Skip to main content

Posts

Blog number 1450. ಮಂಕಿ ಪ್ರೂಟ್ ಎಂಬ ಹೆಸರಲ್ಲಿ ಕರೆಯುವ ಮಂಗಗಳ ಪ್ರಿಯವಾದ ವಾಟೆ ಹಣ್ಣಿನಿಂದ ಮಾಡುವ ವಾಟೆ ಹುಳಿ ಎಂಬ ಸಂಪ್ರದಾಯಿಕ ಬಳಕೆಯ ಹುಳಿ

https://youtu.be/yK5HJ6YhpmU #ಈ_ವರ್ಷದ_ಬಳಕೆಗೆ_ವಾಟೆ_ಹುಳಿ_ಬಂದಿದೆ. #ವಾಟೆಹುಳಿಗೆ_Monkeyjack_Monkeyfruit_ಅಂತಲು_ಕರೆಯುತ್ತಾರೆ #ಮಂಗಗಳಿಗೆ_ವಾಟೆಹಣ್ಣು_ತುಂಬಾ_ಇಷ್ಟದ್ದು #ಟೊಮಾಟಾ_ವಿನೆಗರ್_ಬಳಕೆಯಿಂದ_ಸಂಪ್ರದಾಯಿಕ_ಹುಳಿಗಳು_ಅಪರಿಚಿತವಾಗುತ್ತಿದೆ. #ಮ೦ಗಗಳ_ಕಾಟ_ನಿವಾರಿಸಲು_ವಾಟೆಮರ_ಅರಣ್ಯಗಳಲ್ಲಿ_ತೋಟದ_ಅಂಚಿನಲ್ಲಿ_ಬೆಳೆಸಿದರೆ_ಪರಿಹಾರ_ಸಿಗಬಹುದಾ?    ಹುಣುಸೆ ಹಣ್ಣು, ಮಾವಿನ ಹುಳಿ, ಉಪ್ಪಾಗೆ ಹುಳಿ, ಕವಳಿಕಾಯಿ ಹುಳಿ, ಮುರುಗನ ಹುಳಿ ಮತ್ತು ವಾಟೆ ಹುಳಿಗಳು ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಹೆಚ್ಚು ಬಳಕೆ ಮಾಡುವ ಸಂಪ್ರದಾಯಿಕ ಹುಳಿಗಳಾಗಿದೆ.   ಕೊಡಗಿನ ಪುನರ್ಪುಳಿ ಹುಳಿ ಅಲ್ಲಿನ ಸ್ಥಳೀಯ ಸಿಗ್ನೇಚರ್ ಪುಡ್ ಪಂದಿ ಕರಿಯಲ್ಲಿ ಬಳಸುವುದರಿಂದ ಅಲ್ಲಿನ ಪುನರ್ಪುಳಿಯ ಸಾಸ್ ಗೆ ದೇಶ ವಿದೇಶಗಳಲ್ಲಿ ಬೇಡಿಕೆ ಬಂದಿದೆ.    ಸಾಮಾನ್ಯವಾಗಿ ಬಯಲು ಸೀಮೆಯ ಉಷ್ಣ ಪ್ರದೇಶದ ಹುಣಸೇ ಹಣ್ಣು ಹೆಚ್ಚು ಬಳಕೆಗೆ ಸುಲಭವಾಗಿ ದೊರೆಯುವ ಹುಳಿ ಆಗಿದೆ.   ಆದುನಿಕ ಪಾಕ ವಿಧಾನಗಳಲ್ಲಿ ಟೊಮೊಟಾ, ವಿನಿಗರ್ ಬಳಕೆಯಿಂದ ಸಂಪ್ರದಾಯಿಕ ಹುಳಿಗಳ ಬಳಕೆ ತುಂಬಾ ಕಡಿಮೆ ಆಗಿದೆ.    ಮಲೆನಾಡಿನಲ್ಲಿ ಯಥೇಚವಾಗಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಮಾವಿನಕಾಯಿ ಸಿಪ್ಪೆ ತೆಗೆದು ಉದ್ದದ ಹೋಳುಗಳನ್ನು ಒಣಗಿಸಿ ವರ್ಷ ಪೂರ್ತಿ ಅಡುಗೆಗೆ ಬಳಸುತ್ತಿದ್ದರು ಇದೇ ...

