Skip to main content

ನಿನ್ನೆ (20- ಡಿಸೆಂಬರ್ -2020) ರಾತ್ರಿ ಆಕಾಶದಲ್ಲಿ ಬೆಳಕಿನ ಸರಮಾಲೆಯ ಮೆರವಣಿಗೆ ಏನದು? 1970 ರ ದಶಕದಲ್ಲಿ ಸಾಮೂಹಿಕ ಸನ್ನಿಯಂತೆ ಜನರ ಭಯಕ್ಕೆ ಕಾರಣ ಆಗಿದ್ದ ಆಕಾಶದಲ್ಲಿ ನಡೆಯುತ್ತಿದ್ದ ಶವ ಸಂಸ್ಕಾರದ ಮೆರವಣಿಗೆಯ ಸುದ್ದಿ.

#ನಿನ್ನೆ_ಆಕಾಶದಲ್ಲಿ_ಕಂಡದ್ದೇನು?
#ಕೆಲವೇ_ಕ್ಷಣದಲ್ಲಿ_ಸಾಮಾಜಿಕ_ಜಾಲತಾಣದಿಂದ_ಉತ್ತರ.

#ಎಪ್ಪತ್ತರ_ದಶಕದಲ್ಲಿ_ಸಾಮಾಜಿಕ_ಸನ್ನಿಯಂತೆ_ಭಯ_ಹರಡಿದ್ದ_ಆಕಾಶದಲ್ಲಿನ_ಶವಸಂಸ್ಕಾರದ_ಮೆರವಣಿಗೆ.

  ನಿನ್ನೆ ಸಂಜೆ ಆಕಾಶದಲ್ಲಿ ಬೆಳಕಿನ ದೀಪ ಮಾಲೆಯೊಂದು ಮೆರವಣಿಗೆಯಂತೆ ಹೋಯಿತು ಎಂಬ ಚಿತ್ರ - ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಇದು ದಕ್ಷಿಣ ಭಾರತದಲ್ಲೆಲ್ಲ ಜನ ನೋಡಿದರಂತೆ ಈ ಸುದ್ದಿ ಪ್ರಕಟವಾದ ಕ್ಷಣದಲ್ಲೇ ಇದರ ನೈಜ ಕಾರಣವನ್ನು ಬಾಹ್ಯಾಕಾಶ ವೀಕ್ಷಕರು ತಮ್ಮ ಪ್ರತಿಕ್ರಿಯೆ ನೀಡಿದರು ಇದು ಅಮೆರಿಕಾದ ಶ್ರೀಮ೦ತ ಉದ್ಯಮಿ ವಿಶ್ವದಾದ್ಯಂತ ಅಂತರ್ಜಾಲ ಸಂಪರ್ಕ ಸುಲಭ ಮತ್ತು ಕೆಲವು ಪಟ್ಟು ವೇಗವಾಗಿ ನೀಡಲು ಹಾರಿಬಿಟ್ಟ #space_x ಎಂಬ ಸರಣಿ ಉಪಗ್ರಹಗಳ ಪ್ರತಿಪಲನ ಅಂತ.
  ಕ್ಷಣ ಮಾತ್ರದಲ್ಲಿ ಜನರ ಕುತೂಹಲ, ಆತಂಕಗಳು ಪರಿಹಾರ ಆಯಿತು ಇದು ವಿಜ್ಞಾನದ ಸಾಮಾಜಿಕ ಜಾಲ ತಾಣದ ತಾಕತ್ತು ಕೂಡ.
