನಂತರ ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳು.
 400 ವರ್ಷದ ಹಿಂದೆ ರಾಜ ವೆಂಕಟಪ್ಪ ನಾಯಕ ರಾಣಿ ಚಂಪಕಾಳಿಗಾಗಿ ಕಟ್ಟಿಸಿದ ಈ ಸ್ಮಾರಕ ಈಗಲೂ ಗಟ್ಟು ಮುಟ್ಟಾಗಿದೆ, 2024ಕ್ಕೆ ಈ ಸ್ಮಾರಕಕ್ಕೆ 400 ನೇ ವಷಾ೯ಚಾರಣೆ ಮತ್ತು ಆನಂದ ಪುರ ಎಂದು ನಾಮಕರಣಕ್ಕೂ ಕೂಡ.
  ನನ್ನ ಈ ಕಾದಂಬರಿ ಓದಿ ಸ್ಥಳ ಬೇಟಿ ಅನೇಕರು ಮಾಡುತ್ತಿದ್ದಾರೆ, ಪ್ರತಿನಿತ್ಯ ಹೊಸ ಪ್ರವಾಸಿಗಳು ಹೆಚ್ಚು ಬರುತ್ತಾರೆ ಅಂತ ಸ್ಥಳಿಯರು ಹೇಳುತ್ತಾರೆ.
 ನಿನ್ನೆ ಪತ್ರಕತ೯,ಸಾಹಿತಿ ತುಮರಿ ಬಾಗದ ಜನಪರ ಹೋರಾಟಗಾರ, ಉಪನ್ಯಾಸಕರೂ ಆಗಿರುವ ಜಿ.ಟಿ. ಸತ್ಯನಾರಾಯಣ್ ಚಂಪಕ ಸರಸ್ಸು ಸಂದಶಿ೯ಸಿದ್ದಾರೆ.
  ನಾನು ಅವರ ಸರಣಿ ವಿಡಿಯೋ ಮಾಲಿಕೆ GT ವಿಥ್ TRUTH ನ ನಿರಂತರ ವೀಕ್ಷಕ ನಿನ್ನೆಯಿಂದ ಇದು ಚಂಪಕಸರಸ್ಸುವಿನ ಸುದ್ದಿಯಿಂದ U TUBE ಮಾಲಿಕೆ ಆಗಿ ಬದಲಾಗಿದೆ ಇವರ ಸರಣಿ ವಿಡಿಯೋ ಹೊಸ ರೂಪಕ್ಕೆ ಯಶಸ್ಸು ಹಾರೈಸುತ್ತೇನೆ.
  ನಿಜ 400 ವರ್ಷದಿಂದ ಚಂಪಕಾಳ ಆತ್ಮ ಅಲ್ಲಿ ಅತೃಪ್ತಿಯಿಂದ ಕಾದಿದೆ, ಜಿಟಿಯವರ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಮಧ್ಯದಲ್ಲಿ ಪ್ರಖ್ಯಾತ ಪರಿಸರ ಮತ್ತು ಜಲ ತಜ್ಞ ಸಿಸಿ೯ಯ ಕಳವೇ ಶಿವಾನಂದರು ಪೋನ್ ಮಾಡಿ ಶುಭ ಸಮಾಚಾರ ಹೇಳಿದ್ದಾರೆ ತಕ್ಷಣ ಚಂಪಕ ಸರಸ್ಸುವಿಗೆ ಮಾಡಬೇಕಾದ ದುರಸ್ತಿಗೆ ಅವರು ಶ್ರಮ ಹಾಕಲಿದ್ದಾರೆ.
  ಇದನ್ನೇ ನಾನು ಹೇಳುವುದು ಬರಹಗಾರನಿಗೆ ಸಾಥ೯ಕ ಎಂಬ ಮನಸ್ಥಿತಿ ಸಿಗುವುದು ಓದುಗರ ಹೃದಯದ ಬಾಗಿಲು ಬರಹದ ವಸ್ತು ತಲುಪಿದಾಗಲೇ ಅಲ್ಲವೇ!?

ಜಿ ಟಿ ವಿಥ್ truth.... ಯು ಟ್ಯೂಬ್ ಚಾನೆಲ್ ಆಗಿ ಸೇರ್ಪಡೆ ಆಗುತ್ತಿದೆ...

ಪ್ರೇಮದ ಕರೆಗೆ ಒಗುಟ್ಟು ಕೊಳದ ಆಳಕಿಳಿದು.....

