Skip to main content

Posts

Blog number 1087. ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಮುಡುಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ವಾಸಂತಿಕ ಪರಮೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರು ಸಾಗರ ತಾಲೂಕಿನ ಕರೂರು ಹೋಬಳಿಯ ಕಮಕೋಡಿನ ದತ್ತಾತ್ರೇಯ ಭಟ್ಟರು ನನ್ನ ಕಾದಂಬರಿ ಚ೦ಪಕ ಸರಸ್ಸು ಓದಿ ಅಭಿಪ್ರಾಯ ತಿಳಿಸಿದ್ದಾರೆ.

#ಐತಿಹಾಸಿಕ_ಹೊಯ್ಸಳ_ಖ್ಯಾತಿಯ_ವಾಸಂತಿಕಪರಮೇಶ್ವರಿ_ದೇವಾಲಯದ_ಪ್ರದಾನ_ಅಚ೯ಕರಾದ  #ಸಾಗರ_ತಾಲ್ಲೂಕಿನ_ಕರೂರು_ಮೂಲದ_ಕಮಕೋ ಡು_ದತ್ತಾತ್ರೇಯ  ಭಟ್ಟರು. #ಈ_ದೇವಾಲಯದ_ಎದುರಿನ_ಎರೆಡು_ಸಂಪಿಗೆ_ಮರ_ಸಾವಿರ_ವಷ೯ದ್ದು #ಸಾಗರ_ತಾಲ್ಲೂಕಿನ_ಕರೂರು_ಹೋಬಳಿಯ_ಕಮಕೋಡು_ಕೆಳದಿ_ಅರಸರ_ಸೈನಿಕ_ತರಬೇತಿ_ಕೇಂದ್ರ   ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಪುರಾಣ ಪ್ರಸಿದ್ದ ವಾಸಂತಿಕ ಪರಮೇಶ್ವರಿ ದೇವಸ್ಥಾನ ಐತಿಹಾಸಿಕವಾಗಿಯೂ ಪ್ರಮುಖ ಸ್ಥಳ ಹೊಯ್ಸಳ ವಂಶ ಸ್ಥಾಪಕ ಸಳ ತನ್ನ ವಿದ್ಯಾಬ್ಯಾಸದ ಕಾಲದಲ್ಲಿ ಗುರುಗಳ ಆದೇಶ "ಹೊಯ್ - ಸಳ " ಎಂದಿದ್ದರಿಂದ ಎದುರಿಗೆ ಬಂದಿದ್ದ ಹುಲಿ ಸಂಹಾರ ಮಾಡಿದ್ದ ಸ್ಥಳವೂ ಇದೇ.   ಈ ದೇವಾಲಯದ ಎದುರು ಬೃಹದಾಕಾರದ ಎರೆಡು ಸಂಪಿಗೆ ಮರವೂ ಇದೆ, ಇದನ್ನ ಕಾಬ೯ನ್ ಟೆಸ್ಟಿಂಗ್ ನಲ್ಲಿ ಒಂದು ಸಾವಿರ ವರ್ಷ ಪುರಾತನವಾಗಿದ್ದೆಂದು ಸಾಬೀತಾಗಿದೆ.   ವಾಸಂತಿಕ ದೇವಿ ವಿಗ್ರಹ  ಮಣ್ಣಿನದ್ದು (ಕಡು ಶಾಕ೯ರ ಪಾಕ), ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯವರಿಗೆ ಇದೆಲ್ಲ ಗೊತ್ತಿದೆ ಆದರೆ ರಾಜ್ಯದ ಇತರ ಜಿಲ್ಲೆಯವರಿಗೆ ಇದರ ಮಾಹಿತಿ ಕಡಿಮೆ, ನಾನು ಈ ದೇವಾಲಯ ನೋಡಿದ್ದೇನೆ.  ಈ ದೇವಾಲಯದ ಪ್ರದಾನ ಅಚ೯ಕರು #ಕಮಕೋಡು_ದತ್ತಾತ್ರೇಯ ಭಟ್ಟರು ಇವರು ಸಾಗರ ತಾಲ್ಲೂಕಿನ ಕರೂರು ಹೋಬಳಿ ಮೂಲದವರು, ಇವರು ನಿಟ್...

