#ನಿನ್ನೆಯ_ಸಂಜೆ_ಅವಿಸ್ಮರಣೀಯಗೊಳಿಸಿದ
#ಇತಿಹಾಸ_ಸಂಶೋಧಕ_ರಮೇಶ್_ಹಿರೇಜಂಬೂರ್
#ನಾನು_ಇವರ_ಅಭಿಮಾನಿ.
#historian #rameshhirejamburu #kadamba #talagunda #kannada #shilashasana
ನಿನ್ನೆ ಸಂಜೆ ರಮೇಶ್ ಹಿರೇಜಂಬೂರ್ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಮೊದಲ ಮುಖತಃ ಬೇಟಿ.
ಶಿವಮೊಗ್ಗ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರಾದ ಇವರ ಪೇಸ್ ಬುಕ್ ನ ಎಲ್ಲಾ ಲೇಖನ ತಪ್ಪದೆ ಓದುತ್ತೇನೆ ನಾನು ಇವರ ಸಂಶೋದನಾ ಲೇಖನಗಳ ಅಭಿಮಾನಿ.
ರಮೇಶ್ ಹಿರೇಜಂಬೂರ್ ಮತ್ತು ನವೀನ್ ಶಿರಾಳಕೊಪ್ಪ ಇವರಿಬ್ಬರು ತಾಳಗುಂದದ ಮೊದಲ ಕನ್ನಡ ಶಾಸನದ ಸಂಶೋಧನೆಯಲ್ಲಿ ಹೆಚ್ಚು ಶ್ರಮವಹಿಸಿದವರು ಇದಕ್ಕಾಗಿ ರಾಜ್ಯದ ಕನ್ನಡಿಗರು ಇವರನ್ನು ಅಭಿನಂದಿಸಬೇಕು.
ನಿನ್ನೆಯ ಸಂಜೆ ನನ್ನ ಕಛೇರಿಯಲ್ಲಿ ಜಿಲ್ಲೆಯ ಇತಿಹಾಸದ ವಿಚಾರವಾಗಿ ತುಂಬಾ ಹೊತ್ತು ಮಾತಾಡಿದೆವು ಇವರ ಪತ್ನಿ ತವರೂರು ಹೊಸನಗರದ ಸೋನಲೆಗೆ ಹೊರಡುವ ತನಕ.
ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಹಿಂದೆಯೇ ಓದಿದ್ದಾರೆ, ಆ ಪುಸ್ತಕದ ವಿಚಾರವಾಗಿ ಕೆಲವು ಕಂತುಗಳ ನನ್ನ ಸಂದರ್ಶನ ಪೇಸ್ ಬುಕ್ ನಲ್ಲಿ ಪ್ರಕಟಿಸಲಿದ್ದಾರೆ.
ಚಹಾ ಮತ್ತು ಮಿರ್ಚಿ ಬೊಂಡದ ಆತಿಥ್ಯ ನೀಡಿದೆ ಹೊರಡುವಾಗ ನನ್ನ ಸಣ್ಣ ಕಥೆಗಳ #ಬಿಲಾಲಿ_ಬಿಲ್ಲಿ_ಅಭ್ಯಂಜನ ಕಥಾ ಸಂಕಲನ ನೀಡಿ ಸೆಲ್ಪಿ ತೆಗೆದುಕೊಂಡು ಬಿಳ್ಕೊಟ್ಟೆ.
ನನ್ನ ಒಂದು ಪ್ರತಿಪಾದನೆ ಮತ್ತು ಪ್ರಯತ್ನ ಏನೆಂದರೆ... ಪ್ರತಿ ಊರಿಗೂ ಇತಿಹಾಸ ಇದೆ, ಅಲ್ಲಿ ಇತಿಹಾಸದ ಕಥೆ ಹೇಳುವ ಶಿಲಾಶಾಸನ, ಸ್ಮಾರಕ, ಕೋಟೆ ಕೊತ್ತಳ ಮತ್ತು ಪುರಾತನ ದೇವಾಲಯಗಳಿದೆ ಅದನ್ನು ಸ್ಥಳಿಯರಿಗೆ ತಿಳಿಸುವ ದಾಖಲಿಸುವ ಕೆಲಸ ಆಗಬೇಕಾಗಿದೆ.
