Blog number 1343. ಕನ್ನಡ ಮೀಡಿಯಂ 24X7 ಚಾನಲ್ ನ ಹೊನ್ನಾಳಿ ಚಂದ್ರಶೇಖರ್ ನನ್ನ ಅತಿಥಿ, ವಿದ್ಯಾರ್ಥಿ ಜೀವನದಿಂದ ಜನಪರ ಹೋರಾಟಗಾರರು, ವಕೀಲರು - ಪತ್ರಕರ್ತರು - ರಂಗಕಮೀಗಳು - ಸಾಹಿತಿಗಳು ಇವರಿಗೆ ಆನಂದಪುರಂನ ನಂಟು.
#ಕನ್ನಡ_ಮೀಡಿಯಂ_24_7. #ಹೊನ್ನಾಳಿ_ಚಂದ್ರಶೇಖರ್ #ಪತ್ರಿಕಾ_ಅಕಾಡಮಿ_ಪ್ರಶಸ್ತಿ_ವಿಜೇತರು #ಕನ್ನಡ_ಪ್ರಭ_ಜಿಲ್ಲಾ_ವರದಿಗಾರರಾಗಿದ್ದರು. #ನಿನ್ನೆ_ನನ್ನ_ಆಫೀಸಿನಲ್ಲಿ. ಹೊನ್ನಾಳಿ ಚಂದ್ರಶೇಖರ್ ವಿದ್ಯಾರ್ಥಿ ಜೀವನದಿಂದಲೇ ಜನಪರ ಹೋರಾಟಗಾರರಾಗಿದ್ದವರು, ರಂಗಕರ್ಮಿ, ವಕೀಲರು, ಸಾಹಿತಿಗಳು, ಪತ್ರಕರ್ತರು ಈಗ ಇವರದ್ದೇ ಸ್ವಂತದ್ದಾದ ಕನ್ನಡ ಮೀಡಿಯಂ 24X7 ಚಾನೆಲ್ ಮೂಲಕ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಜನ ಈ ಚಾನೆಲ್ ನೋಡುವಂತೆ ಮಾಡಿ ಈಗ ರಾಜ್ಯದಾದ್ಯಂತ ದಿನೇ ದಿನೇ ವೀಕ್ಷಕರನ್ನು ಸೆಳೆಯುತ್ತಿರುವುದು ಮುಂದಿನ ದಿನದಲ್ಲಿ ಶಿವಮೊಗ್ಗ ಚಂದ್ರಶೇಖರ್ ರಾಜ್ಯದ ಪ್ರಮುಖ ಪತ್ರಕರ್ತರ ಸಾಲಿನಲ್ಲಿ ಸೇರಲಿದ್ದಾರೆ. 1995-2000 ಇಸವಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂನಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನ ಮೇಳ ನಡೆಸುವ ಸಂದರ್ಭ ಬಂದಿತ್ತು ಇದಕ್ಕೆ ಪ್ರೇರಣೆ ಆನಂದಪುರಂನ ಪ್ರತಿಷ್ಟಿತ ಕನ್ನಡ ಸಂಘದ ಆಗಿನ ಕ್ರಿಯಾಶೀಲ ಅಧ್ಯಕ್ಷ ಗೆಳೆಯ ಹಾ.ಮೋ. ಬಾಷಾ. ಆಗೆಲ್ಲ ಯುವಜನ ಮೇಳದಲ್ಲಿ ಖಾಯಂ ತೀರ್ಪುಗಾರರಾಗಿ ಇರುತ್ತಿದ್ದವರ ಮೇಲೆ ಅವರ ತೀರ್ಪಿನ ಮೇಲೆ ಅನುಮಾನಗಳು ಇರುತ್ತಿತ್ತು, ಒಂದು ರೀತಿ ಮ್ಯಾಚ್ ಪಿಕ್ಸಿಂಗ್. ಇದಕ್ಕೆ ಇತಿಶ್ರೀ ಹಾಡಲು ಆಗಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬಲ್ಕೀಷ್ ಬಾನು ಮತ್ತು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ...