Skip to main content

Posts

ಪರಿಸ್ಥಿತಿ ವಿಕೋಪಕ್ಕೆ ಹೋದರೆ ಎಲ್ಲಾ ರಾಜ್ಯಗಳು ಒಂದಾಗಿ ಹೋರಾಡುವುದು ಬಿಟ್ಟು ಬೇರಾವ ರಾಜ್ಯ, ಬಾಷೆ, ದಮ೯ ಮತ್ತು ಜಾತಿ ಗಡಿಯೂ ಇರುವುದಿಲ್ಲ ನೆನಪಿರಲಿ.

#CORONA LOCKDOWN DAIRY 2020 #LETTER NO 11 #DATE 9-APRIL- 2020 *ಸ್ವಲ್ಪ ದಿನ ತಾಳಿ ಈ ವೈರಸ್ ಏನಾದರೂ ವಿಕೋಪಕ್ಕೆ ಹೋದರೆ ಎಲ್ಲಾ ರಾಜ್ಯಗಳು ಒಂದಾಗಿ ಇದನ್ನ ಎದುರಿಸುವುದು ಬಿಟ್ಟು ಯಾವ ಗಡಿಯೂ ಇರುವುದಿಲ್ಲ"      ಗಡಿನಾಡಾದ ಕಾಸರಗೋಡಿನ ಕನ್ನಡಿಗರ ಈ ಪ್ರತಿಕ್ರಿಯೆ ಓದಿ.....      "ಆಗುವುದೆಲ್ಲ ಒಳ್ಳೆಯದಕ್ಕೇ..... ಮಂಗಳೂರು ಲೋಕಸಭಾ ಸದಸ್ಯರು ಕಾಸರಗೋಡು ಗಡಿ ಬಂದ್ ಮಾಡಿರುವುದಕ್ಕೆ  ಕಾಸರಗೋಡಿನವರೆಗೆ ಒಳ್ಳೆಯದೇ ಆಯ್ತು  .. ಭಾರತದ ಬೃಹತ್ ಉದ್ಯಮ ಸಂಸ್ಥೆಯಾದ ಟಾಟಾ ಸಮೂಹದಿಂದ 540 bed ಗಳುಳ್ಳ  ಸುಸಜ್ಜಿತವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು  ಮೂರು ತಿಂಗಳೊಳಗಾಗಿ ನಿರ್ಮಾಣ ಮಾಡಲು ಟಾಟಾ ಸಂಸ್ಥೆಯ ಆಡಳಿತಾಧಿಕಾರಿಗಳು ಒಪ್ಪಿರುತ್ತಾರೆ ...ಇದರಿಂದಾಗಿ ಮಂಗಳೂರಿನ ಬೃಹತ್ ಆಸ್ಪತ್ರೆಗಳ ಹಬ್   ಎಂದು  ಪ್ರಸಿದ್ಧಿ ಹೊಂದಿ ಮಂಗಳೂರಿಗೆ ದೇಶ ವಿದೇಶಗಳಿಂದಲೂ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವವರು ಹಾಗೂ ಕಾಸರಗೋಡಿನ ಮತ್ತು ಕಾಸರಗೋಡು ಸಮೀಪವಿರುವ ಜಿಲ್ಲೆಗಳಿಂದಲೂ ಅತ್ಯಧಿಕ ರೋಗಿಗಳು ಮಂಗಳೂರಿಗೆ ಅವಲಂಬಿತರಾಗಿದ್ದರು.ಆದರೆ ಕೋರನಾ ಸಾಂಕ್ರಾಮಿಕ ರೋಗದಿಂದಾಗಿ ಮಂಗಳೂರಿನ ಜಿಲ್ಲಾಡಳಿತವು ಹಾಗೂ ಮಂಗಳೂರಿನ ಲೋಕಸಭಾ ಸದಸ್ಯರು,ಸ್ಥಳೀಯ ಸದಸ್ಯರು ಮತ್ತು ಸ್ಥಳೀಯರ ವಿರೋಧದಿಂದಾಗಿ ಕಾಸರಗೋಡಿನ ಕರೋನ ಹೊರತುಪಡಿಸಿದ ...

