Skip to main content

Posts

ಸನ್ಯಾಸ ದೀಕ್ಷೆ ಎಂಬ ಕಠಿಣ ಮಾಗ೯ ಚಾಚು ತಪ್ಪದೆ ಪಾಲಿಸುವವರು ಭಾರತದಲ್ಲಿ ಜೈನ ಮುನಿಗಳು ಮಾತ್ರ

# ಕಲಿಯುಗದಲ್ಲಿ ನಿಜ ಸಂನ್ಯಾಸಿಗಳು ಜೈನ ಮುನಿಗಳು ಮಾತ್ರ#  ನನ್ನ ತಂದೆ ಕಾಲದಿಂದ ನಮ್ಮ ಸ್ಥಳ ಜೈನ ದಿಗಂಬರರಿಗೆ, ಮಾತಾಜಿಯವರಿಗೆ ಒಂದು ತ೦ಗುದಾಣ, ಈವರೆಗೆ 2006ರಿಂದ 20I9ರವರೆಗೆ ಎರಡು ಬಾರಿ ಶ್ರವಣಬೆಳಗೋಳದ ಗೊಮ್ಮಟೇಶ್ವರನಿಗೆ ಮಹಾಮಜ್ಜನ ನಡೆದಿದೆ (12 ವಷ೯ಕೊಮ್ಮೆ) ಇಲ್ಲಿವರೆಗೆ ನಮ್ಮಲ್ಲಿ ತಂಗಿದ ಜೈನ ಮುನಿ ಮತ್ತು ಮಾತೆಯರ ಸಂಖ್ಯೆ 1000ಕ್ಕೂ ಹೆಚ್ಚು.   ಜೈನ ಮುನಿ ಮಹಾರಾಜರ ಮತ್ತು ಮಾತೆಯರ ಸೇವೆ ಮಾಡಲು ಜೈನ ಸಮಾಜದ ಅನೇಕರು ಕಾತುರರಾಗಿರುತ್ತಾರೆ ಆದರೆ ಅವರು ಬರುವುದಿಲ್ಲ.  ಅದೇನೋ ಗೊತ್ತಿಲ್ಲ ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ (ಶ್ರೀ ಕೃಷ್ಣ ಸರಸ ಕನ್ವೆಷನ್ ಹಾಲ್, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)ದಲ್ಲಿ ಇವರುಗಳು ತಂಗುತ್ತಾರೆ ಮತ್ತು ನಮ್ಮನ್ನ ಆಶ್ರೀವದಿಸುತ್ತಾರೆ.   ಹುOಚದ ಹಿಂದಿನ ಸ್ವಾಮಿಗಳು ಸೂಚಿಸಿದ ಹೆಸರು ನನ್ನ ಲಾಡ್ಜ್ ಗೆ ಇಟ್ಟಿದ್ದೇನೆ ಅದು ಹೊಂಬುಜ ರೆಸಿಡೆನ್ಸಿ ಅಂತ ಅದಕೊಂದು ಹಿನ್ನೆಲೆ ಇದೆ ಕೇಳಿ, ದೂರದ ಗುಜರಾತಿನ ವಜ್ರ ವ್ಯಾಪಾರಿ ನಿಮ೯ಲ್ ಕುಮಾರ್ ಒಮ್ಮೆ ಹುಂಚದ ಹಿಂದಿನ ಸ್ವಾಮಿಗಳ ಬೇಟಿಗೆ ಬಂದವರು ನನ್ನ ಜೊತೆಯಲ್ಲಿ ಕರೆದೊಯ್ದಿದ್ದರು.  ಅಲ್ಲಿ ಸ್ವಾಮಿಗಳ ಬೇಟಿ ಆಯಿತು, ಹಿಂದಿನ ದಿನವಷ್ಟೆ ಅವರು ಅಮೇರಿಕಾ ದೇಶದ ಪ್ರವಚನ ಪ್ರವಾಸ ಮುಗಿಸಿ ಬಂದಿದ್ದರು, ನನ್ನ ಅವರ ಬೇಟಿ ಅದು ಮೊಟ್ಟ ಮೊದಲಿನದು, ನನ್ನ ಪರಿಚಯ ನಿಮ೯ಲ್ಕು...

