Skip to main content

ಐವತ್ತು ವರ್ಷದ ನಂತರ ಹುಟ್ಟೂರು ನೋಡಲು ಬರುವಂತೆ ಪ್ರೇರೇಪಿಸಿದ ಆನಂದಪುರಂನ ಚಂಪಕ ಸರಸ್ಸು

#ಒಂದು_ಕಾಲದ_ಆನಂದಪುರಂನ_ಸುಪ್ರಸಿದ್ಧ_ಕೋಮಲವಿಲಾಸ್_ಹೋಟೆಲ್

#ರಾಮಕಿಣಿಯವರ_ಪುತ್ರಿಯರು_ಐವತ್ತು_ವರ್ಷದ_ನಂತರ_ಚಂಪಕಸರಸ್ಸು_ವೀಕ್ಷಣೆಗೆ_ಬಂದಿದ್ದರು.

#ಹುಟ್ಟಿದ_ಊರು_ಬೆಳೆದ_ಪರಿಸರದ_ಆಕರ್ಷಣೆ_ಅಂತಹದ್ದು.

https://arunprasadhombuja.blogspot.com/2021/06/42.html

   ನಾನು ಬಾಲ್ಯದಲ್ಲಿ ನೋಡುತ್ತಿದ್ದ ಆನಂದಪುರಂನ ರಾಮಕಿಣಿಯವರ ಕೋಮಲ ವಿಲಾಸ್ ಹೋಟೆಲ್ ಅಂತಹದ್ದು ಇನ್ನೊಂದು ಈವರೆಗೆ ನೋಡಿಲ್ಲ, ಈಗ ನಾನು ಸ್ವತ: ಲಾಡ್ಜ್ ರೆಸ್ಟೋರೆಂಟ್ ಗಳ ಮಾಲಿಕನಾಗಿ ಇದು ನನ್ನ ಪ್ರಾಮಾಣಿಕ ಅಭಿಪ್ರಾಯ.
  ಅವರ ಮೂವರು ಪುತ್ರಿಯರು ನಿನ್ನೆ ಉಡುಪಿಗೆ ಕುಟುಂಬದ ವಿವಾಹ ಕಾರ್ಯಕ್ರಮಕ್ಕೆ ಬಂದವರು ತಾವು ಹುಟ್ಟಿದ ಊರಿಗೆ ಬಂದಿದ್ದರು ಜೊತೆಯಲ್ಲಿ ಅವರ ಪತಿಯವ ರ ಜೊತೆ.
  ಸುಮಾರು 50 ವರ್ಷದ ಹಿಂದೆ ಈ ಊರು ತೊರೆದವರು ಪುನಃ ಆನಂದಪುರಂಗೆ ಬರಲು ಮುಖ್ಯ ಕಾರಣ ಚಂಪಕ ಸರಸ್ಸು ಮತ್ತೊಮ್ಮೆ ನೋಡ ಬೇಕೆಂಬ ತುಡಿತ.
  ಸಾಮಾಜಿಕ ಜಾಲ ತಾಣ ಕಳೆದು ಹೋದ ಸಂಪರ್ಕವನ್ನು ಮತ್ತೆ ಜೋಡಿಸಿದೆ.
  ದೊಡ್ಡ ಮಗಳು ಶ್ರೀಮತಿ ನಿರ್ಮಲಾ ಮತ್ತು ಅವರ ಪತಿ ರಾಮನಾಥ ನಾಯಕರು ದೂರದ ಓಮನ್ ದೇಶದಲ್ಲಿ ಕಳೆದ 35 ವರ್ಷದಿಂದ ನೆಲೆಸಿದ್ದಾರೆ.
  ಎರಡನೆ ಮಗಳು ಶ್ರೀಮತಿ ನಳಿನಿ ಮತ್ತು ಅವರ ಪತಿ ಹೆಚ್.ಕೆ. ಕಾಮತ್ (ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿ ಆಗಿದ್ದವರು) ದೇಶವೆಲ್ಲ ಸುತ್ತಿ ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ.
  ಮೂರನೆ ಮಗಳು ಶ್ರೀಮತಿ ನಯನ ಮತ್ತು ಅವರ ಪತಿ ಲಕ್ಷ್ಮಣ್ ಶೆಣೈ ಬೆಂಗಳೂರು ನಿವಾಸಿಗಳಾಗಿದ್ದಾರೆ.
