Skip to main content

Posts

ಬೆಸ್ತರ ರಾಣಿ ಚಂಪಕಾ ವಿಮಷೆ೯-5

ರತ್ನಾಕರ್ ಸಿ. ಕುನುಗೋಡು ಸಾಗರ ತಾಲ್ಲೂಕಿನ ತುಮರಿಯವರು, ಈಗ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಸಕಾ೯ರಿ ಪದವಿ ಕಾಲೇಜಿನ ಅಸಿಸ್ಟೆಂಟ್ ಪ್ರೋಪೆಸರ್ ಆಗಿದ್ದಾರೆ.  ಇವರು ಆನಂದಪುರಂನಲ್ಲಿ ವಿದ್ಯಾಬ್ಯಾಸ ಮಾಡುವಾಗ ಚಂಪಕ ಸರಸ್ಸು ಇವರ ಓದಿನ ತಾಣವಾಗಿತ್ತೆ೦ದು ತಿಳಿಸಿದ್ದಾರೆ.   ಚರಿತ್ರೆ ಓದಿ ಬೋದಿಸುವ ಇವರ ವಿಮಷೆ೯ ವಿಶೇಷವಾಗಿದೆ. ರಂಗೋಲಿಯ ಹುಡುಗಿ 'ಚಂಪಕಾ'ಳ ದುರಂತ ಪ್ರೇಮ ಕಥನ...   ನೆನ್ನೆ ಹಿರಿಯರಾದ 'ಕೆ.ಅರುಣ್ ಪ್ರಸಾದ್' ಅವರ  ಇತ್ತೀಚೆಗೆ ಬಿಡುಗಡೆಗೊಂಡ 'ಬೆಸ್ತರರಾಣಿ ಚಂಪಕಾ' ಕಾದಂಬರಿ ಕೈಸೇರಿತು. ಕೈಸೇರಿದ ಒಂದೇ ದಿನದಲ್ಲಿ ಪೂರ್ಣ ಓದಿಸಿಕೊಂಡು, ಮತ್ತೆ ಮತ್ತೆ ಕಾಡುತ್ತಿರುವ ಕಾರಣಕ್ಕಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ.    ಸೌರವ್ಯೂಹದಲ್ಲಿ ಜೀವಿ ಗಳಿರುವ ಏಕೈಕ ಗ್ರಹ ಭೂಮಿ. ಅದಕ್ಕೆ ಕಾರಣ 'ಜಲ'. ಜಲ ಮೂಲದಿಂದಲೇ ಜೀವಾಂಕುರವಾಗಿ  ಜೀವಜಗತ್ತು ಅಸ್ತಿತ್ವಕ್ಕೆ ಬಂದಿದ್ದು. ನಾಗರೀಕತೆ ವಿಕಾಸಗೊಂಡಿದ್ದು ನದಿಬಯಲಿನಲ್ಲೇ. ಈ ಜಲಮೂಲ ಪರಂಪರೆಯ ಇಂದಿನ ವಾರಸುದಾರರು 'ಬೆಸ್ತರು'. ನಮ್ಮೆಲ್ಲಾ ಮಹಾ ಪುರಾಣಗಳು ಜಲಪ್ರತೀಕವಾದ ಗಂಗೆಯಿಂದಲೇ ಆರಂಭಗೊಳ್ಳುತ್ತವೆ. ಇಂದಿಗೂ ನಮ್ಮೆಲ್ಲಾ ಆಚರಣೆ ಗಳಲ್ಲಿ ತುಂಬಿದಕೊಡದ ಕಳಸಕ್ಕೆ ಅಗ್ರಸ್ಥಾನ. ಇದು ಸೃಷ್ಟಿಯ ಮೂಲ ಜಲ ಪರಂಪರೆಯ ಸ್ಮರಣೆಯ ಭಾಗವಾಗಿದೆ. ಹೀಗೆ ಜಲಪರಂಪರೆಯೊಂದಿಗೆ ಬೆರತು ಅದನ್ನೇ ತಮ್ಮ ...

