Skip to main content

Posts

Blog number 1612.ಆರ್ಥಿಕ ತಜ್ಞರು ಸಮೀಕ್ಷೆ ಮಾಡಬೇಕಾದ ಸಾವಿರ ವರ್ಷಗಳ ಇತಿಹಾಸ ಇರುವ ಆಚಾಪುರ.

https://youtu.be/d5juNKmL-RI #ನಮ್ಮ_ಊರ_ಸಮೀಪದ_ಆಚಾಪುರ. #ಅವತ್ತು_ಇಡೀ_ಊರಿಗೆ_ಬಡತನ #ಇವತ್ತು_ಕೋಟ್ಯಾದೀಶರ_ಊರು #ಈ_ಊರಿನ_ಮೂಲ_ಹೆಸರು_ಮಾಚರಾಜಪುರ  #ಈ_ಪ್ರದೇಶದಲ್ಲಿ_ಮುಸ್ಲಿಂ_ಮತ್ತು_ಪರಿಶಿಷ್ಟ_ಜಾತಿ_ಚೆಲುವಾದಿ_ಜನಾಂಗದವರು_ಬಹುಸಂಖ್ಯಾತರು. #ಬುಕೇಟ್_ವ್ಯಾಪಾರಿಗಳು_ಇದ್ದರು. #ಬುಕೇಟ್_ಎಂಬ_ಹೆಸರು_ಯಾಕೆ_ಬಂತು_ಗೊತ್ತಿಲ್ಲ. #ಜಿಲ್ಲಾ_ಪಂಚಾಯತ_ಸದಸ್ಯನಾಗಿ_ನಾನು_ ಆಚಾಪುರದ_ರಸ್ತೆ_ಮೊದಲ_ಬಾರಿ_1995ರಲ್ಲಿ_ಡಾ೦ಬರೀಕರಣ_ಮಾಡಿಸಿದ್ದೆ   ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಆನಂದಪುರಂ ಸಮೀಪದ ಆಚಾಪುರ ಎಂಬ ಊರು ನಮ್ಮ ಊರಿನ ಸಮೀಪದಲ್ಲಿದೆ.    ಈ ಊರಿನ ತೀರ್ಥದ ದೇವಸ್ಥಾನದಲ್ಲಿ 25- ಡಿಸೆಂಬರ್ -1079ರಲ್ಲಿ ಮಾಚರಾಜನು  ಪ್ರತಿಷ್ಟಾಪಿಸಿದ ಭೂದಾನದ ಶಿಲಾಶಾಸನವಿದೆ ಆಗ ಈ ಊರಿನ ಹೆಸರು ಮಾಚರಾಜಪುರ ಈಗ ಆಚಾಪುರ ಆಗಿದೆ.   ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಚಾಪುರ ಶಾಸನದ ಹೆಚ್ಚಿನ ಮಾಹಿತಿ ಓದಬಹುದು https://arunprasadhombuja.blogspot.com/2022/01/71-25-1079.html   ಈಗ ಆಚಾಪುರ ಮತ್ತು ಅದರ ಸುತ್ತಲಿನ ಇಸ್ಲಾಂಪುರ - ಹೊಳ್ಳೂರು - ಮುರುಘಾಮಠ - ಕೋಡಿಮಠ ಎಂಬ ಊರಲ್ಲಿ ಅಡಿಕೆ ಬೆಳೆಗಾರರು, ರಬ್ಬರ್ ಬೆಳೆಗಾರರು, ಶುಂಠಿ ಬೆಳೆಗಾರರು, ಜಂಬಿಟ್ಟಿಗೆ ಕಲ್ಲು ಕೋರೆ ಮಾಲಿಕರು, ಲಾರಿ ಮಾಲಿಕರು ಮತ್ತು ಶುಂಠಿ ವ್ಯಾಪಾರಸ್ಥರು ಹೆಚ್ಚು ಇದ್ದಾರೆ...

Blog number 1611. ಕುಮಾರ್ ಕುಂಠಿ ಕಾನ್ ಮಠ ಅವರ ಕೃತಜ್ಞತೆಗಳ ಪೋಸ್ಟ್

Thank you Arunanna..Nimmantha sahridayare shri rama kathamanjari abhiyanavannu sakaragolisuvudu...shri ramachandramana sampoorna ashrivada nimma hagu nimma kutumbavannu rakshisalendu hrudaya poorvakavaagi ashisutteve.