Blog number 1449. ಲೋಕಸಭಾ ಚುನಾವಣಾ ಅಂಕಣ 13.(24- ಏಪ್ರಿಲ್ -2019)

#ಪ್ರಸಕ್ತ ರಾಜ ಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-13. (ಕೆ.ಅರುಣ್ ಪ್ರಸಾದ್)     ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿಯಿತು ಇಬ್ಬರಿಗೂ ಗೆಲುವಿನ ಸೋಲಿನ ಚಾನ್ಸ್ 50:50.      ನಿನ್ನೆಯ ಮತದಾನದ ನಂತರ ಇಷ್ಟು ದಿನದ ಪ್ರಚಾರದ ಶಬ್ದ ನಿಶ್ಯಬ್ದವಾಗಿದೆ, ಅಭ್ಯಥಿ೯ಗಳು ನಾಟ್ ಕವರೇಜ್ನಲ್ಲಿದ್ದರೆ, ಪದಾಧಿಕಾರಿಗಳು ಕಾಯ೯ಕತ೯ರು ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಅಧಿಕಾರಿಗಳು, ಟ್ಯಾಕ್ಸಿಯವರು, ಪತ್ರಕತ೯ರು ಕೂಡ.  ತಮ್ಮ ತಮ್ಮ ಮತ ಕೇಂದ್ರದಲ್ಲಿ ಏನಾಗಿದೆ ಅಂತ ಪ್ರತಮ ವತ೯ಮಾನ ತಿಳಿದಿದ್ದಾರೆ, ತಾಲ್ಲೂಕಗಳಲ್ಲಿ ಏನಾಗಬಹುದು? ಇದಕ್ಕೆ ಯಾರು ಕಾರಣ? ಹೀಗೆ ಚಚೆ೯ ಪ್ರಾರಂಭ ಆಗಿದೆ.  ಮುಂದುವರಿದು ದೂರದ ಬೈoದೂರಿನಲ್ಲಿ ಆ ಪಕ್ಷ ಮುಂದಿದೆ, ಈ ಸಾರಿ ಭದ್ರಾವತಿ JDS ಪುಲ್ ಲೀಡ್, ಸೊರಬ ಬಿಜೆಪಿ ಕೈಬಿಟ್ಟಿದೆ, ಒಕ್ಕಲಿಗರು, ಈಡಿಗರು, ಅಲ್ಪಸಂಖ್ಯಾತರು ಮದುಗೆ ಓಟು ಮಾಡಿದ್ದಾರೆ, ಸಾಗರದಲ್ಲಿ ಹಾಲಪ್ಪರ ಸಾದನೆ ಸಾಕಾಗಿಲ್ಲ ಅಂತ ಮಾತಾಡುತ್ತಾರೆ.  ಅದೇ ರೀತಿ ಕಾಂಗ್ರೇಸ್ ನವರು JDSಗೆ ಕೆಲಸ ಮಾಡಿಲ್ಲ, ಕೊಟ್ಟ ಹಣ ಮತದಾರನಿಗೆ ತಲುಪಿಲ್ಲ, ಕಿಮ್ಮನೆ ಮಂಜುನಾಥ ಗೌಡರು ಒಂದಾಗಲಿಲ್ಲ, ಅಪ್ಪಾಜಿಗೌಡರು ಸಂಗಮೇಶ್ ಸರಿ ಆಗಲಿಲ್ಲ ಎಂಬ ಚಚೆ೯ ಕೂಡ ಇದೆ.   ಹಣ ಬರುತ್ತಾ ಇತ್ತು ಅಲ್ಲಲ್ಲಿ ರೈಡ್ ಆಯಿತು, ಭದ್ರಾವತಿಗೆ ಟೈರ್ ಲ್ಲಿ ಕಳಿಸಿದರು ಹಿಡಿದು ಬಿಟ್ಟರು ಅಂತ ಕೆ...