ಸಾಗರ ಮತ್ತು ಹೊಸನಗರ ಎರೆಡೂ ತಾಲ್ಲೂಕಿನಲ್ಲಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಜನ ಜಾಗೃತಿಗಾಗಿ 2012ರಲ್ಲಿ ನಡೆಸಿದ ಎತ್ತಿನ ಗಾಡಿ ಯಾತ್ರೆ.

#ಸಾಗರ_ಮತ್ತು_ಹೊಸನಗರ_ತಾಲ್ಲೂಕಿನಾದ್ಯಂತ_2012ರಲ್ಲಿ_ನಡೆದ_ಗ್ರಾಮಗಳ_ಅಭಿವೃದ್ಧಿಗಾಗಿ_ಜನಜಾಗೃತಿಯ #ಎತ್ತಿನ_ಗಾಡಿ_ಯಾತ್ರೆ. ಸಾಗರ ತಾಲ್ಲೂಕಿನಾದ್ಯಂತ 13 ದಿನಗಳ ಪಾದಯಾತ್ರೆ (ಹಂದಿಗೋಡು ನಿಗೂಡ ಕಾಯಿಲೆ ಪರಿಹಾರ, ತುಮುರಿ ಸೇತುವೆ, ಜೋಗ್ ಜಲಪಾತ ಅಭಿವೃದ್ದಿ ಮತ್ತು ಶಿವಮೊಗ್ಗದಿಂದ ತಾಳಗುಪ್ಪ ವರೆಗೆ ಬ್ರಾಡ್ ಗೇಜ್ ರೈಲಿಗಾಗಿ) ನಡೆಸಿ ಹತ್ತು ವರ್ಷ ಆಗುವಾಗ ಇನ್ನೊಮ್ಮೆ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಎತ್ತಿನಗಾಡಿ ಯಾತ್ರೆ ನಡೆಸಿದ್ದು ಒಂದು ಅದ್ಬುತ ಅನುಭವ ನನ್ನದು.   ಕಾಗೋಡು ಹೋರಾಟದ ನೇತಾರರಾದ ಹೆಚ್.ಗಣಪತಿಯಪ್ಪರ ಆದೇಶದಂತೆ ಈ ಎತ್ತಿನಗಾಡಿ ಯಾತ್ರೆ ಆದರೂ ಅವರಿಗೆ ವಯೋ ಸಹಜ ಅನಾರೋಗ್ಯದಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ.   ಆದರೆ ಅವರ ಒಂದು ಕಂಡೀಷನ್ ಪಾಲಿಸಲೇ ಬೇಕಾಗಿತ್ತು ಅದೇನೆಂದರೆ ನಮ್ಮ ಗಾಡಿ ಯಾತ್ರೆಯಲ್ಲಿ ಯಾರೂ ಗಾದಿ  ಇತ್ಯಾದಿ ಸುಖಾಸಿನ ಹಾಕುವಂತಿಲ್ಲ ಕೇವಲ ಚಾಪೆ ಅಥವ ಕಂಬಳಿ ಹಾಸಿ ಕುಳಿತುಕೊಳ್ಳಲು ಮಾತ್ರ ಅನುಮತಿ.    ಅದರಂತೆ ನಮ್ಮ ಎತ್ತಿನ ಗಾಡಿ ಯಾತ್ರೆ ಆರು ದಿನಗಳಲ್ಲಿ ಸುಮಾರು 320 ಕಿ.ಮಿ. ಸಾಗರ ತಾಲ್ಲೂಕಿನ ಆಚಾಪುರ ಗ್ರಾ.ಪಂ.ನ ಮುರುಘಾ ಮಠದಿಂದ ಪ್ರಾರಂಭ ಆಗಿ ಯಡೇಹಳ್ಳಿ, ಆನಂದಪುರ೦, ಗೌತಮಪುರ, ತ್ಯಾಗತಿ೯ ಮತ್ತು ಹಿರೇಬಿಲಗುಂಜಿ ಗ್ರಾಮ ಪಂಚಾಯತ್ ಹಾದು ವೀರಾಪುರ ಮಠದಲ್ಲಿ ತಂಗುವುದು.  ಎರಡನೇ ದಿನ ಅಡ್ಡೇರಿ ಮಾರ್ಗವಾಗಿ ಕಾಸ್ಪಾಡಿ, ಉಳ್ಳೂರು, ಸಾ...