  ಇವರನ್ನು ನಮ್ಮ ಆನಂದಪುರಂನ ಪತ್ರಕರ್ತರು, ಯುವ ಮುಖಂಡರೂ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಕಾರ್ಯದರ್ಶಿ ಬಿ.ಡಿ. ರವಿ ಚಂಪಕ ಸರಸ್ಸು ದರ್ಶನ ಮಾಡಿಸಿದ್ದಾರೆ ಇವರ ತಂದೆ ಟೀಕಪ್ಪ ಮಾಸ್ತರ್ ಇವರಿಗೆಲ್ಲ ಪ್ರಾಥಮಿಕ ಶಾಲೆಯಲ್ಲಿ ಗುರುಗಳಾಗಿದ್ದರು.
  ಚಂಪಕ ಸರಸ್ಸು, ಕೋಟೆ ಆಂಜನೇಯ ದೇವಾಲಯ, ರಂಗನಾಥ ದೇವಾಲಯ ಮತ್ತು ಬ್ರಹ್ಮಪುರಿ ಆಂಜನೇಯ ದೇವರ ದರ್ಶನ ಮಾಡಿ ಬೆಂಗಳೂರಿಗೆ ತೆರಳಿದರು.
  ಹುಟ್ಟಿದ ಊರಿನ ಬಗ್ಗೆ ಪ್ರತಿಯೊಬ್ಬನಲ್ಲೂ ಇರುವ ಆಕಷ೯ಣೆ 50 ವರ್ಷದ ನಂತರವೂ ನವನವೀನವೇ ಎಂಬುದು ಈ ಮೂವರು ಸಹೋದರಿಯರ ಸಂತ್ರಪ್ತಿಯ ಮುಖ ಬಾವದಲ್ಲಿ ಗ್ರಹಿಸಬಹುದು.
 ಚಂಪಕ ಸರಸ್ಸು ಎಂಬ ಕೆಳದಿ ರಾಜ ವೆಂಕಟಪ್ಪ ನಾಯಕರು ಮತ್ತು ರಾಣಿ ಚಂಪಕರ ದುರಂತ ಪ್ರೇಮ ಕಥೆಯ ಸ್ಮಾರಕ ಮುಂದಿನ ದಿನದಲ್ಲಿ ಇಲ್ಲಿ ಹುಟ್ಟಿ ಬೆಳೆದು ಬೇರೆಲ್ಲೊ ನೆಲೆಸಿದ ವರನ್ನೆಲ್ಲ ಪುನಃ ಹುಟ್ಟೂರಿಗೆ ಕರೆಸಿಕೊಳ್ಳಲಿದೆ.
  ಇದನ್ನು ಅಭಿವೃದ್ದಿ ಮಾಡುತ್ತಿರುವ ಖ್ಯಾತ ಚಲನಚಿತ್ರ ನಟ ಯಶ್, ನೇತೃತ್ವ ವಹಿಸಿದ ಜಲ ತಜ್ಞ ಶಿವಾನಂದ ಕಳವೆ, ಇವರಿಗೆ ಸಹಕರಿಸುತ್ತಿರುವ ಸ್ಥಳಿಯ ಯುವ ಪಡೆ, ಚಂಪಕ ಸರಸ್ಸು ಪುನಶ್ಚೇತನಕ್ಕಾಗಿ ಸ್ಥಳಿಯರನ್ನ ಸೇರಿಸಿ ಈಜು ತರಬೇತಿ ಪ್ರಾರಂಬಿಸಿ ಮೊದಲ ಸ್ವಚ್ಚತೆಗೆ ಕಾರಣರಾದ ಈಜು ತಜ್ಞ ಸಾಗರದ ಜೀವ ವಿಮಾದ ಹರೀಶ್ ನವಾತೆ ಅವರನ್ನು ಚಂಪಕ ಸರಸ್ಸು ಪರಿಚಯಿಸಿದ ಸ್ಥಳಿಯ ಯುವ ಮುಂದಾಳು ಜೀವ ವಿಮಾ ಹರೀಶ್, ಸ್ಥಳಿಯ ಕನ್ನಡ ಸಂಘ, ಆನಂದಪುರಂನ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದ ಖ್ಯಾತ ದೈಹಿಕ ಶಿಕ್ಷಕರಾಗಿದ್ದ ಎಸ್.ಆರ್.ಕೃಷ್ಣಪ್ಪ,ಜಲ ತಜ್ಞ ಶಿವಾನಂದ ಕಳವೆಯವರಿಗೆ ನಾಲ್ಕು ವರ್ಷದ ಹಿಂದೆ ಚಂಪಕ ಸರಸ್ಸು  ತೋರಿಸಿದ ನೀಚಡಿಯ ಪತ್ರಕರ್ತ ವಸಂತ್ ಮತ್ತು ನೀಚಡಿ ಕೆರೆ ಅಭಿವೃದ್ಧಿ ಮಾಡಿದ ನೀಚಡಿಯ ಸಹೃದಯ ಗೆಳೆಯರನ್ನೆಲ್ಲ ಅಭಿನಂದಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...