#ಶೂನ್ಯದಿಂದ 10 ಸಾವಿರ ಜನರಿಗೆ ಕೊರಾನಾ ಸೋ೦ಕು ಹರಡಲು ತೆಗೆದುಕೊಂಡ ದಿನಗಳ ಪ್ರಕಾರ 10 ಸಾವಿರದಿಂದ ಒಂದು ಲಕ್ಷ ಜನಕ್ಕೆ ಈ ಸೋ೦ಕು ಎಷ್ಟು ದಿನದಲ್ಲಿ ಯಾವ ಯಾವ ದೇಶದಲ್ಲಿ ಹರಡಬಹುದೆಂಬ ಒಂದು ಅಂದಾಜು#

# ಕೊರಾನಾಲಾಕ್ ಡೌನ್ ಡೈರಿ 2020  #ಲೆಟರ್ ನಂ -10. #ದಿನಾ೦ಕ 9-ಏಪ್ರಿಲ್ -2020. * ಇದು ಕೊರನಾ ವೈರಸ್ ಸೋ೦ಕು ಶೂನ್ಯದಿಂದ 10 ಸಾವಿರ ಜನರಿಗೆ ಹರಡಲು ಯಾವ ಯಾವ ದೇಶದಲ್ಲಿ ಎಷ್ಟು ದಿನ ತೆಗೆದುಕೊಂಡಿದೆ? ಮತ್ತು ಇದೇ ವೇಗದಲ್ಲಿ ಹರಡುತ್ತದೆ ಅಂದಾದರೆ ಒಂದು ಲಕ್ಷ ಜನರಿಗೆ ಯಾವ ಯಾವ ದೇಶದಲ್ಲಿ ಎಷ್ಟು ದಿನದಲ್ಲಿ ಹರಡಬಹುದೆಂಬ ಮಾಹಿತಿ*    ಬೇರೆಲ್ಲ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಕೊರಾನಾ ವೈರಸ್ ಹರಡುವ ವೇಗ ನಿಧಾನ ಎನ್ನುವುದರಲ್ಲಿ ಅನುಮಾನವಿಲ್ಲ ಏಕೆಂದರೆ ಕೊರಾನಾ ಟಾಪ್ 10 ರಾಷ್ಟ್ರಗಳ ಈ ಕೆಳಕ೦ಡ ಪಟ್ಟಿ ನೋಡಿ.  #ಶೂನ್ಯದಿಂದ ಹತ್ತು ಸಾವಿರ ಜನರಿಗೆ ಹರಡಿದ ವೇಗ . 1.ಯು.ಎಸ್.ಎ.28 ದಿನದಲ್ಲಿ  2. ಸ್ಪೈನ್ 22 ದಿನದಲ್ಲಿ 3.ಇಟಲಿ 20 ದಿನದಲ್ಲಿ 4.ಜಮ೯ನ್ 21 ದಿನದಲ್ಲಿ 5.ಪ್ರಾನ್ಸ್ 22 ದಿನದಲ್ಲಿ 6,ಇರಾನ್ 22 ದಿನದಲ್ಲಿ 7.ಯುಕೆ.32 ದಿನದಲ್ಲಿ 8.ನೆದರ್ ಲ್ಯಾ೦ಡ್ 3ಂದಿನದಲ್ಲಿ 9. ಸೌತ್ ಕೊರಿಯಾ 17 ದಿನದಲ್ಲಿ 6600 (31 ದಿನದಲ್ಲಿ 10 ಸಾವಿರ ತಲುಪುವ ಸಾಧ್ಯತೆ) 10. ಭಾರತದಲ್ಲಿ 37 ದಿನದಲ್ಲಿ 5351 ಜನರಿಗೆ ಹರಡಿದೆ (42 ದಿನದಲ್ಲಿ 10 ಸಾವಿರ ತಲುಪುವ ಸಾಧ್ಯತೆ)    ಬೇರೆ ದೇಶಕ್ಕಿ೦ತ ಭಾರತದಲ್ಲಿ ಇದರ ನಿದಾನಗತಿಗೆ ಅನೇಕ ಪ್ರಮುಖ ಕಾರಣಗಳನ್ನ ಅಂದಾಜಿಸಲಾಗಿದೆ ಆದರೆ ಇದು ಸಂಪೂಣ೯ ಸರಿ ಅನ್ನುವಂತಿಲ್ಲ ಅದೇನೆಂದರೆ 1. ಬೇಗನೆ ಲಾಕ್ ಡೌನ್ ಪ್ರಾರಂಬಿಸಿದ್ದು 2. ಬಾರತದ...

