#ರುದ್ರಪ್ಪಚನ್ನಬಸಪ್ಪ
#ಉದಯ_TVಯ_ಮೊದಲ_ಬ್ಯೂರೋ_ಚೀಪ್
#ಸಾಗರ_ತಾಲೂಕಿನ_ವಿಚಾರ_ಕ್ರಾಂತಿಯ_ಪಿತಾಮಹಾ
#ಶರಾವತಿ_ನದಿ_ಮುಳುಗಡೆ_ಸಂತ್ರಸ್ಥರು
#ಸೊನ್ನೆಯಿಂದ_ದೊಡ್ಡ_ಸಾದನೆಗೈದ_ಸಾದಕರು.
#UdayaTV #karnataka #journalism #DSS #socialist #press #sagar #shivamogga
70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು.
80ರ ದಶಕದಲ್ಲಿ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು.
ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ್, ರಿಕ್ಷಾ ಮೋಹನ್, ಪೆಡರಿಕ್ , ಮಂಡಗಳಲೆ ನಾರಾಯಣಪ್ಪ, ಎಸ್.ಎಸ್.ನಾಗರಾಜ್,ವಸಂತಕುಗ್ವೆ ಇವರನ್ನೆಲ್ಲ ಹೋರಾಟದ ಸಾಗರಕ್ಕೆ ದುಮುಕಲು ಈ ರುದ್ರಪ್ಪರ ಪ್ರೇರಣೆ ಕೂಡ ಆಗಿತ್ತೆಂಬುದು ಮರೆಯುವಂತಿಲ್ಲ.
ದಲಿತ ಸಂಘರ್ಷ ಸಮಿತಿಯ ಬಿ .ಕೃಷ್ಣಪ್ಪರಿಂದ ಶಿವಮೊಗ್ಗದ ಪ್ರೋ. ರಾಚಪ್ಪನವರು ಸಾಗರದ ಸಾಗರ್ ಹೋಟೆಲ್ ವೃತ್ತದ GGMS ಶಾಲೆಯಲ್ಲಿ ಸಂಜೆ ಹೊತ್ತಿಗೆ ಏರ್ಪಡಿಸುತ್ತಿದ್ದ ತರಬೇತಿ ಶಿಬಿರ ನನ್ನನ್ನೂ ಹೋರಾಟದ ಹಾದಿಗೆ ಹೊರಳಲು ಕಾರಣವಾಗಿತ್ತು.
ನಂತರ ದಿಡೀರನೆ 1984 ರ ನಂತರ ರುದ್ರಪ್ಪ ಸಾಗರದಿಂದ ನಾಪತ್ತೆ ನಂತರ 90 ರ ದಶಕದಲ್ಲಿ ಕನ್ನಡದ ಏಕೈಕ TV ಸಂಸ್ಥೆ ಬ್ಯೂರೋ ಚೀಪ್ ಆಗಿ ರುದ್ರಪ್ಪನವರು ಉದಯ TV ಪರದೆ ಮೇಲೆ ನೋಡಿದಾಗಲೇ ಗೊತ್ತಾಗಿದ್ದು.
ನಂತರ ರುದ್ರಪ್ಪನವರು ಸಂಪರ್ಕಕ್ಕೆ ಬಂದರೂ ಮುಖತ ಭೇಟಿ ಆಗಿರಲಿಲ್ಲ ನಿನ್ನೆ ರುದ್ರಪ್ಪ ದಂಪತಿಗಳು ರಿಪ್ಪನಪೇಟೆ ಮತ್ತು ಸಾಗರದಲ್ಲಿ ಅವರ ಸಂಬಂದಿಗಳ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಾಗ ನಮ್ಮಿಬ್ಬರ ಬೇಟಿ ಸುಮಾರು 40 ವರ್ಷದ ನಂತರ ಆಯಿತು.
ಬೆಂಗಳೂರು ವಾಸಿ ಆಗಿರುವ ರುದ್ರಪ್ಪರ ಇಬ್ಬರು ಪುತ್ರಿಯರೂ ಉನ್ನತ ವ್ಯಾಸಂಗ ಮಾಡಿ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ.
