Skip to main content

ಮೊದಲ ಸಿಂಥೆಟಿಕ್ ಸೋಪು ಮಾರುಕಟ್ಟೆಗೆ ಬಂದು 88 ವರ್ಷ ಆಯಿತು. ಅದಕ್ಕೂ ಮೊದಲು ಸವಳು ಗುಡ್ಡದ ಮಣ್ಣು ಸ್ನಾನಕ್ಕೆ ಬಳಸುತ್ತಿದ್ದರು.

#ಸೋಪಿನ_ಪುರಾಣ

#ಶಿವಮೊಗ್ಗ_ಸಮೀಪದ_ನ್ಯಾಮತಿ_ತೀರ್ಥರಾಮೇಶ್ವರ_ಗುಡ್ಡದ_ಸವಳು_ಶತಮಾನಗಳ_ಕಾಲ_ಈ_ಭಾಗದ_ಸೋಪು_ಆಗಿತ್ತು.

#ಸಾವಯವ_ಮಣ್ಣಿನ_ಸೋಪು

#197Oರ_ನಂತರ_ಹುಟ್ಟಿದವರಿಗೆ_ಗೊತ್ತೇ_ಇಲ್ಲದ_ಸೋಪಿನ_ಪ್ರಪಂಚ

#ಮೊದಲ_ಸಿಂಥೆಟಿಕ್_ಸೋಪು_1933ರಲ್ಲಿ_ಪ್ರಾರ೦ಭ.

#ಶಿಲಾಯುಗದಲ್ಲೂ_ಜನ_ಸ್ನಾನಕ್ಕೆ_ಬಳಸುತ್ತಿದ್ದ_ಕ್ಷಾರಯುಕ್ತ_ಮಣ್ಣು.

