Skip to main content

Blog number 3391. ನನ್ನ 60 ವರ್ಷ ವಯಸ್ಸು ಪೂರ್ತಿ ಆದ ಕ್ಷಣ

#ಜೀವಿತಾವದಿಯ_60_ವಷ೯_ಕಳೆಯಿತು.

#ನನ್ನ_ಅರವತ್ತೊಂದನೆ_ವಯಸ್ಸು_ಪ್ರಾರಂವಾಯಿತು

#ನನ್ನ_ಜೀವನದ_ಹಿನ್ನೋಟ

#ನನ್ನ_ಜನ್ಮ_ದಿನಾಂಕ_ಪೆಬ್ರವರಿ_9_ಮಂಗಳವಾರ_1965
   
   ಭಾನುವಾರ 9 - ಫೆಬ್ರುವರಿ-2025  ನನ್ನ 60 ವಷ೯ದ ಆಯಸ್ಸು ದಾಟಲಿದೆ ಮತ್ತು 61 ಕ್ಕೆ ಪಾದಾರ್ಪಣ ಮಾಡಲಿದೆ.


 ಈಗ  ನಾನು ಹಿರಿಯ ನಾಗರೀಕ ಎಂದು ಘೋಷಿಸಿಕೊಳ್ಳಬಹುದು.

  ಅಂದರೆ ನನಗೆ ನನ್ನ ಜೀವಿತದ 60 ವರ್ಷ ಕಳೆದು 61ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ.

#birthdaywishes #birthdaycelebration #Age #sixty #memories #mylife #experience 

    ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಸಾಗಲಿರುವ ದಾರಿಯ ಮುನ್ನೋಟದ ಕಡೆ ಕಣ್ಣು ಹಾಯಿಸಿದರೆ ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಎಂಬುದು ತಿಳಿಯುತ್ತದೆ.

   ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ.

   ಯಾವುದೂ ಅಂತ್ಯವೂ ಅಲ್ಲ... ಆರಂಭವೂ ಅಲ್ಲ... ರೂಪಾಂತರ ಮಾತ್ರ ಎಂಬಂತೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಅನೇಕ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು.

 ಮಿತ್ರ ದ್ರೋಹದ ಫಲ ಕೂಡ ಸ್ವೀಕರಿಸಾಯಿತು ಇದು ಎಲ್ಲರ ಜೀವನದಲ್ಲೂ ನಡೆಯುವಂತದ್ದೇ.
   
  ಈಗ 60 ವರ್ಷ ಪೂರೈಸಿದಾಗ ನಾನು ಮಾಡಿದ ಉದ್ಯೋಗ ವ್ಯವಹಾರ ನೆನಪು ಮಾಡಿಕೊಂಡು ಇಲ್ಲಿ ಬರೆದಿದ್ದೇನೆ.

  1). ವಜಿ೯ನಿಯಾ ತಂಬಾಕು ಬೆಳೆಯಲು ನಮ್ಮದೇ ನರ್ಸರಿಯಲ್ಲಿ ತಂಬಾಕು ಸಸಿ ನಾನೇ ನಿತ್ಯ ನೀರು ಹಾಕಿ ಬೆಳೆಸಿದ್ದು ನಂತರ ತಂಬಾಕು ಎಲೆ ಬ್ಯಾರನ್ ನಲ್ಲಿ ಹದ ಮಾಡಿ ಗ್ರೇಡ್ ಮಾಡುವ ಕೆಲಸ.

2). ಸಣ್ಣ ದಿನಸಿ ಅಂಗಡಿ .

3). ಆ ಕಾಲದಲ್ಲಿ ಸಾಗರದಲ್ಲಿ ಮಾಕ್೯-4 ಡಿಸೇಲ್ ಟ್ಯಾಕ್ಸಿ ಮಾಲಿಕ

4). ಚಿಕ್ಕ ಅಕ್ಕಿ ಗಿರಣಿಯಿಂದ, ಬಿನ್ನಿ ಮಿಲ್ ನಂತರ ದಾಂಡೇಕರ್ - 9 ನಂಬರ್ ಮಿಲ್ ತನಕ ಮಾಲಿಕ - ಡ್ರೈವರ್ - ಮೆಕಾನಿಕ್ - ಹಮಾಲಿ ಎಲ್ಲಾ ಅನುಭವ.

