Skip to main content

Blog number 3390. ಪ್ಯಾರಾಚ್ಯೂಟ್ ತರಬೇತಿಯಲ್ಲಿ ದುರಂತ ಅಂತ್ಯ ಜಿ.ಎಸ್.ಮಂಜುನಾಥ್

#ಶ್ರದ್ಧಾಂಜಲಿಗಳು

#ನಮ್ಮ_ಹೆಮ್ಮೆಯ_ಇಂಡಿಯನ್_ಏರ್ಫೋರ್ಸ್_ತರಬೇತಿದಾರ_ಮಂಜುನಾಥ್_ಅವರಿಗೆ 

#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಪಟಗುಪ್ಪ_ಸಮೀಪದ_ಸಂಕೂರಿನವರು

#ಈ_ದಂಪತಿಗಳ_ವಿವಾಹ_2019ರಲ್ಲಿ_ನಮ್ಮ_ಕಲ್ಯಾಣ_ಮಂಟಪದಲ್ಲೇ_ನೆರವೇರಿತ್ತು.


     ಆನಂದಪುರಂನ ರೈಲ್ವೆ ನಿಲ್ದಾಣದ ರಸ್ತೆಯ ಮಣಿಕಂಠ ಇಂಡಸ್ಟ್ರೀಸ್ ಮಾಲಿಕ ಕೇಶವ ಅವರು ಮಂಜುನಾಥ್ ಸಹೋದರಿ ಪತಿ (ಇವರ ಬಾವ) ನಮ್ಮೂರಲ್ಲಿ ಪಿಠೋಪಕರಣ ಇತ್ಯಾದಿ ತಯಾರಿಸುವ ಇಂಡಸ್ಟಿ  ಮಾಡಿಕೊಂಡು ಪ್ರಸಿದ್ಧರಾಗಿದ್ದಾರೆ.

  ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪೆ ಎಂಬ ಊರಿನ ಸಮೀಪದ ಸಂಕೂರು ಎಂಬ ಹಳ್ಳಿಯವರು.

#agraairforce #juniorwarrantofficer #indianairforce #shivamogga #hosanagara #manjunathgs #parachutes 

   ಇವರ ಪರಿಚಯ ನನಗೆ 2019ರ ಪ್ರಾರಂಭದಲ್ಲಿ ಆಯಿತು ಆಗ ಅವರು ತಮ್ಮ ಜೊತೆ ಏರ್ಪೋರ್ಸನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಅಸ್ಸಾಂ ಮೂಲದ ಕಲ್ಪಿತಾ ಎಂಬ ಯುವತಿ ಜೊತೆ ಪ್ರೇಮ ವಿವಾಹದ ತಯಾರಿ ನಡೆಸಿದ್ದರು.

   ಇವರ ಪತ್ನಿ ಶ್ರೀಮತಿ ಕಲ್ಪಿತಾ ಕೂಡ ಭಾರತೀಯ ಏರ್ಪೋರ್ಸ್ ಟ್ರೈನಿಂಗ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

   ಇವರ ಬಾವಿ ಪತ್ನಿ ತಂದೆ ತಾಯಿಯನ್ನ ಇವರ ಕುಟುಂಬದ ಪರಿಚಯ ಮಾಡಿಸಲು ಮತ್ತು ವಿವಾಹದ ಮಾತುಕಥೆಗಾಗಿ ಕರೆತಂದಿದ್ದಾಗ ಕೆಲವು ದಿನ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನಲ್ಲಿ ಉಳಿಸಿದ್ದರು.

    ಇವರ ಪತ್ನಿಯ ತಂದೆ ತಾಯಿ ಪಶ್ಚಿಮ ಬಂಗಾಳದ ಬೆಂಗಾಲಿ ಭಾಷೆಯ ಸಿನಿಮಾ ಮತ್ತು ನಾಟಕ ಕ್ಷೇತ್ರದಲ್ಲಿ ಹೆಸರು ಮಾಡಿದವರಂತ ನನ್ನ ಮಲ್ಲಿಕಾ ವೆಜ್ ನ ಬೆಂಗಾಲಿ ಅಡುಗೆ ಕಾರ್ಮಿಕರು ಗುರುತು ಹಿಡಿದಿದ್ದರು.