ಬೆಸ್ತರ ರಾಣಿ ಚ೦ಪಕಾ ವಿಮಷೆ೯ - 4

#ಕೃಷ್ಣಮೂತಿ೯_ಎನ್ ಕನ್ನಡ ಉಪನ್ಯಾಸಕರು, ಶಿವಮೊಗ್ಗದ ಪ್ರತಿಷ್ಠಿತ ಡಿ.ವಿ.ಎಸ್ ಪದವಿ ಪೂವ೯ ಕಾಲೇಜಿನಲ್ಲಿ, ಇವರು ಆನಂದಪುರದವರು ಅವರ ಬಾಲ್ಯದಲ್ಲಿ ಚಂಪಕ ಸರಸ್ಸು ನಲ್ಲಿ ಆಡಿ ಬೆಳೆದವರು ಆನಂದಪುರದವರದ್ದೆ ವಿಮಶೆ೯ನನ್ನ ಕಾದ೦ಬರಿ  #ಬೆಸ್ತರರಾಣಿ_ಚಂಪಕಾ ಓದಿ ಬರೆದಿದ್ದಾರೆ.         ಶ್ರೀ ಅರುಣ್ ಪ್ರಸಾದ್ ರವರೆ, ಕಾದಂಬರಿ ಬರೆಯುವುದು,ತಿದ್ದುವುದು, ಪ್ರಕಾಶರನ್ನು ಹುಡುಕುವುದು. ಮುದ್ರಣಕ್ಕೆ ಹಣಜೋಡಿಸುವುದು ಅಥವಾ ಇದ್ದ ಹಣ ವೆಚ್ಚಮಾಡುವುದು. ಎಲ್ಲವೂ ಪ್ರಯಾಸದ ಕೆಲಸವೇ. ಆದರೆ ತಮ್ಮ ‌ಆಸಕ್ತಿ ಮೆಚ್ಚುವಂತದ್ದು, ಏಕೆಂದರೆ ರಾಣಿ ಚಂಪಕಾಳ ಬಗ್ಗೆ, ಕೆಳದಿ ಸಂಸ್ಥಾನದ ದೊರೆ ವೆಂಕಟಪ್ಪನಾಯಕನ ಬಗ್ಗೆ  ತಾವು ಕಲೆ ಹಾಕಿರುವ ಮಾಹಿತಿ ಸುಲಭ ಸಾಧ್ಯ ವಾದುದಲ್ಲ. ತಾವೇ ಹೇಳಿಕೊಂಡಿರುವಂತೆ,#ಕಾದಂಬರಿ_ಕಾಲ್ಪನಿಕವಾದರೂ, ನಮ್ಮ ಊರಿನ ಬಗ್ಗೆ ಕತೆಯ ವಸ್ತು(ರಾಣಿಚಂಪಕಾ) ಕೇಂದ್ರೀಕೃತ ವಾಗಿರುವುದರಿಂದ ಓದುವಾಗ ಆನಂದಪುರ(ಆನಂದಪುರಂ), ಯಡೇಹಳ್ಳಿ ಹಾಗೂ ಸುತ್ತ ಮುತ್ತಲ ಊರು,ಗ್ರಾಮಗಳ ಹೆಸರು ಓದಿದಾಗ ಮನಸ್ಸಿಗೆ ಅಪ್ಯಾಯಮಾನವಾದ ಖುಷಿ ಯಾಗುತ್ತದೆ‌ ಹಾಗೆಯೇ ಗುಂಡಿಬಯಲು ಜಮೀನಿನ(ರಾಜ್ಯದ ಭತ್ತದ ಕಣಜ) ಪ್ರಾಮುಖ್ಯತೆ, ಅದರ ನೀರಿನ ಮೂಲಗಳ ಪ್ರಸ್ತಾಪ ಔಚಿತ್ಯ ಪೂರ್ಣವೆನಿಸುತ್ತದೆ.ಹಾಗೂ ಹೆಮ್ಮೆ,ಅಭಿಮಾನವೆನ್ನಿಸುತ್ತದೆ. ಆನಂದಪುರದಲ್ಲಿ ವಾಸವಿರುವ ಗಂಗಾಮತಸ್ಥರ(ಬೋವಿಗಳು) ಬಗ್ಗೆ, ಅವರ ಕಸುಬು,ಉಪಕಸುಬುಗಳ ...