ವಿದ್ಯುತ್ ಯೋಜನೆಗಾಗಿ ಹಿರೇಬಾಸ್ಕರ ಡ್ಯಾಮ್ ಮತ್ತು ಲಿಂಗನಮಕ್ಕಿ ಡ್ಯಾಮ್ ನಿರ್ಮಾಣದಿಂದ ಎರೆಡು ಬಾರಿ ಮುಳುಗಡೆ ಆಗಿ ಸಂತ್ರಸ್ಥರಾದ ಕುಟುಂಬ ರುದ್ರಪ್ಪನವರದ್ದು.
ಆರ್ಥಿಕವಾಗಿ ಇದರಿಂದ ಚೇತರಿಸಿ ಕೊಳ್ಳಲಾಗದೆ ಇವರ ತಂದೆ ಪಟ್ಟ ಕಷ್ಟ ಆಗ SSLC ಪಾಸಾಗಿದ್ದ ರುದ್ರಪ್ಪರಿಗಿ ಪಿಯುಸಿ ಸೇರಲು ಸಾಧ್ಯವೇ ಆಗಲಿಲ್ಲ.
ಮನೆಯ ದನಗಾವಲು ಒಂದು ವರ್ಷ ಮಾಡಿ ಅದರಲ್ಲಿ ಬಂದ ಹಣದಿಂದ ಶಿವಮೊಗ್ಗದ ನ್ಯಾಷನಲ್ ಕಾಲೇಜು ಸೇರಿ ನಂತರ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದರು.
ಕೆಲ ಕಾಲ ಸಾಗರ ಪೇಟೆಯ ಸಾಗರ್ ಲಾಡ್ಜನಲ್ಲಿ ಮ್ಯಾನೇಜರ್ ವೃತ್ತಿ ಮಾಡುತ್ತಿದ್ದರು ಇವರ ಜೊತೆ ಆಗ ಶಾಂತಾ ಲಾಡ್ಜ್ ಬಸವರಾಜು ಕೂಡ ಇದ್ದರು.
ಆ ಸಂದಭ೯ದಲ್ಲೇ ಸಾಗರದಲ್ಲಿ ಪೌರ ಸನ್ಮಾನ ಸ್ಪೀಕರಿಸಲು ಬಂದ ಮುಖ್ಯಮಂತ್ರಿ ಗುಂಡೂರಾವ್ ಗೆ ಘೆರಾವು ಮಾಡಿದ ತಂಡದ ಮುಖ್ಯಸ್ಥ ಈ ರುದ್ರಪ್ಪ ಆದ್ದರಿಂದ ಸಾಗರಕ್ಕೆ ಯಾರೇ ಮಂತ್ರಿಗಳು ಬಂದರೂ ರುದ್ರಪ್ಪನವರನ್ನ ಮುಂಜಾಗೃತ ಕ್ರಮವಾಗಿ ಬಂದನದಲ್ಲಿಡುತ್ತಿದ್ದ ಪೋಲಿಸ್ ವ್ಯವಸ್ಥೆ ನಂತರ ಮುಂಬೈ ಸೇರಿ ನೀರಾವರಿ ಆಣೆಕಟ್ಟು ನಿರ್ಮಾಣ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮುಖ್ಯಸ್ಥರಾಗಿ ಅಲ್ಲಿಯೇ ಜರ್ನಲಿಸಂ ಪಿಜಿ ಡಿಪ್ಲೋಮ ಮಾಡಿ ರಾಜ್ಯಕ್ಕೆ ವಾಪಾಸಾಗಿ ಅನೇಕ ಪತ್ರಿಕೆ ಟಿವಿ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ ಜೊತೆಗೆ ಅನೇಕ ವೈಚಾರಿಕ ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಿದ್ದಾರೆ.
80ರ ದಶಕದಲ್ಲಿ ಡಿಪ್ಲೋಮ ವ್ಯಾಸಂಗ ಅರ್ದಕ್ಕೆ ಬಿಟ್ಟು ಹೋರಾಟದ ಕಿಚ್ಚು ಹಚ್ಚಿಕೊಂಡ ನನ್ನ ಜೀವನದ ತಿರುವಿಗೆ ಈ ರುದ್ರಪ್ಪನವರೂ ಕಾರಣವಾಗಿದ್ದಾರೆ ಇದನ್ನೆಲ್ಲ ನೆನಪು ಮಾಡಿಕೊಂಡೆವು.
Comments
Post a Comment