#ಲಾಕ್ ಡೌನ್ ಮು೦ದುವರೆದರೆ ನಾವು ತಯಾರಿರಬೇಕು#

#ಕೆರೋನಾಲಾಕ್ ಡೌನ್ ಡೈರಿ 2020  #ಲೆಟರ್ ನಂ -9. #ದಿನಾ೦ಕ 8-ಏಪ್ರಿಲ್ -2020.    *ಲಾಕ್ ಡೌನ್ ಇನ್ನು 5 ದಿನ ಇದೆ ನಂತರ ಏನು? ಈ ಬಗ್ಗೆಯೆ ರಾಜ್ಯದಾದ್ಯಂತ ಹೆಚ್ಚು ಚಚೆ೯ ಆಗುತ್ತಿದೆ ಏನಾಗಬಹುದು?*      ಚೀನಾದ ವುಹಾನ್ ನಲ್ಲಿ ನಿನ್ನೆ ರಾತ್ರಿ 12ರಿಂದ ಸಂಪೂಣ೯ ಲಾಕ್ ಡೌನ್ ತೆರೆಯಲಾಗಿದೆ (72 ದಿನದ್ದು) ಸುಮಾರು 3 ತಿಂಗಳ ಅವಧಿಯಲ್ಲಿ ಇಲ್ಲಿನ ಕೊರಾನ ವೈರಸ್ ತಹಬಂದಿಗೆ ಬಂದಿದೆ ಅನ್ನುವುದು ಪ್ರಪಂಚಕ್ಕೆ ತಿಳಿದ ವಿಚಾರ.   ತೆಲಂಗಾಣದ ಮುಖ್ಯಮಂತ್ರಿ KCR ಪ್ರದಾನ ಮಂತ್ರಿಗಳಿಗೆ ಲಾಕ್ ಡೌನ್ ತೆರುವು ಮಾಡದೆ ಮುಂದುವರಿಸಲು ಮನವಿ ಮಾಡಿದ್ದಾರೆ, ನಮ್ಮ ರಾಜ್ಯ ಸಕಾ೯ರ ಪರಿಸ್ಥಿತಿ ನಿಯ೦ತ್ರಣಕ್ಕೆ ಬರದಿದ್ದರೆ ಲಾಕ್ ಡೌನ್ ತೆರವು ಮಾಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.   ಭಾರತ ದೇಶದಲ್ಲಿ ಕೊರಾನ ವೈರಸ್ ಪರಿಣಾಮ ಬೇರೆ ದೇಶದಷ್ಟು ತೀವ್ರವಾಗಿಲ್ಲ ಎಂಬ ಸಲಹೆ ಸರಿ ಅಲ್ಲ ಭಾರತದಲ್ಲಿ  ಬೇರೆ ದೇಶಕ್ಕಿ೦ತ ಒಂದು ತಿಂಗಳ ನಂತರ ಈ ವೈರಸ್ ಹರಡಲು  ಪ್ರಾರಂಭ ಆಯಿತು ಮುಂದಿನ ದಿನದಲ್ಲಿ ಇದರ ತೀವ್ರತೆ ಹೆಚ್ಚಾಗಲಿದೆ ಎಂದು ಖ್ಯಾತ ವೈದ್ಯ ದೇವಿ ಶೆಟ್ಟಿ ಕಳವಳ ವ್ಯಕ್ತ ಪಡಿಸಿದ್ದಾರೆ.    21 ದಿನದ ಲಾಕ್ ಡೌನ್ ಗೆ 15 ದಿನದ ನಂತರವೇ ಜನ ಹೊಂದಿಕೊಳ್ಳುತ್ತಿದ್ದಾರೆ ಆದರೂ ಸೋಷಿಯಲ್ ಡಿಸ್ಟೆನ್ಸ್ ಕಾಪಾಡುವುದರಲ್ಲಿ ಎಡವುತ್ತಿದ್ದಾರೆಂದು ತಜ್ಞರು ಅಭಿಪ್ರಾಯ ಪಡುತ...