Blog number 1086.10 ಮೇ 1893 ರಲ್ಲಿ ಅಮೇರಿಕಾ ನ್ಯಾಯಾಲಯ ಟೋಮೋಟೋ ತರಕಾರಿ ಎಂದು ತೀರ್ಪು ನೀಡುವ ತನಕ ವಿಶ್ವದಾದ್ಯಂತ ಟೋಮೋಟೋ ಹಣ್ಣು ಅಂತನೇ ಭಾವಿಸಲಾಗಿತ್ತು, ಆಗ ಅಮೇರಿಕಾದಲ್ಲಿ ಹಣ್ಣುಗಳಿಗೆ ತೆರಿಗೆ ಇತ್ತು ಮತ್ತು ತರಕಾರಿಗೆ ತೆರಿಗೆ ಇರಲಿಲ್ಲ.

#ಟೋಮಾಟಿ #ನೂರು_ರೂಪಾಯಿ_ದಾರಣೆಯಾದರೂ_ಬೇಡಿಕೆ_ಕಡಿಮೆ_ಇಲ್ಲ #ಟೋಮೋಟೋ_ತರಕಾರಿನೋ_ಹಣ್ಣೋ? #ಹದಿನಾರನೆ_ಶತಮಾನದಲ್ಲಿ_ಪೋರ್ಚುಗೀಸರಿಂದ_ಭಾರತಕ್ಕೆ     ಕೆಲವು ಬಾರಿ ಅಕಾಲಿಕ ಮಳೆಯಿಂದ ಟೋಮೋಟೋ ದಾರಣೆ ಕಿಲೋಗೆ ನೂರು ದಾಟಿದೆ, 25 ಕೆ.ಜಿಯ ಟೋಮೋಟೋ ಬಾಕ್ಸ್ 2000 ಕ್ಕೆ ರೈತರಿಂದ ಖರೀದಿ ಆಗುತ್ತದೆ ಮತ್ತೆ ಕೆಲ ಬಾರಿ ಟೋಮೋಟೋ ದಾರಣೆ ಕುಸಿದು ರೈತರು ಹೆದ್ದಾರಿಗೆ ಟೋಮೋಟೋ ಸುರಿದು ಪ್ರತಿಭಟಿಸುತ್ತಾರೆ.   50 ವರ್ಷದ ಹಿಂದೆ ನಮ್ಮ ತರಕಾರಿ ಪಟ್ಟಿಯಲ್ಲಿ ಟೋಮೋಟೋ ಇರಲಿಲ್ಲ, ಸ್ಥಳಿಯ ತರಕಾರಿ ಮಾರಾಟಗಾರರ ಬುಟ್ಟಿಯಲ್ಲೂ ಟೋಮೋಟೋ ಇರಲಿಲ್ಲ.   ದಕ್ಷಿಣ ಅಮೇರಿಕಾದ ಆಗ್ನೇಯ ಭಾಗ ಟೋಮೋಟೋ ಮೂಲವಂತೆ, 18ನೇ ಶತಮಾನದ (1835ರ ವರೆಗೆ)  ತನಕ ಟೋಮೋಟೋ ಅಮೇರಿಕಾದಲ್ಲಿ ವಿಷ ಪೂರಿತ ಎಂಬ ಬಾವನೆ ಇತ್ತು, ಸ್ಪಾನಿಷ್ ರಿಂದ ಯುರೋಪಿಗೆ ಪರಿಚಯ ಆಗುತ್ತದೆ.   ಕ್ರಿಶ 700 ರಲ್ಲಿ ಟೋಮೋಟೋ ಮೂಲ ಹೆಸರು ಟೋಮಾಟಿ (Tomati) ಆಗಿತ್ತು.   1887 ರಲ್ಲಿ ಅಮೇರಿಕಾದಲ್ಲಿ ಟೋಮೋಟೋ ಬಗ್ಗೆ ನಡೆದ ಒಂದು ವಿಶೇಷ ವ್ಯಾಜ್ಯ ಮತ್ತು ತೀಪು೯ ಈಗ ವಿಶ್ವದಾದ್ಯಂತ ಆಚರಣೆಗೆ ಕಾರಣ ಆಯಿತು ಅದೇನೆಂದರೆ ಟೋಮೋಟೋ ತರಕಾರಿನಾ? ಅಥವ ಹಣ್ಣೋ? ಎಂಬ ಜಿಜ್ಞಾಸೆಗೆ ಕಾರಣ ಆಗಿತ್ತು.   ಆಗ ಅಮೇರಿಕಾದಲ್ಲಿ ತರಕಾರಿಗೆ ತೆರಿಗೆ ಇರಲಿಲ್ಲ ಆದರೆ ಹಣ್ಣಿಗೆ ತೆರಿಗೆ ಇತ್ತು.   10 ಮೇ 1893 ರಲ್ಲಿ ಅಮೇರಿಕ...

