ಗೆಳೆಯ Arun Prasad ಬರೆದ ಬೆಸ್ತರರಾಣಿ ಚಂಪಕ ಪುಸ್ತಕದ ಕುರಿತ ನನ್ನ ಇನ್ನೊಬ್ಬ ಹಿರಿಯ ಗೆಳೆಯರಾದ Gangadhara Nayak ತಮ್ಮ ಗೋಡೆಯಲ್ಲಿ ಬರೆದಿದ್ದನ್ನು ನಾನು ಇತ್ತೀಚೆಗೆ ಓದಿದ್ದೆ. ಅರೆ ಪುಸ್ತಕ ತಂದು ಇಷ್ಟು ದಿನವಾದರೂ ನಾನು ಓದಿಲ್ಲವಲ್ಲ ಅಂದುಕೊಂಡೆ.ನೋಡು ನೋಡುತ್ತಿದ್ದಂತೆ ಆ ಬರಹದ ಮೇಲೆ ಕೆಲವು ಚರ್ಚೆಗಳಾದವು.. ನನ್ನ ಇನ್ನೊಬ್ಬ ಹಿರಿಯ ಮಿತ್ರರಾದ Ganapathikl Ganapathi ಪುಸ್ತಕದಲ್ಲಿ ಐತಿಹಾಸಿಕ ಪ್ರಮಾದಗಳಿವೆ ಎಂದು ಬರೆದರು. ನನ್ನೊಳಗಿನ ಓದುಗ ಇನ್ನು ತಡಮಾಡದೇ ಪುಸ್ತಕವನ್ನು ಓದು ಎಂದು ಬಡಿದೆಬ್ಬಿಸಿದ. ಗೆಳೆಯ ಅರುಣ್ ಪ್ರಸಾದ್ ತಮ್ಮ ಮೊದಲ ಕಾದಂಬರಿ ' ಬೆಸ್ತರರಾಣಿ ಚಂಪಕ' ವನ್ನು ಓದಲೆಂದು ಬಹು ದಿನಗಳ ಹಿಂದೆಯೇ ಕೊಟ್ಟಿದ್ದರು. ಕಾರ್ಯ ಬಾಹುಳ್ಯದಿಂದ ಓದಲು ಆಗಿಯೇ ಇರಲಿಲ್ಲ. ಕೆಲವು ದಿನಗಳಿಂದ ಅನಾರೋಗ್ಯದ ನಿಮಿತ್ತ ರೆಸ್ಟ ಮಾಡಲೇ ಬೇಕಾದ ಅನಿವಾರ್ಯತೆ. ಟೇಬಲ್ಲಿನ ಮೇಲೆ ಇದ್ದ ಈ ಪುಸ್ತಕವನ್ನು ಓದಿ ಮುಗಿಸಿದೆ... ಓದಾದ ಬಳಿಕ ದುರಂತ ಅಂತ್ಯಕ್ಕೊಳಗಾದ ಕಥಾ ನಾಯಕಿ ಚಂಪಕಳ ಅಸಹಾಯಕ ಚಿತ್ರ ಮನಸ್ಸಿನಲ್ಲಿ ಉಳಿಯಿತು.. ಸುಂದರವಾಗಿ ರಂಗೋಲಿ ಬರೆಯುವ ಅವಳ ಕಲೆ ಕೆಳದಿ ಅರಸನ ಮನವನ್ನು ಸೆಳೆದು ಆಕೆಯನ್ನು ಓಲಿಸಿಕೊಂಡು ರಾಣಿಯನ್ನಾಗಿಸಿ ಕೊಳ್ಳುತ್ತಾನೆ.. ಆದರೆ ಆಗಿನ ಕಾಲಕ್ಕೆ ಸಮಾಜದ ಕೆಳವರ್ಗಕ್ಕೆ ಸೇರಿದ ಚಂಪಕಳು ಸಮಾಜದ ಅವಕೃಪೆಗೆ, ಅವಮಾನಗಳಿಗೆ ತತ್ತರಿಸಿ ತನ್ನದಲ್ಲದ ತಪ್ಪಿಗೆ ಪರಿತಪಿಸಿ ವಿಷಪ್ರ...