#ಕಾಸರಗೋಡಿನವರಿಗೆ ಮಂಗಳೂರಿನ ಅವಲಂಬನೆ ಜಾಸ್ತಿ ಕೆರೋನಾ ವೈರಸ್ ಕಾರಣ ಗಡಿ ಬಂದ್‌ ಮಾಡಿದ್ದು ಸರಿಯಾ? #

#ಕಾಸರಗೋಡಿನ ಪ್ರಗತಿಪರ ಚಿ೦ತನೆಯ ಶ್ರೀಮತಿ ಭಾರತಿ ಭಟ್ ಕನಾ೯ಟಕದ ಮಂಗಳೂರು ಕೇರಳದ ಕಾಸರಗೋಡಿನವರು ಎಷ್ಟು ಅವಲಂಬಿಸಿದ್ದಾರೆಂದು ಇತ್ತೀಚಿನ ವಿದ್ಯಾಮಾನವಾದ ಗಡಿ ಬಂದ್‌ ಮಾಡಿ ಚಿಕಿತ್ಸೆಗೆ ಬಂದ ಅಂಬೂಲನ್ಸ್ ತಡೆದಿದ್ದರಿಂದ ಅಮಾಯಕರ ಜೀವ ತ್ಯಾಗಕ್ಕೆ ಕಾರಣವಾದದ್ದಕ್ಕೆ ವಿಷಾದದಿಂದ ಈ ಲೇಖನ ಬರೆದಿದ್ದಾರೆ.# Arun Prasad ಅಷ್ಟೇನೂ ನನಗೆ ಗೊತ್ತಿಲ್ಲಾ...ಅಣ್ಣಾ  ..ನಾವು ಗಡಿ ಭಾಗದವರು..ನಮಗೆ ಕಾಸರಗೋಡಿಗಿಂತ ಮಂಗಳೂರಿನಲ್ಲಿ ವ್ಯವಹಾರಕ್ಕೆ ಅನುಕೂಲ ಮತ್ತು ಅಭ್ಯಾಸ ...ನಮ್ಮ ಊರಿನ ಅಂಗಡಿಗಳಿಗೆ ಕಿರಾಣಿ..ತರಕಾರಿ ಎಲ್ಲಾ ಮಂಗಳೂರಿನಿಂದ ನೇ ಬರೋದು...ಗಡಿಬಂದ್ ಮಾಡಿದಾಗ ಎಲ್ಲದಕ್ಕೂ ಬಹಳ ಪರದಾಟವಾಯಿತು...ಈಗ ಕೆಲವೇ ಕೆಲವು ಲಾರಿಗಳಿಗೆ ಪರವಾನಿಗೆ ಕೊಟ್ಟಿದ್ದಾರಂತೆ ಹಾಗಾಗಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ....ಆದರೂ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗ್ತಾ ಇಲ್ಲಾ...ಎಲ್ಲಕಿಂತ ಬೇಜಾರು ಚಿಕಿತ್ಸೆಗಾಗಿ ಮಂಗಳೂರನ್ನು ಅವಲಂಬಿಸಿದವರು ಬಹಳ ಜನ ಇದ್ದಾರೆ...ಅವರನ್ನೂ ಹೋಗಲು ಬಿಡದಿರೋದು...ಅದರಲ್ಲೂ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದವರನ್ನೂ ಬಿಡದೆ ಆಂಬುಲೆನ್ಸ್ ನಲ್ಲೇ ಸಾಯಿಸಿದರಲ್ಲಾ ಅದರ ಬಗ್ಗೆ ಏನು ಹೇಳೋದು?😭😭 ...