ಆ ಮಹಾರಾಣಿ ಅಲ್ಲೇ ಇದ್ದಾಳ...? ಇಲ್ಲ ಅನ್ನುವುದಾದರೂ ಹೇಗೆ. ಆ ನೀಲಿ ಕೊಳ ಆಳದಲ್ಲಿ ಇತಿಹಾಸದ....ಕ್ಷಮಿಸಿ ಚರಿತ್ರೆಯ ಅಮರ ಪ್ರೇಮದ ಸ್ಮಾರಕವಾಗಿರುವ ಚಂಪಕ ಮಹಾರಾಣಿಯ ಸಮಾಧಿ ಸ್ಥಳದ ಕೊಳ ತನ್ನ ಕಥೆಯನ್ನ ತಾನೇ ಹೇಳುತ್ತಾ ಇದೆ. ಕೇಳುವ ಕಿವಿ ಇದ್ದರೆ...ನೋಡುವ ನೋಟದಲ್ಲಿ ಪೂರ್ವಗ್ರಹ ಮತ್ತು ನಂಜು ಇಲ್ಲದೆ ಇದ್ದರೆ ಅರುಣ್ ಪ್ರಸಾದ್ ಬರೆದಿರುವ ಕೆಳದಿ ಅರಸ ರಾಜ ವೆಂಕಟಪ್ಪನಾಯಕ ಮತ್ತು ಚಂಪಕ ಸರಸು ಪ್ರೇಮ ಸಾಮ್ರಾಜ್ಯ ಕೊಳದ ತಿಳಿ ನೀರಿನ ಹಾಗೆ ಪರಿಶುದ್ಧವಾಗಿ ಆವರಿಸಿ ಆಪ್ತಗೊಳಿಸುತ್ತದೆ. ಇಂದು ಬಹಳ ಆಕಸ್ಮಿಕವಾಗಿ ಆನಂದಪುರ ಭೇಟಿ ನೀಡಿದಾಗ ಚಂಪಕ ಮಹಾರಾಣಿಯನ್ನ ನೋಡಬೇಕು ಅನ್ನಿಸಿತು. ಏಕಾಂಗಿಯಾಗಿ ಹೊರಟೆ. 

ಅರುಣ್ ಪ್ರಸಾದ್ ಕರೆ ಮಾಡಿದೆ ಅವರು  ತಡವಾಗಿ ಸ್ವೀಕರಿಸುವ ಹೊತ್ತಿಗೆ ನಾನು ಕೊಳ ತಲುಪಿ ಆಗಿತ್ತು. ತಲುಪಲು ಕಡೆ ವಿಳಾಸ ಕೇಳಿದರೂ ಸಮರ್ಪಕವಾಗಿ ಮಾರ್ಗಸೂಚಿ ಸಿಗದೇ ಇದ್ದುದು ಸ್ಥಳೀಯರಿಗೆ ನೆಲದ ಇತಿಹಾಸ ಬಗ್ಗೆ ಇರುವ ಅವಜ್ಞೆ ಭಾಗವಾಗಿ ನನಗೆ ಕಾಣಿಸಿತು. ಕೊಳದ ಮುಂಭಾಗದಲ್ಲಿ ಹೋಗಿ ನಿಂತರೆ ಕೊಳ ಎರಡೆರಡು ಕಥೆ ಹೇಳಿತು.

