Skip to main content

ನನ್ನ ಸಣ್ಣ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯಂಜನ ಬಿಡುಗಡೆಗೆ, ಇದರಲ್ಲಿನ ಹಾವುಗೊಲ್ಲರ ಕತ್ತೆ ಪುರಾಣದ ಕಥಾನಾಯಕನ ಬಾವ ಕೃಷ್ಣಪ್ಪ ಮತ್ತು ನನ್ನ ಪುನರ್ ಮಿಲನ ವೃತ್ತಾಂತ ಇಲ್ಲದೆ

#ಇದೇ_ತಿಂಗಳ_30ರಂದು_ನನ್ನ_ಸಣ್ಣ_ಕಥಾ_ಸಂಕಲ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಬಿಡುಗಡೆ.

#ಇದರಲ್ಲಿ_ಮೊದಲ_ಕಥೆ_ಹಾವುಗೊಲ್ಲರ_ಕತ್ತೆ_ಪುರಾಣ

#ಈ_ಕಥೆಯ_ಕಥಾನಾಯಕ_ವೆಂಕಟೇಶಿಯ_ಬಾವ_ಕೃಷ್ಣಪ್ಪ.
#ಹಾವುಗೊಲ್ಲ_ಕೃಷ್ಣಪ್ಪ_ಮತ್ತು_ನನ್ನ_ಪುನರ್_ಮಿಲನದ_ವೃತ್ತಾಂತ_ಕಳೆದವರ್ಷದ್ದು 

   ಸುಮಾರು ವರ್ಷದ ನಂತರ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಹಾವುಗೊಲ್ಲರ ಕ್ಯಾಂಪಿನ ಕೃಷ್ಣಪ್ಪ ಇವತ್ತು ಸಿಕ್ಕಿದ್ದು ಇಬ್ಬರಿಗೂ ಸಂತೋಷ ಆಯಿತು.
  1990 ರಲ್ಲಿ ಇವರೆಲ್ಲರದ್ದು ಅಲೆಮಾರಿ ಜೀವನ, ಹೊಟ್ಟೆಪಾಡಿಗೆ ಹಾವು ಹಿಡಿಯುವುದು, ಹಾವು ಆಡಿಸಿ ಬಿಕ್ಷೆ ಬೇಡುವುದು ಇವರ ನಿತ್ಯ ಕಾಯಕ ಆಗಿತ್ತು.
  ಒಂದೂರಿಂದ ಇನ್ನೊಂದು ಊರಿಗೆ ಇವರ ಕ್ಯಾಂಪ್ ಹೋಗಲು ಕತ್ತೆಗಳೇ ಇವರಿಗೆ ವಾಹನ (ಹೆಚ್ಚು ಕತ್ತೆ ಹೊಂದಿದವ ಶ್ರೀಮಂತ ಅಂತ ಇತ್ತು) ಇವರನ್ನೆಲ್ಲ ಕಾಗೋಡು ತಿಮ್ಮಪ್ಪ ಹೊಸನಗರ ತಾಲ್ಲೂಕಿನ ಹಾಲುಗುಡ್ಡೆ ಮತ್ತು ಸಾಗರ ತಾಲ್ಲೂಕಿನ ಶಿರವಂತೆಯಲ್ಲಿ ಜಾಗ ಮನೆ ನೀಡಿದ್ದರಿಂದ ಈಗ ಇವರ ಜೀವನ ಶೈಲಿ ಬದಲಾಗುತ್ತಿದೆ.
  ಹಾವು ಹಿಡಿಯುವುದು ಇವರೆಲ್ಲ ಬಿಟ್ಟಿದ್ದಾರೆ (ಕೆಲವೇ ಕೆಲವರು ಮಾತ್ರ ಮುಂದುವರಿಸಿದ್ದಾರೆ) ಹಾವು ನೋಡಿದರೆ ಇವರ ಈಗಿನ ಕಾಲದ ಮಕ್ಕಳು ಹೆದರಿ ಓಡುತ್ತಾರೆ ಅಂತ ಕೃಷ್ಣಪ್ಪ ಹೇಳುತ್ತಿದ್ದ ಮತ್ತೆ ಈಗ ಇವರ ಕ್ಯಾಂಪಿನಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಿಸಿದ್ದಾರಂತೆ ತಲೆತಲಾಂತರದಿಂದ ನಾಗ ಶಾಪ ಕಳೆದು ಕೊಳ್ಳಲಿಕ್ಕಾಗಿ!?.