5), ತಂಪು ಪಾನಿಯ ಉದ್ದಿಮೆ.

6). ಕೈಗಾರಿಕಾ ಯಂತ್ರೋಪಕರಣ ಸರಬರಾಜುದಾರ.

7). ಕೆಮಿಕಲ್ ಇಂಡಸ್ಟ್ರಿ .

8). ಜಂಬಿಟ್ಟಿಗೆ ಕಲ್ಲು ಕ್ವಾರಿ.

9). ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದ್ದು.

10). ಚಲನ ಚಿತ್ರಮಂದಿರ.

11). ಶಾಮಿಯಾನ - ಪಾತ್ರೆಗಳ ಬಾಡಿಗೆ ಕೊಡುವ ವೃತ್ತಿ

12). ಬಸ್ ಮಾಲಿಕ

13).ಪೆಟ್ರೋಲ್ ಡಿಸೇಲ್ ಟ್ರಾನ್ಸ್ ಪೋಟ್೯ ಟ್ಯಾಂಕರ್ ಮಾಲಿಕ.

14). ಮಲ್ಲಿಕಾ ವೆಜ್ ರೆಸ್ಟೋರಾಂಟ್

15). ಚಂಪಕಾ ಪ್ಯಾರಾಡೈಸ್ ಎಂಬ ನಾನ್ ವೆಜ್ ಹೋಟೆಲ್

16). ಹೊಂಬುಜ ರೆಸಿಡೆನ್ಸಿ ಎಂಬ ಲಾಡ್ಜ್

17). ವಿಕ್ಟೋರಿಯಾ ಕಾಟೇಜ್ ಗಳು.

18). ಹೊಂಬುಜ ಗಾಡೇ೯ನಿಯ ಎಂಬ ಹೊಸ ಲಾಡ್ಜ್

19) . ರಾಜಕಾರಣದಲ್ಲಿ ಗ್ರಾಪಂ ಉಪಾಧ್ಯಕ್ಷ  ಮತ್ತು ಜಿಲ್ಲಾ ಪಂಚಾಯಿತ ಸದಸ್ಯನಾಗಿದ್ದು,

20). ಸಾಗರ ತಾಲ್ಲೂಕ್ ಜೆಡಿಎಸ್ ಅದ್ಯಕ್ಷ, ಜಾಜ್೯ ಪನಾ೯ಂಡಿಸರ ಸಮತಾ ಪಾಟಿ೯ ಮತ್ತು ಸಂಯುಕ್ತ ಜನತಾದಳದ ರಾಜ್ಯ ಪ್ರದಾನ ಕಾಯ೯ದಶಿ೯ 

21). ಅರೆಕಾಲಿಕ ಹವ್ಯಾಸಿ ಪತ್ರಕತ೯

22). ರೈತ ಸಂಘ -ದಲಿತ ಸಂಘಷ೯ ಸಮಿತಿ ಮೂಲಕ ಜನಪರ ಹೋರಾಟ.

23). 1999 ರಲ್ಲಿ ಮಂತ್ರಿ ಕಾಗೋಡರ ವಿರುದ್ದ ವಿಧಾನಸಭಾ ಚುನಾವಣೆ ಸ್ಪದೆ೯ ಶೇಕಡ 10 ಮತ ಗಳಿಸಿದ್ದೆ.

24). ಕಾಗೋಡು ರೈತ ಹೋರಾಟದ 50ನೇ ಸ್ವಣ೯ ಮಹೋತ್ಸವ ಕಾಗೋಡಿನಿಂದ ಕಡಿದಾಳಿಗೆ ಕಾಗೋಡು ಜ್ಯೋತಿ ಕಾಯ೯ಕ್ರಮ ಮತ್ತು ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಆತ್ಮಚರಿತ್ರೆ ಪ್ರಕಟನೆಯಲ್ಲಿ ಹೆಚ್ಚು ಜವಾಬ್ದಾರಿ

25). 2007ರಲ್ಲಿ ಊರಿಗಾಗಿ ಸಿದ್ದಿ ವಿನಾಯಕ ದೇವಾಲಯ ನಿಮಿ೯ಸಿ ಅಪ೯ಣೆ ಮಾಡಿ ಈ ವರ್ಷ ಪುನರಷ್ಟಬಂಧ ಮತ್ತು 19ನೇ ವರ್ಷದ ಜಾತ್ರೆ ನಡೆದಿದೆ.