Blog number 1610. ಗುಜ್ ಹಲಸು ಪ್ರೈ

#ಗುಜ್_ಹಲಸು_ಮತ್ತು_ಅದರ_ತವಾ_ಫ್ರೈ    ಗುಜ್ ಹಲಸು, ಜೀವ್ ಹಲಸು, ಜೀ ಗುಜ್, ಬೇರ್ ಹಲಸು, ನೀರ್ ಹಲಸು ಮತ್ತು ದೀವ್ ಹಲಸು ಅಂತ ವಿವಿದ ನಾಮಾವಳಿಯ ಈ ಹಲಸಿನಿಂದ ವಿವಿದ ಖಾದ್ಯ ಮಾಡುತ್ತಾರೆ.       ನನಗೆ ಇದು ತುಂಬಾ ಇಷ್ಟ ಪ್ರತಿ ವರ್ಷ ಶಿವಮೊಗ್ಗದಿಂದ ಪ್ರಕೃತಿ ಮುದ್ರಣದ ಪಿ.ಪುಟ್ಟಯ್ಯ ಅವರ ಮನೆಯ ಮರದಿಂದ ತೆಗೆದದ್ದು ಕಳಿಸಿ ಕೊಡುತ್ತಾರೆ.      ಹಾಗೆ ನಮ್ಮ ಊರಿನ ಮಾರುತಿ ಇಂಡಸ್ಟ್ರೀಸ್ ಮಾಲಿಕರಾದ ಪೂವಪ್ಪನವರು ಪ್ರತಿ ವಷ೯ ಅವರು ಬೆಳೆಸಿದ ಮರದಿಂದ ಕಿತ್ತು ಕಳಿಸುತ್ತಾರೆ.        ಈ ಬಾರಿ ಲಾಕ್ ಡೌನ್ ನಲ್ಲಿ ಇದರಿಂದ ಅನೇಕ ರೀತಿ ಖಾದ್ಯ ತಯಾರಿಸಿ ತಿಂದರೂ ಹೆಚ್ಚು ನೆನಪಲ್ಲಿ ಉಳಿಯುವುದು ಇದರ ಸ್ಲೈಸ್ ಕಟ್ ಮಾಡಿ ಮೆಣಸಿನ ಪುಡಿ, ಹುಣಿಸೇ ಹುಳಿ ಮತ್ತು ಉಪ್ಪಿನ ಮಸಾಲೆಯಲ್ಲಿ ಹಚ್ಚಿಟ್ಟು ನಂತರ ತವಾದಲ್ಲಿ ಹುರಿದರೆ ಅಂಜಲ್ ಮೀನಿನ ಫ್ರೈ ಮೀರಿಸುವಂತ ಖಾದ್ಯ ತಯಾರಾಗುತ್ತದೆ  ಇದು ಈ ಜೀ ಹಲಸಿನ ವಿಶೇಷತೆ.

Blog number 1609. ದಿನಪತ್ರಿಕೆಗಳ ಜೀವಾಳ ಸುದ್ದಿ ಅಲ್ಲ ಜಾಹಿರಾತು ಮಾತ್ರ

# ಕನ್ನಡ ದಿನಪತ್ರಿಕೆ ಓದುಗರನ್ನ ಬಲವಂತವಾಗಿ ಜಾಹಿರಾತು ನೋಡುವಂತೆ ಮಾಡುತ್ತಿರುವ ಕೆಟ್ಟ ಸಂಸ್ಕೃತಿಗೆ ದಿಕ್ಕಾರ#         ಟಿ.ವಿ. ಸೀರಿಯಲ್ ಜಾಹೀರಾತನ್ನ ಮುಖ ಪುಟದಲ್ಲಿ ಅಚ್ಚಿಸಿ ನಿತ್ಯದ ಪ್ರಮುಖ ಸುದ್ದಿಗಳನ್ನ 3ನೇ ಪುಟಕ್ಕೆ ಕಳಿಸಿ ಓದುಗರ ಹಾದಿ ತಪ್ಪಿಸುತ್ತಿದ್ದಾರೆ.

