Skip to main content

Blog number 3413. ಅಮೇರಿಕಾ ಅಡಿಕೆ ಹಾಳೆ ಉತ್ಪನ್ನ ಆಮದು ರದ್ದು ಮಾಡಿದೆ

#ಅಡಿಕೆ_ಹಾಳೆಯ_ಉತ್ಪನ್ನ_ಅಮೇರಿಕಾದಲ್ಲಿ_ನಿಷೇದ

#WHO_ಅಡಿಕೆಯಲ್ಲಿ_ಕ್ಯಾನ್ಸರ್_ಕಾರಕ_ಕಾರ್ಸಿನೋಜಿನ್_ಎಂಬ_ವರದಿ_ಕಾರಣ

#USನ_FDA_ಅಮೇರಿಕಾಕ್ಕೆ_ಅಡಿಕೆ_ಉತ್ಪನ್ನ_ಆಮದು_ಮಾರಾಟ_ರದ್ದು_ಮಾಡಿದೆ.


#arecafarmer #arecanuts #India #US #ban #arecaplates #dinnerwear 

  ಯುನಿಟೆಡ್ ಸ್ಟೇಟ್ ನ FDA (Foods & Drug Administration) ದಿನಾಂಕ 8 - ಮೇ - 2025 ರಂದು ಆದೇಶ ಹೊರಡಿಸಿದೆ ಏನೆಂದರೆ...

   ಅಮೇರಿಕಾದಲ್ಲಿ ಪರಿಸರ ಸ್ನೇಹಿ, ತಕ್ಷಣ ಮಣ್ಣಿನಲ್ಲಿ ಗೊಬ್ಬರ ಆಗುವಂತ ಅಡಿಕೆ ಹಾಳೆಯ ಡಿನ್ನರ್ ವೇರ್ (ಪ್ಲೇಟ್ - ಬೊವ್ಲ್ - ಲೋಟ - ಕಟ್ಲರಿ )ಗಳನ್ನ ಬೇರೆ ದೇಶದಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ  (ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಹಾನಿ ಎಂಬ ಕಾರಣದಿಂದ).

   ಆದರೆ ಅಡಿಕೆ ಗಿಡದಲ್ಲಿ ಮತ್ತು ಅದರ ಉತ್ಪನ್ನ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕವಾದ ಕಾರ್ಸಿನೋಜಿನ್ ಇರುವುದು ಸಂಶೋದನೆಯಿಂದ ದೃಡ ಪಟ್ಟಿರುವುದರಿಂದ ಈ ಅಡಿಕೆ ಹಾಳೆಯ ಉತ್ಪನ್ನಗಳನ್ನ ಅಮೇರಿಕಾದ ಮಾರುಕಟ್ಟೆಗೆ ಆಮದು ಮಾಡಿಕೊಳ್ಳುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಕಾನೂನು ರೀತ್ಯಾ ಅವಕಾಶ ಇಲ್ಲ ಎಂದಿದೆ.

   ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ USನ FDA ಆದೇಶ ಓದಿ

https://www.fda.gov/food/hfp-constituent-updates/fda-alerts-industry-and-consumers-about-palm-leaf-dinnerware?fbclid=IwY2xjawKQKDBleHRuA2FlbQIxMQABHgNodV_WOLCGxVL5RXiSGtKqVDW9C-0EXaw1wUp2mzbcZUs0yZzTAqO5L-xt_aem_lRPRgiyoEOhY9B553Y2eDg&sfnsn=wiwspwa#:~:text=Constituent%20Update,tree%2C%20and%20in%20the%20leaves

   ಇದನ್ನ ಭಾರತೀಯ ಅಡಿಕೆ ಬೆಳೆಗಾರರು ಹೆಚ್ಚು ಗಮನಿಸಲಿ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆ ಕ್ಯಾನ್ಸರ್ ಕಾರಕ ಎಂದು ಘೋಷಣೆ ಮಾಡಿರುವ ಪರಿಣಾಮದ ಕ್ರಮಗಳಲ್ಲಿ ಇದು ಒಂದು.

   ಕರ್ನಾಟಕದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಗಾರರರು ಇದ್ದಾರೆ,ದೇಶದ ಅತಿ ಹೆಚ್ಚು ಅಡಿಕೆ ಬೆಳೆಯುವುದು ಕರ್ನಾಟಕದಲ್ಲಿಯೇ.

   ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡದ ಪ್ರಯೋಗಾಲಯದಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಆಗಿಲ್ಲ ಎಂಬ ಕ್ಲಿನಿಕ್ ಟ್ರಯಲ್ ಮಾಡಿಸಿ WHO ದ ಈಗಿನ ಘೋಷಣೆ ಬದಲಿಸುವ ಕೆಲಸಕ್ಕೆ ಹೆಚ್ಚು ಹಣ (ಅಂದಾಜು 20 ಕೋಟಿ) ಮತ್ತು 10 ವರ್ಷ ಕಾಲಾವದಿ ಬೇಕೆಂದು ತಜ್ಞರು ಹೇಳುತ್ತಾರೆ.