  ಈ ಕೃಷ್ಣಪ್ಪ ಮತ್ತು ಇವನ ಬಾವನೆಂಟ ವೆಂಕಟೇಶ ನನಗೆ ಒತ್ತಾಯ ಮಾಡಿ ಒಂದು ಕತ್ತೆ ಮಾರಿದ್ದರು ಅದನ್ನ ನಮ್ಮ ಜಮೀನಿನಲ್ಲಿ ಸಾಕಲು ಕಳಿಸಿದ ದಿನವೆ ಅಲ್ಲಿನ ಉಸ್ತುವಾರ ತಂಗಚ್ಚನ್ ಕುಟುಂಬ ಕುಂಟು ನೆಪ ಹೇಳಿ ಕೆಲಸ ಬಿಟ್ಟು ಹೋಗಿದ್ದ, ಅವನಿಗೆ ಏಸು ಕ್ರಿಸ್ತ ಮತ್ತು ಕತ್ತೆ ಕಥೆ ಹೇಳಿದರೂ ಕೇಳಲಿಲ್ಲ ಕತ್ತೆ ಇರುವ ಜಾಗದಲ್ಲಿ ತಾನು ಇರಲು ಸಾಧ್ಯವೇ ಇಲ್ಲ ಅಂತ ನಾಪತ್ತೆ ಆದ (ಅಡ್ವಾನ್ಸ್ ಜಾಸ್ತಿ ತಗೊಂಡಿದ್ದೂ ಒಂದು ಕಾರಣ) ನಂತರ ಆ ಕತ್ತೆಗೆ ಕಷ್ಟ ಪಟ್ಟು ಗೆಳೆಯ ಹೆಬ್ಬೋಡಿ ರಾಮಸ್ವಾಮಿ ಮನೇಲಿ ಆಶ್ರಯ ನೀಡಿಸಿದ್ದೆ.
  ಅಲ್ಲಿ೦ದಲೂ ನನ್ನ ಕತ್ತೆ ನಾಪತ್ತೆ ಆಗಿತ್ತು, ಒ0ದು ದಿನ ನಮ್ಮ ಊರಲ್ಲಿ ಪ್ರತಿಭಟನಾ ಮೆರವಣಿಗೆ ಇಟ್ಟುಕೊಂಡಾಗ ನನ್ನ ಕಳೆದು ಹೋಗಿದ್ದ ಕತ್ತೆ ಎಲ್ಲಿಗೋ ಹೋಗಿದ್ದು ಬಂತು ಅಂತ ಶಿಷ್ಯರು ಮತ್ತು ಅದನ್ನು ತಾತ್ಕಾಲಿಕವಾಗಿ ಸಾಕಿದ್ದ ಗೆಳೆಯ ರಾಮಸ್ವಾಮಿ ನನ್ನ ಮನೆ ಎದರು ತಂದು ಕಟ್ಟಿದ್ದರು.
  ನನ್ನ ಮಗ ಚಿಕ್ಕವನಿದ್ದ ಅವನು ಇದು ನಮ್ಮ ಕತ್ತೆ ಅಲ್ಲ ಅಂತ ಅನುಮಾನ ಪಟ್ಟಿದ್ದಕ್ಕೆ ಸ್ವಲ್ಪ ಚಾಜ್೯ ಆಗಿದ್ದ ರಾಮಸ್ವಾಮಿ ಹಸುವಿನ ಕೆಚ್ಚಲು ಸವರುವಂತೆ ಕತ್ತೆ ಹೊಟ್ಟೆ ಅಡಿ ಸವರಿದಾಗ ನೆರೆದವರೆಲ್ಲ ಇದು ಅಣ್ಣನವರದ್ದೇ ಕತ್ತೆ ಬೇರೆ ಆಗಿದ್ದರೆ ರಾಮಸ್ವಾಮಿಗೆ ಲಾತಾ ಕೊಟ್ಟು ಹಲ್ಲು ಉದುರಿಸುತ್ತಿತ್ತು ಅಂದರು, ಅವತ್ತಿನ ಮೆರವಣಿಗೆ  ಸಭೆ ನಂತರ ಕತ್ತೆ ರಾಮಸ್ವಾಮಿ ಮನೆಗೆ ಹೋಗಿತ್ತು.