#ಕರೋನಾ ವೈರಸ್ ಕಾರಣಕ್ಕಾಗಿ ಕಾಸರಗೋಡು ಕನ್ನಡಿಗರಿಗೆ ಮಂಗಳೂರು ಆಸ್ಪತ್ರೆಗೆ ಬರದಂತೆ ರಾ.ಹೆ. ಬಂದ್ ಮಾಡಿ ಅಂಬೂಲೆನ್ಸ್ ಕೂಡ ತಡೆ ಹಿಡಿದಿದ್ದು ಅನ್ಯಾಯ#

#ಕಾಸರಗೋಡು ಜಿಲ್ಲಾ ಕಾ೦ಗ್ರೇಸ್ ಪ್ರದಾನ ಕಾಯ೯ದಶಿ೯ಕುಂಬಳೆಯ ಕೇಶವ ಪ್ರಸಾದ್ ನಾಣಿತಿಲಿ ಕನಾ೯ಟಕ ಕೇರಳ ಬಾಡ೯ರ್ ಸಂಚಾರ ನಿಬ೯೦ದದಿಂದ  ಕಾಸರಗೋಡಿನ ಕನ್ನಡಿಗರಿಗೆ ಆಗುತ್ತಿರುವ ತೊ೦ದರೆಯನ್ನು ನೋವಿನಿಂದ ವಿವರಿಸಿದ್ದಾರೆ ಓದಿ# ಕೇರಳದ ಮಂಜೇಶ್ವರ ಮತ್ತು ಕಾಸರಗೋಡು ಅಸಂಬ್ಲಿ ಕೇರಳದಲ್ಲಿ ಇದ್ದರೂ ಸಂಪೂರ್ಣ ಕರ್ನಾಟಕವೆ.ಇಲ್ಲಿನ ಐದು ಪಂಚಾಯತುಗಳಲ್ಲಿ ಮಲೆಯಾಳ ಶಾಲೆಯೇ ಇಲ್ಲ. ನಮ್ಮ ಸಂಬಂಧಿಕರೆಲ್ಲ ಇರುವುದು ಕರ್ನಾಟಕ ರಾಜ್ಯದಲ್ಲಿ. ಹತ್ತನೇ ತರಗತಿ ನಂತರ ಈ ಕನ್ನಡಿಗರ ೯೦ ಶೇಕಡಾ ಜನರು ಕಲಿಯುವುದು ಕರ್ನಾಟಕದಲ್ಲಿ. ಮಲೆಯಾಳ ಅವಲಂಬನೆ ಇಲ್ಲದ್ದರಿಂದ ಚಿಕಿತ್ಸೆ ಪಡೆಯಲು ಮಂಗಳೂರಿಗೆ ಹೋಗುವುದು. ಹೆಚ್ಚೆಂದರೆ ಒಂದು ಗಂಟೆಯ ದಾರಿ ಈ ಕನ್ನಡಿಗರಿಗೆ ಮಂಗಳೂರು ತಲಪಲು ಬೇಕಾಗುವುದು..ಇನ್ನೊಂದು ವಿಷಯ ಇಲ್ಲಿ ಜನಸಂಖ್ಯೆಯ ೫೦ ಶೇಕಡಾ ಮುಸಲ್ಮಾನರು ಇದ್ದಾರೆ.ಅವರಲ್ಲಿ ಗಡಿ ಪಂಚಾಯತುಗಳ ಮುಸಲ್ಮಾನರು ಬ್ಯಾರಿ ಭಾಷೆ ಮಾತಾಡುವುದು. ಉಳಿದವರು ಕರ್ನಾಟಕದ ಅವಗಣನೆಯಿಂದಾಗಿ ಮಲೆಯಾಳಿಗಾಳಾಗುತ್ತಿದ್ದಾರೆ.ಮಂಜೇಶ್ವರದ ಅರ್ಧದಷ್ಟು ಮುಸಲ್ಮಾನರಿಗೆ ಮಲೆಯಾಳದ ಗಂಧಗಾಳಿ ಇಲ್ಲ. ಇಷ್ಟೆಲ್ಲಾ ಇದ್ದು ನಮ್ಮನ್ನು ಕರ್ನಾಟಕ ದೂರ ಮಾಡಿ ನಮ್ಮನ್ನು ತ್ರಿಶಂಕು ಸ್ಥಿತಿಯಲ್ಲಿ ಇಡುವುದು ಸರಿ ಅಲ್ಲ..ಕೊರೊನ ಕಾಸರಗೋಡಲ್ಲಿರುವುದು ವಿದೇಶದಿಂದ ಬಂದವರಿಗೆ.ಅದು ಕಂಟ್ರೋಲಲ್ಲಿ ಇದೆ..  ಈಗ‌ ಮಾಡುತ್ತಿರುವುದು ರಾಜಕೀಯ