ಮೊದಲ ಕಥೆ... ದುಃಖಾಂತ್ಯ ಕಂಡ ಪ್ರೇಮ ಭಾಗದ್ದು. ಅರುಣ್ ಪ್ರಸಾದ್ ಕಾದಂಬರಿ ಓದಿ ಹೋಗಿದ್ದ ನಾನು ಚಂಪಕ ಮಹಾರಾಣಿ ಬಗ್ಗೆಯೇ ಆಲೋಚನೆ ಕೇಂದ್ರೀಕರಿಸಿಕೊಂಡು ಹೋಗಿದ್ದೆ. ಒಂದರ್ಥದಲ್ಲಿ ಶೂದ್ರ ಮಹಾರಾಣಿಯ ಹುಡುಕಿ ಹೋಗಿದ್ದೆ. ಆದರೆ ಅಲ್ಲಿ ಹೋಗಿ ನಿಂತಾಗ ನಿಜಕ್ಕೂ ದರ್ಶನ ನೀಡಿದ್ದು ನಮ್ಮ ಕೆಳದಿಯ ಅರಸ ರಾಜ ವೆಂಕಟಪ್ಪನಾಯಕ ಆಂತರ್ಯದಲ್ಲಿ ಚಂಪಕ ಮಹಾರಾಣಿ ಬಗ್ಗೆ ಹೊಂದಿದ್ದ ಅಪಾರ ಪ್ರೇಮವನ್ನ. ಇಡೀ ಕೊಳದ ವಾಸ್ತುಶಿಲ್ಪ, 400 ವರ್ಷವಾದರೂ ಅದು ಮುಕ್ಕಾಗದೆ ಉಳಿದಿರುವ ರೀತಿ, ಕೇವಲ ಸಣ್ಣದೊಂದು ಕೊಳ ಕಟ್ಟಿಸದೇ ಕಾಲ ಕಾಲಕ್ಕೂ ತಾನು ಪ್ರೇಮಕ್ಕೆ ಒಲಿದ ಅನಂದಪುರದ ಮಣ್ಣಿನಲ್ಲೇ ಶಾಶ್ವತವಾಗಿ ಉಳಿಸುವ ಪ್ರೇಮಸ್ಮಾರಕ ಕಟ್ಟಿದ ರಾಜ ವೆಂಕಟಪ್ಪನಾಯಕನ ಎದೆಯ ಪ್ರೇಮವೇ ನೀರಾಗಿ ಕೊಳ ಆವರಿಸಿದೆ. ಯುದ್ಧದಲ್ಲಿ ವೀರಮರಣ ಹೊಂದಿದ ಮಹಾರಾಣಿ ಸ್ಮಾರಕ ಮಾಡುವುದಕ್ಕೂ ತಾನು ಒಲಿದ ಆದರೆ ಸಮಾಜದ ನಿಕೃಷ್ಟ ಕಣ್ಣಿಗೆ ಜೀವತೆತ್ತ ಮಹಾರಾಣಿಗೆ ಆಕೆಯ ಕಾಲ ನಂತರವೂ ಸ್ಮಾರಕ ಸ್ವತಃ ರಾಜ ವಿಷಮ ಹೊತ್ತಿನಲ್ಲೂ ಕಟ್ಟಿಸುವುದಕೂ ವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ವೆಂಕಟಪ್ಪ ನಾಯಕನೂ ಚಂಪಕ ರಾಣಿ ಜತೆ ಜತೆಗೆ ದರ್ಶನ ನೀಡಿ ತಮ್ಮ ಕಥೆ ಹೇಳಿದರು.

ಎರಡನೇ ಕಥೆ ಹೇಳಿದ್ದು...
ಕುರುಚಲು ಗಿಡ.. ಲಂಟಾನು ಪೊದೆ.. ಕಡಿದಾದ ರಸ್ತೆ...ಯಥಾ ಪ್ರಕಾರ ಹೆಂಡದ ಬಾಟಾಲ್, ರಾಶಿ ಗುಟ್ಕಾ ಪ್ಯಾಕೆಟ್, ಶಿವಲಿಂಗ ಗೋಪುರ ಮೇಲೂ ಆಧುನಿಕ ಯುಗಪುರುಷರ ಲವ್ ಸಿಂಬಲ್, ಹೆಸರು, ಪಾಳು ಬಿದ್ದ ದೇಗುಲ.....

