Blog number 1087. ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಮುಡುಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ವಾಸಂತಿಕ ಪರಮೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರು ಸಾಗರ ತಾಲೂಕಿನ ಕರೂರು ಹೋಬಳಿಯ ಕಮಕೋಡಿನ ದತ್ತಾತ್ರೇಯ ಭಟ್ಟರು ನನ್ನ ಕಾದಂಬರಿ ಚ೦ಪಕ ಸರಸ್ಸು ಓದಿ ಅಭಿಪ್ರಾಯ ತಿಳಿಸಿದ್ದಾರೆ.
#ಐತಿಹಾಸಿಕ_ಹೊಯ್ಸಳ_ಖ್ಯಾತಿಯ_ವಾಸಂತಿಕಪರಮೇಶ್ವರಿ_ದೇವಾಲಯದ_ಪ್ರದಾನ_ಅಚ೯ಕರಾದ #ಸಾಗರ_ತಾಲ್ಲೂಕಿನ_ಕರೂರು_ಮೂಲದ_ಕಮಕೋ ಡು_ದತ್ತಾತ್ರೇಯ ಭಟ್ಟರು. #ಈ_ದೇವಾಲಯದ_ಎದುರಿನ_ಎರೆಡು_ಸಂಪಿಗೆ_ಮರ_ಸಾವಿರ_ವಷ೯ದ್ದು #ಸಾಗರ_ತಾಲ್ಲೂಕಿನ_ಕರೂರು_ಹೋಬಳಿಯ_ಕಮಕೋಡು_ಕೆಳದಿ_ಅರಸರ_ಸೈನಿಕ_ತರಬೇತಿ_ಕೇಂದ್ರ ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಪುರಾಣ ಪ್ರಸಿದ್ದ ವಾಸಂತಿಕ ಪರಮೇಶ್ವರಿ ದೇವಸ್ಥಾನ ಐತಿಹಾಸಿಕವಾಗಿಯೂ ಪ್ರಮುಖ ಸ್ಥಳ ಹೊಯ್ಸಳ ವಂಶ ಸ್ಥಾಪಕ ಸಳ ತನ್ನ ವಿದ್ಯಾಬ್ಯಾಸದ ಕಾಲದಲ್ಲಿ ಗುರುಗಳ ಆದೇಶ "ಹೊಯ್ - ಸಳ " ಎಂದಿದ್ದರಿಂದ ಎದುರಿಗೆ ಬಂದಿದ್ದ ಹುಲಿ ಸಂಹಾರ ಮಾಡಿದ್ದ ಸ್ಥಳವೂ ಇದೇ. ಈ ದೇವಾಲಯದ ಎದುರು ಬೃಹದಾಕಾರದ ಎರೆಡು ಸಂಪಿಗೆ ಮರವೂ ಇದೆ, ಇದನ್ನ ಕಾಬ೯ನ್ ಟೆಸ್ಟಿಂಗ್ ನಲ್ಲಿ ಒಂದು ಸಾವಿರ ವರ್ಷ ಪುರಾತನವಾಗಿದ್ದೆಂದು ಸಾಬೀತಾಗಿದೆ. ವಾಸಂತಿಕ ದೇವಿ ವಿಗ್ರಹ ಮಣ್ಣಿನದ್ದು (ಕಡು ಶಾಕ೯ರ ಪಾಕ), ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯವರಿಗೆ ಇದೆಲ್ಲ ಗೊತ್ತಿದೆ ಆದರೆ ರಾಜ್ಯದ ಇತರ ಜಿಲ್ಲೆಯವರಿಗೆ ಇದರ ಮಾಹಿತಿ ಕಡಿಮೆ, ನಾನು ಈ ದೇವಾಲಯ ನೋಡಿದ್ದೇನೆ. ಈ ದೇವಾಲಯದ ಪ್ರದಾನ ಅಚ೯ಕರು #ಕಮಕೋಡು_ದತ್ತಾತ್ರೇಯ ಭಟ್ಟರು ಇವರು ಸಾಗರ ತಾಲ್ಲೂಕಿನ ಕರೂರು ಹೋಬಳಿ ಮೂಲದವರು, ಇವರು ನಿಟ್...