Skip to main content

Posts

ಇರುವಕಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಆದ ಕಥೆ .

  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಇರುವಕಿ ಒಂದು ಸಣ್ಣ ಗ್ರಾಮ, ಇದು ಸಾಗರ ತಾಲ್ಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯತ್ ಗೆ  ಸೇರಿದೆ.    ಇಲ್ಲಿ 1993ರಲ್ಲಿ ಸುಮಾರು 60 ಕುಂಬಾರರ ಕುಟುಂಬ ಇತ್ತು ಅವರಿಗೆಲ್ಲ ಸಾಗುವಳಿ ಮಾಡಿದ ಜಮೀನಿಗೆ ಹಕ್ಕು ಪತ್ರ ಇರಲಿಲ್ಲ, ಇವರುಗಳು ಅಲೆಮಾರಿಗಳ0ತೆ ಆನಂದಪುರದ  ಜೇಡಿಸರ ನಂತರ ಹೆಬೋಡಿ, ಕೆಂಜಿಗಾಪುರದ ಕುಂಬಾರಗುಂಡಿ ನ೦ತರ ಈ ಇರುವಕ್ಕೆಗೆ ಬಂದು ನೆಲೆಸಿದ ಇತಿಹಾಸ ಇವರದ್ದು.    1993ರಲ್ಲಿ ಇವರಿಗೆಲ್ಲ ಬಗರ್ ಹುಕುಂ ಹಕ್ಕು ಪತ್ರ ಸಿಕ್ಕಿತು.      ಕನಾ೯ಟಕ ರಾಜ್ಯದಲ್ಲೆ ಮೊದಲ ಬಗರ್ ಹುಕುಂ ಪಡೆದ ಗ್ರಾಮ ಪಂಚಾಯತ್ ಯಡೇಹಳ್ಳಿ, ಆಗೆಲ್ಲ ಕಾನೂನು ಜಟಿಲವಾಗಿತ್ತು ಹಣ ಪಾವತಿ ಮಾಡದೆ ಹಕ್ಕು ಪತ್ರ ಸಿಗುತ್ತಿರಲಿಲ್ಲ.    ರೈತ ಸಂಘಷ೯ ಸಮಿತಿ ನೇತೃತ್ವದಲ್ಲಿ ಸಾಗರದ AC ಕಛೇರಿ ಎದುರು 43 ದಿನಗಳ ಕಾಲ ನಡೆದ 1984 ರಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ 20ಕ್ಕೂ ಹೆಚ್ಚು ದಿನ ಭಾಗವಹಿಸಿದವರು ಈ ಹೋಬಳಿಯವರೆ.    ಸನ್ಮಾನ್ಯ ಬೈರೇಗೌಡರು ಕೃಷಿ ಸಚಿವರಾಗಿದ್ದಾಗ ಕೃಷಿ ಇಲಾಖೆಯ ಅಂಗ ಸಂಸ್ಥೆ ಭೂಸಂರಕ್ಷಣಾ ಇಲಾಖೆಯಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ಹಗರಣ ಬಯಲಿಗೆ ಬಂದದ್ದೇ ಈ ಗ್ರಾಮ ಪಂಚಾಯಿತಿ ಇಂದ, ಅವತ್ತು 7 ಜನ ಕೃಷಿ ಅಧಿಕಾರಿಿಗಳು ಜೈಲಿಗೆ ಹೋಗಿದ್ದು ಇತಿಹಾಸ.    ನೂತನ ವ...