  ಒಂದೆರೆಡು ದಿನದಲ್ಲಿ ಈ ಕತ್ತೆಯ ಅಸಲಿ ಮಾಲಿಕ ಬಂದು "ಸ್ವಾಮಿ ನನ್ನ ಕತ್ತೆ ರಾಮಸ್ವಾಮಿ ಕಟ್ಟಿಹಾಕಿದ್ದಾನೆ " ಅಂತ ದೂರಿದಾಗಲೇ  ನಾನು ಸಾಧ್ಯನೇ ಇಲ್ಲ ಅದು ನನ್ನ ಕತ್ತೆ ಅಂದೆ.." ಸ್ವಾಮಿ ನಿನ್ನ ಕತ್ತೇ ತಿರುಗಲು ಹೋಗಿದ್ದು ರಾಮ ಸ್ವಾಮಿ ಮನೇಗೆ ನಿನ್ನೆ ಬಂದಿದೆ" ಅಂದಾಗ ನಿಜಕ್ಕೂ ನನಗೆ ಗಾಭರಿ ಆಗಿದ್ದು ಅವತ್ತು ರಾಮಸ್ವಾಮಿ ಬೇರೆ ಕತ್ತೆ ಹೊಟ್ಟೆ ಸವರಿನೂ ಹಲ್ಲು ಮುರಿಸಿಕೊಂಡಿಲ್ಲ ಅಂತ ! ನಂತರ ಈ ಕತ್ತೆ ಕೃಷ್ಣಪ್ಪ ಮತ್ತು ಅವನ ಬಾವನೆಂಟನಿಗೆ ಸಾಕಲು ವಾಪಾಸ್ ಕೊಟ್ಟೆ, ನಂತರ ವರದಕ್ಷಿಣೆ ಆಗಿ ನನ್ನ ಕತ್ತೆ ವೆಂಕಟೇಶಿ ತನ್ನ ಹೊಸ ಅಳಿಯನಿಗೆ  ಕೊಟ್ಟು ನನಗೆ ನಿಮ್ಮ ಕತ್ತೆ ಸತ್ತು ಹೋಯಿತು ಅಂತ ಕತೆ ಕಟ್ಟಿ ಹೇಳಿದ್ದರು.
  ಏನಾದರೂ ಹಾವುಗೊಲ್ಲರದ್ದು ನನ್ನದು ಅವಿನಾಭಾವ ಸಂಬಂದ ಅವರ ಹತ್ತಾರು ಕುಟುಂಬದ ಗ್ರೂಪ್ ಪೋಟೋ ನನ್ನ ರೈಸ್ ಮಿಲ್ ನಲ್ಲಿ ತೆಗೆದದ್ದು, ಅವರ ಒಂದೇ ಕೂಲಿಂಗ್ ಗ್ಲಾಸ್ ಮತ್ತು ಅನ್ ಸ್ಯೆಜ್ ಕೋಟು ಪ್ರತಿ ಕುಟುಂಬದ ಪೋಟೋದಲ್ಲಿ ಯಜಮಾನ ಧರಿಸುವುದು ನಿಜಕ್ಕೂ ಕೌತುಕವೇ ಆಗಿತ್ತು.
  ಈಗ ಪ್ರತಿ ವಷ೯ ಕಾಡು ಗೆಣುಸು ತಂದು ಕೊಡುತ್ತಾರೆ, ಎಲ್ಲಾ ಸೇರಿ ನಾನು ಬರೆದ ಹಾವುಗೊಲ್ಲರ ಕತ್ತೆ ಪುರಾಣ ಕಥೆಯ ಕಥಾನಾಯಕ ವೆಂಕಟೇಶಿ ಬಾವ ಕೃಷ್ಣಪ್ಪನ ಇವತ್ತಿನ ದಶ೯ನಕ್ಕೆ ನೂರು ರೂಪಾಯಿ ಭಕ್ಷೀಸು ಕೊಡುವಂತಾಯಿತು.
