#ದೇಶದ_ರಕ್ಷಣಾ_ಮಂತ್ರಿ_ಆಗಿದ್ದಾಗಲೂ
#ದೆಹಲಿಯ_ಜಾಜ್೯ಪರ್ನಾಂಡೀಸರ_ಮನೆಯ_ಮೈನ್_ಗೇಟ್_ಯಾಕೆ_ಇರಲಿಲ್ಲ.
#ಇದಕ್ಕೊಂದು_ಕಾರಣವಿದೆ_ಅಲ್ಲೊಂದು_ಪ್ರತಿಭಟನೆ_ಇದೆ
ಕೃಷ್ಣಮೆನನ್ ಮಾರ್ಗ ದೆಹಲಿಯ ಜಾರ್ಜ್ ಪನಾ೯ಂಡೀಸರ ಮನೆ ಈ ಮನೆಯ ಗೇಟು ನಾಪತ್ತೆ ಆಗಿದ್ದ ಪ್ರಕರಣಕ್ಕೆ ಕಾರಣ ಗೊತ್ತಾ? ಅದು ಜಾರ್ಜರು ಆಡಳಿತಶಾಹಿಯ ಅಂದಾನುಕರಣೆಗೆ ನೀಡಿದ ಪ್ರಹಾರ ಮತ್ತು ದಾಖಲಿಸಿದ ಪ್ರತಿಭಟನೆಯ ಹೊಸ ಮಾದರಿ.
ಸುಮಾರು ಇಪ್ಪತ್ತೊಂಬತ್ತು ವರ್ಷ ಗೇಟ್ ಇಲ್ಲದ ಮನೆಯಲ್ಲಿ ಜಾರ್ಜ್ ವಾಸವಾಗಿದ್ದರು.
#govtofindia #krishnamenanmarg #DehliCapitals #GeorgeFernandis #DefenceMinisterOfIndia #RailwayMinister
ರೈಲ್ವೆಮಂತ್ರಿ ರಕ್ಷಣಾಮಂತ್ರಿ ಆದರೂ 1990ರಿಂದ 2019 ಜನವರಿ ಕೊನೆಯವರೆಗೆ ಗೇಟು ಇರಲೇ ಇಲ್ಲ.
ಅದು 1990 ಆಗ ಜಾಜ್೯ ಬಿಹಾರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು, ತುತು೯ ಪರಿಸ್ಥಿತಿ ನಂತರದ ಸಕಾ೯ರದಲ್ಲಿ ಕೇಂದ್ರ ಮಂತ್ರಿ ಆಗಿದ್ದಾಗಿಂದ ಅವರು ವಾಸಿಸುತ್ತಿದ್ದು ನಂ 3 , ಕೃಷ್ಣ ಮೆನನ್ ಮಾಗ್೯ ನವದೆಹಲಿ.
ಒಂದು ದಿನ ಜಾಜ್೯ರು ತಮ್ಮ ನೀಲಿ ಬಣ್ಣದ ಪಿಯಟ್ ಕಾರು ಚಲಾಯಿಸಿಕೊಂಡು ಪಾಲಿ೯ಮೆಂಟ್ ನಿಂದ ಮನೆಗೆ ಬಂದಾಗ ಜಾಜ್೯ರ ಮನೆ ಗೇಟು ಹಾಕಿತ್ತು.
ಪ್ರತಿ ದಿನ ಬೆಳಿಗ್ಗೆ 6ಕ್ಕೆ ಗೇಟು ತೆರೆದರೆ ಮಧ್ಯದಲ್ಲಿ ಹಾಕುವುದಿಲ್ಲ ಹೀಗೇಕೆ ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದದ್ದು ಏನೆಂದರೆ ಇವರ ಬಂಗಲೆಯ ಎದುರಿನಲ್ಲಿ ನಂ.6. ರ ಬಂಗಲೆ ಅವತ್ತಿನ ಕೇಂದ್ರ ಗೃಹ ಮಂತ್ರಿ S. B. ಚೌಹಾಣರದ್ದು ಅವರ ರಕ್ಷಣೆಯ ಹೊಣೆ ಹೊತ್ತ ಬ್ಲಾಕ್ ಕಮ್ಯಾ೦ಡೊಗಳು ಗೃಹ ಸಚಿವರು ಮನೆಯಿಂದ ಹೋಗಿ ಬರುವ ಸಮಯದಲ್ಲಿ ಸುತ್ತಮುತ್ತದ ಎಲ್ಲಾ ಬಂಗಲೆಗಳ ಗೇಟ್ ಮುಚ್ಚಿ ಬಿಡುತ್ತಿದ್ದರು.
ಈ ಬಗ್ಗೆ ಜಾಜ್೯ರು ಬ್ಲಾಕ್ ಕಮಾ೦ಡೋಗಳಿಗೆ ವಿಚಾರಿಸುತ್ತಾರೆ ಅವರು ರಕ್ಷಣಾ ಉದ್ದೇಶದಿಂದ ಇದನ್ನ ನಿರಂತರ ಮಾಡಲೇ ಬೇಕಾಗಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತ ಪಡಿಸುತ್ತಾರೆ.
ಮರು ದಿನ ಬ್ಲಾಕ್ ಕಮಾಂಡೋಗಳು ನಂ 3 ಕೃಷ್ಣಮೆನನ್ ಮಾರ್ಗದ ಜಾರ್ಜ್ ರ ಮನೆ ಗೇಟ್ ಮುಚ್ಚಲು ಬಂದವರು ಅಚ್ಚರಿ ಪಡುತ್ತಾರೆ, ಗೃಹ ಮಂತ್ರಿಗಳ ಎದುರಿನ ಜಾಜ್೯ ಪನಾ೯Oಡಿಸರ ಮನೆಯ ಗೇಟುಗಳೇ ನಾಪತ್ತೆ!?....
ಅಂದಿನಿಂದ ಜನವರಿ 20 I9ರ ಕೊನೆ ದಿನಗಳವರೆಗೆ (ಜಾರ್ಜ್ ಇಹಲೋಕ ತ್ಯಜಿಸುವವರೆಗೆ) ಜಾಜ್೯ರ ನಂ 3 ಕೃಷ್ಣ ಮೆನನ್ ಮಾಗ೯ದ ಬಂಗಲೆ ದಿನದ 24 ಗಂಟೆಯೂ ಯಾವುದೆ ತಡೆ ಗೇಟು ಇಲ್ಲದೇ ತೆರೆದೇ ಇತ್ತು.
#ನಾನು_ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ_ಗೆಳೆಯ_ಅಮೀರ್_2001ರಲ್ಲಿ_ಗೇಟು_ಇಲ್ಲದ_ಜಾರ್ಜ್_ಮನೆಯ_ಎದರು_ತೆಗೆದ_ಪೋಟೋ_ನೋಡಿ
Comments
Post a Comment