  1970 ರ ದಶಕದ ಪ್ರಾರಂಭದಲ್ಲಿ ಒಂದು ಆತಂಕಕಾರಿ ಸುದ್ದಿ ಎಲ್ಲಿಂದಲೋ ಹರಡಿತು ಅದೇನೆಂದರೆ ಅಮಾವಾಸ್ಯೆ ಹಿಂದೆ ಮುಂದಿನ ಮದ್ಯರಾತ್ರಿಯಲ್ಲಿ ಆಕಾಶದಲ್ಲಿ ಶವ ಸಂಸ್ಕಾರದ ಮೆರವಣಿಗೆ ಉತ್ತರದಿಂದ ದಕ್ಷಿಣಕ್ಕೆ ಹೋಗಿದ್ದು ಕೆಲವರು ನೋಡಿದ್ದೆವೆಂಬ ಸುದ್ದಿ ಪ್ರತಿ ತಿಂಗಳ ಅಮಾವಾಸ್ಯೆ ಸಂದರ್ಭದಲ್ಲಿ ಆ ಊರಲ್ಲಿ ಕಂಡಿತು ಈ ಊರಲ್ಲಿ ಕಂಡಿತು ಎಂಬ ಸುದ್ದಿ ಜನ ಸೇರುತ್ತಿದ್ದ ಊರ ಚೌಕದಲ್ಲಿ, ಕೃಷಿ ಕೆಲಸದ ನಡುವೆ, ಮಧ್ಯದ ಅಂಗಡಿಯಲ್ಲಿ, ಶಿಕಾರಿಗಾರರ ಮಧ್ಯ ಇದು ರೋಚಕ ಚರ್ಚಾ ವಿಷಯ ಆಗಿರುತ್ತಿತ್ತು.
   ಇದನ್ನು ನೋಡಿದವರು ಇದ್ದಾರೆ ಎಂಬ ಸುದ್ದಿ ಬಿಟ್ಟರೆ ಇದನ್ನು ಸಾಕ್ಷಿಕರಿಸುವ ಪೋಟೋ ಇತ್ಯಾದಿ ಯಾವುದು ಇರಲಿಲ್ಲ, ಇದು ಸುಳ್ಳು ಕಲ್ಪನೆ ಅಂತ ಅಥವ ಸಾಮೂಹಿಕ ಸನ್ನಿ ಆಗಿರುವ ಜನರ ಭಯಕ್ಕೆ ಕಾರಣವಾದ ಮೂಡ ನಂಬಿಕೆ ಎಂಬ ಯಾವುದೇ ವಿಚಾರವಾದಿ ಅಥವ ವಿಜ್ಞಾನಿಗಳ ಉತ್ತರ ಬರಲಿಲ್ಲ ಅಥವ ಬಂದಿದ್ದರೂ ಜನರ ತಲುಪಲಿಲ್ಲ ಕಾಣುತ್ತೆ.
  ಕ್ರಮೇಣ ಈ ಸುದ್ದಿ ನಮ್ಮ ನಮ್ಮ ಊರಲ್ಲೂ ಇಂತಹ ಘಟನೆ ನೋಡಿದ ಸುದ್ದಿ ಆಗಿ ಹಳ್ಳಿಗಳಲ್ಲಿ ಜನ ರಾತ್ರಿ ಮನೆಯ ಹೊರಗೆ ಬರುವುದೇ ನಿಂತು ಹೋಯಿತು.
  ಇಂತಹ ಸಂದರ್ಭದಲ್ಲಿ ನಾವೆಲ್ಲ ಚಿಕ್ಕವರಿದ್ದಾಗ ನಗರದ ದೇವಗಂಗೆಯ ನಮ್ಮ ದೊಡ್ಡಮ್ಮನ ಮನೆಯಲ್ಲಿ ಶಾಲಾ ಬೇಸಿಗೆ ರಜಾದಲ್ಲಿ ಇದ್ದಾಗ " ಭರ್ಮಣ್ಣ ನಿನ್ನೆ ರಾತ್ರಿ ಜಲ ಬಾದೆಗಾಗಿ ಮನೆ ಹೊರಗೆ ಬಂದಾಗ ಅವನ ಮನೆ ಎದುರಿನ ತೆಂಗಿನ ಮರದ ಸರೂತ ಆಕಾಶದಲ್ಲಿ ನಾಲ್ಕು ಜನ ಶವ ಒಂದನ್ನು ಚಟ್ಟದಲ್ಲಿ ಹೊತ್ತು ಒಯ್ಯುತ್ತಿದ್ದರಂತೆ ಹಿಂದಿನಿಂದ ರೋದಿಸುತ್ತಾ ಹಣ್ಣು ಕೂದಲ ಮುದುಕಿ ಹೋಗುತ್ತಿತ್ತಂತೆ " ಅಂದಾಗ ಇಡೀ ದೇವಗಂಗೆ ಎಂಬ ಸಣ್ಣ ಹಳ್ಳಿಯಲ್ಲಿ ಜನ ಭಯ ಬೀತರಾಗಿದ್ದರು, ನಾವೆಲ್ಲ ಕತ್ತಲಾಯಿತೆಂದರೆ ಕುಮುಟಿ ಬೀಳುವಂತೆ.
