#ಒಂದು_ಕಾಲದ_ಆನಂದಪುರಂನ_ಸುಪ್ರಸಿದ್ಧ_ಕೋಮಲವಿಲಾಸ್_ಹೋಟೆಲ್ #ರಾಮಕಿಣಿಯವರ_ಪುತ್ರಿಯರು_ಐವತ್ತು_ವರ್ಷದ_ನಂತರ_ಚಂಪಕಸರಸ್ಸು_ವೀಕ್ಷಣೆಗೆ_ಬಂದಿದ್ದರು. #ಹುಟ್ಟಿದ_ಊರು_ಬೆಳೆದ_ಪರಿಸರದ_ಆಕರ್ಷಣೆ_ಅಂತಹದ್ದು. https://arunprasadhombuja.blogspot.com/2021/06/42.html ನಾನು ಬಾಲ್ಯದಲ್ಲಿ ನೋಡುತ್ತಿದ್ದ ಆನಂದಪುರಂನ ರಾಮಕಿಣಿಯವರ ಕೋಮಲ ವಿಲಾಸ್ ಹೋಟೆಲ್ ಅಂತಹದ್ದು ಇನ್ನೊಂದು ಈವರೆಗೆ ನೋಡಿಲ್ಲ, ಈಗ ನಾನು ಸ್ವತ: ಲಾಡ್ಜ್ ರೆಸ್ಟೋರೆಂಟ್ ಗಳ ಮಾಲಿಕನಾಗಿ ಇದು ನನ್ನ ಪ್ರಾಮಾಣಿಕ ಅಭಿಪ್ರಾಯ. ಅವರ ಮೂವರು ಪುತ್ರಿಯರು ನಿನ್ನೆ ಉಡುಪಿಗೆ ಕುಟುಂಬದ ವಿವಾಹ ಕಾರ್ಯಕ್ರಮಕ್ಕೆ ಬಂದವರು ತಾವು ಹುಟ್ಟಿದ ಊರಿಗೆ ಬಂದಿದ್ದರು ಜೊತೆಯಲ್ಲಿ ಅವರ ಪತಿಯವ ರ ಜೊತೆ. ಸುಮಾರು 50 ವರ್ಷದ ಹಿಂದೆ ಈ ಊರು ತೊರೆದವರು ಪುನಃ ಆನಂದಪುರಂಗೆ ಬರಲು ಮುಖ್ಯ ಕಾರಣ ಚಂಪಕ ಸರಸ್ಸು ಮತ್ತೊಮ್ಮೆ ನೋಡ ಬೇಕೆಂಬ ತುಡಿತ. ಸಾಮಾಜಿಕ ಜಾಲ ತಾಣ ಕಳೆದು ಹೋದ ಸಂಪರ್ಕವನ್ನು ಮತ್ತೆ ಜೋಡಿಸಿದೆ. ದೊಡ್ಡ ಮಗಳು ಶ್ರೀಮತಿ ನಿರ್ಮಲಾ ಮತ್ತು ಅವರ ಪತಿ ರಾಮನಾಥ ನಾಯಕರು ದೂರದ ಓಮನ್ ದೇಶದಲ್ಲಿ ಕಳೆದ 35 ವರ್ಷದಿಂದ ನೆಲೆಸಿದ್ದಾರೆ. ಎರಡನೆ ಮಗಳು ಶ್ರೀಮತಿ ನಳಿನಿ ಮತ್ತು ಅವರ ಪತಿ ಹೆಚ್.ಕೆ. ಕಾಮತ್ (ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿ ಆಗಿದ್ದವರು) ದೇಶವೆಲ್ಲ ಸುತ್ತಿ ಈಗ...