Blog number 1085. ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಚಕಾ ಪೂರ್ತಿ ಓದಿ ಪ್ರಶಂಸೆಯ ಪತ್ರ ಬರೆದಿರುವ ಕೆಳದಿ ಇತಿಹಾಸ ಸಂಶೋದಕ ಡಾಕ್ಟರ್ ಗುಂಡಾ ಜೋಯಿಸ್,

ಕೆಳದಿ_ಇತಿಹಾಸ_ಅದಿಕೃತವಾಗಿ_ಮಾತಾಡ_ಬಲ್ಲವರು_ದೃಡೀಕರಿಸ_ಬಲ್ಲವರು_ಕೆಳದಿ_ಗುಂಡಾಜೋಯಿಸರು. ನನ್ನ ಕಾದಂಬರಿ #ಕೆಳದಿ_ಇತಿಹಾಸ_ಮರೆತ_ಬೆಸ್ತರರಾಣಿ_ಚಂಪಕಾ ಕೆಳದಿ ರಾಜಾ ವೆಂಕಟಪ್ಪ ನಾಯಕರ ಮತ್ತು ಚಂಪಕಾ ರಾಣಿಯ ದುರಂತ ಪ್ರೇಮ ಕಥೆಯನ್ನ (ಅವರ ಪತ್ನಿ ಅನಾರೋಗ್ಯ ಮತ್ತು ಇವರ ವೃದ್ದಾಪ್ಯದಲ್ಲೂ) ಬಿಡುವು ಮಾಡಿಕೊಂಡು ಓದಿ ವಿಮಷೆ೯ ಸ್ವಹಸ್ತದಲ್ಲಿ ಬರೆದ ಪತ್ರವನ್ನು ಕಳಿಸಿದ್ದಾರೆ.   "ಕೆಳದಿ ಇತಿಹಾಸದ ಅಭಿಮಾನಿಯಾಗಿ ಕುತೂಹಲಾಸಕ್ತಿಯಿಂದ ಅವಲೋಕಿಸಿದೆನು, ಸೊಗಸಾಗಿ ನಿರೂಪಿಸಿದ್ದೀರಿ ಅಭಿನಂದನೆಗಳು" ಅಂತ ನನ್ನ ಚೊಚ್ಚಲ ಕಾದಂಬರಿಯನ್ನು ದೃಡೀಕರಿಸಿದ್ದಾರೆ, ಇದು ನನ್ನ ಕಾದಂಬರಿಗೆ ಸಿಕ್ಕಿದ ಅತಿ ದೊಡ್ಡ ಪ್ರಶಸ್ತಿ ಅಂತ ಬಾವಿಸುತ್ತೇನೆ ಮತ್ತು ಅವರು ಓದಿ ವಿಮಷಿ೯ಸಿದ್ದಕ್ಕೆ ಅವರಿಗೆ ನನ್ನ ಸಾಷ್ಟಾ೦ಗ ಪ್ರಣಾಮಗಳನ್ನ ಅಪಿ೯ಸುತ್ತಾ ದೇವರು ಅವರಿಗೆ ಆಯುರಾರೋಗ್ಯ ಆಯಸ್ಸು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.   ದೀಘ೯ವಾಗಿ ಮನದಾಳದಿಂದ ಬರೆದ ಅವರ ಪತ್ರದಲ್ಲಿ ಅವರ ವೃದ್ಧಾಪ್ಯದಿಂದ ದೇಶದಲ್ಲೇ ಮೈಸೂರು ಸಂಸ್ಥಾನಕ್ಕಿಂತ ನಾಲ್ಕು ಪಟ್ಟು ವಿಸ್ತಾರವಾಗಿದ್ದ ವಿದೇಶಿ ವಿದ್ವಾಂಸರಿಂದ ಪ್ರಶಂಸಿಲ್ಪಟ್ಟ ಕೆಳದಿ ಸಂಸ್ಥಾನದ ಹೆಚ್ಚಿನ ಕೆಲಸ ಮುಂದುವರಿಸಲಾಗದ ಬಗ್ಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.   ಮುಖ್ಯಮಂತ್ರಿ ಯಡೂರಪ್ಪರಿಗೆ ಎಲ್ಲೆಲ್ಲಿ ಯಾವ ಯಾವ ಕೆಳದಿ ರಾಜರ ಮತ್ತು ರಾಣಿಯರ ನಾಮಕರಣ ಮ...