ಬೆಸ್ತರರಾಣಿ ಚಂಪಕ ವಿಮಶೆ೯ - 3

#ರವೀಶ್_ನಿಟ್ಟೂರು_ಬೆಸ್ತರರಾಣಿ_ಚಂಪಕಾ_ಕಾದಂಬರಿ_ಓದಿ_ಅಭಿಪ್ರಾಯ_ಬರೆದಿದ್ದಾರೆ  ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ತಪ್ಪಲು ಪುಸ್ತಕ ಓದುಗರ, ಕಲಾರಾದಕರ ಮತ್ತು ಚಿ೦ತಕರ ಚಾವಡಿಯೇ ಇದೆ.  ಇಲ್ಲಿನವರಿಗೆ ಕನ್ನಡದ ಚಿತ್ರರಂಗ, ನಾಟಕರಂಗ, ಸಾಹಿತಿಗಳ ಒಡನಾಟವೂ ಹೆಚ್ಚು.   ಇಲ್ಲಿನ ರವೀಶ್ ನಿಟ್ಟೂರು ಅಂತವರಲ್ಲಿ ಒಬ್ಬರು ಇವರ ಪುತ್ರ ಕೂಡ ಮಣಿಪಾಲ್ ನ ಆಸ್ಪತ್ರೆಯ ಖ್ಯಾತ ವೈದ್ಯರು, ಪೇಜಾವರ ಸ್ವಾಮಿಗಳ ಚಿಕಿತ್ಸಾ ತಂಡದಲ್ಲಿ ಒಬ್ಬರಾಗಿದ್ದರು.   ಇವರ ಮನೆ ಅದ್ಬುತ ಮರದ ಕೆತ್ತನೆಯ ಅರಮನೆ ಇದನ್ನು ಅನೇಕ ಚಲನಚಿತ್ರ, ದಾರಾವಾಹಿಗಳಲ್ಲಿ ಬಳಕೆ ಆಗಿದೆ, ಪ್ರಖ್ಯಾತ ದಾರಾವಾಹಿ ಮೂಡಲ ಮನೆ ಇವರ ಮನೆಯಲ್ಲಿ ಚಿತ್ರಿಕರಣ ಆಗಿದೆ.   ಇವರು ನನ್ನ ಕಾದಂಬರಿ " ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ " #ಬೆಸ್ತರರಾಣಿ_ಚಂಪಕಾ ಓದಿ ಅತ್ಯುತ್ತಮ ವಿಮಶೆ೯ ಬರೆದಿದ್ದಾರೆ.    ಅವರ ಊರ ಸಮೀಪದ ಬೆನ್ನಟ್ಟೆಯಲ್ಲಿ ಕೆಳದಿ ಅರಸರು ಆರಾದಿಸುತ್ತಿದ್ದ ಗುತ್ಯಮ್ಮ ದೇವಸ್ಥಾನ ಮತ್ತು ಕಮಕೋಡು ಎಂಬಲ್ಲಿ ಕೆಳದಿ ಅರಸರ ಶಸ್ತ್ರಾಬ್ಯಾಸದ ಕೇಂದ್ರ ಆಗಿತ್ತು ಎನ್ನುವ ಮಾಹಿತಿಯೂ ನೀಡಿದ್ದಾರೆ.           *ಬೆಸ್ತರರಾಣಿ ಚಂಪಕಾ*      ಆತ್ಮೀಯರಾದ ಕೆ. ಅರುಣಪ್ರಸಾದ್ ಅವರ ಇತಿಹಾಸದ ಮೇಲೆ ಬೆಳಕು ಚಲ್ಲುವ ಪುಟ್ಟ ಕಾದಂಬರಿ. ನನಗೆ ಮೊನ್ನೆ ದಿನ ಅ...