ಒಂದು ಅದ್ಬುತ ಸ್ಮಾರಕವಾಗಬೇಕಾದ, ಸಾವಿರಾರು ಜನರಿಗೆ ಪ್ರವಾಸಿ ತಾಣ ಆಗಿ ಚರಿತ್ರೆ ಹುಡುಕಾಟಕೆ ಸ್ಫೂರ್ತಿ ಆಗಬೇಕಾದ, ನಮ್ಮ ಕೆಳದಿಯ ನಾಯಕನ ಅಂತರಂಗದ ಪ್ರೇಮ ಚಿಲುಮೆಯೇ ಆಗಿರುವ ಚಂಪಕ ಸರಸು ಕೊಳ ಅಳುತ್ತಿದೆ... ಕಣ್ಣೀರಾಗಿದೆ. ಅವನ್ಯಾವನೋ ಇತಿಹಾಸಕಾರ ಬರೆದದ್ದೇ ಅಂತಿಮ ಎಂದು 15 ಮಾರ್ಕ್ಸ್ ಪ್ರಶ್ನೆಗೆ ಉತ್ತರ ಬರೆಯಲು ಸೀಮಿತವಾಗಿ ಪದವಿ ಮುಗಿಸಿದರೆ, ಯುನಿವರ್ಸಿಟಿಗಳು ಅಲ್ಲಿಗೆ ಸೀಮಿತವಾದರೆ, ಸರ್ಕಾರ ನಡೆಸುವ ಯಾವುದೇ ಪಕ್ಷದ ಮಂದಿಗೆ ಇದು ಓಟು ತರುವ ವ್ಯವಹಾರ ಅಲ್ಲ ಅನ್ನಿಸಿದರೆ ಕೊಳದಲ್ಲಿ ಈ ಹಿಂದೆ ಹೂಳು ತುಂಬಿದಂತೆ ಪುನಃ ತುಂಬಿ ನಾಮವಾಶೇಷ ಆದರೆ ಆಶ್ಚರ್ಯ ಇಲ್ಲ... ಆಗ ಕೊಳದ ಒಳಗೆ ಮಾತ್ರ ಹೂಳು ತುಂಬಿರುವುದಿಲ್ಲ. ನಮ್ಮ ಮೆದುಳಿನ ಒಳಗೂ ಕೂಡ. ಕೊಳದ ಎದುರು ನಿಂತು ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿದಾಗ ಕ್ರಿಯಾಶೀಲ ಮತ್ತು ರಚನಾತ್ಮಕವಾಗಿ ಗಂಗಮತಸ್ಥ  ಸಮುದಾಯದ ಸಂಘಟನೆ ಮಾಡುತ್ತಾ ಇರುವ ಡಾ. ವಿ ಶಂಕರ್ ರವರ ಫೌಂಡೇಶನ್ ಕೂಡ ನೆನಪಿಗೆ ಬಂತು. ಅರುಣ್ ಪ್ರಸಾದ್ ಜತೆಯಲ್ಲಿ ನಿಂತು ಎಲ್ಲರ ಸಹಕಾರ ಪಡೆದು ತಮ್ಮ ಪಾರಂಪರಿಕವಾಗಿರುವ ಸ್ಮಾರಕ ಉಳಿಸಿ ಜಾತಿ ಕಾರಣದಿಂದ ಪ್ರಾಣತೆತ್ತ ಚರಿತ್ರೆಗೆ ನ್ಯಾಯ ನೀಡುವ ಯೋಜನೆ ಮಾಡಬಹುದಿತ್ತು ಎಂದು ನನಗೆ ಇಂದು ಅನ್ನಿಸಿತು. ಅದರೊಳಗೆ ಜಿಡುಕು ಎನಿವೇಯೋ ಗೊತ್ತಿಲ್ಲ... ಸ್ಮಾರಕ ಉಳಿದು ಬೆಳೆದು ಬೆಳಗಲಿ ಎಂಬ ಆಶಯ ಮಾತ್ರ ನನ್ನದು.  

ಮಾನ್ಯ ಶಾಶಕರು ಸೇರಿ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನಕ್ಕೆ ಸರಿಯಾದ ರೀತಿಯಲ್ಲಿ  ತಂದರೆ ಬಹಳ ಬೇಗ ಅದು ನೆರವೇರುತ್ತದೆ... ಆ ಕಾಲ ಸನ್ನಿಹಿತವಾಗಲಿ.

ಈ ನಡುವೆ ಭರವಸೆ ಮತ್ತು ಖುಷಿಯೆಂದರೆ ಇತಿಹಾಸ ಆಧಾರಿತ ಕಾದಂಬರಿಯೊಂದು ಆವರಿಸಿ ಕೊಳದ ಬುಡಕ್ಕೆ ಕರೆದೊಯ್ದು ನಿನ್ನೆ ಮತ್ತು ನಾಳೆಗಳ ಬಗ್ಗೆ ಇಂದು ಮಾತಾಡುವಂತೆ ಮಾಡಿರುವುದು. ಈ ನಡುವೆ ಜಿ.ಟಿ ವಿಥ್ truth ಇನ್ನು ಮುಂದೆ ಯು ಟ್ಯೂಬ್ ಚಾನೆಲ್ ಆಗಿ ಬದಲಾಗಲಿದೆ. ಒಂದು ಬಹುಮುಖ ನಡಿಗೆಗೆ ಸಿದ್ದ ಆಗಿ ಹೆಜ್ಜೆ ಕಿತ್ತು ಮುಂದಕ್ಕೆ ಇಟ್ಟಿರುವೆ. ನಿಮ್ಮ ಪ್ರೀತಿ ನಂಬಿಕೊಂಡು. 

 ಚಂಪಕ ಸರಸು ಕಾದಂಬರಿಗಾಗಿ...

Thank u ಅರುಣ್ ಪ್ರಸಾದ್ ಸರ್.

ಜಿ. ಟಿ ಸತ್ಯನಾರಾಯಣ ಕರೂರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...