Blog number 1084. ಮಲೆನಾಡು ಗಿಡ್ದ ದನದ ಹಾಲಿನ ಗಿಣ್ಣ.

#ಮಲೆನಾಡು_ಗಿಡ್ದ_ದನದ_ಗಿಣ್ಣು_ತಪ್ಪದೆ_ತಂದು_ಕೊಡುವ_ಆತ್ಮಿಯ_ಮಿತ್ರ_ಶಿವರಾಂ_ಪಾಟೀಲ್   ನಮ್ಮ ಪಕ್ಕದ ಊರಾದ ಆಚಾಪುರದ ಶಿವರಾಂ ಪಾಟೀಲ್ ನಮ್ಮ ಆಪ್ತ ಬಳಗದವರು, ಬೆಂಗಳೂರು, ಮುಂಬೈ, ಪೂನಾ, ಸತಾರ ಮತ್ತು ಗೋವಾದಲ್ಲಿ ಅನೇಕ ವರ್ಷ ವ್ಯವಹಾರ ಮಾಡಿದವರು ಈಗ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ನನ್ನ ವ್ಯವಹಾರದಲ್ಲಿ ಇವರು ಪ್ರಮುಖ ಜವಾಬ್ದಾರಿವಹಿಸುತ್ತಾರೆ.   ಇವರು ತಮ್ಮ ನಿತ್ಯ ಹಾಲಿಗಾಗಿ ಮಲೆನಾಡು ಗಿಡ್ದ ದನಗಳನ್ನ ಸಾಕಿದ್ದಾರೆ ಅವು ಕರು ಹಾಕಿದಾಗೆಲ್ಲ ನನಗೆ ಗಿಣ್ಣ ಮಾಡಿ ತಂದು ಕೊಡುತ್ತಾರೆ ಹಾಗೆ ನಿನ್ನೆ ತಂದು ಕೊಟ್ಟ ಗಿಣ್ಣದ ಚಿತ್ರ ತೆಗೆದು ಹಾಕಿದ್ದೇನೆ.  ಮಲೆನಾಡು ಗಿಡ್ಡದ ತುಪ್ಪ ಸದ್ಯದಲ್ಲಿ ಅವರಿಂದ ಪಡೆಯಲು ಕಾಯುತ್ತಿದ್ದೇನೆ.

Blog number 1083. ಮಲೆನಾಡು ಮಲ್ಲಿಗೆ ಸಾಗರದ ವಾರಪತ್ರಿಕೆ 2019 ರ ಸಾಗರ ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಕೆ.ವಿ.ಅಕ್ಷರರ ಬಗ್ಗೆ ವಿಶೇಷ ಸಂಚಿಕೆ ಹೊರತಂದಿತ್ತು.