ಲಂಕೇಶರ ಮನೆಯ ಹಡೇವು ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದ

#ಶಿವಮೊಗ್ಗ_ಜಿಲ್ಲೆಯ_ಲಂಕೇಶರ_ಜನ್ಮದಿನ_ಇವತ್ತು .   #ಇವರ_ಮನೆಯ_ಜಾಗದಲ್ಲಿರುವ_ಈ_ಪುರಾತನ_ಹುಡೇವು_ಈಗ_ಇವರ_ತಮ್ಮನ_ಮಕ್ಕಳ_ಸುಪದಿ೯ಯಲ್ಲಿದೆ ಸುಂದರವಾದ ಮತ್ತು ಪುರಾತನವಾದ ಈ ಹುಡೇವು (ಹಗೇವುನಲ್ಲಿ ದವಸದಾನ್ಯ ಸಂರಕ್ಷಿಸಿದರೆ ಹುಡೇವುನಲ್ಲಿ ಊರ ಜನರ ಆಭರಣಗಳನ್ನು ಕಾವಲುಗಾರರು ಇದರಲ್ಲಿ ಸಂರಕ್ಷಿಸುತ್ತಿದ್ದರೆಂದು ಸ್ಥಳಿಯ ಜನರು ಹೇಳುತ್ತಾರೆ) ಬಗ್ಗೆ ಲಂಕೇಶರ ಯಾವುದೇ ಬರಹದಲ್ಲಿ ಓದಿದ ನೆನಪಿಲ್ಲ ಆದರೆ ಇದು ಈಗ ಲಂಕೇಶರ ಕುಟುಂಬದ ಆಸ್ತಿಯಲ್ಲಿದೆ.   ಇದರ ಬಗ್ಗೆ ನೋಡಿದವರು ತಿಳಿದವರು ಹೆಚ್ಚಿನ ಮಾಹಿತಿ ನೀಡಲು ವಿನಂತಿ.

ಬ್ಲಾಗ್ ಗಳಲ್ಲಿ ಲೇಖನ ಬರೆದರೆ ನಮ್ಮ ಲೇಖನಗಳು ದಾಖಲೆಗಳಾಗಿ ಚಿತ್ರ ಸಮೇತ ಉಳಿಯುತ್ತದೆ.