ಹಿರೇಬಾಸ್ಕಾರ ಡ್ಯಾಮ್ ಲಿಂಗನಮಕ್ಕಿ ಡ್ಯಾ೦ನಿ೦ದ ಶರಾವತಿ ನದಿಯಲ್ಲಿ ಮುಳುಗಿದ ಕಥೆ

#ಇದು ಸಾಗರ ತಾಲ್ಲೂಕಿನ ಶ್ರೀ ಗಜಾನನ ಶಮಾ೯ರ ಪೇಸ್‌ಬುಕ್ ಪೋಸ್ಟ್#      ಶರಾವತಿ ನದಿ ನೀರು ಮಳೆ ಇಲ್ಲದೆ ಬತ್ತಿದಾಗ ಕಾಣುವ ಲಿಂಗನಮಕ್ಕಿ ಪೂವ೯ದ ಜಲ ವಿದ್ಯುತ್ ಯೋಜನೆ ಆಗಿದ್ದ ಹಿರೇಬಾಸ್ಕರ ಬಗ್ಗೆ ಅತ್ಯುತ್ತಮ ಮಾಹಿತಿ ಇದಾಗಿದೆ, ಅಲ್ಲಿಗೆ ತಲುಪುವುದು ದುಸ್ತರ ಆದರು ಅಲ್ಲಿಗೆ ಹೋಗಿ ಅಮೂಲ್ಯ ಚಿತ್ರ ತೆಗೆದಿದ್ದಾರೆ ಮುಂದಿನ ಪೀಳಿಗೆಗಾಗಿ ಈ ಲೇಖನ ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದ್ದೇನೆ.     # ಅರ್ಧ ಶತಮಾನದಿಂದ  ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿರುವ ಹಿರೇಭಾಸ್ಕರ ಆಣೆಕಟ್ಟು.#                              ಅದು ೧೯೩೭-೩೮ ರ ಅವಧಿ. ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿಯವರು ಮಹಾಮಾತ್ಯ ಮುತ್ಸದ್ದಿ  ಮಿರ್ಜಾ ಇಸ್ಮಾಯಿಲ್ಲರ ದಿವಾನಗಿರಿಯಲ್ಲಿ ನಾಡು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ಕಾಲ. ಶಿವನಸಮುದ್ರದ ವಿದ್ಯುತ್ ಸ್ಥಾವರದ ಎಲ್ಲ ವಿಸ್ತರಣೆ ಮುಗಿದು ಅದರ ಸಾಮರ್ಥ್ಯ ೪೫ ಮೆಗಾವಾಟ್ಟಿಗೆ ಮುಟ್ಟುವ ಹಂತ.ಶಿಂಷಾದಲ್ಲಿ ೧೭.೨ ಮೆಗಾವಾಟ್ ಸಾಮರ್ಥ್ಯದ ಹೊಸ ವಿದ್ಯುದಾಗರ ಕಾರ್ಯಾರಂಭಕ್ಕೆ ಅಣಿಗೊಳ್ಳುತ್ತಿದ್ದ ಸಂದರ್ಭ. ಆದರೂ ಮೈಸೂರು ರಾಜ್ಯಕ್ಕೆ ವಿದ್ಯುತ್ ಕೊರತೆಯ ಭಯ.ಮಹಾರಾಜರು ನಿವ...