#ಸಾಗರ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆ.ವಿ.ಅಕ್ಷರ ನೀನಾಸಂ ಮ್ಯಾಗ್ಸೆಸ್ಸೆ ಅವಾಡ್೯ ಪಡೆದ ಕೆ.ವಿ. ಸುಬ್ಬಣ್ಣರ ಪುತ್ರರ ಸಂದಶ೯ನ ಪ್ರಕಟಿಸಿದ ಮಲೆನಾಡು ಮಲ್ಲಿಗೆ ಸಾಗರದ ವಾರಪತ್ರಿಕೆ #   ಇವತ್ತು ಅಂಚೆಯಲ್ಲಿ ಬಂದ ಸಾಗರದ ಮಲೆನಾಡು ಮಲ್ಲಿಗೆ ಈ ವಷ೯ದ ವಿಶಿಷ್ಟ ಸಂಚಿಕೆ ಆಗಿದೆ.   ಅಕ್ಷರರ ತಂದೆ ನಾಡಿಗೆ ಪ್ರಸಿದ್ದರು ಮಗ ಅಕ್ಷರ ಹೆಚ್ಚಾಗಿ ಎಲೆ ಮರೆಯ ಕಾಯಿಯ೦ತೆ ಅವರನ್ನ ತಾಲ್ಲೂಕ ಸಾಹಿತ್ಯ ಪರಿಷತ್ ಈ ಬಾರಿಯ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಸಿದ್ದು ಶ್ಲಾಘನೀಯ.  ಬೇದೂರು ವೆಂಕಟಗಿರಿ ಸಂಪಾದಕತ್ವದ ವಾರ ಪತ್ರಿಕೆ ಸಾಹಿತ್ಯ ಸಮ್ಮೇಳನದ ವಿಶೇಷ ಸಂಚಿಕೆ ಪ್ರಕಟಿಸಿದೆ ಅದು ಸಂಗ್ರಹ ಯೋಗ್ಯ.    ಎನ್.ಎಂ.ಕುಲಕಣಿ೯ಯವರ ಹಾಟ್ ಸೀಟ್ ಸಂದಶ೯ನ, ಸಂಪಾದಕರ ಕೆ.ವಿ.ಅಕ್ಷರ ಪರಿಚಯ, ಕೆ.ವಿ.ಅಕ್ಷರರ "ಚಿತ್ರದ ಕುದುರೆ "ಕವನ, ಕೆ.ವಿ.ಅಕ್ಷರ ತಮ್ಮ ಜನ್ಮ ನೀಡಿದ ಜಾತಿ ಹವ್ಯಕದ ಬಗ್ಗೆ 2002 ರಲ್ಲಿ ಬರೆದ ಲೇಖನ, ಎರೆಡು ಸಮುದ್ರದ ನಡುವೆ, ಸಾಲ ಮನ್ನ ಕುರಿತು, ಟಿ.ಪಿ.ಅಶೋಕರ ಬೌದ್ಧಿಕ ಒಡನಾಡಿ ... ಹೀಗೆ ಸಾಗರದ ಸಾಹಿತ್ಯ ಸಮ್ಮೇಳನದ ಬಗ್ಗೆ ಅಧ್ಯಕ್ಷರಾದ ಅಕ್ಷರರ ಪರಿಚಯದ ವಿಶೇಷ ಸಂಚಿಕೆ ಮನಸೆಳೆಯುತ್ತದೆ.   ನಿಕಟಪೂವ೯ ಅಧ್ಯಕ್ಷ ಪ್ರಸನ್ನರ ಉದ್ದೇಶ ಪೂವ೯ಕ ಅನುಪಸ್ತಿತಿ ಮತ್ತು ಅಕ್ಷರರ ಪ್ರಾಥಮಿಕ ಶಿಕ್ಷಣದ ಮಾಹಿತಿ ನೀಡದಿರುವುದು ಕೊರತೆ ಅನ್ನಿಸಿತು.

Blog number 1082. ಅಭಿರಾಮ ಮತ್ತು ನನ್ನ ಅಕಸ್ಮಿಕ ಬೇಟಿ ಆಯಿತು ಇದು ಪೇಸ್ ಬುಕ್ ಮಹಿಮೆ.

