Skip to main content

ಆನಂದಪುರಂ ಇತಿಹಾಸ 66, ಆನಂದಪುರಂ ಕೋಟೆ ಒಳಗೆ ಸುಂದರವಾದ ತಾಂಡವೇಶ್ವರ ದೇವಸ್ಥಾನ ಇರುವ ಇತಿಹಾಸ ಇತಿಹಾಸ ಇದೆ ಆದರೆ ಕೋಟೆ ಆಂಜನೇಯ ದೇವಸ್ಥಾನ ಹೊರತು ಪಡಿಸಿ ಬೇರೆ ದೇವಾಲಯದ ಕುರುಹು ಇಲ್ಲ.

#ಆನಂದಪುರಂ_ಇತಿಹಾಸ_66.

#ಆನಂದಪುರಂ_ಕೋಟೆಯೊಳಗೆ_ಸುಂದರವಾದ_ತಾಂಡವೇಶ್ವರ_ದೇವಸ್ಥಾನ_ಇದ್ದ_ಉಲ್ಲೇಖವಿದೆ

#ಪುರಾತನ_ತಾಂಡವೇಶ್ವರ_ದೇವಸ್ಧಾನ_ಏನಾಯಿತು?

#ಈಗಿನ_ಕಾಂತಿಸಿದ್ದೇಶ್ವರ_ದೇವಸ್ಥಾನವೇ_ಆಗಿನ_ತಾಂಡವೇಶ್ವರ_ದೇವಾಲಯ_ಆಗಿತ್ತಾ?