#ನನ್ನ_ಬ್ಲಾಗ್_ARUNPRASAD_HOMBUJARESIDENCYಗೆ_ಈಗ_ನಾಲ್ಕನೇ_ವರ್ಷ. #ಈವರೆಗೆ_518_ಲೇಖನಗಳಾಗಿದೆ.   ನನ್ನ 2012 ರ ಜನವರಿ ತಿಂಗಳಲ್ಲಿ ನಡೆಸಿದ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ #ಮಾಹಿತಿ_ಹಕ್ಕು ಮತ್ತು #ಲೋಕಾಯುಕ್ತ ಜನ ಜಾಗೃತಿಗಾಗಿ ನಡೆಸಿದ ಎತ್ತಿನಗಾಡಿ ಯಾತ್ರೆ ಪೋಟೋದ ಮೇಲೆ ಅನೇಕ ಮಾದರಿ ಶಿಕ್ಷಣ ಪ್ರಯೋಗ ಮಾಡುವ ಯುವ ಸಕಾ೯ರಿ ಶಿಕ್ಷಕರಾದ ಮಂಜುನಾಥ ಆರ್.ಸಿ. ನಮ್ಮ ಜನ ಜಾಗೃತಿ ಎತ್ತಿನಗಾಡಿ ಯಾತ್ರೆ ನಿಟ್ಟೂರಿನಲ್ಲಿ ಎದುರುಗೊಂಡಿದ್ದಾಗಿ ನೆನಪಿಸಿದಾಗ ನನ್ನ ಬ್ಲಾಗ್ ನಲ್ಲಿ ಈ ಎತ್ತಿನಗಾಡಿ ಯಾತ್ರೆ ಬಗ್ಗೆ ಬರೆದಿರಬೇಕೆಂಬ ನೆನಪಲ್ಲಿ 1- ಜನವರಿ -2017 ರಿಂದ ಪ್ರಾರಂಭಿಸಿದ ಬ್ಲಾಗ್ ಹುಡುಕಾಡಿದಾಗಲೇ ಗೊತ್ತಾಗಿದ್ದು ಈ ಎತ್ತಿನಗಾಡಿ ಯಾತ್ರೆ ಬಗ್ಗೆ ಬರೆದಿಲ್ಲ ಅಂತ.   ಆದರೆ ನನ್ನ ಬ್ಲಾಗ್ ಗೆ 4 ವರ್ಷ ಆಯಿತು ಮತ್ತು ನಾಟಿ ಶುಂಠಿ ಲೇಖನ ನನ್ನ ಬ್ಲಾಗ್ ನ 518 ನೇ ಲೇಖನ ಅಂತ ಗೊತ್ತಾಯಿತು.   ನಾನು ಪೇಸ್ ಬುಕ್ ನಲ್ಲಿ ಮತ್ತು ಕೆಲ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನ ನೋಡಿದ ಅನೇಕರು ಬ್ಲಾಗ್ ನಲ್ಲಿ ಬರೆದರೆ ಲೇಖನ ಸುರಕ್ಷಿತವಾಗಿ ಸೇವ್ ಆಗಿರುತ್ತದೆ ಬೇಕಾದಾಗ ನೋಡ ಬಹುದು ಮತ್ತು ಒಂದು ನೂರು ಲೇಖನ ಆದ ನಂತರ ಪುಸ್ತಕ ಮಾಡೋಣ ಅಂದಿದ್ದರಿಂದ ಈ ಬ್ಲಾಗ್ ಪ್ರಾರಂಬಿಸಿದ್ದೆ.   ವ್ಯಕ್ತಿ ಪರಿಚಯ, ಸಂದರ್ಶನ, ಪ್ರವಾಸಿ ಕೇಂದ್ರ, ಸ್ಥಳಿಯ ಆಚರಣೆ, ನಂಬಿಕೆಗಳು, ಪಶ್ಚಿಮ ಘಟ್ಟದ ಆಹಾರ, ತರಕಾ...