    ಇದೆಲ್ಲಾ ನನಗೆ ಗೊತ್ತಾಗಿದ್ದು ಅವಾಗ ನನ್ನ ಮಲಿಕಾವೆಜ್ ನಲ್ಲಿ ಪಶ್ಚಿಮ ಬಂಗಾಳದ ಕಲ್ಕತ್ತಾದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು ಅವರಿಂದ ಇವರ ಪರಿಚಯ ಆಯಿತು.

   ಇವರ ಕೋರಿಕೆ ಮೇರೆಗೆ ನಮ್ಮಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಲ್ಕತ್ತಾದ ಚಂಚಲ್ ಚಟರ್ಜಿ ಎಂಬ ಯುವಕನನ್ನ ಇವರಿಗೆ  ಸಹಕರಿಸಲು ವ್ಯವಸ್ಥೆ ಮಾಡಿದ್ದೆ.

   ಮಂಜುನಾಥ್ ತನ್ನ ಬಾವಿ ಪತ್ನಿ, ಮಾವ ಮತ್ತು ಅತ್ತೆ ಇವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಇವರ ಪರಿಚಯಗಳನ್ನ ಮಾಡಿಸಿ 2019 ರಲ್ಲಿ ವಿವಾಹ ದಿನಾಂಕ ನಿಗದಿ ಮಾಡಿಸಿದ್ದರು. 

    ಆಗಲೇ ಮಂಜುನಾಥ ಜೊತೆ ನನಗೆ ಹೆಚ್ಚು ಸಂಪರ್ಕ ಸಾಧ್ಯವಾಯಿತು ಅವರ ನಿತ್ಯದ ವಿಮಾನದಲ್ಲಿನ ತರಬೇತಿ ಕೆಲಸ ಇತ್ಯಾದಿ ತಿಳಿಸಿದ್ದರು.

  ಇವರ ಸಹೋದರಿ ಮತ್ತು ಭಾವ ನಮ್ಮ ಆನಂದಪುರಂ ನಿವಾಸಿಗಳಾಗಿದ್ದಾರೆ.

    ಆನಂದಪುರಂನ ರೈಲ್ವೆ ನಿಲ್ದಾಣದ ರಸ್ತೆಯ ಮಣಿಕಂಠ ಇಂಡಸ್ಟ್ರೀಸ್ ಮಾಲಿಕ ಕೇಶವ ಅವರು ಮಂಜುನಾಥ್ ಸಹೋದರಿ ಪತಿ (ಇವರ ಬಾವ) ನಮ್ಮೂರಲ್ಲಿ ಪಿಠೋಪಕರಣ ಇತ್ಯಾದಿ ತಯಾರಿಸುವ ಇಂಡಸ್ಟಿ  ಮಾಡಿಕೊಂಡು ಪ್ರಸಿದ್ಧರಾಗಿದ್ದಾರೆ.

   ನಂತರ ಕೆಲ ತಿಂಗಳಲ್ಲೇ ಇವರ ವಿವಾಹ ಕಾರ್ಯಕ್ರಮ ನಮ್ಮ #ಕೃಷ್ಣಸರಸ_ಕಲ್ಯಾಣ_ಮಂಟಪದಲ್ಲಿ ಜರುಗಿತು ನೂತನ ದಂಪತಿಗಳು ರೈಲಿನಲ್ಲಿ ಬೆಂಗಳೂರಿಗೆ ಹೋಗುವಾಗ ಅವರನ್ನ ಬೀಳ್ಕೊಡಲು ನಮ್ಮ ಕಲ್ಕತ್ತಾ ಸಿಬ್ಬಂದಿಗಳು ಕೂಡ ಹೋಗಿದ್ದರು.