#Facebook ನಿನ್ನ ಮಹಿಮೆ ಅಪಾರ #   ಸಿದ್ದಾಪುರ ತಾಲ್ಲೂಕಿನ ಒಬ್ಬರ ಮನೆಗೆ ಹೋಗ ಬೇಕಾಗಿತ್ತು, ವಿಳಾಸ ತಪ್ಪಾಗಿ ಪಕ್ಕದ ಮನೆಗೆ ಹೋದಾಗ ಆ ಮನೆಯವರು ಸರಿ ವಿಳಾಸ ತಿಳಿಸಿದರು ವಾಪಾಸು ಬರುವಾಗ ಅರುಣ್ ಪ್ರಸಾದ್ ಅ೦ದ೦ಗೆ ಆಯಿತು ಆದರೆ ದೂರದ ಆ ಊರಲ್ಲಿ ಪರಿಚಿತರಿಲ್ಲವಲ್ಲ ಬೇರೆ ಯಾರ ಬಗ್ಗೆನೋ ಅಂತ ನಿಲ೯ಕ್ಷಿಸಿದೆ.   ಮುಂದೆ ಗೇಟು ದಾಟುವಾಗ ನನ್ನ ಕರೆಯುತ್ತಾ ಒಬ್ಬರು ಬಂದರು ನಾನು ಯಾವತ್ತೂ ಬೇಟಿ ಆಗಿರಲಿಲ್ಲ ಆದರೆ ಅವರ ಚಹರೆ ಚಿರಪರಿಚಿತ ಎನ್ನಿಸುತ್ತಿತ್ತು ಅವರೇ ಮುಂದಾಗಿ "ನಾನು ಅಭಿರಾಮ್ " ಎಂದಾಗ ಮೆದುಳಿನ ಮೆಮೊರಿ ಚಿಪ್ ಕನೆಕ್ಟ್ ಆಯಿತು.   ನನ್ನ FB ಫ್ರೆಂಡ್ ಅಭಿರಾಮ್ ನಿಜ ಗೆಳೆಯರಾದರು ಅವರು ಸಂಬಂದಿಗಳ ಮನೆಗೆ ಬಂದವರು ಅಲ್ಲಿ೦ದ ಹೊನ್ನಾವರಕ್ಕೆ ಹೋದರು.   ಇವರು ರಾಮಚಂದ್ರಪುರದ ಹಾಲಿ ಸ್ವಾಮಿಗಳ ವಿರುದ್ಧದ ಕೇಸಿನಲ್ಲಿ prime witness, ಇವರ ಕನ್ನಡ ಮತ್ತು ಇಂಗ್ಲೀಷ್ ಟಿವಿ ಮಾಧ್ಯಮದಲ್ಲಿನ ಸಂದಶ೯ನ ವೈರಲ್ ಆಗಿತ್ತು ಇವರ ವಿರುದ್ಧ ಮಠ 5 ಕೋಟಿ ಮಾನ ನಷ್ಟ ಕೇಸು ಹಾಕಿತ್ತು ನಂತರ ವಾಪಾಸ್ ಪಡೆಯಿತು ಅಂತಾರೆ ಮತ್ತು ಇವರ ಟಿವಿ ಸಂದಶ೯ನ ಟೆಲಿಕಾಸ್ಟ್ ಮಾಡದಂತೆ ನ್ಯಾಯಾಲಯದ ಪ್ರತಿಬಂದಕ ಆಜ್ನೆ ಇದೆ.   ಒಂದು ಹಂತದಲ್ಲಿ ಇವರಿಗೆ ಜೀವ ಬೆದರಿಕೆಯೂ ಇತ್ತು.   ವಾಮನನಂತೆ ಚಿಕ್ಕ ಮೈಕಟ್ಟಿನ ಪ್ರಚಂಡ ಬುದ್ಧಿವಂತ ಕೆಲವರಿಗೆ ಸೆಲಬ್ರಿಟಿ ಮತ್ತೆ ಕೆಲವರಿಗೆ ವಿಲನ್ ರ೦ತೆ ಕಾಣು...