   ಭರ್ಮಣ್ಣ ಕೆಲಸಕ್ಕೆ ಹೋದಲ್ಲೆಲ್ಲ ಜನರಿಗೆ ಈ ಕಥೆ ಹೇಳುವುದೇ ಕೆಲಸ ಆಯಿತು, ದೈರ್ಯವಂತ ಯುವಕರು ಒಂದಾಗಿ ಕೆಲ ಅಮಾವಾಸ್ಯೆ ರಾತ್ರಿಯಲ್ಲಿ ಭತ್ತದ ಕಣದಲ್ಲಿ ಮಲಗಿ ರಾತ್ರಿ ಇಡೀ ಆಕಾಶ ವೀಕ್ಷಣೆ ಮಾಡಿದೆವು ಇಂತಹ ಯಾವುದೇ ಘಟನೆ ಕಾಣಲಿಲ್ಲ ಅಂದರೂ ಅವರ ಪ್ರತ್ಯಕ್ಷ ಪರೀಕ್ಷೆಗಿಂತ ಪರೋಕ್ಷವಾಗಿ ಹರಡಿದ ಸುದ್ದಿಯೇ ನೈಜದಂತೆ ಜನರಲ್ಲಿ ಅಚ್ಚೊತ್ತಿ ಬಿಟ್ಟಿತ್ತು.
 ರಜಾ ಮುಗಿಸಿ ನಮ್ಮ ಊರಿಗೆ ಬಂದಾಗ ಅದು ಇಲ್ಲೂ ಸುದ್ದಿ ಮಾಡುತ್ತಿತ್ತು,  ಅಂತಹ ಬೂತ ಚೌಡಿ ಕಂಡರೆ ಹೆದರದ ಡುಮಿಂಗಣ್ಣರ ಮಗ ಜಾನಣ್ಣ ನಿನ್ನೆ ಆಕಾಶದಲ್ಲಿ ಇಂತಹ ಘಟನೆ ನೋಡಿ ಚಳಿ ಜ್ವರದಿಂದ ಮಲಗಿದವರು ಎದ್ದಿಲ್ಲ ಅಂತ.
  ಇದು ಕೆಡುಗಾಲ ಬರುವ ಮುನ್ಸೂಚನೆ, ಕೆಲ ದಿನದಲ್ಲಿ ಪ್ರಳಯ ಆಗಲಿದೆ ಇಂತಹ ಅನೇಕ ಭಯಕ್ಕೆ ಕಾರಣ ಆಗಿತ್ತು ಇದು ಮಳೆಗಾಲದಲ್ಲಿ ಮರೆತು ಹೋದರೂ ಪ್ರತಿ ಬೇಸಿಗೆಯ ಕಾಲದಲ್ಲಿ ಪುನ: ಸುದ್ದಿ ಆಗುತ್ತಿತ್ತು, ಒಂದೆರೆಡು ವರ್ಷದ ನಂತರ ಮರೆತು ಹೋಯಿತು.
  ನಮ್ಮ ಊರಲ್ಲಿ ಹಿರಿಯ ಮಿತ್ರರಿದ್ದಾರೆ ಮೊನ್ನೆ ಅವರು ತಾವೂ ಇದನ್ನು ತನ್ನ ಕಣ್ಣಿಂದ ನೋಡಿದ್ದೆ ಅಂತಿದ್ದರು.
  ಇದು ಉತ್ತರ ಸಿಗದ ಜನರ ಭಯಹರಡುವ ಒ0ದು ಸುದ್ದಿ ಮಾತ್ರ ಆಗಿತ್ತು.
  ಆ ಕಾಲದಲ್ಲಿ ಅಂತರ್ಜಾಲದ ಉಪಗ್ರಹದ ಈ ಸರಣಿ ಬೆಳಕಿನ ಮೆರವಣಿಗೆ ನೋಡಿದ್ದರೆ ಏನೇನೆಲ್ಲ ಸುದ್ದಿ ಆಗುತ್ತಿತ್ತೋ !?.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