Blog number 1448. ಉದಯೋನ್ಮುಖ ಉದ್ದಿಮೆದಾರರೆ ಗಮನಿಸಿ

#ಮಲೆನಾಡಿನ ಉದಯೋನ್ಮುಖ ಉದ್ದಿಮೆದಾರರೇ ಗಮನಿಸಿ# ಇವತ್ತು ಹಿರಿಯ ಮಿತ್ರರಾದ ಶ್ರೀ ಮ್ಯಾಥ್ಯೂ ತಾಮಸ್ (ONGC ಯ ನಿವೃತ್ತಾ ಅಧಿಕಾರಿ) ಚುಕ್ಕು ಕಾಪಿ ತಂದುಕೊಟ್ಟರು.  ವಿಶೇಷ ಅಂದರೆ ಇದು ಪಶ್ಚಿಮ ಘಟ್ಟದ ಒಣ ಶುಂಠಿ,ಕರಾವಳಿಯ ವಾಲೆ ಬೆಲ್ಲ, ಕಾಫಿ, ಕಾಳು ಮೆಣಸು, ಕೊತ್ತಂಬರಿ ಮತ್ತು ಜೀರಿಗೆಯ ಸಮ್ಮಿ ಶ್ರಣದ ಸಣ್ಣ ದುಂಡನೆಯ ಕೇಕ್ ನಂತ ದುಂಡನೆಯ ತು೦ಡು.  2 ಕಪ್ ನೀರು ಕುದಿಯಲಿಟ್ಟು ಒಂದು ಕೇಕ್ ಹಾಕಬೇಕು ಅದು ಕರಗಿದ ನಂತರ ಕಪ್ ನಲ್ಲಿ ಹಾಕಿ ಕುಡಿದರೆ ಅದರ ಮಜಾವೇ ಬೇರೆ.   ಆರೋಗ್ಯದಾಯಕ ಈ ಪೇಯ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಸೇವನೆಗೆ ಅತ್ಯುತ್ತಮ.  ಕೇರಳದ ಪ್ರಖ್ಯಾತ Estern ಮಸಾಲೆ ವಸ್ತು ತಯಾರಿಸುವ ಕಂಪನಿ ತಯಾರಿಸಿ ದೇಶ ವಿದೇಶಗಳಲ್ಲಿ ಮಾಕೆ೯ಟ್ ಮಾಡುತ್ತಿದೆ.  ಪಶ್ಚಿಮ ಘಟ್ಟದ ಅನೇಕ ಪೇಯ, ಕಷಾಯ, ಔಷದಿ, ತಿನಿಸು, ಸಂಡಿಗೆಗಳನ್ನ ತಯಾರಿಸಿ ಮಾರುಕಟ್ಟೆಗೆ ತರುವ ಉದೊಯೋನ್ಮುಖ ಸಾಹಸಿ ಉದ್ದಿಮೆದಾರರು ಮಲೆನಾಡಿನಲ್ಲಿ ಇದ್ದಾರೆ ಅವರಿಗಾಗಿ ಈ ಲೇಖನ.

