Skip to main content

ಸಾಗರದ ಗುರುಮೂತಿ೯ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಅವರಿಗೆ ಅಭಿನಂದನೆ

     ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ಸಾಗರದ ಗುರುಮೂತಿ೯ ಆಯ್ಕೆ ಅಭಿನಂದನೀಯ.
  ಸಾಗರದ ಗುರು ಮೂತಿ೯ ಅಂತ ಸಾಗರದವರು ಕರೆದರೆ ಶಿಕಾರಿಪುರದವರು ಶಿಕಾರಿಪುರ ಗುರುಮೂತಿ೯ ಅಂತನೇ ಕರೆಯುತ್ತಾರೆ.
    1979 - 80 ರಲ್ಲಿ ಸಾಗರ ತಾಲ್ಲೂಕಿನಲ್ಲಿ ಆರ್.ಎಸ್.ಎಸ್ ನ ಮು೦ಚೂಣಿಯಲ್ಲಿದ್ದವರು U H ರಾಮಪ್ಪ ಮತ್ತು ಅವರ ಶಿಷ್ಯರ೦ತೆ ಈ ಗುರುಮೂತಿ೯ .
  ಬಿ.ಹೆಚ್ ರಸ್ತೆಯ ಲಕ್ಷ್ಮಿ ಸ್ವೀಟ್ಸ್ ಎದುರಿನ ಪುತ್ತೂರಾಯರ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸುಮಾರು 16 ರೂಂ ಗಳನ್ನ ಸೇವಾ ಸಾಗರ ಸಂಸ್ಥೆಯಿ೦ದ ವಿದ್ಯಾಥಿ೯ಗಳಿಗೆ ಖಾಸಾಗಿ ವಿದ್ಯಾಥಿ೯ನಿಲಯವಾಗಿ ಪರಿವರ್ತಿಸಿದ್ದರು, ಪ್ರತಿ ರೂಮಿನಲ್ಲಿ ಇಬ್ಬರು ಇರಬಹುದಾಗಿತ್ತು ಇದಕ್ಕೆ ನಿಗದಿತ ಬಾಡಿಗೆ ನಿಗದಿ ಮಾಡಿದ್ದರು.
   ಅದು ರಾಮಪ್ಪ ಮತ್ತು ಗುರುಮೂತಿ೯ಯವರ ಆಡಳಿತ ಕಛೇರಿಯೂ ಆಗಿತ್ತು, ನಾನು SSLC ಪರೀಕ್ಷೆ ತಯಾರಿಗೆ ಅಲ್ಲಿ ಸೇರಿದ್ದೆ ಅದು ಆರ್ ಎಸ್ ಎಸ್ ಪ್ರಮುಖರಾಗಿದ್ದ ಪ್ರಾಣೇಶರ ಶಿಪಾರಸ್ಸಿನಿಂದ.
  ಅಲ್ಲಿ ಬೆಳಿಗ್ಗೆ 5ಕ್ಕೆ ನಮ್ಮನ್ನೆಲ್ಲ ಎಬ್ಬಿಸಿ ಸುಪ್ರಬಾತ ಒ೦ದು ಕಡೆ ಸೇರಿಸಿ ಕರಾಗ್ರೆ ವಸತೆ ಲಕ್ಷ್ಮಿ..... ಸಾಮೂಹಿಕವಾಗಿ ಹೇಳಿಸುತ್ತಿದ್ದರು ಈ ಗುರುಮೂತಿ೯.
    ಬಿಜೆಪಿ ಪಕ್ಷ ಪ್ರಬುದ್ಧಮಾನಕ್ಕೆ ಬ೦ದಾಗ ಸಾಗರದಿಂದ ಒ0ದಲ್ಲ ಒ೦ದು ದಿನ UH ರಾಮಪ್ಪ ಅಥವ ಗುರುಮೂತಿ೯ ಶಾಸಕರಾಗುತ್ತಾರೆಂಬ ಸುದ್ದಿ ಇತ್ತು.
    ನಂತರ ಗುರುಮೂತಿ೯ಯನ್ನ ಯಡೂರಪ್ಪನವರು RSS ಜೊತೆ ಶಿಕಾರಿಪುರ ಬಿಜೆಪಿ ಸಂಘಟನೆ ಜೊತೆ ತಮ್ಮ ಆಪ್ತ ಕಾಯ೯ದಶಿ೯ ಮಾಡಿಕೊಂಡರು.
   ಗುರುಮೂತಿ೯ ಅವರ ನಂಬಿಕೆಗೆ ಚ್ಯುತಿ ಬರದಂತೆ ಇಷ್ಟು ವಷ೯ ಯಡೂರಪ್ಪರ ಏಳು ಬೀಳುಗಳ ಜೊತೆಯಲ್ಲೇ ಏಗಿದ್ದಾರೆ, ಯಡೂರಪ್ಪನವರು ತಡವಾಗಿ ಆದರೂ ಮರೆಯದೆ ಗುರುಮೂತಿ೯ಯವರಿಗೆ ರಾಜಕೀಯ ಸ್ಥಾನ ಮಾನ ನೀಡಿರುವುದು ಇವರ ಸಂಘಟನೆ, ಸೇವೆ ಮತ್ತು ಶ್ರಮಕ್ಕೆ ನೀಡಿದ ಪ್ರತಿಫಲವಾಗಿದೆ.
    ಈ ಹಿಂದೆ ಶಿರಾಳಕೊಪ್ಪ ಮೂಲದ ಪದ್ಮನಾಭ ಭಟ್ಟರು ಈ ಸ್ಥಾನದಲ್ಲಿ ಆಡಳಿತ ನಡೆಸಿ ಹೆಸರುಗಳಿಸಿದ್ದರು.
     8 ವಷ೯ದ ಹಿಂದೆ ಸಾಗರದ PNT ಕಛೇರಿಗೆ ಏನೋ ಕೆಲಸದ ನಿಮಿತ್ತ ಹೋಗುವಾಗ ಅಲ್ಲಿ ಬಂದಿದ್ದ ಗುರುಮೂತಿ೯ಯವರಿಗೆ ಗೆಳೆಯರು ಪರಿಚಯಿಸಿದಾಗ ಗುರುಮೂತಿ೯ಯವರು "ನನಗೆ ಅರುಣ್ ಪ್ರಸಾದ್ ಗೊತ್ತು ಅವರಿಗೆ ನನ್ನ ಗುರುತು ಉಂಟಾ ಕೇಳಿ " ಅಂದಾಗ ನಾನು ಸೇವಾಸಾಗರದ ಬೆಳಗಿನ ಸುಪ್ರಬಾತ ಅಂದಾಗ ಇಬ್ಬರೂ ನೆನಪಿಸಿ ಕೊಂಡು ನಗಾಡಿದ್ದೆವು.
  ಸಕಾ೯ರದಲ್ಲಿ 80 ಶಾಸಕರು ಪ್ರತಿನಿದಿಸುವ ಅನೇಕ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಮಲೆನಾಡು ಪ್ರದೇಶ ಅಭಿವೃದ್ದಿಗಾಗಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಸ್ಥಾಪಿಸಿದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಸಾಗರದ ಗುರುಮೂತಿ೯ಯವರಿಗೆ ಅಭಿನಂದನೆ ಹೇಳೋಣ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...