ಬೆಸ್ತರರಾಣಿ ಚಂಪಕಾ ವಿಮಶೆ೯ - 2

#ಜಾದುಗಾರ್_ಪ್ರಶಾಂತ್_ಹೆಗ್ಗಡೆ    ನನ್ನ #ಬೆಸ್ತರರಾಣಿ_ಚಂಪಕಾ ಓದಿ ವಿಮಶೆ೯ ಮಾಡಿದ್ದಾರೆ .     ಪ್ರಖ್ಯಾತ ಜಾದುಗಾರರಾಗಿ ನಾಡಿನಾದ್ಯಂತ ಜಾದು ಪ್ರದಶ೯ನ ನೀಡುವ ಪ್ರಶಾಂತ್ ಹೆಗ್ಗಡೆ ಮಲೆನಾಡಿನವರು ಈಗ ಶಿವಮೊಗ್ಗ ಪಟ್ಟಣ ವಾಸಿ ಇವರು ಬಾಲ್ಯದಲ್ಲಿ ಆನಂದಪುರಂ ನಲ್ಲಿ ರಜಾ ದಿನ ಕಳೆಯುತ್ತಿದ್ದರಂತೆ.   ಆಗ ಆನಂದಪುರಂ ಪ್ರಖ್ಯಾತ #ಕೋಮಲಾ_ವಿಲಾಸ್ ಹೋಟೆಲ್ ನ ಮಾಲಿಕರಾದ ಕಿಣಿ ರಾಯರು ಮತ್ತು #ಜಯವೀರ_ನಾಯಕ್ ಇವರ ಬಂದುಗಳು.   ಇವರ ಜಾದು ಪ್ರದಶ೯ನ ಆಯೋಜಿಸುವುದಿದ್ದರೆ ಇವರ ಸೆಲ್ ನಂಬರ್ 9844183344 ಗೆ ಸಂಪಕಿ೯ಸಿ. ಬೆಸ್ತರ ರಾಣಿ ಚಂಪಕಾ ಧನ್ಯವಾದ ಗಳು ಮಿತ್ರರಾದ  ,Arun Prasad ರವರಿಗೆ. ತಾವು ಕಳಿಸಿದ ಪುಸ್ತಕ ಕೈ ಸೇರಿತು. ಇದರ ಬಗ್ಗೆ ‌ನನಗೆ ಅನ್ನಿಸಿದ್ದನ್ನು ಬರೆದಿರುವೆ. ಸುಮಾರು 1610 ರಲ್ಲಿ ನಡೆದಿರಬಹುದು ಎನ್ನಲಾದ ರಾಜಾ ವೆಂಕಟಪ್ಪ ನಾಯಕರ ಒಂದು ಪ್ರೇಮ ಕಥಾನಕ ದ ವಿಸ್ತಾರ ರೂಪವೇ ಬೆಸ್ರರಾಣಿ ಚಂಪಕಾ.            ಚಂಪಕಾ ಳ ರಂಗೋಲಿ ಕಲೆಗೆ ಮಾರುಹೋಗಿ ಆಕೆಯ ಪ್ರೇಮದಲ್ಲಿ ಮುಳುಗಿ ರಾಜರು ಆಕೆಯನ್ನು ವಿವಾಹವಾಗುವ ತನಕವೂ ಮುಂದುವರೆಯುತ್ತದೆ . ಮೊದಲೇ ಪುತ್ರಶೋಕದಿಂದ ನೊಂದಿದ್ದ ರಾಜರ ಮನ ಪರಿವರ್ತನೆ ಗಾಗಿ ಆಸ್ಥಾನದ ಸಿಬ್ಬಂದಿ ಕೂಡ ಇವರಿಬ್ಬರ ವಿವಾಹಕ್ಕೆ ಸಹಕರಿಸುತ್ತಾರೆ.ನಂತರದ ವಿಷಯಗಳೆ ಬಹಳ ಕುತೂಹಲ ಕಾರಿ.     ...

