Skip to main content

ಆನಂದಪುರಂ ಇತಿಹಾಸ ಭಾಗ-65. ಆನಂದಪುರಂ ಕನಕಮ್ಮಳ್ ಆಸ್ಪತ್ರೆಯಲ್ಲಿ ಸುಮಾರು 1960ರಿಂದ ಆರೋಗ್ಯ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದ ಲೀಲಾವತಿ ಸಿಸ್ಟರ್ ಈಗ ಪುರಪ್ಪೆ ಮನೆಯಲ್ಲಿ ನಿವೃತ್ತ ಜೀವನ ನಡೆಸಿದ್ದಾರೆ.

#ಲೀಲಾವತಿ_ಸಿಸ್ಟರ್_ಗ್ರಾಮೀಣ_ಭಾಗದ_ಆರೋಗ್ಯ_ಸೇವೆ.

#ಆನಂದಪುರಂ_ಪುರಪ್ಪೆಮನೆ_ಭಾಗದಲ್ಲಿ_ಚಿರಪರಿಚಿತರು

#ಎಂಬತ್ತೆರೆಡರ_ವೃದ್ದಾಪ್ಯದಲ್ಲಿ_ಪುರಪ್ಪೆಮನೆ_ಎಂಬ_ಹಳ್ಳಿಯಲ್ಲೇ_ನೆಲೆಸಿದ್ದಾರೆ.