ಮಲೆನಾಡಿನ ಒಂದು ಕಾಲದ ಅತ್ಯಂತ ಖಾರದ ಜವಾರಿ ಶುಂಠಿ ಬೀಜ ರೈತರಿಗೆ ಲಭ್ಯವಿದೆ

#ಒಂದು_ಕಾಲದ_ಮಲೆನಾಡಿನ_ಜವಾರಿ_ಶುಂಠಿ #ಕಳೆದು_ಹೋಗಿದ್ದ_ತಳಿ_ಬೀಜ_ನೆರೆರಾಜ್ಯದಿಂದ_ಬಂದಿದೆ.  ಕೇರಳ ರಾಜ್ಯದ ಕೃಷಿಕರಿಂದ ರಾಜ್ಯಕ್ಕೆ ಪರಿಚಯಸಲ್ಪಟ್ಟ ರಗೋಡಿ ಮತ್ತು ಹಿಮಾಚಲ ಶುಂಠಿ ತಳಿಗಳಿಂದ ನಮ್ಮ ಭಾಗದ ಪುರಾತನ ದೇಸಿ ಶುಂಠಿ ಕ್ರಮೇಣ ನಾಪತ್ತೆ ಆಗಿಬಿಟ್ಟಿತ್ತು.   ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ತೀಕ್ಷ್ಣ  ಕ್ರಿಮಿನಾಶಕದ ಬಳಕೆಯಿಂದ ಹೆಚ್ಚು ಬೆಳೆ ಮತ್ತು ಹೆಚ್ಚು ಆದಾಯ ಈ ಹೊಸ ತಳಿಗಳನ್ನ ಜನಪ್ರಿಯಗೊಳಿಸಿತ್ತು.   ಹಸಿ ಶುಂಠಿ ನಿತ್ಯ ತರಕಾರಿ ಮಾರುಕಟ್ಟೆಗೆ ಹೋದರೆ, ಒಣಗಿಸಿ ಗಂದಕದ ಹೊಗೆ ಹಾಕುತ್ತಿದ್ದ ಒಣ ಶುಂಠಿ ಔಷದ ತಯಾರಿಕೆ, ಸಾಂಬಾರ್ ಪುಡಿಗಳಿಗೆ ಮತ್ತು ಸೌದಿ ದೇಶಗಳಿಗೆ ಹೆಚ್ಚು ಹೋಗುತ್ತಿತ್ತು.    ರಗೋಡಿ ಮತ್ತು ಹಿಮಾಚಲ ಶುಂಠಿಗಳಲ್ಲಿ ಶುಂಠಿಯ ಹೊರ ಭಾಗ ಮಾತ್ರ ಗಟ್ಟಿ, ಒಳ ತಿರಳು ಮೃದು ಮತ್ತು ಹಾಗೆಯೇ ತಿನ್ನಬಹುದು ಆದರೆ ನಮ್ಮ ನಾಟಿ ತಳಿ ಸಿಪ್ಪೆ ತೆಳು ಒಳ ಭಾಗದ ತಿರುಳು ನಾರು ಮತ್ತು ಬರಿ ಬಾಯಿಯಲ್ಲಿ ತಿನ್ನಲಾರದಷ್ಟು ಖಾರ.   ಈಗ ಪುನಃ ಹಳೆಯ ನಾಟಿ ತಳಿ (ಜವಾರಿ) ಗೆ ಮಾರುಕಟ್ಟೆಯಲ್ಲಿ ಬೆಲೆ ಬರುತ್ತಿದೆ, ಇದಕ್ಕೆ ರೋಗ ಕಡಿಮೆ ಆದ್ದರಿಂದ ಕ್ರಿಮಿನಾಶಕ ಬಳಕೆ ಬೇಕಾಗಿಲ್ಲ ಮತ್ತು ರಾಸಾಯನಿಕ ಗೊಬ್ಬರ ಇಲ್ಲದೆ ಹೆಚ್ಚು ಇಳುವರಿ ಸಾಧ್ಯವಿರುವುದರಿಂದ ಮಹಾರಾಷ್ಟ್ರ ಮತ್ತು ಗುಜರಾತಿನ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ...

ಅತ್ಯಂತ ಆಯುವೇ೯ದ ಔಷದ ಅಂಶ ಇರುವ ಈ ಬ್ಯಾಲದ ಹಣ್ಣು ಬಹು ಉಪಯೋಗಿ ಆದರೆ ಇದು ಮಲೆನಾಡಿನಲ್ಲಿ ಅಪರಿಚಿತವಾಗೇ ಇದೆ