26). ಒಂದು ಕಾದಂಬರಿ
ಮತ್ತು ಒಂದು ಕಥಾ ಸಂಕಲನ ಪ್ರಕಟವಾಗಿದೆ.

27). ಜನಪರ ಹೋರಾಟ ಮಾಡಿದ್ದಕ್ಕೆ ಅನೇಕ ದಿನಗಳ ಜೈಲುವಾಸ, 22 ಕೇಸುಗಳನ್ನ ಬಲಾಡ್ಯರು ದಯಪಾಲಿಸಿ Rowdy ಲಿಸ್ಟ್ ಗೂ ಸೇರಿಸಿದ್ದರು.

28). ಸಾಗರ ತಾಲ್ಲೂಕಿನಾದ್ಯಂತ 346 ಕಿ.ಮಿ. ಪಾದಯಾತ್ರೆ ರೈಲ್ವೆ ಬ್ರಾಡ್ ಗೇಜ್, ತುಮರಿ ಸೇತುವೆ, ಹಂದಿಗೋಡು ನಿಗೂಡ ಕಾಯಿಲೆ ಪರಿಹಾರ, ಜೋಗ್ ಜಲಪಾತ ಪ್ರವಾಸಿ ಕೇಂದ್ರ ಇತ್ಯಾದಿ ಬೇಡಿಕೆಗಾಗಿ 13 ದಿನದ ಪಾದಯಾತ್ರೆ ಇದಾಗಿತ್ತು.

29). ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಎತ್ತಿನಗಾಡಿ ಯಾತ್ರೆ ಮಾಡಿದ್ದು ಮಾಹಿತಿ ಹಕ್ಕು, ಲೋಕಾಯುಕ್ತ ಕಾಯಿದೆ ಜನ ಸಾಮಾನ್ಯರಿಗೆ ಜನ ಜಾಗೃತಿಗಾಗಿ 6 ದಿನದ ಯಾತ್ರೆ ಆಗಿತ್ತು.

30). ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನ ಮೇಳ ನಮ್ಮ ಊರಲ್ಲಿ ಆಯೋಜಿಸಿದ್ದು.

31). ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯ ಆಯೋಜನೆ ಮತ್ತು ಕನ್ನಡ ಚಲನ ಚಿತ್ರದ ಹಾಸ್ಯ ನಟರನ್ನು ಕರೆಸಿ ಸನ್ಮಾನಿಸಿದ್ದು.

32). ಸ್ಥಳಿಯ ಕನ್ನಡ ಸಂಘ ಆಯೋಜಿಸಿದ್ದ ನೇತ್ರತಜ್ಞ ಡಾಕ್ಟರ್ ಮೋದಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಸಂಚಾಲಕನಾಗಿ ಕಾಯ೯ನಿವ೯ಹಿಸಿದ್ದು.

33).ಹೆಗ್ಗೋಡಿನ ನಿನಾಸಂ ಸ್ಥಾಪಕರಾದ ಕೆ.ವಿ.ಸುಬ್ಬಣ್ಣರ ಹೆಸರಲ್ಲಿ ಸ್ಮಾರಕ ಬಯಲು ರಂಗಮಂದಿರ ಆಚಾಪುರ ಸಕಾ೯ರಿ ಶಾಲೆಯಲ್ಲಿ, ಕಾಗೋಡು ಹೊರಾಟದ ರೂವಾರಿ ಹೆಚ್.ಗಣಪತಿಯಪ್ಪ ಬಯಲು ರಂಗಮಂದಿರ ನಮ್ಮ ಊರಾದ ಯಡೇಹಳ್ಳಿ ಸಕಾ೯ರಿ ಶಾಲೆಯಲ್ಲಿ, ಖ್ಯಾತ ಸಾಹಿತಿ ನಾ.ಡಿಸೋಜ ಬಯಲು ರಂಗಮಂದಿರ ಆನಂದಪುರದ ಕನ್ನಡ ಸಂಘದ ಆವರಣದಲ್ಲಿ, ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ ಆನಂದಪುರದ ಪದವಿ ಪೂವ೯ ಕಾಲೇಜು ಅವರಣದಲ್ಲಿ ನಿಮಿ೯ಸಿದ್ದು.