#ಕಾಸರಗೋಡು ಮ೦ಗಳೂರು ರಾ.ಹೆ. ಪ್ರವೇಶ ಬಂದ್ ಮಾಡಿದ್ದು ಸರಿಯೇ? ಸುಪ್ರೀo ಕೋಟ್೯ ತೀಪು೯ ಕಾಸರಗೋಡಿನ ಅಂಬೂಲೆನ್ಸ್ ಗೆ ಮಂಗಳೂರಿನ ಆಸ್ಪತ್ರೆಗೆ ಬರಲು ಅವಕಾಶ ನೀಡುವ ಭರವಸೆಗೆ ಕಾಯುತ್ತಿದ್ದಾರೆ#

#ಕೊರಾನಾ ಲಾಕ್ ಡೌನ್ ಡೈರಿ. #ಲೆಟರ್ ನಂಬರ್- 7 6-ಮಾಚ್೯-2020 #ಕಾಸರಗೋಡು ಜನರ ಸಂಕಷ್ಟ #ಉಭಯ ಸಂಕಟದಲ್ಲಿ ಮುಖ್ಯಮಂತ್ರಿ ಯಡೂರಪ್ಪನವರು.    ಕೇರಳದ ಕಾಸರಗೋಡು ಜಿಲ್ಲೆ ಬಹು ಸಂಖ್ಯಾತ ಕನ್ನಡ ಬಾಷಿಕರ ಜಿಲ್ಲೆ ಇಲ್ಲಿ ವಷ೯ ಪೂತಿ೯ ಕನ್ನಡದ ನೂರಾರು ಕಾಯ೯ಕ್ರಮ ನಡೆಯುತ್ತದೆ ಸುಮಾರು 300 ಕ್ಕಿ೦ತ ಹೆಚ್ಚು ಕನ್ನಡ ಶಾಲೆ ಇದೆ.   ಕಾಸರಗೋಡು ಕನಾ೯ಟಕಕ್ಕೆ ಸೇರಲಿ ಎಂಬ ಅವರ ಬೇಡಿಕೆ ಇನ್ನೂ ಈಡೇರಿಲ್ಲ ಈ ಜಿಲ್ಲೆಯ ಕನ್ನಡ ಪ್ರೇಮ ಮಲೆಯಾಳ ಬಾಷಿಕರಿಗೆ ಯಾವಾಗಲೂ ಇರಸು ಮುರುಸು, ಕನ್ನಡಿಗರಿಗೆ ಬೆಳಗಾಂನ ಮರಾಠಿ ಹೋರಾಟಗಾರರ ಮೇಲಿರುವಂತಹದೇ ಅಸಹನೆ ಕೇರಳದಲ್ಲಿನ ಮಲೆಯಾಳ ಬಾಷಿಕರಿಗೆ ಕಾಸರಗೋಡು ಕನ್ನಡಿಗರ ಮೇಲೆ ಇದೆ.   