Blog number 1608. ಚಿಪ್ಪಳಿ ಗೋಪಾಲ ಕೃಷ್ಣರಾಯರ ಸ್ಮರಣೆ

ಶ್ರದ್ದಾ೦ಜಲಿಗಳು #ಸಜ್ಜನ_ಸಂಪನ್ನ_ಮರೆಯಲಾರದ_ವ್ಯಕ್ತಿತ್ವದ_ಚಿಪ್ಪಳಿ_ಗೋಪಾಲಕೃಷ್ಣರಾವ್      1991ರಲ್ಲಿ ಆನಂದಪುರಂ ಕನ್ನಡ ಯುವಕ ಸಂಘ ಡಾಕ್ಟರ್ ಮೋದಿಯವರ ಉಚಿತ ಕಣ್ಣಿನ ಚಿಕಿತ್ಸಾ ಶಿಭಿರ ಹಮ್ಮಿಕೊಂಡಿತ್ತು ಅದಕ್ಕಾಗಿ ಪೂರ್ವ ತಯಾರಿ ಸಭೆಯಲ್ಲಿ ಮುಂಬಾಳಿನ ಗೋಕುಲ್ ಪಾರಂನ ಪಾದರ್ ಜೋಸ್ ಅಧ್ಯಕ್ಷರನ್ನಾಗಿ ನನ್ನನ್ನ ಉಪಾಧ್ಯಕ್ಷ ನಾಗಿ ಆಯ್ಕೆ ಮಾಡಿ ಶಿಬಿರದ ಯಶಸ್ವಿಗೆ ಬೇಕಾದ ಸಂಪನ್ಮೂಲ ಕ್ರೂಡಿಕರಿಸುವ ಜವಾಬ್ದಾರಿ ಕೊಟ್ಟಿದ್ದರು.    ಆಗೆಲ್ಲ ಕಣ್ಣಿನ ಪೊರೆ ಬಂದು ಹತ್ತು ಇಪ್ಪತ್ತು ವರ್ಷ ಆದವರು ಇರುತ್ತಿದ್ದರು ಅವರು ಅವರ ಜೊತೆ ಇಬ್ಬರು ಬರುತ್ತಿದ್ದರು ಅವರಿಗೆ ಊಟ ವಸತಿ ವ್ಯವಸ್ಥೆ ಸುಮಾರು 7 ದಿನ ಮಾಡಬೇಕಾಗಿತ್ತು ಮತ್ತು ಮೋದಿಯವರ ಕಣ್ಣಿನ ಆಪರೇಷನ್ ಅಂದರೆ ತಮ್ಮ ಕಣ್ಣು ಸೇಪ್ ಎನ್ನುವಷ್ಟು ನಂಬಿಕೆ ಆದ್ದರಿಂದ ಶಿಬಿರಕ್ಕೆ ಪರೀಕ್ಷಿಸಿಕೊಳ್ಳಲು ಬರುವವರು ಎರೆಡು ಸಾವಿರದ ಹತ್ತಿರ ಇರುತ್ತಿದ್ದರು.    ಇವರಲ್ಲಿ ಪೊರೆ ತೆಗೆಯಬಹುದಾದ ಸುಮಾರು 300 ರಿಂದ 400 ಜನರಿಗೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡುತ್ತಿದ್ದರು ಸುಮಾರು ಸಾವಿರ ಜನರಿಗೆ ಉಟೋಪಚಾರ ಅನಿವಾಯ೯.   ಈ ನೇತ್ರ ಚಿಕಿತ್ಸೆಗಾಗಿ ದಾನಿಗಳನ್ನ ಸಂಪಕಿ೯ಸುವ ಸಂದಭ೯ದಲ್ಲಿ ಪಾದರ್ ಜೋಸ್ ನನ್ನನ್ನ ಅನೇಕ ಶ್ರೀಮಂತರ ಹತ್ತಿರ ಕರೆದೊಯ್ದಿದ್ದರು ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿರಲಿಲ್ಲ ಹಾಗಾಗಿ ನನಗೆ ಹೆಚ್ಚಿನವರ ಪರಿಚಯ ಇ...