34). ಆನಂದಪುರದ ರೈತ ಬಂದು ಗ್ರಾಮೋದ್ಯೋಗದಲ್ಲಿ ನಾಲ್ಕು ಜನ ಕಾಮಿ೯ಕರು ಕೊಲೆಯಾದಾಗ ನಡೆದ ಕಾಮಿ೯ಕ ಹೋರಾಟದಲ್ಲಿ ಮುಂಚೂಣಿಯಾಗಿ ಸಾಗರದವರೆಗೆ ಪಾದಯಾತ್ರೆ, ಶಿವಮೊಗ್ಗಕ್ಕೆ ಸೈಕಲ್ ಜಾತಾ ನಡೆಸಿದ್ದು,ಮಾಲಿಕರು ಪೋಲಿಸರಿಂದ ನಡೆಸಿದ ಲಾಠಿ ಛಾಜ್೯.

35). ಶಿವಮೊಗ್ಗ ತಾಳಗುಪ್ಪ ರೈಲು ಮಾಗ೯ ರದ್ದು ಮಾಡದಂತೆ ,ಬ್ರಾಡ್ ಗೇಜ್ ಪರಿವರ್ತನೆಗಾಗಿ, ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ್ ರೈಲು ನಿಲ್ದಾಣ ಎಂದು ಪುನರ್ ನಾಮಕರಣ, ತುಮರಿ ಸೇತುವೆ, ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆ ಇತ್ಯಾದಿ ಬೇಡಿಕೆ ಈಡೇರಿಕೆಗಾಗಿ ದೆಹಲಿ ಚಲೋ ಸಂಚಾಲಕನಾಗಿ.

36). ಶಿವಮೊಗ್ಗ ಜಿಲ್ಲಾ ಗ್ರಾಮ ಪಂಚಾಯತ್ ಹಂಗಾಮಿ ನೌಕರರ ಸಂಘದ ಗೌರವಾಧ್ಯಕ್ಷನಾಗಿದ್ದೆ (1995- 2000)

37). ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ಸು ಮಾಲಿಕನಾಗಿದ್ದೆ.

38). ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ಸು ಮಾಲಿಕರ ಸಂಘದ ಜಿಲ್ಲಾಅಧ್ಯಕ್ಷ (1992) ಗೌರವಾದ್ಯಕ್ಷರು ಸುದೀರ್ ನಾಯಕ್ SGMT ಎಂ.ಡಿ. ಕಾರ್ಯದರ್ಶಿ ಜಯಪ್ರಕಾಶ್ ಶೆಣೈ ವಿಜಯ ಬಸ್ ಮಾಲಿಕರು.

39).2015 ರಿಂದ ಮನೆಯಲ್ಲಿ ಟೀವಿ ಇಲ್ಲ.

40).1 - ಜುಲೈ -2022 ರಿಂದ ಎಲ್ಲಾ ವೃತ್ತಪತ್ರಿಕೆ ಓದುವುದು ನಿಲ್ಲಿಸಿದ್ದೇನೆ.

41).2014 ರಿಂದ ಮತದಾನ ತ್ಯಜಿಸಿದ್ಧೇನೆ.

42). ಸಭೆ - ಸಮಾರಂಭ - ಸನ್ಮಾನಕ್ಕೆ ಕಳೆದ 11 ವರ್ಷದಿಂದ (2014ರಿಂದ) ಭಾಗವಹಿಸುವುದಿಲ್ಲ.