ಸೀತಾಫಲ ಕ್ಯಾನ್ಸರ್ ನಿವಾರಕ ಎಂಬು ಸುದ್ದಿಯಿಂದ ಬಹು ಬೇಡಿಕೆಯ ಹಣ್ಣಾಗಿದೆ ಇದು ಔಷದ ಗುಣಗಳ ರುಚಿಕರ ಹಣ್ಣು

             #ಸೀತಾ_ಫಲ    ಒ0ದು ಕಾಲದಲ್ಲಿ ಸೀತಾಫಲಕ್ಕೆ ವಾಣಿಜ್ಯ ಬೇಡಿಕೆ ಇರಲಿಲ್ಲ ಇತ್ತೀಚಿಗೆ ಇದು ಕ್ಯಾನ್ಸರ್ ಕಾಯಿಲೆಗೆ ರಾಮಬಾಣ ಎಂಬಂತ ವರದಿಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿನ  ಹಣ್ಣಿನ ಅಂಗಡಿಗಳಲ್ಲಿ ಕೆಜಿಗೆ 100 ರಿಂದ 150 ಇದೆ.   ಅಮೇಜಾನ್ ನಲ್ಲಿ ಮತ್ತು ಕೆಲ ಬಾರತದ ನಗರಗಳಲ್ಲಿ ಇದರ ಬೆಲೆ 450 ರಿಂದ ಸಾವಿರ ಇದೆ, ಎರೆಡು ವರ್ಷದ ಹಿಂದೆ 2000 ತಲುಪಿತ್ತು ಅಂತಾರೆ.    ರಾಮಾಯಣ ಕಾಲದ ರಾಮ ಸೀತೆಯರ ವನವಾಸದಲ್ಲಿ ಸೀತೆ ರಾಮನಿಗೆ ಈ ಹಣ್ಣು ನೀಡಿದ್ದರಿಂದ ಸೀತಾ ಫಲ ಅಂತ ಹೆಸರು ಬಂತು ಅಂತ ಮತ್ತು ಇದೇ ಹಣ್ಣಿನ ತಳಿಯಲ್ಲಿನ ರಾಮಫಲ ಮತ್ತು ಲಕ್ಷ್ಮಣ ಫಲ ಅಂತ ಬಿನ್ನ ತಳಿಯೂ ಇದೆ.   ವೈಜ್ಞಾನಿಕವಾಗಿ ಇದು ಅಮೇರಿಕಾ ಮತ್ತು ವೆಸ್ಟ್ ಇಂಡಿಸ್‌ ಇದರ ಮೂಲ ಮತ್ತು ಸ್ಪೈನ್ ವ್ಯಾಪಾರಿಗಳಿಂದ ಭಾರತಕ್ಕೆ ಬಂತು ಅನ್ನುವ ವಿವರವೂ ಇದೆ.    ಅದೇನೇ ಆಗಲಿ ಈ ಹಣ್ಣು ರುಚಿಕರ ಮತ್ತು ಆಹ್ಲಾದಕರ ಪರಿಮಳ ಇದ್ದು ಜಾಷದಿ ಅಂಶಗಳಿಂದ ಕೂಡಿದೆ.    ವರ್ಷಕ್ಕೊಮ್ಮೆ ಆದರೂ ತಿನ್ನುವುದು ಆರೋಗ್ಯವರ್ಧಕವಾದ್ದರಿಂದ ಈಗ ಹೆಚ್ಚು ಬೇಡಿಕೆಯ ಹಣ್ಣಾಗಿದೆ.   ಇವತ್ತು ನನಗೆ ಸಿಕ್ಕಿದ ಹಣ್ಣು ತಿಂದ ಮೇಲೆ ಪೇಸ್ ಬುಕ್ ಗೆಳೆಯರಿಗಾಗಿ ಈ ಚಿತ್ರ ಸಹಿತ ಮಾಹಿತಿ.

ಕನ್ನಡಾಭಿಮಾನಿ, ಹೋರಾಟಗಾರ ದೂರ ದೇಶ ಲಂಡನ್ ನಲ್ಲಿ ಲಂಡನ್ ಕನ್ನಡ ಸಮ್ಮೇಳನ, ಲಂಡನ್ ಯಕ್ಷಗಾನ ಸ್ಪದೆ೯ ಆಯೋಜಿಸಿದ ಸಾಹಸಿ ಈಗ ಇವರ ತಂದೆ ಬರೆದಿರುವ ರಾಮಕಥಾ ಮ೦ಜರಿ ಮತ್ತು ಕೃಷ್ಣ ಕಥಾ ಮ೦ಜರಿ ಪ್ರಕಟಿಸಿದ್ದಾರೆ, ಇದನ್ನು ಖರೀದಿಸಿ ಇವರಿಗೆ ಪ್ರೋತ್ಸಾಹಿಸುವ ಕೆಲಸ ಕನ್ನಡಿಗರು ಮಾಡ ಬೇಕಾಗಿದೆ.