#ಬ್ಯಾಲದ_ಹಣ್ಣು_ಏನಿದರ_ಗುಟ್ಟು ಬೇಲದ ಹಣ್ಣು, ಬೆಳವಲ ಹಣ್ಣು ಇಂಗ್ಲೀಷ್ ನಲ್ಲಿ ವುಡ್ ಆಪಲ್ ಎಂದು ಕರೆಯುವ ನಿಂಬೆ ಹಣ್ಣಿನ ಜಾತಿಯ ಬಿಲ್ಪ ಪತ್ರೆ ಹಣ್ಣಿನಂತೆ ಕಾಣುವ ವಿಟಮಿನ್ ಸಿ ಶ್ರೀಮಂತವಾದ ಬ್ಯಾಲದ ಹಣ್ಣು ಇವತ್ತು ಸವಿಯುವ ಅವಕಾಶ ಆಯಿತು .   ಮಾರುಕಟ್ಟೆಯಲ್ಲಿ ಇದನ್ನು ಇಷ್ಟು ವರ್ಷ ನೋಡಿದರು ಖರೀದಿಸಲು ಮನಸ್ಸೇ ಬಾರದಂತ ಇದರ ಬಾಹ್ಯ ರಚನೆ ಒಂದು ಕಾರಣ ಆದರೆ ಇನ್ನೊಂದು ಇದು ನಮ್ಮ ಬಾಗದಲ್ಲಿ ಬೆಳೆ ಮತ್ತು ಬಳಕೆ ಇಲ್ಲದ್ದು ಕಾರಣ.   ಗೆಳೆಯರೋವ೯ರು ನಿನ್ನೆ ಶಿವಮೊಗ್ಗದಿಂದ ತಂದು ಇದನ್ನು ಬಳಸಿ ನೋಡುವಂತೆ ಹೇಳಿದ್ದರಿಂದ ಇದರ ಸವಿರುಚಿ ಗೊತ್ತಾಯಿತು.    ಇದರಿಂದ ಪಾನಕ ಬೆಲ್ಲ, ಏಲಕ್ಕಿ ಮತ್ತು ಕಾಳು ಮೆಣಸು ಸೇರಿಸಿ ಇವತ್ತು ತಯಾರಿಸಿ ಕುಡಿದಾಯಿತು.   ಇದರಿಂದ ಬಪಿ೯,ತೊಕ್ಕು ಸಾರು ಮುಂತಾದದ್ದು ಕೂಡ ಸಾಧ್ಯವಂತೆ ಮುಂದಿನ ದಿನದಲ್ಲಿ ನೋಡಬೇಕು.   ದಕ್ಷಿಣ ಏಷ್ಯಾದಲ್ಲಿ ಮಾತ್ರ ಇರುವ ಈ ಹಣ್ಣು ರಾಜ್ಯದ ತುಮಕೂರಿನಲ್ಲಿ ಹೆಚ್ಚು ಬೆಳೆಯುತ್ತಾರಂತ ಮಾರಾಟಗಾರರು ಹೇಳುತ್ತಾರೆ.   ಒಂದು ಹಣ್ಣು ಒಡೆದರೆ ಮನೆ ತುಂಬಾ ಇದರ ವಿಶಿಷ್ಟ ಪರಿಮಳ ಕೂಡ ಉಂಟಾಗುತ್ತದೆ, ಆಯುರ್ವೇದದಲ್ಲಿ ಬಹು ಉಪಯೋಗಿ ಆಗಿರುವ ಇದರ ಔಷದ ಗುಣ ತಿಳಿದ ಮೇಲೆ ಬ್ಯಾಲದ ಹಣ್ಣಿನ ಮೇಲೆ ಆಸಕ್ತಿ ಉಂಟಾಗಿದೆ.

ಸಾಗರ ಜಂಬಗಾರು ಹೆಸರಿನ ಸಾಗರ ರೈಲು ನಿಲ್ದಾಣ ಡಾಕ್ಟರ್ ರಾಮ ಮನೋಹರ ಲೋಹಿಯ ರೈಲು ನಿಲ್ದಾಣ ಎಂದು ಮರು ನಾಮಕರಣ ಮಾಡಲು ಭಾರತದ ಉಪ ಪ್ರಧಾನಿ ಆಗಿದ್ದ ಲಾಲ್ ಕೃಷ್ಣ ಅಡ್ವಾನಿಯವರು ಹಸಿರು ನಿಶಾನೆ ತೋರಿಸಿ 21 ವರ್ಷ ಆದರೂ ರೈಲ್ವೆ ಇಲಾಖೆ ಕ್ರಮ ಕೈಗೊಳ್ಳದಿರುವುದು ನಿರಾಶೆ ಉಂಟು ಮಾಡಿದೆ