ಕಳೆದ ತಿಂಗಳಿಂದ ಕೇರಳದಲ್ಲಿ ಕೊರಾನಾ ವೈರಸ್ ಪೀಡಿತರು ಹೆಚ್ಚಾಗಿದ್ದು ಕಾಸರಗೋಡಿನಲ್ಲಿ ಇದರ ಸಂಖ್ಯೆ ಹೆಚ್ಚಾಗಿದೆ ಹೆಚ್ಚು ಸಾವು ನೋವು ವರದಿ ಆಗಿದೆ.   ಮಂಗಳೂರಿಂದ 25 ಕಿಮಿ ನಲ್ಲಿ ಕೇರಳ ಬಾಡ೯ರ್ ಇದೆ, ಕಾಸರಗೋಡಿನಿಂದ ಒಂದು ಗಂಟೆ ಪ್ರಯಾಣ ಮOಗಳೂರಿಗೆ, ಆರೋಗ್ಯ ಸಂಬಂದ ಮoಗಳೂರು ಮತ್ತು ಮಣಿಪಾಲ್ ಆಸ್ಪತ್ರೆಗಳನ್ನೆ ಕಾಸರಗೋಡಿನ ಜನತೆ ಯಾವತ್ತೂ ಅವಲಂಬಿಸಿದ್ದಾರೆ.   ಮಾಚ್೯ 24ರಿಂದ ಲಾಕ್ ಡೌನ್ ಪ್ರಾರಂಬವಾದ ಕೂಡಲೆ ಮOಗಳೂರಿಗೆ ಸಂಪಕ೯ ಮಾಡುವ 23 ರಸ್ತೆಗಳನ್ನ ಸ್ಥಳಿಯರು ಬಂದ್ ಮಾಡಿದರು, ತುತು೯ ಚಿಕಿತ್ಸೆಗೆ ಬರುತ್ತಿದ್ದ ಅಂಬೂಲೆನ್ಸ್ ಗೆ ಮಾತ್ರ ಪ್ರಾರಂಭದಲ್ಲಿ ಅವಕಾಶ ನೀ...

#ದೇಶದೊಂದಿಗೆ ನಾವು, ಕೊರಾನಾ ವೈರಸ್ ನಿಮೂ೯ಲನೆಗೆ ದೇಶದ ಎಲ್ಲಾ ಪ್ರಯತ್ನಕ್ಕೆ ಅದರ ಯಶಸ್ವಿಗೆ ಭಾರತೀಯರೆಲ್ಲರೂ ಒಗ್ಗಟ್ಟು ದೀಪ ಹಚ್ಚುವ ಮೂಲಕ ಪ್ರದಶಿ೯ಸಿದ ಐತಿಹಾಸಿಕ ಕ್ಷಣ#