Blog number 1081. ಸಾಗರದ ಆರ್ ಟಿ . ವಿಠಲಮೂರ್ತಿ ಈಗ ರಾಜ್ಯ ಮಟ್ಟದ ಪತ್ರಕರ್ತರ ಸಾಲಿನಲ್ಲಿ ಅಗ್ರಗಣ್ಯರು ಅವರ ಇದೊಂಥರಾ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಆಗಿದೆ ಓದಿ

ಸಾಗರ ತಾಲ್ಲೂಕಿನ ಹೆಸರು ಪತ್ರಿಕೋದ್ಯಮದಲ್ಲಿ ಉತ್ತುಂಗಕ್ಕೆ ಏರಿಸಿದ ಆರ್.ಟಿ. ವಿಠಲ್ ಮೂತಿ೯#    ಆರ್.ಟಿ.ವಿ. ಸಾಗರದವರು ಇವರಣ್ಣ ಸಾಗರದ ಮುನ್ಸಿಪಲ್ ಹೈಸ್ಕೂಲಲ್ಲಿ ನನಗೆ ಕ್ಲಾಸ್ ಮೇಟ್, ಆರ್.ಟಿ.ವಿ.ಜೂನಿಯರ್  ನಮಗೆಲ್ಲರಿಗೂ ಹಾಲಿ ಮOತ್ರಿ ಶ್ರೀನಿವಾಸ ಪೂಜಾರ್ ರ ಈಗಿನ ವಿಶೇಷ ಕತ೯ವ್ಯಧಿಕಾರಿ ಆಗಿರುವ ಕೆ.ದಮ೯ಪ್ಪ ಸಾಹೇಬರು ಆಗ ಗುರುಗಳು, ಆರ್.ಟಿ.ವಿ ರವಿ ಬೆಳೆಗೆರೆ ಜೊತೆ ಸೇರಿ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದಾಗ ನಮಗೆಲ್ಲ ಅವರು ಸ್ಟಾರ್ ಪತ್ರಕತ೯ರು.    ನಾನು ಹೊಸದಾಗಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ 1995 ರಲ್ಲಿ ಆಯ್ಕೆ ಆದಾಗ ಕಾಗೋಡು ತಿಮ್ಮಪ್ಪರ ಜೊತೆ ಹಳ್ಳಿ ತಿರುಗಾಟದಲ್ಲಿ ಹೋಗುವಾಗ ಹಳ್ಳಿಯ ರೈತರು ಕೃಷಿ ಇಲಾಖೆಯ ಭೂ ಸಂರಕ್ಷಣಾ ಇಲಾಖೆಯ ಬಗ್ಗೆ ದೂರುತ್ತಿದ್ದರು ಆಗ ಕಾಗೋಡು ನನಗೆ ಇದನ್ನೆಲ್ಲ ಪರಿಶೀಲನೆ ಮಾಡಲು ತಿಳಿಸಿದರು, ಹುಮ್ಮಸ್ಸಿನಿಂದ ಪರಿಶೀಲಿಸಿದಾಗ ಸಾಗರ ತಾಲ್ಲೂಕಿನಲ್ಲಿ ಕೋಟ್ಯಾ೦ತರ ರೂಪಾಯಿ ಅಪರಾ ತಪರಾ ಆಗಿದ್ದು ಬಯಲಾಯಿತು.   ತನಿಖೆ ಮಾಡಿದ ನಮ್ಮ ಕೈಕಟ್ಟಿ ಹಾಕುವ ಕೆಲಸ ಪ್ರಾರಂಭ ಆಯಿತು ಆಗ ಸಾಗರದ ಉತ್ಸಾಹಿ ಯುವಕ (ಈಗ ಕೆ.ಪಿ.ಸಿ.ಸಿ. ಸದಸ್ಯ) ತಾಳಗುಪ್ಪದ ಸಲೀo ವೈಕುಂಟ ರಾಜುರವರ ವಾರಪತ್ರಿಕೆಯಲ್ಲಿ ಆಗ ವರದಿಗಾರರಾಗಿದ್ದ ವಿಠಲ ಮೂತಿ೯ಯವರನ್ನ ಕರೆತಂದರು, ಸ್ಥಳ ಪರಿಶೀಲಿಸಿ ನಮ್ಮ ಆರೋಪದ ಸತ್ಯಾಸತ್ಯತೆ ತಿಳಿದ ಆರ್.ಟಿ.ವಿ. ವಾರಪತ...