43). ಕಳೆದ 60 ವರ್ಷದಿಂದ ತಲೆಗೂದಲಿಗೆ ಹೇರ್ ಡೈ ಬಳಸಿಲ್ಲ.

44) ಕಳೆದ ಐದು ವರ್ಷದಿಂದ ನನ್ನ ತಲೆ ಕ್ಷೌರ ನಾನೆ ಸ್ವತಃ ಮಾಡಿ ಕೊಳ್ಳುತ್ತಿದ್ದೇನೆ

45) ಕಳೆದ 10 ವರ್ಷದಿಂದ ಉಡುಗೆ ಬಿಳಿ ಪಂಚೆ.

46). ಆರು ವರ್ಷದಿಂದ ರಾತ್ರಿ ಊಟ ಬಿಟ್ಟಿದ್ದೇನೆ.

47) ಬೆಳಿಗ್ಗೆ ಒಂದು ಗಂಟೆ ವಾಕಿಂಗ್ 5 ವರ್ಷ ರಿಂದ ನಿರಂತರ ಮಾಡುತ್ತಿದ್ದೇನೆ.

48) ಸೋಮವಾರ ಮತ್ತು ಗುರುವಾರ ಉಪವಾಸ

49) ಆನಂದಪುರಂ ಇತಿಹಾಸ ಪುಸ್ತಕ ಬಿಡುಗಡೆ ಆಗಬೇಕಾಗಿದೆ.

50). ನಾನು ನನ್ನ ಬ್ಲಾಗ್ ನಲ್ಲಿ ಬರೆದ ಲೇಖನಗಳ ಸಂಖ್ಯೆ ಈಗಾಗಲೇ 2365 ಕ್ಕೆ ತಲುಪಿದ್ದು ಮುಂದೆ 3000 ದ ಗಡಿ ದಾಟಲಿದೆ.

51). ಇಲ್ಲಿಯವರೆಗೆ ನಾನು ನನ್ನ ಹುಟ್ಟು ಹಬ್ಬ ಆಚರಿಸಿಲ್ಲ, ಉಡುಗೊರೆ ಸ್ಟೀಕರಿಸಿಲ್ಲ, ಯಾರೂ ಉಡುಗೊರೆ ನೀಡಿಲ್ಲ.

52).ಅಂತರ್ಜಾತಿ ವಿವಾಹ , ಪತ್ನಿ, ಪುತ್ರಿ - ಅಳಿಯ ಮತ್ತು ಪುತ್ರ ಇದಾರೆ.

53). ನಾನು ನನ್ನಣ್ಣ ವ್ಯವಹಾರದಲ್ಲಿ ಕೃಷಿಯಲ್ಲಿ ಪಾಲುದಾರರು ಹಾಗೆಯೇ ಕಷ್ಟ ಸುಖದಲ್ಲೂ, ಅಕ್ಕಪಕ್ಕದಲ್ಲಿ ಒಂದೇ ರೀತಿಯ ಮನೆಯಲ್ಲಿ ವಾಸ.

54). ಶಾಲಾ ದಿನದಲ್ಲಿ ಪ್ರವಾಸಕ್ಕೆ ಹೋಗಲಿಲ್ಲ, ಶಾಲಾ ಗ್ರೂಪ್ ಪೋಟೋ ಯಾವುದೂ ಇಲ್ಲ
 (ಮರೆತು ಹೋಗಿರುವ ಒಂದೆರೆಡು ಸಾಹಸ ನೆನಪಾದಾಗ ಮತ್ತೆ ಸೇರಿಸುತ್ತೇನೆ)
 
 ಇದೆಲ್ಲ ನಮ್ಮ ಹಳ್ಳಿ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿಯಲ್ಲಿ ನಮ್ಮ ತಂದೆ ಮಾಡಿಟ್ಟಿರುವ ಸ್ವಂತ ಜಾಗ ಮತ್ತು ಕೃಷಿ ಜಮೀನಿನಲ್ಲಿ ನಡೆಸಿರುವ ಒಂದು ರೀತಿ ಜೀವನ ಪಯ೯೦ತ ಸಾಧನೆ ಎನ್ನಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...