Blog number 1447. ಕೊರಾನಾ ಲಾಕ್ ಡೌನ್ ಡೈರಿ - 20 20, ಲೆಟರ್ ನಂಬರ್ 22 (24- ಏಪ್ರಿಲ್ -2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_22 #ದಿನಾ0ಕ_25_ಏಪ್ರಿಲ್_2020 #ಮದುವೆ_ಸ್ವಗ೯ದಲ್ಲಿ_ನಿದಾ೯ರವಾದರೂ_ಕೊರಾನಾ_ವೈರಸ್_ಭೂಮಿ_ಮೇಲೆ_ಬಿಡುತ್ತಿಲ್ಲ!?    ನಮ್ಮ ನಿಮ್ಮ ಸುತ್ತಲಲ್ಲಿ ಏಪ್ರಿಲ್ - ಮೇ ತಿಂಗಳಲ್ಲಿ ಪುರುಸೊತ್ತೆ ಇಲ್ಲದಂತೆ ಮದುವೆಗಳು ನಡೆಯುತ್ತಿದ್ದವು, ಮದುವೆಯ ಮನೆಯವರಿಗೆ,ಬಂಗಾರದ ಮಳಿಗೆಗೆ , ಪುರೋಹಿತರಿಗೆ, ಬಾಸಿಂಗ ಮಾಡುವವರಿಗೆ, ಮಂಗಳವಾದ್ಯದವರಿಗೆ, ಬಳೆ ಇಡುವವರಿಗೆ, ಶಾಮಿಯಾನದವರಿಗೆ, ಡೆಕೋರೇಷನ್ ರವರಿಗೆ, ಬ್ಯೂಟಿ ಪಾಲ೯ರ್ ನವರಿಗೆ, ಅಡುಗೆಯವರಿಗೆ, ಹೂವಿನ ವ್ಯಾಪಾರಿಗಳಿಗೆ, ಬಡಿಸುವವರಿಗೆ, ದಿನಸಿ ಮಾರಾಟಗಾರರಿಗೆ, ತರಕಾರಿ ಮಂಡಿಯವರಿಗೆ, ಪೋಟೋ ಗ್ರಾಪರ್ ಗೆ, ಪ್ರಿOಟಿOಗ್ ಪ್ರೆಸ್,  ಕಲ್ಯಾಣ ಮ೦ಟಪದವರಿಗೆ, ಲಾಡ್ಜಗಳಿಗೆ, ಟ್ಯಾಕ್ಸಿಗಳಿಗೆ, ಮದರಂಗಿ ಬಿಡಿಸುವವರಿಗೆ, ಚಪ್ಪರ ಹಾಕುವವರಿಗೆ, ಚಪ್ಪಲಿ ಅಂಗಡಿಯವರಿಗೆ, ರೈಲು, ಬಸ್, ವಿಮಾನಗಳಿಗೆ ಮತ್ತು ಪೆಟ್ರೋಲ್ ಪoಪ್    ಹೀಗೆ ಎಲ್ಲರಿಗೂ ಕೈತುಂಬಾ ಕೆಲಸ ಕಾಸು ಇರುತ್ತಿದ್ದ ತಿಂಗಳು ಈ ವಷ೯ ಸಂಪೂಣ೯ ಸ್ಥಬ್ದ ಆಗಿದೆ.   ಏಪ್ರಿಲ್ - ಮೆ ತಿಂಗಳಲ್ಲಿ ಪರೀಕ್ಷೆಗಳು ಮುಗಿದು ಶಾಲೆಗಳಿಗೆ ರಜೆ, ವಿವಾಹಕ್ಕೆ ಅನುಕೂಲ ಮಹೂತ೯ಗಳು, ಕೃಷಿ ಕೆಲಸಗಳಿಗೂ ವಿರಾಮ, ಪ್ರಶಸ್ತವಾದ ಹವಾಮಾನಗಳು ಈ ಎರೆಡು ತಿಂಗಳಲ್ಲಿ ಹೆಚ್ಚಿನ ಮದುವೆಗೆ ಕಾರಣ.   ಈ ಎರೆಡು ತಿಂಗಳಲ್ಲಿ ಮದುವೆ ಆಗುವವರೆಲ್ಲ ಡಿಸೆಂಬ...