    ಮೊನ್ನೆ ಬರಸಿಡಿಲಿನಂತ ಈ ಸುದ್ದಿ ಕೇಳಿ ಇದು ಇವರಾಗದಿರಲಿ ಎಂದು ಒಳ ಮನಸ್ಸು ಹೇಳುತ್ತಿತ್ತು ಆದರೆ ನಂತರ ಬಂದ ಸುದ್ದಿ ಹೊಸನಗರ ತಾಲೂಕು ಪಟಗುಪ್ಪ ಊರ ಹತ್ತಿರದ ಸಂಕೂರು ಗ್ರಾಮದವರು, 2019ರಲ್ಲಿ ಅಸ್ಸಾಂ ಮೂಲದ ಯುವತಿ ಜೊತೆ ವಿವಾಹ ಆಗಿತು ಅನ್ನುವ ಮಾಹಿತಿಯಿಂದ ನನಗೆ ಇದೇ ಮಂಜುನಾಥ್ ಎಂಬುದು ಖಾತ್ರಿ ಆಯ್ತು.

  ದಂಪತಿಗಳು ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದಾಗಲೇ ಮಂಜುನಾಥ್ ಉತ್ತರಪ್ರದೇಶ ರಾಜ್ಯದ ಆಗ್ರಾದ ಭಾರತೀಯ ಸೇನೆಯ ವೈಮಾನಿಕ ತರಬೇತಿಯ ಪ್ಯಾರಾಶ್ಯೂಟ್ ಜಂಪಿಂಗ್ ತರಬೇತಿ ನೀಡುವಾಗ ತರಬೇತಿ ಪಡೆಯುತ್ತಿದ್ದ 11 ಯೋದರು ಯಶಸ್ವಿ ಆಗಿ ಪ್ಯಾರಾಶ್ಯೂಟ್ ನಲ್ಲಿ ಲ್ಯಾಂಡಿಂಗ್ ಆದರು ಆದರೆ ಇಂಡಿಯಿನ್ ಏರ್ ಫೋರ್ಸ್ ನ ತರಬೇತುದಾರ ಜ್ಯೂನಿಯರ್ ವಾರೆಂಟ್ ಆಫೀಸರ್ ಮಂಜುನಾಥರ ಪ್ಯಾರಾಶ್ಯೂಟ್ ತೆರೆದುಕೊಳ್ಳದೇ ಅವರು ನೇರವಾಗಿ ಭೂಮಿಗೆ 1800 ಅಡಿಯಿಂದ ಅಪ್ಪಳಿಸಿ ಇಹ ಲೋಕ ತ್ಯಜಿಸಿದ್ದಾರೆ.

      ಇದೊಂದು ದುರಂತ ವಿಷಯವಾಯಿತು ಇವತ್ತು ಇವರ ಹುಟ್ಟೂರಿನಲ್ಲಿ  ಅವರ ಅಂತ್ಯಸಂಸ್ಕಾರ ನಡೆದಿದೆ, ಜಿಲ್ಲಾ ಆಡಳಿತ ಅಂತಿಮ ಗೌರವಗಳನ್ನು ಸಮರ್ಪಿಸಿದೆ.

    ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ,ಮಂಜುನಾಥ್ ಆತ್ಮಕ್ಕೆ ಶಾಂತಿ ಲಭಿಸಲಿ, ಸ್ವರ್ಗ ಪ್ರಾಪ್ತಿಯಾಗಲಿ ಈ ಕುಟುಂಬಕ್ಕೆ ಇವರ ಅಕಾಲಿಕ ಅಗಲಿಕೆ ತಡೆಯುವ ಶಕ್ತಿ ನೀಡಲಿ ಎಂದು ನಮ್ಮ ಪುರ ದೈವ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವರಲ್ಲಿ ಪ್ರಾರ್ಥಿಸಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...