#ಕುಮಾರ್_ಕುಂಠಿಕಾನ್_ಮಠ     ಅನಿವಾಸಿ ಭಾರತೀಯರು, ಕೇರಳದ ಕಾಸರಗೋಡಿನ ಕನ್ನಡಿಗರು, ಕನ್ನಡ ಬಾಷಾಭಿಮಾನಿಗಳು, ದ್ಯೆವ ಭಕ್ತರು.    ಎಲ್ಲಕ್ಕಿಂತ ಹೆಚ್ಚಾಗಿ ಇವರ ಪೂಜ್ಯ ತಂದೆ ಖ್ಯಾತ ಸಾಹಿತಿಗಳಾದ ದಿವಂಗತ ಕುಂಠಿ ಕಾನ್ ಮಠ ಬಾಲಕೃಷ್ಣ ಭಟ್ಟರು ಬರೆದಿರುವ ರಾಮಾಯಣ ಮತ್ತು ಮಹಾಭಾರತ ಪುಸ್ತಕ ಮುದ್ರಿಸುವ ಇವರ ಮಹತ್ ಕಾಯ೯ ನಡೆಸಿದ್ದು ನನಗೆ ಅತ್ಯಂತ ಇಷ್ಟ ಆಗಿದೆ.    ತಂದೆಯಂತೆಯೇ ಬಹು ಮುಖ ಪ್ರತಿಭೆಯ ಕುಮಾರ್ ಈ ಹಿಂದೆ ಲಂಡನ್ ವಿಶ್ವ ಕನ್ನಡ ಸಮ್ಮೇಳನ, ಲಂಡನ್ ಯಕ್ಷಗಾನ ಸ್ಪದೆ೯ ಯಶಸ್ವಿಯಾಗಿ ನಡೆಸಿದವರು.   ಹುಟ್ಟಿದ ಊರಿನ ಕುಂಠಿ ಕಾನ್ ಮಠದ ದೇವಸ್ಥಾನ ಸಂಕೀಣ೯ ನವೀಕರಣ ಮಾಡುತ್ತಿದ್ದಾರೆ, ಮುಂದಿನ ದಿನದಲ್ಲಿ ಇವರ ತಂದೆಯ ಸ್ಮರಣಾಥ೯ ಅಡಿಟೋರಿಯಂ, ಅತಿಥಿ ಗೃಹ ಮತ್ತು ಅನ್ನ ಛತ್ರ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸುವ ಗುರಿ ಹೊಂದಿದ್ದಾರೆ.   ಕಳೆದ 2018ರ ಕೊನೆಯಲ್ಲಿ ಇವರ ತಂದೆ ಬರೆದಿದ್ದ 800 ಪುಟಗಳ #ರಾಮಕಥಾ_ಮಂಜರಿ ಪ್ರಕಟಿಸಿದ್ದರು ನನಗೆ ಕಳಿಸಿದ ಪ್ರತಿ ಜನವರಿ 2019 ರಲ್ಲಿ, ಪ್ರತಿ ದಿನ ಕೆಲ ಅಧ್ಯಾಯದಂತೆ 23 ದಿನದಲ್ಲಿ ಓದಿ ವಿಮಷೆ೯ ಬರೆದಿದ್ದನ್ನ ಅವರು ತಮ್ಮ FB ಪೇಜ್ ನಲ್ಲಿ post ಮಾಡಿದ್ದರು.   ಈಗ ಮಹಾಭಾರತದ #ಕೃಷ್ಣಾಕಥಾ_ಮಂಜರಿ ಈ ತಿಂಗಳಲ್ಲಿ ಬಿಡುಗಡೆ ಇದೆ ಇದು ಕೂಡ 800 ಪುಟಗಳದ್ದು ಬೆಲೆ 1250...