  ಆದರೆ ನಮ್ಮ ಸರ್ಕಾರಗಳು ಈ ಬಗ್ಗೆ ಈವರೆಗೆ ಇಂತಹ ಯಾವುದೇ ಸಂಶೋದನೆಗೆ ಮುಂದಾಗದೇ ಅಡಿಕೆ ಬೆಳೆಗಾರರಿಗೆ ತಪ್ಪು ಮಾಹಿತಿ ನೀಡುತ್ತಲೇ ಬಂದಿದೆ.

     ಅಡಿಕೆ ಬ್ಯಾನ್ ನಂತ ಅಡಿಕೆ ಬೆಳೆಗಾರರಿಗೆ ಗಂಡಾಂತರವಾದ ಈ ವಿಷಯ ರಾಜಕಾರಣಕ್ಕೆ ಬಳಕೆ ಆಗುತ್ತಿರುವುದು ವಿಪರ್ಯಾಸ, ಮಂತ್ರಿಗಳಿಗೆ ಸನ್ಮಾನ ಸಮಾರಂಭಗಳಿಗೆ ಮಾತ್ರ ಅಡಿಕೆ ಬೆಳೆಗಾರರ ಬಳಸಿಕೊಳ್ಳುತ್ತಿರುವ ಅಡಿಕೆ ಸಂಸ್ಕರಣ ಮತ್ತು ಮಾರಾಟ ಕೇಂದ್ರಗಳು ಅಮೇರಿಕಾದಂತ ದೊಡ್ಡ ದೇಶ ಅಡಿಕೆ ಮಾತ್ರ ಅಲ್ಲ ಅಡಿಕೆಯ ಹಾಳೆ ಕೂಡ ಆ ದೇಶದ ಒಳಗೆ ಬಿಡುತ್ತಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಅಡಿಕೆ ಬಗ್ಗೆ ಏನೇನೆಲ್ಲ ಬರಬಹುದು?...

  ಅಡಿಕೆ ಬ್ಯಾನ್ ಬಗ್ಗೆ ಕಳೆದ 12 ವರ್ಷದಿಂದ ಎಚ್ಚರಿಸುತ್ತಾ ಬಂದಿದ್ದ ನಮ್ಮ ರಾಜ್ಯದ ಅನೇಕ ತಜ್ಞರನ್ನ ಈ ಅಡಿಕೆ ಮಾರಾಟ ಸಂಸ್ಥೆಗಳು ಕಡೆಗಾಣಿಸುತ್ತಲೇ ಬಂದಿದೆ.

   ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಈ ತಜ್ಞರನ್ನ ಬೆಳೆಗಾರರ ಜೊತೆ ಸಂವಾದಿಸದಂತೆ ನೋಡಿಕೊಳ್ಳಲಾಗಿತ್ತು ಕಾರಣ ಅವರು ಅಡಿಕೆ ಬ್ಯಾನ್ ನಿಂದ ಆಗಲಿರುವ ಈ ಸಾಧ್ಯಾಸಾಧ್ಯತೆ ಮತ್ತು ವಾಸ್ತವವಾಗಿ ಯಾವ ರೀತಿ ಕ್ಲಿನಿಕಲ್ ಟ್ರಯಲ್ ಆಗಬೇಕೆಂದು ಹೇಳಿ ಬಿಡುತ್ತಾರೆಂಬ ಭಯ ಆ ಸ೦ಸ್ಥೆಗಳಿಗೆ ಇತ್ತು.

   ರಾಜಕಾರಣಿಗಳ ಹಿತ ಕಾಪಾಡುವ ಅಡಿಕೆ ಸಂಸ್ಕರಣ ಮತ್ತು ಮಾರಾಟ ಸಂಸ್ಥೆಗಳು ನಮ್ಮ ರಾಜ್ಯದ ರೈತರಿಗೆ ಲಾಭದಾಯಕವಾಗಿದ್ದ ಮತ್ತು ನಮ್ಮ ದೇಶದ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನ ಪಡೆದಿದ್ದ ಅಡಿಕೆಗೆ ನ್ಯಾಯ ಕೊಡಿಸುವ ಕೆಲಸ ಮಾತ್ರ ಮಾಡಲಿಲ್ಲ ಮತ್ತು ಅಡಿಕೆ ಬೆಳೆಗಾರರ ಹಿತ ಕಾಪಾಡಲಿಲ್ಲ ಎಂಬುದು ವಿಷಾದನೀಯ ವಿಚಾರ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...