Skip to main content

Blog number 3422. ಖ್ಯಾತ ಪತ್ರಕರ್ತರುದ್ರಪ್ಪ ಚನ್ನಬಸಪ್ಪ

#ರುದ್ರಪ್ಪಚನ್ನಬಸಪ್ಪ

#ಉದಯ_TVಯ_ಮೊದಲ_ಬ್ಯೂರೋ_ಚೀಪ್



#ಸಾಗರ_ತಾಲೂಕಿನ_ವಿಚಾರ_ಕ್ರಾಂತಿಯ_ಪಿತಾಮಹಾ

#ಶರಾವತಿ_ನದಿ_ಮುಳುಗಡೆ_ಸಂತ್ರಸ್ಥರು 

#ಸೊನ್ನೆಯಿಂದ_ದೊಡ್ಡ_ಸಾದನೆಗೈದ_ಸಾದಕರು.

#UdayaTV #karnataka #journalism #DSS #socialist #press #sagar #shivamogga 

  70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು.

   80ರ ದಶಕದಲ್ಲಿ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು.

   ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ್, ರಿಕ್ಷಾ ಮೋಹನ್, ಪೆಡರಿಕ್ , ಮಂಡಗಳಲೆ ನಾರಾಯಣಪ್ಪ, ಎಸ್.ಎಸ್.ನಾಗರಾಜ್,ವಸಂತಕುಗ್ವೆ  ಇವರನ್ನೆಲ್ಲ ಹೋರಾಟದ ಸಾಗರಕ್ಕೆ ದುಮುಕಲು ಈ ರುದ್ರಪ್ಪರ ಪ್ರೇರಣೆ ಕೂಡ ಆಗಿತ್ತೆಂಬುದು ಮರೆಯುವಂತಿಲ್ಲ.

   ದಲಿತ ಸಂಘರ್ಷ ಸಮಿತಿಯ ಬಿ .ಕೃಷ್ಣಪ್ಪರಿಂದ ಶಿವಮೊಗ್ಗದ ಪ್ರೋ. ರಾಚಪ್ಪನವರು ಸಾಗರದ ಸಾಗರ್ ಹೋಟೆಲ್ ವೃತ್ತದ GGMS ಶಾಲೆಯಲ್ಲಿ ಸಂಜೆ ಹೊತ್ತಿಗೆ ಏರ್ಪಡಿಸುತ್ತಿದ್ದ ತರಬೇತಿ ಶಿಬಿರ ನನ್ನನ್ನೂ ಹೋರಾಟದ ಹಾದಿಗೆ ಹೊರಳಲು ಕಾರಣವಾಗಿತ್ತು.

   ನಂತರ ದಿಡೀರನೆ 1984 ರ ನಂತರ ರುದ್ರಪ್ಪ ಸಾಗರದಿಂದ ನಾಪತ್ತೆ ನಂತರ 90 ರ ದಶಕದಲ್ಲಿ ಕನ್ನಡದ ಏಕೈಕ TV ಸಂಸ್ಥೆ ಬ್ಯೂರೋ ಚೀಪ್ ಆಗಿ ರುದ್ರಪ್ಪನವರು ಉದಯ TV ಪರದೆ ಮೇಲೆ ನೋಡಿದಾಗಲೇ ಗೊತ್ತಾಗಿದ್ದು.

    ನಂತರ ರುದ್ರಪ್ಪನವರು ಸಂಪರ್ಕಕ್ಕೆ ಬಂದರೂ ಮುಖತ ಭೇಟಿ ಆಗಿರಲಿಲ್ಲ ನಿನ್ನೆ ರುದ್ರಪ್ಪ ದಂಪತಿಗಳು ರಿಪ್ಪನಪೇಟೆ ಮತ್ತು ಸಾಗರದಲ್ಲಿ ಅವರ ಸಂಬಂದಿಗಳ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಾಗ ನಮ್ಮಿಬ್ಬರ ಬೇಟಿ ಸುಮಾರು 40 ವರ್ಷದ ನಂತರ ಆಯಿತು.

    ಬೆಂಗಳೂರು ವಾಸಿ ಆಗಿರುವ ರುದ್ರಪ್ಪರ ಇಬ್ಬರು ಪುತ್ರಿಯರೂ ಉನ್ನತ ವ್ಯಾಸಂಗ ಮಾಡಿ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ.

