ಇವತ್ತು ಎಲ್ಲಾ ಸುದ್ದಿ ಮಾಧ್ಯಮದಲ್ಲಿ ಹೆಬ್ರಿ ಸಮೀಪದ ಪೋಲಿಸ್ ಎನ್ ಕೌಂಟರ್ ನಲ್ಲಿ ಹತರಾದ ನಕ್ಸಲ್ ಹೋರಾಟಗಾರ ವಿಕ್ರಂ ಗೌಡರ ಸುದ್ದಿ ತುಂಬಿದೆ ಈ ನಕ್ಸಲ್ ಚಟುವಟಿಕೆ ಪ್ರಾರಂಭ ಇತ್ಯಾದಿ ಮಾಹಿತಿ ಗೂಗಲ್ ನಲ್ಲಿ (google) ಹೆಕ್ಕಿ ತೆಗೆದಿದ್ದು ಇಲ್ಲಿದೆ ಓದಿ #karnataka #ನಕ್ಸಲೈಟ್ #cmsiddaramaiah #ಕರ್ನಾಟಕದಲ್ಲಿ_ನಕ್ಸಲ್_ಚಟುವಟಿಕೆ #naxalbaryvillage #police #shivamogga #udupi #ಕರ್ನಾಟಕದಲ್ಲಿ_ನಕ್ಸಲ್_ಚಟುವಟಿಕೆ ಕರ್ನಾಟಕ ರಾಜ್ಯದಲ್ಲಿ ಈ ಚಳವಳಿ ಬೆಳೆಸಲು ಕಾರಣರಾದ ಪಾರ್ವತಿ, ಹಾಜಿಮಾ ಅವರಿಗೂ ರಕ್ತರಂಜಿತವಾಗಿದ್ದ ಆ ದಿನಗಳಲ್ಲಿ ಶಿವಲಿಂಗು, ಉಮೇಶ್, ಅಜಿತ್, ಚನ್ನಪ್ಪ, ಮನೋಹರ್, ದಿನಕರ್, ಆನಂದ್... ಹೀಗೆ ಸಾಲು, ಸಾಲು ನಕ್ಸಲೀಯರು ಪೊಲೀಸರ ಗುಂಡಿಗೆ ಬಲಿಯಾದರು. ಪ್ರತೀಕಾರದ ಹೋರಾಟಗಳಿಂದ ನಕ್ಸಲೀಯರೂ ಸದ್ದು ಮಾಡಿದರು. ಪೊಲೀಸರಿಗೆ ಮಾಹಿತಿಕೊಟ್ಟ ಶೇಷಯ್ಯ ಎಂಬುವರನ್ನು ಅವರ ಕುಟುಂಬದ ಸದಸ್ಯರ ಎದುರೇ ಹತ್ಯೆ ಮಾಡಿದರು. ನಂತರದ ದಿನಗಳಲ್ಲಿ ಶಸ್ತ್ರ ಕೆಳಗಿಟ್ಟು ಹಲವರು ಮುಖ್ಯವಾಹಿನಿಗೆ ಬಂದರೆ, ಉಳಿದವರು ಬೇರೆ ನೆಲೆಗಳನ್ನು ಕಂಡುಕೊಂಡರು. ಡಿಸೆಂಬರ್ 8, 2014 ರಂದು ಕರ್ನಾಟಕದ ಚಿಕ್ಕಮಗಳೂರುನಲ್ಲಿ ಎರಡು ಪ್ರಮುಖ ನಕ್ಸಲ್ ನಾಯಕರು ಸಿರಿಮಾನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಚಳವಳಿಗಳ ಮುಖ್ಯವಾಹಿನಿಗೆ ಮರಳಿ ಬಂದರು. #ಕ...