#ಗೋರಕ್ ಪುರದ ಬಾರಾಪ೦ತದ ಸಂತ ಸೋಮನಾಥ ಪೀರ್ ಬಾವೋಜಿ#

       ಸೋಮನಾಥ ಪೀರ್ ಬಾವೊಜಿ ಮೂಲ ಗ್ವಾಲಿಯರ್ (ಮಧ್ಯ ಪ್ರದೇಶ) ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥದ ಮಠದಲ್ಲಿ ಮಠಾದೀ ಶರಾಗಿದ್ದರು.   ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ  ಉತ್ತರ ಪ್ರದೇಶದ ಗೋರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ.     ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕುಂಬಮೇಳದ ನಂತರ ಹೊರಡುವ ಬಾರಾ ಪಂಥ ಜೋ೦ಡಿ ಪಾದಯಾತ್ರೆ ಇಲ್ಲಿ ಬಂದು ತಂಗುತ್ತದೆ, ಆಗ ಮಹಾಂತರ ಸಮಿತಿ ಕಳೆದ 12 ವಷ೯ದ ಆಡಳಿತ, ಪೂಜೆ ಇತ್ಯಾದಿ ತಮ್ಮದೆ ಆದ ಮಾನದಂಡದಲ್ಲಿ ಪರಿಶೀಲನೆ ಮಾಡುತ್ತಾರೆ ಆದರಲ್ಲಿ ತೃಪ್ತಿ ಆದರೆ ಹಾಲಿ ಇರುವ ಸ್ವಾಮೀಜಿ ಮುಂದುವರಿಸುತ್ತಾರೆ ಆಗದಿದ್ದರೆ ತಮ್ಮ ಜೊತೆ ಬಂದ ಯೋಗಿ ಒಬ್ಬರನ್ನ ಅಲ್ಲಿಗೆ ನೇಮಿಸಿ ಮೊದಲಿದ್ದವರನ್ನ ತಮ್ಮ ಜೊತೆ ಮಂಗಳೂರಿನ ಕದ್ರಿ ಮಠಕ್ಕೆ ಕರೆದೊಯ್ತಾರೆ.     ಬಹುಶಃ 1978ರಲ್ಲಿ ಬಂದ ಜೋ೦ಡಿಯಾತ್ರೆಯಲ್ಲಿ ಶ್ರೀ ಸೋಮನಾಥಜಿ ಬಂದವರು, ನನ್ನ ಅವರ ಸಂಪಕ೯ 1997ರ ನಂತರದ್ದು, ಶಿವಮೊಗ್ಗ ಜಿಲ್ಲೆಯ ಕುಣುಬಿ ಎಂಬ  ಸಣ್ಣ ಗುಡ್ಡಗಾಡು ಜನಾಂಗದ ಸಂಘಟನೆ, ಅಭಿವೃದ್ಧಿಗಾಗಿ ಓಡಾಡುವಾಗ ಅವರಲ್ಲಿ ಇವರ ಬಗ್ಗೆ, ನಾಥಪಂಥತ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತು.       ನನ್ನ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

ಶಿವಮೊಗ್ಗದ ಅಚ್ಚುತ ರಾವ್ ಲೇಔಟ್ ಕಥೆ

#ಇದು ಶಿವಮೊಗ್ಗದ 1961ರ ರಿಯಲ್ ಎಸ್ಟೇಟ್ ಕಥೆ.#    ಇವರು ಶ್ರೀನಿವಾಸ್ ರಾವ್ ವಯಸ್ಸು 74 ವಷ೯ ಇವರಿಗೆ ಕಣ್ಣಿನ ತೊಂದರೆ ಹುಟ್ಟಿನಿಂದ ಇದೆ, ಇವರ ತಾಯಿ ಇದ್ದಾರೆ 96 ವಷ೯ ಅವರ ಹೆಸರು ಶ್ರೀಮತಿ ಅನ್ನಪೂಣ೯ ಅವರ ಪತಿ ದಿವ...

ಬೆಂಕಿ ಚೆಂಡಿನ೦ತ ಪೂಯಾ೯ ನಾಯಕ್

ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಪೂರ್ಯಾ ನಾಯಕರು 1995 ರಿಂದ 2000 ಅವದಿಯಲ್ಲಿ ನನ್ನ ಜೊತೆಗಾರರು ಆದರೆ ಅವದಿಗೂ ಮುನ್ನ ಅವರು ದೆಹಲಿಯಲ್ಲಿ ಇಹಲೋಕ ತ್ಯಜಿಸಿದರು, ಅವರು ದೆಹಲಿಗೆ ಹೋಗಿದ್ದು ಮತ್ತು ಅವರ ಸಾವ...

ಕಾಡಿನ ಮೂಲೆಯಲ್ಲಿರುವ ಮೂಲೆಗದ್ದೆ ಸ್ವಾಮಿಗಳು .

#ಜನ ಇವರನ್ನ ಮೂಲೆ ಗದ್ದೆ ಸ್ವಾಮಿಗಳು ಅಂತ ಕರೀತಾರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಎಣ್ಣಿ ಹೊಳೆ ಮತ್ತು ಶರಾವತಿ ನದಿ ಸಂಗಮದಲ್ಲಿ ಇವರ ಆಶ್ರಮವಿದೆ.#     ವಿಶೇಷ ಎಂದರೆ ಇವರು ಪ್ರಚಾರದಿಂದ ದೂರ, ...