#ಶಿವಮೊಗ್ಗ_ಜಿಲ್ಲಾ_ಸಂಸದ_ರಾಘವೇಂದ್ರರಿಗೆ #ಮತ್ತು_ಸಾಗರದ_ಶಾಸಕರಾದ_ಹರತಾಳು_ಹಾಲಪ್ಪರಿಗೆ_ಮನವಿ 🙏🙏🙏🙏🙏🙏🙏🙏🙏🙏🙏🙏🙏🙏🙏  ಇತ್ತೀಚಿಗೆ ತಾವು ಹೊಸನಗರ ತಾಲ್ಲೂಕಿನ ಅರಸಾಳು ರೈಲ್ ನಿಲ್ದಾಣಕ್ಕೆ ಶಂಕರ್ ನಾಗ್ ರು ಮಾಲ್ಗುಡಿ ಡೇಸ್ ಸಿರೀಯಲ್ ಶೂಟಿಂಗ್ ಮಾಡಿದ ನೆನಪಿಗಾಗಿ ಮಾಲ್ಗುಡಿ ರೈಲು ನಿಲ್ದಾಣವಾಗಿ ಮರುನಾಮಕರಣ ಮಾಡುವುದಾಗಿ ತಿಳಿಸಿದ್ದೀರಿ ಸ್ವಾಗತ.  ಅದಕ್ಕಿ೦ತ ಮೊದಲು ಅಥವ ಅದರ ಜೊತೆ ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ ಆಗಿನ ಉಪ ಪ್ರದಾನ ಮಂತ್ರಿಯಾದ ಶ್ರೀ ಲಾಲ್ ಕೃಷ್ಣ ಅಡ್ವಾನಿಯವರಿಂದ ಅನುಮೋದಿಸಲ್ಪಟ್ಟ ಡಾII ರಾಮ್ ಮನೋಹರ್ ಲೋಹಿಯಾ ರೈಲು ನಿಲ್ದಾಣ ಕಾಯ೯ಕ್ರಮ ಕೂಡ ನೆರವೇರಿಸಲು ಒತ್ತಾಯಿಸುತ್ತೇನೆ.   ಸಾಗರ ಜಂಬಗಾರು ರೈಲು ನಿಲ್ದಾಣದ ಹೆಸರನ್ನ ಹೆಸರಾಂತ ಸಮಾಜವಾದಿ ಡಾII ರಾಮ ಮನೋಹರ ಲೋಹಿಯಾ ರೈಲು ನಿಲ್ದಾಣ ಎಂದು ಮರು ನಾಮಕರಣಕ್ಕಾಗಿ 2000ನೇ ಇಸವಿಯಿ೦ದ ಪ್ರಯತ್ನಿಸುತ್ತಿದ್ದು ಇದಕ್ಕೆ ಆಗಿನ ಉಪ ಪ್ರದಾನಿ ಲಾಲ್ ಕೃಷ್ಣ ಅಡ್ವಾನಿಯವರಿಗೆ ಮಾಡಿದ ಮನವಿ ಕನಾ೯ಟಕ ಸಕಾ೯ರಕ್ಕೆ, ಅಲ್ಲಿಂದ ಶಿವಮೊಗ್ಗ ಜಿಲ್ಲಾ ಆಡಳಿತಕ್ಕೆ ಅಲ್ಲಿ೦ದ ಸಾಗರ ಸಾಗರ ಪುರಸಭೆಗೆ ಅನುಮೋದನೆಗೆ ಬಂದು ಅನುಮೋದನೆ ಪಡೆದು ಪುನಃ  ಉಪ ಪ್ರದಾನಿಗಳಿಂದ ಸಂಬಂದಪಟ್ಟ ಇಲಾಖೆಗೆ ಸಾಗರ ರೈಲು ನಿಲ್ದಾಣದ ಹಾಲಿ ಹೆಸರು ಬದಲಿಸಿ ಡಾII ರಾಮಮನೋಹರ ಲೋಹಿಯ ಎಂದು ಪುನರ್ ನಾಮಕರಣ ಮಾಡಬಹುದೆಂದು ಸಂಬಂದಪಟ್ಟ ...