    ಕೃಷ್ಣಪ್ಪನಿಗೆ ವಯಸ್ಸಾಗಿದೆ, ಅಪಘಾತದಲ್ಲಿ ಕಾಲು ಊನ ಆಗಿದೆ, ಹೆಂಡತಿ ಈತನ ಮಾತು ಕೇಳುತ್ತಿಲ್ಲ ದೂರದ ಕುಂದಾಪುರದಲ್ಲಿ ಬಿಕ್ಷೆ ಬೇಡಿ ಜೀವನ ಮಾಡುತ್ತಿರುವುದಾಗಿ ನೋವಿನಿಂದ ಹೇಳಿದ, ಮುಂದಿನ ವಾರದಲ್ಲಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ಬರಬಹುದೆಂಬ ನಿರೀಕ್ಷೆ ಇದೆ.
  ನಿಂತ ಇಬ್ಬರೂ ಅಭ್ಯಥಿ೯ಯಿಂದ ಹಣ, ಕೋಳಿ ಮಾಂಸ ಬ್ರಾಂಡಿ ಪಡೆದು ಇಬ್ಬರಿಗೂ ಇವರ ಕ್ಯಾಂಪಿನ ಓಟು ಹೇಗೆ ಪಾಲು ಮಾಡಿ ನೀಡಬೇಕೆಂಬ ಕ್ಯಾಂಪಿನ ನಿದಾ೯ರದ ಹಂಸ ಕ್ಷೀರ ನ್ಯಾಯ, ಅದರ ಹಿಂದೆ ಪಡೆದ ಹಣಕ್ಕೆ ಮೋಸ ಮಾಡಬಾರದೆಂಬ ಕಾಳಜಿಯನ್ನ ವಿವರಿಸಿದ ವಿಡಿಯೋ ಇಲ್ಲಿದೆ ನೋಡಿ.
  ಸುಮಾರು 25 ವರ್ಷದ ಹಿಂದೆ ಇವರೆಲ್ಲ ಸದೃಡರಾಗಿದ್ದಾಗ ನಡೆದ ಘಟನೆಗಳನ್ನೆ ಕಥೆಯಾಗಿ ಬರೆದಿದ್ದೇನೆ, "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ " #ಬಿಲಾಲಿ_ಬಿಲ್ಲಿ_ಅಭ್ಯಂಜನ ಕಥಾ ಸಂಕಲದ ಹೆಸರು.
  ಕಥಾ ಸಂಕಲನ ಖ್ಯಾತ ಜಲ ತಜ್ಞ, ಪರಿಸರ ಪತ್ರಕರ್ತರಾದ ಶ್ರೀ ಕಳವೆ ಶಿವಾನಂದ ಬಿಡುಗಡೆ ಮಾಡಲಿದ್ದಾರೆ, ಪತ್ರಕರ್ತ ಮಿತ್ರರು ಈ ಕಥಾ ಸಂಕಲನದ ವಿನ್ಯಾಸ ಮತ್ತು ಮುದ್ರಣ ಮಾಡಿದ ಶ್ರೀ ಶೃಂಗೇಶ್, ಪ್ರಜಾವಾಣಿಯ ಹಿರಿಯ ವರದಿಗಾರರಾಗಿ ಈಗ ಉದ್ದಿಮೆಯ ಮಾಲಿಕರಾದ ಕಿರಿಯ ಗೆಳೆಯ ಶ್ರೀ ಪ್ರಕಾಶ್ ಕುಗ್ವೆ ಸಾಕ್ಷಿಯಾಗಲಿದ್ದಾರೆ.
   ಅತ್ಯಂತ ಸಂತೋಷದ ವಿಚಾರ ಈ ಕಥಾ ಸಂಕಲನಕ್ಕಿಂತ ಮೊದಲು ಓದಿ ಮನ್ನುಡಿ ಬರೆದವರು ಖ್ಯಾತ ವಿಮರ್ಷಕ ಅಂಕಣಕಾರ ಶ್ರೀ ಅರವಿಂದ ಚೊಕ್ಕಾಡಿ, ರಾಜ್ಯದ ಹಿರಿಯ ಪತ್ರಕರ್ತ ಶ್ರೀ ಆರ್.ಟಿ. ವಿಠಲಮೂರ್ತಿ ಮತ್ತು ಶ್ರೀ ಶೃಂಗೇಶ್.
  ಈ ಕಥಾ ಸಂಕಲನ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ ಹಾಗಾದಲ್ಲಿ ಮುಂದಿನ ವರ್ಷ ಇನ್ನೊಂದು ಪುಸ್ತಕ ಓದುಗರಿಗೆ ನೀಡಲು ಹುರುಪು ಆಗದೇ ಇರುವುದಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...