#ದೇಶದ ಜನರ ಆರೋಗ್ಯಕ್ಕಾಗಿ ಕೊರಾನಾ ವೈರಸ್ ನಿಮೂ೯ಲನಕ್ಕಾಗಿ ದೇಶದ ಜೊತೆ ನಾನು ಮತ್ತು ನನ್ನ ಕುಟುಂಬದ ಬೆಂಬಲವಿದೆ#   ದಿನಾಂಕ 9 ಏಪ್ರಿಲ್ 2020 ಭಾನುವಾರ ರಾತ್ರಿ 9ರಿಂದ 9 ನಿಮಿಷದ ದೀಪ ಬೆಳಗುವ ಇಡೀ ದೇಶದ ಪ್ರದಾನ ಮOತ್ರಿ ಕರೆ ಒಂದು ಐತಿಹಾಸಿಕ ಕ್ಷಣ, ಇನ್ನೆರೆಡು ತಿಂಗಳಲ್ಲಿ ಕೊರಾನಾ ವೈರಸ್ ಏನೆಲ್ಲ ಅನಾಹುತ ಮಾಡಬಹುದು ಯಾರಿಗೆ ಗೊತ್ತು?     ಆದರೆ ಒಂದು ಸಕಾ೯ರ ದೇಶದ ಜನರ ಜೀವ ರಕ್ಷಿಸಲು ಏನೆಲ್ಲ ಮುಂಜಾಗೃತೆ ವಹಿಸಲಿದೆಯೋ ಅದನ್ನೆಲ್ಲ ಪ್ರಜೆಗಳು ಒಳ್ಳೆಯ ಮನಸ್ಸಿನಿಂದ ಒಂದೇ ದೃಡ ನಿದಾ೯ರದಿಂದ ಬೆಂಬಲಿಸಿದರೆ ಅದಕ್ಕೂ ಒಂದು ಸಾಮೂಹಿಕ ಪ್ರಾಥ೯ನೆಯ ಶಕ್ತಿ ಬರತ್ತದೆ ಅಲ್ಲಿ ಒಂದು ಧನಾತ್ಮಕವಾದ ವಾತಾವರಣ ಸೃಷ್ಟಿ ಸಾಧ್ಯವಿದೆ.    ಇಲ್ಲಿ ಪ್ರದಾನ ಮಂತ್ರಿಗಳ ಸದುದ್ದೇಶದ ವಿನಂತಿ ನಿರಾಕರಿಸಿ ಮಾಡುವುದಾದರೂ ಏನು? ಇದು ಸರಿ ಅಲ್ಲ ಹೀಗೆ ಮಾಡಿ ಅನ್ನಲು ಬೇರೆ ಯಾವ ಪರಿಹಾರ ಗೊತ್ತಿದೆ ವಿಶ್ವದ ದೊಡ್ಡಣ್ಣನಂತ ದೇಶಗಳೇ ಕೈ ಚೆಲ್ಲಿದೆ, ಕೇವಲ ರಾಜಕೀಯ, ಜಾತಿ ಮತ್ತು ದಮ೯ ಆದಾರ ಬಿಟ್ಟು ಎಲ್ಲರೂ ಒಂದಾಗಿ ಸಕಾ೯ರ ಬೆಂಬಲಿಸಬೇಕಾದ ಸಂದಭ೯ದಲ್ಲಿ  ಕೆಲವರು ಅಪಹಾಸ್ಯ ಮಾಡುವುದು ಪ್ರದಾನ ಮಂತ್ರಿಯನ್ನೆ ವಿರೋದಿಸುವಂತ ನಡೆ ನೋಡಿದರೆ ದೇಶದ ಸಂಕಷ್ಟ ಸಂದಭ೯ದಲ್ಲೂ ಇವರ ಸಣ್ಣತನ ಬೇಸರ ತರಿಸುತ್ತದೆ.    ಕೊರಾನಾ ವೈರಸ್ ದೂರದಲ್ಲಿಲ್ಲ ನಮ್ಮ ನಿಮ್ಮ ಮನೆಯ ಗೇಟಿನಲ...