Skip to main content

Blog number 3392. ಬಚ್ಚಾಚಾರ್ ಪೋಟೋ

#ಈ_ಘಟನೆ_ನನಗೂ_ಅವರಿಗೂ_ವಿಶೇಷವಾಯಿತು

#ಅವರ_ಜೀವಿತಾವದಿಯಲ್ಲಿ_ನಿರೀಕ್ಷೆಯೇ_ಮಾಡದ

#ಅವರ_ತಂದೆ_ಪೋಟೋ_ನೋಡಿದಾಗ


  1984ರಲ್ಲಿ(41 ವರ್ಷದ ಹಿಂದೆ) ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಬಚ್ಚಾಚಾರ್ ಫೋಟೋ ಒಂದು ತೆಗೆದಿದ್ದೆ.
 
  ನಮ್ಮ ಮನೆ ಪಕ್ಕದ ರಾಮಾಚಾರರ ಕುಲುಮೆಯ ಕ್ಯಾಪ್ಟನ್ ಬಚ್ಚಾಚಾರ್ ಮಗಳು ಲಲಿತಮ್ಮನಿಗೆ  ಸುಮಾರು 35 ವರ್ಷದ ನಂತರ  ಅವರ ತಂದೆಯ ಪೋಟೋ ನೋಡಿದಾಗ...

#photo #memories #Anandapuram #yadehalli #gowthamapura #vishwakarma #Acharya #carpentar 

  ಅವರ ಉದ್ಘಾರ "ತನ್ನ ತಂದೆ ಪೋಟೋ ತನ್ನ ಜೀವಮಾನದಲ್ಲೇ ನೋಡುತ್ತೇನೆ ಅಂದು ಕೊಂಡಿರಲಿಲ್ಲ"...

 35 ವರ್ಷದ ಹಿಂದೆ ಮೃತರಾದ ಅವರ ಒಂದೇ ಒಂದು ಪೋಟೋ ಇರಲಿಲ್ಲ.... ಅಂತ ಸುಮಾರು ಅನೇಕ ವಷ೯ದ ನಂತರ ನನ್ನ ಕಛೇರಿಗೆ ಬಂದಿದ್ದ ಗೌತಮಪುರದ ಲಲಿತಕ್ಕ ಕಣ್ಣೀರಾಗಿದ್ದಳು.

   ಇವರ ತಂದೆ ಬಚ್ಚಾಚಾರ್ ತಾಯಿ ಪದ್ದಮ್ಮ ಕುಂದಾಪುರ ಮೂಲದವರು, ಈ ಬಚ್ಚಾಚಾರ್ ರನ್ನು ನಮ್ಮ ಪಕ್ಕದ ಮನೆಯ ರಾಮಾಚಾರ್ ತಮ್ಮ ಕುಲುಮೆ ಕೆಲಸಕ್ಕೆ ಕರೆತಂದಿದ್ದು.
   
   ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ದಲ್ಲಿ ಬರುವ ಒಂದು ಕಥೆಯಾದ #ಮಂಜ_ಬ್ರಹ್ಮ_ರಾಕ್ಷಸನಾದರೆ... ಕಥೆಯಲ್ಲಿ ಬಚ್ಚಾಚಾರ್ ಮತ್ತು ಆ ಕಾಲದ ಕುಲಿಮೆ ನನ್ನ ಕಣ್ಣಲ್ಲಿ ಗ್ರಹಿಸಿದ ವರ್ಣನೆ ದಾಖಲಿಸಿದ್ದೇನೆ.

  1984ರಲ್ಲಿ(41 ವರ್ಷದ ಹಿಂದೆ) ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಬಚ್ಚಾಚಾರ್ ಫೋಟೋ ಒಂದು ತೆಗೆದಿದ್ದೆ.
 