    ಈಗೆಲ್ಲ ಅಮೆಜಾನ್ ನಿಂದ ಡೆಡ್ ಸೀ (ಮೃತ ಸಮುದ್ರದ) ಮಣ್ಣಿನ ಸೋಪು ನಮ್ಮ ಹಳ್ಳಿಗಳಲ್ಲೂ ಖರೀದಿಸುತ್ತಿದ್ದಾರೆ ಕಾರಣ ಚಮ೯ ಕಾಂತಿ ಹೆಚ್ಚಿಸುತ್ತದೆ, ಮೃದು ಮಾಡುತ್ತದೆ, ಚರ್ಮದ ಟಾಕ್ಸಿನ್ ಕೊಳೆ ತೆಗೆಯುತ್ತದೆ, ಪೇಶಿಯಲ್ ವಾಷ್ ಮಾಡುವುದರಿಂದ ಮುಖದ ಚರ್ಮ ಹೈಡ್ರೇಟ್ ಮಾಡುತ್ತದೆ ಅಂತ.
  ಇದು ಸತ್ಯವೂ ಹೌದು 1933ರಲ್ಲಿ Procto and Gamble ಕಂಪನಿ ಸಿಂಥೆಟಿಕ್ ಸೋಪು ಮಾರುಕಟ್ಟೆಗೆ ತರುವ ಮುನ್ನ ಜನ ಆಯಾ ಪ್ರದೇಶದಲ್ಲಿ ಸಿಗುವ ಕ್ಷಾರದ ಮಣ್ಣು ಸೋಪಿನಂತೆ ಬಳಸುತ್ತಿದ್ದರು.
  ಇದರ ಬಳಕೆ ಕ್ರಿಸ್ತ ಪೂರ್ವ 2800 ರಲ್ಲಿ ಇದ್ದಿತ್ತು ಎಂಬ ಸಂಶೋದನೆಯಲ್ಲಿ ಗೊತ್ತಾಗಿದೆ ಅಂತೆ.
    ಶೀಗೆ ಪುಡಿ, ಅಂಟುವಾಳಗಳ ಬಳಕೆ ಕೂಡ ಈಗ ಕಡಿಮೆ
  ಒಂದು ಕಾಲದಲ್ಲಿ ಅಂದರೆ ಸುಮಾರು 1965ರ ತನಕ ನಮ್ಮ ಭಾಗದಲ್ಲಿ ಹತ್ತಾರು ಕತ್ತೆ ಮೇಲೆ ಎತ್ತಿನ ಗಾಡಿಗಳಲ್ಲಿ ಸವಳು ಮಣ್ಣಿನ ಮೂಟೆಗಳನ್ನ ತುಂಬಿಕೊಂಡು "ಸವಳು ಬೇಕಾ ಸವಳು" ಅಂತ ಸೋಪಿನ ಮಣ್ಣು ಮಾರಾಟಕ್ಕೆ ಬರುತ್ತಿದ್ದರೆಂದರೆ 50 ವಷ೯ದಲ್ಲಿ ಎಂತಹ ಬದಲಾವಣೆ ನೋಡಿ ಈಗ ಸೋಪು ಶಾಂಪುವಿನ ಕಾಲ.
  ಒಂದು ಸೇರು ಭತ್ತ ಅಥವ ರಾಗಿಗೆ 3 ಸೇರು ಸವಳು ನೀಡುತ್ತಿದ್ದರಂತೆ ಅದನ್ನ ಸೋರುವ ಮಣ್ಣಿನ ಮಡಕೆಗಳಲ್ಲಿ (ಉಪಯೋಗಕ್ಕೆ ಬರದ ಮಡಕೆ) ಶೇಖರಿಸಿ ಇಡುತ್ತಿದ್ದರು, ಇದನ್ನ ಸ್ನಾನಕ್ಕೆ ಬಟ್ಟೆ ತೊಳೆಯಲು ಉಪಯೋಗಿಸುತ್ತಿದ್ದರು ಇದರಲ್ಲಿ ನೊರೆ ಬರುತ್ತಿತ್ತು ಮತ್ತು ಮಣ್ಣಿನಲ್ಲಿನ ಸೂಕ್ಷ್ಮ ಮರಳು ಮನುಷ್ಯನ ಚಮ೯ದ ಮೇಲ್ಪದರದ ಕೊಳೆ ಬ್ರಷ್ನಂತೆ ತೆಗೆಯುತ್ತಿತ್ತು.
  ಹೊನ್ನಾಳಿ ನ್ಯಾಮತಿ ಮದ್ಯದ ಬೆಳಗುತ್ತಿಯ ತೀಥ೯ರಾಮೇಶ್ವರ ದೇವರ ಗುಡ್ಡ ಈ ಸವಳು (ಸೋಪಿನ ಮಣ್ಣಿನ) ಗಣಿ ಆಗಿತ್ತು.
  ಮಂಡ್ಯದಲ್ಲೂ, ಚಿಕ್ಕಮಗಳೂರಿನಲ್ಲೂ ಈ ರೀತಿಯ ಮಣ್ಣಿನ ಗುಡ್ಡದಿಂದ ಸವಳು ಮಣ್ಣು ಮಾರಾಟ ಬಳಕೆ ಇತ್ತಂತೆ.
  ನಂತರ ಕಸ್ತೂರಿ, 50I ಬಾರ್ ಸೋಪು, ನಂದಿ, ವಿನಾಯಕ ಹೀಗೆ ಮುಂದುವರಿದು ವಾಷಿOಗ್ ಮೆಷಿನ್ ಜಗತ್ತು  ಸೇರಿ ಸಪ್೯ ಅಕ್ಸೆಲ್ ವಾಷಿ೦ಗ್ ಪೌಡರ್ ವರೆಗೆ ಬಂದಿದ್ದೇವೆ, ವಾಷಿಂಗ್ ಪೌಡರ್ ನಿಮಾ೯ ಸೇರಿ.
 ಅದೇ ರೀತಿ ಸ್ನಾನದ ಸೋಪುಗಳು ಲೈಪ್ ಬಾಯ್ ನಿಂದ ಮೈಸೂರು ಸ್ಯಾ೦ಡೆಲ್ ವರೆಗೆ ಬದಲಾಗಿದ್ದೇವೆ, ಹಮಾಮ್, ಲಕ್ಸ್ ಇವೆಲ್ಲವೂ ಇದೆ.
  ಈಗ 100% ಸಾವಯವ ಸೋಪು ಅಂತ ಜ್ವಾಲಮುಖಿ ಮಣ್ಣಿನ ಸೋಪು, ಡೆಡ್ ಸೀ ಮಡ್ ಸೋಪು ಅ೦ತೆಲ್ಲ ಶ್ರೀಮಂತ ವಗ೯ದಲ್ಲಿ ಪ್ರಚಲಿತವಾಗಿದೆ.
  ಕೇವಲ 50 ವಷ೯ದ ಹಿಂದೆ ಬಳಕೆಯಲ್ಲಿದ್ದ ನಮ್ಮ ಜಿಲ್ಲೆಯ ಸವಳು ಸೋಪಿನ ಮಣ್ಣು ಆದುನೀಕರಣದಲ್ಲಿ ಕಳೆದು ಹೋದರು ಈಗ ಅದು ದೂರದ ಜ್ವಾಲಾಮುಖಿ ಮಣ್ಣಿನ ಅಥವ ಡೆಡ್ ಸೀ ಮಣ್ಣಿನ ಸೋಪಿನ ರೂಪದಲ್ಲಿ ದುಬಾರಿ ಬೆಲೆಯಲ್ಲಿ ಪ್ರತ್ಯಕ್ಷ ಆಗಿದೆ.
  ಕಾಲ ಚಕ್ರ ಸದಾ ತಿರುಗುತ್ತಿದೆ ನೋಡಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