     ಕೆಳದಿ ಅರಸರಿಂದ ಅಭಿವೃದ್ದಿ ಹೊಂದಿದ್ದ ಯಡೇಹಳ್ಳಿ ಕೋಟೆ ಕೆಳದಿ ಅರಸರ ಆಳ್ವಿಕೆ ಪೂರ್ವದಲ್ಲಿ ಕಿರಾತಕರ ವಶದಲ್ಲಿತ್ತೆಂಬ ಇತಿಹಾಸ ಉಲ್ಲೇಖಗಳಿದೆ.
   ಕೆಳದಿ ಅರಸರ ವಶ ಆದ ನಂತರ ಈ ಕೋಟೆ ಆಧುನಿಕರಣದ ಅಭಿವೃದ್ಧಿ ಆಯಿತು, ಕೆಳದಿ ಅರಸ ವೆಂಕಟಪ್ಪ ನಾಯಕರು ತನ್ನ ಮೂರನೆ ರಾಣಿ ಚಂಪಕಳನ್ನ ಈ ಕೋಟೆಯ ಅರಮನೆಯಲ್ಲಿ ಇರಿಸಿದ್ದರು ನಂತರ ಜಾತಿ ಮತ್ತು ಆಹಾರ ಪದ್ದತಿಯ ಕಾರಣದಿಂದ ಎರಡನೆ ರಾಣಿ ಭದ್ರಮ್ಮಾಜಿಯವರು ಅನ್ನ ಆಹಾರ ತ್ಯಜಿಸಿ ದೇಹ ತ್ಯಾಗ ಮಾಡಿದ ನಂತರ ಪ್ರಜೆಗಳು ರಾಜ ವೆಂಕಟಪ್ಪ ನಾಯಕರ ವಿರುದ್ಧವಾಗಿದ್ದರಿಂದ ನೊಂದ ಚಂಪಕಳ ಆತ್ಮಹತ್ಯೆ ಇವರ ದುರಂತ ಪ್ರೇಮ ಕಥೆಯ ಸ್ಮಾರಕವಾಗಿ ಚಂಪಕ ಸರಸ್ಸು ನಿರ್ಮಿಸಿ ಈ ಪ್ರದೇಶಕ್ಕೆ ಚಂಪಕಳ ಸ್ಮರಣೆಗಾಗಿ ಆನಂದಪುರಂ ಎಂದು ನಾಮಕರಣ ಆಯಿತು.
   ಸದರಿ ಕೋಟೆ ಇಬ್ಬಾಗಿಸಿ 1938 ರಲ್ಲಿ ಶಿವಮೊಗ್ಗ ತಾಳಗುಪ್ಪ ರೈಲ್ವೆ ಮೀಟರ್ ಗೇಜ್ ನಿರ್ಮಿಸಲಾಯಿತು ಈಗ ಬ್ರಾಡ್ ಗೇಜ್ ಆಗಿ ಪರಿಪರ್ತಿಸಲಾಗಿದೆ.
   ಕೋಟೆ ಒಳಗಿನ ಆಂಜನೇಯ ದೇವಾಲಯ ಇತ್ತೀಚೆಗೆ ಸ್ಥಳಿಯ ಭಕ್ತರಿಂದ ಪುನರ್ ನಿರ್ಮಿಸಿ ಪುನರ್ ಪ್ರತಿಷ್ಟಾಪನೆ ಕೂಡ ಆಗಿದೆ.
    ಇತಿಹಾಸದಲ್ಲಿ ಆನಂದಪುರಂ ಕೋಟೆ ಒಳಗೆ ಸುಂದರವಾದ ತಾಂಡವೇಶ್ವರ ದೇವಾಲಯ ಇರುವುದಾಗಿ ಉಲ್ಲೇಖವಿದೆ ಆದರೆ ಅಂತಹ ಯಾವುದೇ ದೇವಾಲಯ ಈಗ ಇರುವುದಿಲ್ಲ, ಪಾಳು ಬಿದ್ದ ಕೋಟೆ ಒಳಗೆ ದೇವಾಲಯದ ಅವಶೇಷ ಇರುವುದಾಗಿ ಕೆಲವರು ಹೇಳುತ್ತಾರಾದರು ಸರಿಯಾದ ರೀತಿಯಲ್ಲಿ ಪ್ರಾಚ್ಯ ಇಲಾಖೆಯ ಉತ್ಕನ್ನಗಳು ನಡೆದರೆ ಮಾತ್ರ ಗೊತ್ತಾದೀತು.
  ತಾಂಡವೇಶ್ವರ ಅಂದರೆ ನಟರಾಜ ಅಥವ ರುದ್ರ ತಾಂಡವ ರೂಪಿ ಅಥವ ನೃತ್ಯ ಭಂಗಿಯ ಶಿವ ಆಗಿರುತ್ತದೆ.
   ಹಾಲಿ ಆನಂದಪುರಂನ ಕೋಟೆಯ ಪಳಿಯುಳಿಕೆ ಪ್ರದೇಶದಿಂದ ಸುಮಾರು ಒಂದು ಕಿ.ಮಿ.ದೂರದಲ್ಲಿ ಕಾಂತಿ ಸಿದ್ಧೇಶ್ವರ ಎಂಬ ಪುರಾತನ ದೇವರ ಗುಡಿ ಇತ್ತು ಅದನ್ನು ಸ್ಥಳಿಯರು ಈಗ ಅಭಿವೃದ್ಧಿ ಮಾಡಿ ಹೊಸ ದೇವಾಲಯ ಕಟ್ಟಿದ್ದಾರೆ ಈ ಪ್ರದೇಶದಲ್ಲಿ ಹೊಸದಾಗಿ ಜನವಸತಿ ಪ್ರದೇಶ ನಿರ್ಮಾಣವಾಗಿ ಸಿದ್ದೇಶ್ವರ ಕಾಲೋನಿ ಎಂದು ನಾಮಕರಣ ಆಗಿ ಆನಂದಪುರಂನ ಭಾಗವಾಗಿ ಬೆಳೆದಿದೆ.
  iiಇತಿಹಾಸಕಾರ ಬಿ.ಎನ್.ರಾಮ ಭಟ್ಟರು ಇಂದಿನ ಸಿದ್ಧೇಶ್ವರನೆ ಅಂದಿನ ತಾಂಡವೇಶ್ವರ ದೇವಸ್ಥಾನ ಇದ್ದಿರಬಹುದೆಂದು ತಿಳಿಸಿರುವುದಾಗಿ ನಮ್ಮ ಜಿಲ್ಲೆಯ ಖ್ಯಾತ ಇತಿಹಾಸಕಾರರಾದ ದಿವಂಗತ ಜಯದೇವಪ್ಪ ಜಿನಕೇರಿ ಲೇಖನ ಒಂದರಲ್ಲಿ ಉಲ್ಲೇಖಿಸಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...