Blog number 1446. ಮುವ್ವತ್ತೆರೆಡು ದಿನದ ಮರಿ ಶಂಭೂರಾಮನ ಆಗಮನದ ನಿರೀಕ್ಷೆಯಲ್ಲಿ

#ಬಹು_ವರ್ಷದ_ಆಸೆ_ನೆರವೇರಿದೆ #ರಾಟ್_ವೀಲರ್_32_ದಿನದ_ಮರಿ_ಖರೀದಿಸಿ_ಆಯಿತು. #ಬೆಂಗಳೂರಿಂದ_ಮುಂದಿನ_ವಾರ_ಬರಲಿದೆ.    ನನಗೆ ರಾಟ್ ವೀಲರ್ ಸಾಕಬೇಕಂತ ಮನಸ್ಸಿದ್ದರು ಅದನ್ನು ಸಾಕಲೇ ಬೇಕಂತ ತೀಮಾ೯ನಕ್ಕೆ ತಂದವರು ಗೆಳೆಯ ಜೇಕಬ್ (ಜಗನ್) ಇವರ ಸ್ವಂತದ್ದಾದ ಕೆನಲ್ ಪಾಮ್೯ ಊಟಿಯಲ್ಲಿದೆ, ವಿದೇಶದಲ್ಲಿ ಪೆಟ್ರೋಲಿಯಂ ಸಂಸ್ಥೆಯಲ್ಲಿ ಇಂಜಿನಿಯರ್, ಮುಂಬೈ, ಬೆಂಗಳೂರು, ರಾಣಿಪೇಟೆ ಮತ್ತು ಊಟಿಯಲ್ಲಿ ಆಸ್ತಿ ಹೊಂದಿದ್ದಾರೆ.   ನಾಲ್ಕು ವರ್ಷದ ಹಿಂದೆ ನನಗೆ ಇವರ ಊಟಿಯ ಕೆನಲ್ ಪಾಮ೯ನಿಂದ  ಒಂದು ರಾಟ್ ವೀಲರ್ ಗಿಫ್ಟ್ ಆಗಿ ನೀಡಿದರೂ ನನಗೆ ಅದನ್ನು ಸಾಕುವ ಸಂಪೂರ್ಣ ವ್ಯವಸ್ಥೆ ಆಗದೆ ಸ್ವೀಕರಿಸಲಿಲ್ಲ.   ನಂತರ ಜಗನ್ ಬಂದವರು ಅದಕ್ಕೆ ಎಲ್ಲಾ ಮಾರ್ಗದರ್ಶನ ನೀಡಿದ ನಂತರ ವ್ಯವಸ್ಥೆ ಮಾಡಿದೆ ಆದರೆ ಕೊರಾನಾ ಮೊದಲ ಅಲೆಯಿಂದ ರಾಟ್ ವೀಲರ್ ಬರಲಿಲ್ಲ.    ಇವತ್ತು ಮಗಳು ಅಳಿಯ ರಾಟ್ ವೀಲರ್ ಮಾರಾಟಕ್ಕೆ ಇರುವ ಬಗ್ಗೆ ಮತ್ತು ಅದನ್ನು ಇಲ್ಲಿಗೆ ತಲುಪಿಸುವ ಭರವಸೆ ನೀಡಿದ್ದರಿಂದ ಖರೀದಿ ಮಾಡಿದೆ.   ಜಾನ್ಸಿ ಅವಳ ಮಗಳು ಕಾಳು ಜೊತೆ ಈಗ ಬರುವ ರಾಟ್ ವೀಲರ್ ಗೆ ನಾಮಕರಣ ಆಗಬೇಕು, ನಿತ್ಯ ತರಬೇತಿ ಕೂಡ ಈಗ 32 ದಿನಕ್ಕೆ 3kg ಇದಾನೆ ಮುಂದೆ 50 ರಿಂದ 60 kg ಆಗುತ್ತಾನೆ, ಇವನ ಅಜ್ಜಿ ಜಮ೯ನ್ ದೇಶದವಳು ಇತ್ಯಾದಿ ಇವನ ಬತ್೯ ಸರ್ಟಿಪಿಕೇಟ್ ನೀಡುವ ಬೆಂಗಳೂರಿನ ಕೆನಲ್ ಬ್ರೀಡರ್ ಹೇಳುತ್ತಿದ್ದರು. ...

Blog number 1445. ಶಂಭೂರಾಮನ ಕಳ್ಳಾಟಗಳು

#ನೀನೆಲ್ಲಿರುವೆ_ನಾನಲ್ಲಿಗೆ_ಬರುವೆ https://youtu.be/ITjIIKqOv-Q   ಬೆಳಗ್ಗಿನ ವಾಕಿಂಗ್ ಮಧ್ಯದಲ್ಲಿ ಶಂಭೂರಾಮ ನನ್ನ ಚಿಕ್ಕದಾದ ಗಾರ್ಡನ್ ಮಧ್ಯ ಅಡಗಿ ಕುಳಿತು ಕೊಳ್ಳುತ್ತಾನೆ, ಪಕ್ಕದ ಮನೆಯ ಬೆಕ್ಕು ರಕ್ಷಣಾತ್ಮಕವಾಗಿ ಚಿಕ್ಕ ಗೇಟಿನ ಆಚೆ ಕುಳಿತು ಶಂಭೂನನ್ನು ರೇಗಿಸುವುದರಿಂದ ಆ ಬೆಕ್ಕು ಬಂದರೆ ಹಿಡಿಯುವ ಯೋಚನೆಯೂ ಇರಬಹುದು.