ಇದನ್ನು ಸ್ಥಳಿಯ ಆಸಕ್ತ ಶಿಕ್ಷಕರಿಂದ ಮಾತ್ರ ಸಾಧ್ಯವಿದೆ ಅವರು ಅದನ್ನು ತಮ್ಮ ವಿದ್ಯಾರ್ಥಿಗಳ ಮೂಲಕ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬಹುದಾಗಿದೆ ಇದಕ್ಕೆ ಪ್ರೇರಣೆಯಾಗಿರುವ ಕದಂಬ ಇತಿಹಾಸದ ಸಂಶೋದಕರಾದ ರಮೇಶ್ ಹಿರೇಜಂಬೂರ್ ಮತ್ತು ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಇತಿಹಾಸ ಸಂಶೋದಕರಾದ ಲೋಕರಾಜ ಜೈನರು ನನಗೆ ಮಾದರಿ ಆಗಿದ್ದಾರೆ.
ರಮೇಶ್_ಹಿರೇಜಂಬೂರ್ ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರಿನವರು ಇವರು "ಹಿರೇಜಂಬೂರು ಸತ್ಯಕ್ಕ" ಪುಸ್ತಕ ಬರೆದು ಪ್ರಕಟಿಸಿದ್ದಾರೆ, ಶಾಸನಗಳ ಲಿಪಿ ಓದುವ ಕೆಲವೇ ಕೆಲವು ಸಂಶೋಧಕರಲ್ಲಿ ಇವರೂ ಒಬ್ಬರಾಗಿದ್ದಾರೆ.
ತಾವು ಶಿಕ್ಷಕರಾಗಿ ಕೆಲಸ ಮಾಡುವ ಶಾಲೆಯಲ್ಲೂ ಅತ್ಯುತ್ತಮ ಶಿಕ್ಷಕರೆಂಬ ಹೆಸರುಗಳಿಸಿದ್ದಾರೆ, ಕನ್ನಡ ಇಂಗ್ಲೀಷ್ ಬಾಷಾ ಪಾಂಡಿತ್ಯ ಹೊಂದಿರುವ ರಮೇಶ್ ಹಿರೇಜಂಬೂರು ಇತಿಹಾಸ ಸಂಶೋದನೆಯ ಕಾರ್ಯದಲ್ಲಿ ಇನ್ನೂ ಎತ್ತರೆತ್ತರಕ್ಕೆ ಏರಲಿ ಎಂದು ಹಾರೈಸುತ್ತೇನೆ.
ಇತ್ತೀಚಿಗೆ ಇವರು ಮಲೆನಾಡನ ಅಡಿಕೆಯ ಬಗ್ಗೆ ಹತ್ತನೆ ಶತಮಾನದ ಶಾಸನಗಳಲ್ಲಿನ ಉಲ್ಲೇಖದ ಲೇಖನ ಹೆಚ್ಚು ವೈರಲ್ ಆಗಿತ್ತು.
ತಾಳಗುಂದದ_12ನೇ_ಶತಮಾನದ ಶಾಸನದಲ್ಲಿಯೂ ಅಡಿಕೆ ತೋಟದ ಉಲ್ಲೇಖವಿದೆ, ಕ್ರಿ.ಶ. 1203ರಲ್ಲಿ ಬಂದಳಿಕೆಯ ಶಾಸನವೊಂದರಲ್ಲಿ ಶಾಂತಿನಾಥ ದೇವರಿಗೆ 500 ಅಡಿಕೆಮರವುಳ್ಳ ತೋಟವನ್ನು ದಾನ ಮಾಡಿದ ಉಲ್ಲೇಖವಿದೆ.
#ಬಳ್ಳಿಗಾವಿಯ_ಕ್ರಿ_ಶ_1156ರ_ಅವಧಿಯ_ಶಾಸನವೊಂದರಲ್ಲಿ ಶ್ರೀ ಕೇದಾರೇಶ್ವರ ದೇವರ ತೋಟದಲ್ಲಿ ಬೆಳೆಯುವ ಗೋಟು ಅಡಿಕೆಯ ಮೇಲಿನ ಕಂದಾಯವನ್ನು ದೇವರ ಆರಾಧನೆಗಾಗಿ ದಾನವಾಗಿ ನೀಡಲಾಗಿದೆ.
10ನೇ ಶತಮಾನದಲ್ಲಿ ನಮ್ಮ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತೆಂಬ ಐತಿಹಾಸಿಕ ದಾಖಲೆ ನೀಡಿದವರು ನಮ್ಮ ಜಿಲ್ಲೆಯ ಇತಿಹಾಸ ಸಂಶೋಧಕರಾದ ರಮೇಶ್ ಹಿರೇಜಂಬೂರ್.
ಅವರ ಸಂಶೋದನಾ ಲೇಖನಗಳು ಪುಸ್ತಕವಾಗಿ ಹೊರಬರಬೇಕು ಅದಕ್ಕೆ ಆಸಕ್ತ ಪುಸ್ತಕ ಪ್ರಕಾಶಕರು ಮುಂದೆ ಬರಬೇಕು.
Comments
Post a Comment