ಮೈಸೂರು ರಾಜರಿಗಾಗಿಯೇ ಬೆಳೆಯುತ್ತಿದ್ದ ರಾಜ ಮುಡಿ ಅಕ್ಕಿಯ ಅನ್ನದ ರುಚಿಯೇ ಬೇರೆ

ರಾಜಮುಡಿ ಅಕ್ಕಿ ಮೈಸೂರು ಮಹಾರಾಜರ ನಿತ್ಯ ಊಟದ ಅಕ್ಕಿ    ಐದು ನೂರು ವರ್ಷದ ಹಿಂದೆ ಹಾಸನ ಜಿಲ್ಲೆಯ ರಾಮದೇವರ ಕಟ್ಟೆ ಪ್ರದೇಶದಲ್ಲಿ ಈ ತಳಿಯ ಭತ್ತ ಅಭಿವೃದ್ದಿ ಆಯಿತಂತೆ.   ಈ ಬಾಗದ ರೈತರು ಆಗಿನ ಮೈಸೂರು ರಾಜರ ಆಳ್ವಿಕೆಯಲ್ಲಿದ್ದಾಗ ರಾಜರಿಗೆ ತೆರಿಗೆ ನೀಡಲು ವಿಫಲರಾದಾಗ ತಾವು ಬೆಳೆದ ರಾಜ ಮುಡಿ ಅಕ್ಕಿ ರಾಜರಿಗೆ ತೆರಿಗೆ ಆಗಿ ನೀಡಿದರು ನಂತರ ಇದು ಪದ್ಧತಿ ಆಯಿತು ಮತ್ತು ರಾಜ ಪರಿವಾರ, ಸ್ಯೆನಿಕರು ಹಾಗೂ ಕುಸ್ತಿ ಪಟುಗಳಿಗೆ ಈ ಅಕ್ಕಿ ಬೇಕೇ ಬೇಕಾದ್ದರಿಂದ ಮೈಸೂರು ಮಹಾರಾಜರಿಗಾಗಿಯೇ ಇದನ್ನು ಬೆಳೆದು ಸಮಪಿ೯ಸುತ್ತಿದ್ದರಿಂದಲೂ (ಮುಡಿಪಾಗಿ ಇಡುತ್ತಿದ್ದರಿಂದ) ರಾಜ ಮುಡಿ ಅಂತ ಹೆಸರು ಬಂತು ಅಂತಲೂ ಹೇಳುತ್ತಾರೆ.  ಈಗ ಕನಾ೯ಟಕ ಸಕಾ೯ರದ ಕೃಷಿ ಇಲಾಖೆ ಈ ತಳಿಗೆ ಜಿಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ (ಭೂಗೋಳಿಕ ತಳಿ ಸೂಚಕ) ಸದ್ಯದಲ್ಲೇ ದೊರಕಿಸಿ ಕೊಡುವ ಪ್ರಯತ್ನದಲ್ಲಿದೆ.   ಎಕರೆಗೆ ಅತಿ ಕಡಿಮೆ ಇಳುವರಿ ಕೆಂಪು ಬಣ್ಣದ ದಪ್ಪ ಅಕ್ಕಿ ರೋಗ ನಿರೋದಕ ಶಕ್ತಿ ಹೊಂದಿದೆ, ಒಮ್ಮೆ ನೀವು ಬಳಿಸಿದರೆ ಬಿಡುವುದಿಲ್ಲ.    ಇದನ್ನು ಮೈಸೂರಿನ ನಟರಾಜ್ ಎಂಬುವವರು ರೈತರಿಂದ ನೇರವಾಗಿ ಖರೀದಿಸಿ ಆಸಕ್ತರಿಗೆ ತಲುಪಿಸುತ್ತಿದ್ದಾರೆ.   ನಾನು ಇವರಿಂದ ಖರೀದಿಸಿ ಬಳಸುತ್ತಿದ್ದೇನೆ ರಾಜ ಮುಡಿ ಅಕ್ಕಿಗೆ ಸರಿ ಸಮನಾದ ಅಕ್ಕಿ ನನಗೆ ಬೇರೆ ಕಂಡಿಲ್ಲ.   ನಟರಾಜ ಪೋನ್ ನಂಬರ್ 9844461074 ಮತ್ತು ವಾಟ...