Blog number 1444. ಆಶಾ ಕಾರ್ಯಕರ್ತೆಯರ ಕೊರಾನಾ ಕಾಲದ ಪ್ರಶ೦ಸನೀಯ ಸೇವೆ. ಆಶಾ ಎ೦ಬ ಹೆಸರಿನ ಅರ್ಥ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_21 #ದಿನಾ0ಕ_24_ಏಪ್ರಿಲ್_2020  *ದೇಶದಾದ್ಯ೦ತ ಆಶಾ ಕಾಯ೯ಕತೆ೯ಯರ ಸೇವೆ ಸುದ್ದಿ ಮಾಡುತ್ತಿದೆ.  *ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. *ಕೊರಾನಾ ವೈರಸ್ ನಿಯ೦ತ್ರಣದಲ್ಲಿ ಬುಡಮಟ್ಟದಲ್ಲಿ ಅವರ ಕೆಲಸ ಪ್ರಶಂಸನೀಯ ಅಷ್ಟೇ ಅಪಾಯಕಾರಿ. ಆಶಾ ಅಂದರೆ ಕನ್ನಡದ ಹೆಸರOತಲೇ ಎಲ್ಲಾ ಬಾವಿಸಿದ್ದಾರೆ  ಆದರೆ ಇದು ಇಂಗ್ಲೀಷ್ ನ ACCRIDITED SOCIAL HEALTH ACTIVIST(ASHA) ನ ಶಾಟ್೯ ಪಾರಂ.   ಇವರನ್ನ  ನ್ಯಾಷನಲ್ ಹೆಲ್ತ್ ಮಿಷನ್ ನ ಅಡಿಯಲ್ಲಿ 2005ರ ರಲ್ಲಿ ಕೇ೦ದ್ರ ಸಕಾ೯ರ ಪ್ರಾರಂಬಿಸಿದ ಯೋಜನೆಯಿಂದ ಗ್ರಾಮಗಳ 1000ದಿಂದ 2000 ಜನಸಂಖ್ಯೆ ಇರುವ ಪ್ರದೇಶಕ್ಕೆ ಒಬ್ಬರಂತೆ ಸ್ಥಳಿಯ ANM ಮತ್ತು ಅಂಗನವಾಡಿ ಕಾಯ೯ಕತೆ೯ಯರ ಜೊತೆಯಲ್ಲಿ ಕಾಯ೯ ನಿವ೯ಹಿಸುತ್ತಾರೆ.   ಅಂದಿನ ಪ್ರದಾನ ಮಂತ್ರಿ ಮನಮೊಹನ್ ಸಿಂಗ್ 2005ರಲ್ಲಿ ಉದ್ಘಾಟಿಸಿದ್ದರು ಈ ಯೋಜನೆ 20 I2 ರಲ್ಲಿ ಪೂಣ೯ ಪ್ರಮಾಣದಲ್ಲಿ ಕಾಯ೯ನಿವ೯ಹಿಸಬೇಕೆಂಬ ಕಾಲ ಮಿತಿ ಇಡಲಾಗಿತ್ತು.   ಈಗ ದೇಶದಾದ್ಯಂತ ಸುಮಾರು 10 ಲಕ್ಷ ಆಶಾ ಕಾಯ೯ಕತೆ೯ಯರು ಕಾಯ೯ ನಿವ೯ಹಿಸುತ್ತಿದ್ದಾರೆ.   ಜನವಸತಿ ಕೇಂದ್ರದ ವ್ಯಾಪ್ತಿಯ ವಿವಾಹಿತ / ವಿದವೆ/ವಿಚ್ಚೇದಿತ 10ನೆ ತರಗತಿವರೆಗೆ ವಿದ್ಯಾಬ್ಯಾಸ ಇರುವ ಸ್ಥಳಿಯ ಸಮೂದಾಯಕ್ಕೆ ಸೇರಿದ ಮಹಿಳೆಯರನ್ನ ಸ್ಥಳಿಯ ಗ್ರಾ.ಪಂ.ಆಯ್ಕೆ ಮಾಡಬೇಕು ಅವರು ವಾರದಲ್ಲಿ ಪ್ರತಿ ಬುಧವ...