#ಅಡಿಕೆ_ಹಾಳೆಯ_ಉತ್ಪನ್ನ_ಅಮೇರಿಕಾದಲ್ಲಿ_ನಿಷೇದ
#WHO_ಅಡಿಕೆಯಲ್ಲಿ_ಕ್ಯಾನ್ಸರ್_ಕಾರಕ_ಕಾರ್ಸಿನೋಜಿನ್_ಎಂಬ_ವರದಿ_ಕಾರಣ
#USನ_FDA_ಅಮೇರಿಕಾಕ್ಕೆ_ಅಡಿಕೆ_ಉತ್ಪನ್ನ_ಆಮದು_ಮಾರಾಟ_ರದ್ದು_ಮಾಡಿದೆ.
#arecafarmer #arecanuts #India #US #ban #arecaplates #dinnerwear
ಯುನಿಟೆಡ್ ಸ್ಟೇಟ್ ನ FDA (Foods & Drug Administration) ದಿನಾಂಕ 8 - ಮೇ - 2025 ರಂದು ಆದೇಶ ಹೊರಡಿಸಿದೆ ಏನೆಂದರೆ...
ಅಮೇರಿಕಾದಲ್ಲಿ ಪರಿಸರ ಸ್ನೇಹಿ, ತಕ್ಷಣ ಮಣ್ಣಿನಲ್ಲಿ ಗೊಬ್ಬರ ಆಗುವಂತ ಅಡಿಕೆ ಹಾಳೆಯ ಡಿನ್ನರ್ ವೇರ್ (ಪ್ಲೇಟ್ - ಬೊವ್ಲ್ - ಲೋಟ - ಕಟ್ಲರಿ )ಗಳನ್ನ ಬೇರೆ ದೇಶದಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ (ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಹಾನಿ ಎಂಬ ಕಾರಣದಿಂದ).
ಆದರೆ ಅಡಿಕೆ ಗಿಡದಲ್ಲಿ ಮತ್ತು ಅದರ ಉತ್ಪನ್ನ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕವಾದ ಕಾರ್ಸಿನೋಜಿನ್ ಇರುವುದು ಸಂಶೋದನೆಯಿಂದ ದೃಡ ಪಟ್ಟಿರುವುದರಿಂದ ಈ ಅಡಿಕೆ ಹಾಳೆಯ ಉತ್ಪನ್ನಗಳನ್ನ ಅಮೇರಿಕಾದ ಮಾರುಕಟ್ಟೆಗೆ ಆಮದು ಮಾಡಿಕೊಳ್ಳುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಕಾನೂನು ರೀತ್ಯಾ ಅವಕಾಶ ಇಲ್ಲ ಎಂದಿದೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ USನ FDA ಆದೇಶ ಓದಿ
https://www.fda.gov/food/hfp-constituent-updates/fda-alerts-industry-and-consumers-about-palm-leaf-dinnerware?fbclid=IwY2xjawKQKDBleHRuA2FlbQIxMQABHgNodV_WOLCGxVL5RXiSGtKqVDW9C-0EXaw1wUp2mzbcZUs0yZzTAqO5L-xt_aem_lRPRgiyoEOhY9B553Y2eDg&sfnsn=wiwspwa#:~:text=Constituent%20Update,tree%2C%20and%20in%20the%20leaves
ಇದನ್ನ ಭಾರತೀಯ ಅಡಿಕೆ ಬೆಳೆಗಾರರು ಹೆಚ್ಚು ಗಮನಿಸಲಿ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆ ಕ್ಯಾನ್ಸರ್ ಕಾರಕ ಎಂದು ಘೋಷಣೆ ಮಾಡಿರುವ ಪರಿಣಾಮದ ಕ್ರಮಗಳಲ್ಲಿ ಇದು ಒಂದು.
ಕರ್ನಾಟಕದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಗಾರರರು ಇದ್ದಾರೆ,ದೇಶದ ಅತಿ ಹೆಚ್ಚು ಅಡಿಕೆ ಬೆಳೆಯುವುದು ಕರ್ನಾಟಕದಲ್ಲಿಯೇ.
ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡದ ಪ್ರಯೋಗಾಲಯದಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಆಗಿಲ್ಲ ಎಂಬ ಕ್ಲಿನಿಕ್ ಟ್ರಯಲ್ ಮಾಡಿಸಿ WHO ದ ಈಗಿನ ಘೋಷಣೆ ಬದಲಿಸುವ ಕೆಲಸಕ್ಕೆ ಹೆಚ್ಚು ಹಣ (ಅಂದಾಜು 20 ಕೋಟಿ) ಮತ್ತು 10 ವರ್ಷ ಕಾಲಾವದಿ ಬೇಕೆಂದು ತಜ್ಞರು ಹೇಳುತ್ತಾರೆ.