Blog number 1607. ಸಾಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುಮೂರ್ತಿ ಈಗ ಶಿಕಾರಿಪುರದ ಬಿಜೆಪಿ ನಾಯಕರು.

#ಮಲೆನಾಡು_ಪ್ರದೇಶ_ಅಭಿವೃದ್ದಿ_ಮಂಡಳಿ_ಅಧ್ಯಕ್ಷರಾಗಿ_ಸಾಗರದ_ಗುರುಮೂತಿ೯_ಆಯ್ಕೆ_ಅಭಿನಂದನೀಯ.     ಸಾಗರದ ಗುರು ಮೂತಿ೯ ಅಂತ ಸಾಗರದವರು ಕರೆದರೆ ಶಿಕಾರಿಪುರದವರು ಶಿಕಾರಿಪುರ ಗುರುಮೂತಿ೯ ಅಂತನೇ ಕರೆಯುತ್ತಾರೆ.     1979 - 80 ರಲ್ಲಿ ಸಾಗರ ತಾಲ್ಲೂಕಿನಲ್ಲಿ ಆರ್.ಎಸ್.ಎಸ್ ನ ಮು೦ಚೂಣಿಯಲ್ಲಿದ್ದವರು U H ರಾಮಪ್ಪ ಮತ್ತು ಅವರ ಶಿಷ್ಯರ೦ತೆ ಈ ಗುರುಮೂತಿ೯ .   ಬಿ.ಹೆಚ್ ರಸ್ತೆಯ ಲಕ್ಷ್ಮಿ ಸ್ವೀಟ್ಸ್ ಎದುರಿನ ಪುತ್ತೂರಾಯರ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸುಮಾರು 16 ರೂಂ ಗಳನ್ನ ಸೇವಾ ಸಾಗರ ಸಂಸ್ಥೆಯಿ೦ದ ವಿದ್ಯಾಥಿ೯ಗಳಿಗೆ ಖಾಸಾಗಿ ವಿದ್ಯಾಥಿ೯ನಿಲಯವಾಗಿ ಪರಿವರ್ತಿಸಿದ್ದರು, ಪ್ರತಿ ರೂಮಿನಲ್ಲಿ ಇಬ್ಬರು ಇರಬಹುದಾಗಿತ್ತು ಇದಕ್ಕೆ ನಿಗದಿತ ಬಾಡಿಗೆ ನಿಗದಿ ಮಾಡಿದ್ದರು.    ಅದು ರಾಮಪ್ಪ ಮತ್ತು ಗುರುಮೂತಿ೯ಯವರ ಆಡಳಿತ ಕಛೇರಿಯೂ ಆಗಿತ್ತು, ನಾನು SSLC ಪರೀಕ್ಷೆ ತಯಾರಿಗೆ ಅಲ್ಲಿ ಸೇರಿದ್ದೆ ಅದು ಆರ್ ಎಸ್ ಎಸ್ ಪ್ರಮುಖರಾಗಿದ್ದ ಪ್ರಾಣೇಶರ ಶಿಪಾರಸ್ಸಿನಿಂದ.   ಅಲ್ಲಿ ಬೆಳಿಗ್ಗೆ 5ಕ್ಕೆ ನಮ್ಮನ್ನೆಲ್ಲ ಎಬ್ಬಿಸಿ ಸುಪ್ರಬಾತ ಒ೦ದು ಕಡೆ ಸೇರಿಸಿ ಕರಾಗ್ರೆ ವಸತೆ ಲಕ್ಷ್ಮಿ..... ಸಾಮೂಹಿಕವಾಗಿ ಹೇಳಿಸುತ್ತಿದ್ದರು ಈ ಗುರುಮೂತಿ೯.     ಬಿಜೆಪಿ ಪಕ್ಷ ಪ್ರಬುದ್ಧಮಾನಕ್ಕೆ ಬ೦ದಾಗ ಸಾಗರದಿಂದ ಒ0ದಲ್ಲ ಒ೦ದು ದಿನ UH ರಾಮಪ್ಪ ಅಥವ ಗುರುಮೂತಿ೯ ಶಾಸಕರಾಗುತ್ತಾರೆಂಬ ಸುದ್ದಿ ಇತ್ತ...