    ಅವರ ಮಗಳು ತಂದೆಯ ಪೋಟೋ ಇಲ್ಲ ಅಂತ ರೋದಿಸಿದಾಗ ಬಚ್ಚಾಚಾರ್ ಪೋಟೋ ನೆನಪಾಗಿ ಮಗನಿಗೆ ಹೇಳಿ ಎಡಿಟ್ ಮಾಡಿಸಿ ನಮ್ಮದೇ ಪ್ರಿಂಟರ್ ನಲ್ಲಿ ಪ್ರಿಂಟ್ ತೆಗೆದು ನನ್ನಣ್ಣನ ಮಗನಿಗೆ ಆನಂದಪುರOಗೆ ಕಳಿಸಿ ಪೋಟೋ ಪ್ರೇಂ ಹಾಕಿಸಿ ತರಿಸಿ ಲಲಿತಕ್ಕನಿಗೆ ನೀಡಿದಾಗ ಅವರ ಮುಖದಲ್ಲಿ ವ್ಯಕ್ತವಾದ ಸಂತೋಷಕ್ಕೆ ಬೆಲೆ ಕಟ್ಟಲಾಗಲಿಲ್ಲ.

   ಈ ಸಂದರ್ಭದಲ್ಲಿ ಲಲಿತಕ್ಕ ತಾನು ತನ್ನ ಜೀವಮಾನದಲ್ಲೂ ನಿರೀಕ್ಷಿಸದ ತಂದೆಯ ಪೋಟೋದ ಬೆಲೆ ಲಕ್ಷ ರೂಪಾಯಿ ಕೊಟ್ಟರೂ ಕಡಿಮೆ ಅಂದರು.
 
   ಇವರ ತಾಯಿಗೆ ತೀವ್ರ ಅನಾರೋಗ್ಯವಾಗಿದ್ದಾಗ ನನ್ನ ತಾಯಿ ನಮ್ಮ ಮನೆಯಲ್ಲೇ ಎರೆಡು ತಿಂಗಳು ಇಟ್ಟುಕೊಂಡು ಸಲಹಿದ್ದು...ನಮ್ಮ ತಂದೆ ಚಿಕಿತ್ಸೆ ನೀಡಿದ್ದು... ಆಗ ನನ್ನ ದೊಡ್ಡಕ್ಕ ಜಲಜಕ್ಕನ ಕೈ ಬಳೆಗಳ ದೊಡ್ಡ ಪೆಟ್ಟಿಗೆಯ ಸಂಗ್ರಹ..., ಪ್ರತಿ ವರ್ಷ ದೀಪಾವಳಿಯಲ್ಲಿ ಲಲಿತಕ್ಕ ತನ್ನ ತಂದೆ ಬಚ್ಚಾಚಾರ್ ಗೆ ಪಿತೃ ತರ್ಪಣದ ಎಡೆ ತಪ್ಪದೆ ಇಡುವುದು... ಎಲ್ಲಾ ನೆನಪಿಸಿಕೊಂಡರು.
 
  ಗೌತಮಪುರದಲ್ಲಿ ಇವರು ನೆಲೆನಿಲ್ಲಲು ಕಾರಣರಾದ #ಕೊಗ್ಗಾಚಾರ್.... ಹಾಲಿ ಗೌತಮಪುರದ ಜನತಾ ಕಾಲೋನಿಯಲ್ಲಿ ಜಾಗ ಮತ್ತು ಮನೆ ಮಂಜೂರಿ ಮಾಡಿಸಿಕೊಟ್ಟ ಸ್ಥಳಿಯ ಮುಖಂಡರಾದ #ಕಲ್ಲಪ್ಪರನ್ನು ಸ್ಮರಿಸಿದರು

   ಬಚ್ಚಾಚಾರ್ ಪೋಟೋ, ಅವರ ಉಲ್ಲೇಖಗಳು ಇರುವ ನನ್ನ ಕಥಾ ಸಂಕಲನ, ಒಂದು ಸಾವಿರ ರೂಪಾಯಿ ಉಡುಗೊರೆಯೊಂದಿಗೆ ನೀಡಿ ಊಟ ಮಾಡಿಸಿ ಬೀಳ್ಕೊಡಿಗೆ ಮಾಡಿದೆ ಅವರ ಮುಖದಲ್ಲಿ-ಕಣ್ಣಿನಲ್ಲಿ ಅಲೌಕಿಕವಾದ ತೃಪ್ತಿಯ ಪ್ರತಿಫಲನವಿತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...