#ಮಗ_ಏಸುಪ್ರಕಾಶ್_ನೀನಾಸಂ_ನಾಟಕ_ಚಲನಚಿತ್ರ_ಸಾರಾ_ಸಂಸ್ಥೆ_ಮೂಲಕ_ಸಮಾಜ_ಸೇವೆಯಲ್ಲಿದ್ದಾರೆ

   1960 ರ ದಶಕದಲ್ಲಿ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆಗೆ ಉತ್ತುಂಗದ ಕಾಲ ಆಗ ದೂರದ ಶಿಕಾರಿಪುರ, ಕುಂಸಿ, ರಿಪ್ಪನ್ ಪೇಟೆ, ಕೋಣಂದೂರು, ಹೊಸನಗರ ಭಾಗದಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದ ಕಾಲ.
 ಜಮೀನ್ದಾರರು, ಕೊಡುಗೈ ದಾನಿಗಳು ಆಗಿದ್ದ ರಾಮಕೃಷ್ಣ ಅಯ್ಯಂಗಾರರು ತಮ್ಮ ದಮ೯ ಪತ್ನಿ ಕನಕಮ್ಮಾಳ್ ಸ್ಮಾರಕವಾಗಿ ನಿರ್ಮಿಸಿ ಸಾರ್ವಜನಿಕರಿಗೆ ಬಿಟ್ಟು ಕೊಟ್ಟ ಈ ಆಸ್ಪತ್ರೆಯಲ್ಲಿ ಆ ಕಾಲದಲ್ಲಿ ಸೇವೆ ಸಲ್ಲಿಸಿದವರೂ ಸೇವಾ ಮನೋಭಾವನೆಯ ವೈದ್ಯಕೀಯ ಸಿಬ್ಬಂದಿಗಳೆ.
  ಅವರಲ್ಲಿ ಒಬ್ಬರಾಗಿ ಆನಂದಪುರಂ ಭಾಗದ ಜನರಿಗೆ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದ ಲೀಲಾವತಿ ಸಿಸ್ಟರ್ ಜನರ ಬಾಯಲ್ಲಿ ಪ್ರೀತಿಯಿಂದ ಸ೦ಕ್ಷಿಪ್ತವಾಗಿ ಕರೆಯುವ ಹೆಸರು ಲೀಲಾ ಸಿಸ್ಟರ್.
  ನಂತರ ಪುರಪ್ಪೆ ಮನೆ ಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ತಮ್ಮ 82ನೇ ವಯಸ್ಸಲ್ಲಿ ಪುರಪ್ಪೆ ಮನೆಯಲ್ಲೇ ಸ್ವಂತ ಮನೆ ನಿರ್ಮಿಸಿಕೊಂಡು ಮಗನೊಂದಿಗೆ ಆರೋಗ್ಯವಾಗಿ ಜೀವನ ಕಳೆಯುತ್ತಿದ್ದಾರೆ.
   ಮಗ ಏಸು ಪ್ರಕಾಶ್ ಕಲಾವಿದ ಪರಿಸರ ಪ್ರೇಮಿ ಆಗಿ ಹೆಸರು ಗಳಿಸಿದ್ದಾರೆ, ನೀನಾಸಂ ನಿಂದ ಟೀವಿ ದಾರಾವಾಹಿ ಮತ್ತು ಸಿನಿಮ ಕ್ಷೇತ್ರದಲ್ಲೂ ಸೈ ಅನ್ನಿಸಿಕೊಂಡಿದ್ದಾರೆ, ಗ್ರಾಮ ಅಭಿವೃದ್ದಿಗಾಗಿ ಗ್ರಾಮ ಪಂಚಾಯತ್ ಸದಸ್ಯರೂ ಆಗಿದ್ದರು ಈಗ ಎಲೆ ಮರೆಯ ಕಾಯಿಯಂತೆ ಬಟ್ಟೆ ಮಲ್ಲಪ್ಪದ ರೈತ ಮುಖಂಡ ಗುರುಪಾದಪ್ಪ ಗೌಡರ ಪುತ್ರ ದೆಹಲಿಯಲ್ಲಿ ನೆಲೆಸಿರುವ ಕಲಾವಿದ ಅರುಣ್ ನಿರ್ಮಿಸಿರುವ #ಸಾರಾ ಸ೦ಸ್ಥೆ ಜೊತೆಗೂಡಿ ಅನೇಕ ಕೆರೆ ಸಂರಕ್ಷಣೆ ಕೆಲಸದಲ್ಲಿ ತೊಡಗಿದ್ದಾರೆ.
  ನಿನ್ನೆ ಏಸು ಪ್ರಕಾಶ್ ಜೊತೆ ಲೀಲಾ ಸಿಸ್ಟರ್ ಬಂದಿದ್ದಾರೆ ಅಂದಾಗ ನಿಜಕ್ಕೂ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಒಂದೆರೆಡು ದಿನದ ಹಿಂದೆ ಅಷ್ಟೆ ಅವರ ನೆನಪು ಮಾಡಿ ಕೊಂಡಿದ್ದೆ.
  1982 - 83ರಲ್ಲಿ ಸಾಗರದಲ್ಲಿ ಡಿಪ್ಲೋಮ ಓದುವಾಗ ಒಂದು ವರ್ಷ ಸಾಗರದ ಇವರ ಮನೆಯಲ್ಲಿ ನನಗೆ ಮದ್ಯಾಹ್ನದ ಉಚಿತ ಊಟ ಮಾಡಿದ ಅನ್ನದ ಋಣ ನನ್ನ ಮೇಲಿದೆ, ಇವರ ಮಗ ಏಸು ಪ್ರಕಾಶ್ ಪ್ರೌಡ ಶಾಲೆ ಸಹಪಾಟಿ, ನಮ್ಮ ತಂದೆ ಮತ್ತು ಲೀಲಾ ಸಿಸ್ಟರ್ ಆನಂದಪುರ೦ ಆಸ್ಪತ್ರೆಯಲ್ಲಿ ಒಟ್ಟಿಗೆ ಕೆಲಸ ಮಾಡಿದವರು, ಲೀಲಾ ಸಿಸ್ಟರ್ ನಮ್ಮ ತಂದೆಯನ್ನು "ಏನೋ ಕೃಷ್ಣ" ಅಂತ ಏಕವಚನದಲ್ಲಿ ಮಾತಾಡಿಸುವಂತ ಸಲಿಗೆ ಹೊಂದಿದ್ದರು.
  ಸುಮಾರು 25 ವರ್ಷದ ನಂತರ ನನಗೆ ಅವರ ದರ್ಶನ ಆಯಿತು, ಆತ್ಮ ಪೂರ್ವಕವಾಗಿ ಸಣ್ಣ ಸನ್ಮಾನದೊಂದಿಗೆ ಸಣ್ಣ ಕಿರು ಕಾಣಿಕೆ ಅರ್ಪಿಸಿ ನಾನು ಮತ್ತು ನನ್ನ ಸಹೋದರ ಅವರ ಕಾಲಿಗೆರಗಿ ಆಶ್ರೀವಾದ ಪಡೆದೆವು.
  ಹಳ್ಳಿಯಲ್ಲೇ ಆರೋಗ್ಯ ಸೇವೆ ಮಾಡಿ ಹಳ್ಳಿಯಲ್ಲೇ ನೆಲೆಸಲು ಕಾರಣ ಏನು? ಅಂದದ್ದಕ್ಕೆ ಅವರು ಹೇಳಿದ್ದು ಹಳ್ಳಿಯ ಜನ ಹೆಚ್ಚು ಪ್ರೀತಿಯಿಂದ ನೋಡುತ್ತಿದ್ದರಿಂದ ಪರಿಚಿತರ ಮಧ್ಯ ಮನೆ ಮಾಡಿ ಬದುಕ ಮಾಡುವ ಮನಸ್ಸಾಯಿತು ಅಂದರು ಅವರಿಗೆ ಉರುಗೋಲಾಗಿ ಕಲಾವಿದ ಪುತ್ರ ಏಸು ಪ್ರಕಾಶ್ ಅವರನ್ನು ಜತನದಿಂದ ಕಾಪಾಡುವುದು ನೋಡಿ ಸಂತೋಷ ಆಯಿತು.
   ದೇವರು ಇವರಿಗೆ ಆರೋಗ್ಯ ಆಯಸ್ಸು ಮತ್ತು ನೆಮ್ಮದಿ ನೀಡಲೆಂದು ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...