ಆದರೆ ನಮ್ಮ ಸರ್ಕಾರಗಳು ಈ ಬಗ್ಗೆ ಈವರೆಗೆ ಇಂತಹ ಯಾವುದೇ ಸಂಶೋದನೆಗೆ ಮುಂದಾಗದೇ ಅಡಿಕೆ ಬೆಳೆಗಾರರಿಗೆ ತಪ್ಪು ಮಾಹಿತಿ ನೀಡುತ್ತಲೇ ಬಂದಿದೆ.
ಅಡಿಕೆ ಬ್ಯಾನ್ ನಂತ ಅಡಿಕೆ ಬೆಳೆಗಾರರಿಗೆ ಗಂಡಾಂತರವಾದ ಈ ವಿಷಯ ರಾಜಕಾರಣಕ್ಕೆ ಬಳಕೆ ಆಗುತ್ತಿರುವುದು ವಿಪರ್ಯಾಸ, ಮಂತ್ರಿಗಳಿಗೆ ಸನ್ಮಾನ ಸಮಾರಂಭಗಳಿಗೆ ಮಾತ್ರ ಅಡಿಕೆ ಬೆಳೆಗಾರರ ಬಳಸಿಕೊಳ್ಳುತ್ತಿರುವ ಅಡಿಕೆ ಸಂಸ್ಕರಣ ಮತ್ತು ಮಾರಾಟ ಕೇಂದ್ರಗಳು ಅಮೇರಿಕಾದಂತ ದೊಡ್ಡ ದೇಶ ಅಡಿಕೆ ಮಾತ್ರ ಅಲ್ಲ ಅಡಿಕೆಯ ಹಾಳೆ ಕೂಡ ಆ ದೇಶದ ಒಳಗೆ ಬಿಡುತ್ತಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಅಡಿಕೆ ಬಗ್ಗೆ ಏನೇನೆಲ್ಲ ಬರಬಹುದು?...
ಅಡಿಕೆ ಬ್ಯಾನ್ ಬಗ್ಗೆ ಕಳೆದ 12 ವರ್ಷದಿಂದ ಎಚ್ಚರಿಸುತ್ತಾ ಬಂದಿದ್ದ ನಮ್ಮ ರಾಜ್ಯದ ಅನೇಕ ತಜ್ಞರನ್ನ ಈ ಅಡಿಕೆ ಮಾರಾಟ ಸಂಸ್ಥೆಗಳು ಕಡೆಗಾಣಿಸುತ್ತಲೇ ಬಂದಿದೆ.
ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಈ ತಜ್ಞರನ್ನ ಬೆಳೆಗಾರರ ಜೊತೆ ಸಂವಾದಿಸದಂತೆ ನೋಡಿಕೊಳ್ಳಲಾಗಿತ್ತು ಕಾರಣ ಅವರು ಅಡಿಕೆ ಬ್ಯಾನ್ ನಿಂದ ಆಗಲಿರುವ ಈ ಸಾಧ್ಯಾಸಾಧ್ಯತೆ ಮತ್ತು ವಾಸ್ತವವಾಗಿ ಯಾವ ರೀತಿ ಕ್ಲಿನಿಕಲ್ ಟ್ರಯಲ್ ಆಗಬೇಕೆಂದು ಹೇಳಿ ಬಿಡುತ್ತಾರೆಂಬ ಭಯ ಆ ಸ೦ಸ್ಥೆಗಳಿಗೆ ಇತ್ತು.
ರಾಜಕಾರಣಿಗಳ ಹಿತ ಕಾಪಾಡುವ ಅಡಿಕೆ ಸಂಸ್ಕರಣ ಮತ್ತು ಮಾರಾಟ ಸಂಸ್ಥೆಗಳು ನಮ್ಮ ರಾಜ್ಯದ ರೈತರಿಗೆ ಲಾಭದಾಯಕವಾಗಿದ್ದ ಮತ್ತು ನಮ್ಮ ದೇಶದ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನ ಪಡೆದಿದ್ದ ಅಡಿಕೆಗೆ ನ್ಯಾಯ ಕೊಡಿಸುವ ಕೆಲಸ ಮಾತ್ರ ಮಾಡಲಿಲ್ಲ ಮತ್ತು ಅಡಿಕೆ ಬೆಳೆಗಾರರ ಹಿತ ಕಾಪಾಡಲಿಲ್ಲ ಎಂಬುದು ವಿಷಾದನೀಯ ವಿಚಾರ.
Comments
Post a Comment