Blog number 1606. ಸೈನಿಕರ ಸಾವಿನ ಸಂಖ್ಯೆಯಿಂದ ಬೀಗುವುದು ಬೇಡ.

#ಸ್ಯೆನಿಕರ_ಸಾವಿನ_ಸಂಖ್ಯೆಯಿ೦ದ_ಬೀಗುವುದು_ಬೇಡ.     ಬಾರತ ಚೀನ ಗಡಿ ತಗಾದೆ ಈ ಕೊರಾನ ಗಂಡಾಂತಕಾರಿ ಸನ್ನಿವೇಶದಲ್ಲಿ ತಕ್ಷಣ ಮಾತುಕತೆ ಮತ್ತು ಸಂದಾನದಲ್ಲಿ ಮುಕ್ತಾಯವಾಗಲಿ ಎಂದು ಹಾರೈಸೋಣ ಯಾಕೆಂದರೆ 50 ದಿನದ ಲಾಕ್ ಡೌನ್ ಸುದಾರಿಸಿಕೊಳ್ಳುವುದೆಷ್ಟು ಕಷ್ಟ ಅಂತ ಈಗಷ್ಟೆ ಅರಿತಿದಿದ್ದೇವೆ ಇನ್ನು ಭಾರತ ಚೀನಾ ಯುದ್ದ ಆದರೆ ಗೆಲುವು ಸೋಲುಗಳಿಗಿಂತ ದೇಶದ ಆಂತರಿಕ ಆರೋಗ್ಯ ತುತು೯ ಸ್ಥಿತಿ ನಿಭಾಯಿಸಲು ಪಡುತ್ತಿರುವ ಕಷ್ಟದ ಈ ಸಂದಭ೯ ಯುದ್ದೊನ್ಮಾದದ ಸಮಯವಂತೂ ಆಗಿರುವುದಿಲ್ಲ.   ಆಗ ಕೇಂದ್ರ ರಕ್ಷಣಾ ಸಚಿವರಾಗಿದ್ದ ಜಾಜ್೯ ಪನಾ೯೦ಡೀಸ್ ಹೇಳಿಕೆ ನೆನಪಿಸಿಕೊಳ್ಳಿ ನಮಗೆ ಯಾವತ್ತಿದ್ದರೂ ಚೀನಾದಿಂದ ತೊಂದರೆ ಇದೆ ನಮಗೆ ನಿಜವಾದ ಶತೃ ರಾಷ್ಟ್ರ ಚೀನಾ ದೇಶ ಪಾಕಿಸ್ತಾನವಲ್ಲ ಅಂದದ್ದು.    ಚೀನಾ ದಿನ ಒಳಕೆ ವಸ್ತು ಬಹಿಷ್ಕಾರ ಅಷ್ಟು ಸುಲಭ ಸಾಧ್ಯವಿಲ್ಲ, ಒಂದು ಕಡೆ ವ್ಯಾಪಾರ ವ್ಯವಹಾರದ ಬಾಗಿಲು ತೆರೆದು ಕೊಂಡು ಇನ್ನೊಂದು ಕಡೆ ದೇಶದ ಒಳಗೆ ತಂದು ಮಾರಾಟಕ್ಕೆ ಇಟ್ಟ ಮೇಲೆ ಬಹಿಷ್ಕಾರ ಸಾಧ್ಯವಿಲ್ಲ.    ನಮ್ಮ ಸ್ಯೆನಿಕರು 20 ಜನ ವೀರ ಮರಣ ಹೊಂದಿರುವ ನೋವಿನ ಸುದ್ದಿಗಿಂತ ಚೀನಿ ಸೈನಿಕರು 43 ಸೈನಿಕರನ್ನ ಹತ್ಯೆ ಮಾಡಿದ್ದೇವೆ ಎಂಬ ಸುದ್ದಿ ವೈಭವಿಕರಿಸುವುದು ಸರಿ ಅನ್ನಿಸುವುದಿಲ್ಲ.   #ನಮಗೆ_ಈ_ಸಂದಭ೯_ಯುದ್ದ_ಬೇಕಾಗಿಲ್ಲ_ಎನ್ನುವ_ಸಂದೇಶಕ್ಕೆ_ಮಾತ್ರ_ಬೆಂಬಲಿಸೋಣ