   ವಿದ್ಯುತ್ ಯೋಜನೆಗಾಗಿ ಹಿರೇಬಾಸ್ಕರ ಡ್ಯಾಮ್ ಮತ್ತು ಲಿಂಗನಮಕ್ಕಿ ಡ್ಯಾಮ್ ನಿರ್ಮಾಣದಿಂದ ಎರೆಡು ಬಾರಿ ಮುಳುಗಡೆ ಆಗಿ ಸಂತ್ರಸ್ಥರಾದ ಕುಟುಂಬ ರುದ್ರಪ್ಪನವರದ್ದು.

   ಆರ್ಥಿಕವಾಗಿ ಇದರಿಂದ ಚೇತರಿಸಿ ಕೊಳ್ಳಲಾಗದೆ ಇವರ ತಂದೆ ಪಟ್ಟ ಕಷ್ಟ ಆಗ SSLC ಪಾಸಾಗಿದ್ದ ರುದ್ರಪ್ಪರಿಗಿ ಪಿಯುಸಿ ಸೇರಲು ಸಾಧ್ಯವೇ ಆಗಲಿಲ್ಲ.

  ಮನೆಯ ದನಗಾವಲು ಒಂದು ವರ್ಷ ಮಾಡಿ ಅದರಲ್ಲಿ ಬಂದ ಹಣದಿಂದ ಶಿವಮೊಗ್ಗದ ನ್ಯಾಷನಲ್ ಕಾಲೇಜು ಸೇರಿ ನಂತರ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದರು.

  ಕೆಲ ಕಾಲ ಸಾಗರ ಪೇಟೆಯ ಸಾಗರ್ ಲಾಡ್ಜನಲ್ಲಿ ಮ್ಯಾನೇಜರ್ ವೃತ್ತಿ ಮಾಡುತ್ತಿದ್ದರು ಇವರ ಜೊತೆ ಆಗ ಶಾಂತಾ ಲಾಡ್ಜ್ ಬಸವರಾಜು ಕೂಡ ಇದ್ದರು.

    ಆ ಸಂದಭ೯ದಲ್ಲೇ ಸಾಗರದಲ್ಲಿ ಪೌರ ಸನ್ಮಾನ ಸ್ಪೀಕರಿಸಲು ಬಂದ ಮುಖ್ಯಮಂತ್ರಿ ಗುಂಡೂರಾವ್ ಗೆ ಘೆರಾವು ಮಾಡಿದ ತಂಡದ ಮುಖ್ಯಸ್ಥ ಈ ರುದ್ರಪ್ಪ ಆದ್ದರಿಂದ ಸಾಗರಕ್ಕೆ ಯಾರೇ ಮಂತ್ರಿಗಳು ಬಂದರೂ ರುದ್ರಪ್ಪನವರನ್ನ ಮುಂಜಾಗೃತ ಕ್ರಮವಾಗಿ ಬಂದನದಲ್ಲಿಡುತ್ತಿದ್ದ ಪೋಲಿಸ್ ವ್ಯವಸ್ಥೆ ನಂತರ ಮುಂಬೈ ಸೇರಿ ನೀರಾವರಿ ಆಣೆಕಟ್ಟು ನಿರ್ಮಾಣ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮುಖ್ಯಸ್ಥರಾಗಿ ಅಲ್ಲಿಯೇ ಜರ್ನಲಿಸಂ ಪಿಜಿ ಡಿಪ್ಲೋಮ ಮಾಡಿ ರಾಜ್ಯಕ್ಕೆ ವಾಪಾಸಾಗಿ ಅನೇಕ ಪತ್ರಿಕೆ ಟಿವಿ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ ಜೊತೆಗೆ ಅನೇಕ ವೈಚಾರಿಕ ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಿದ್ದಾರೆ.

   80ರ ದಶಕದಲ್ಲಿ ಡಿಪ್ಲೋಮ ವ್ಯಾಸಂಗ ಅರ್ದಕ್ಕೆ ಬಿಟ್ಟು ಹೋರಾಟದ ಕಿಚ್ಚು ಹಚ್ಚಿಕೊಂಡ ನನ್ನ ಜೀವನದ ತಿರುವಿಗೆ ಈ ರುದ್ರಪ್ಪನವರೂ ಕಾರಣವಾಗಿದ್ದಾರೆ ಇದನ್ನೆಲ್ಲ ನೆನಪು ಮಾಡಿಕೊಂಡೆವು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...