#ಕೆಳದಿ_ಅರಸರಿಗೆ_ಶಾಪ!?
#ಕಾಳುಮೆಣಸಿನ_ರಾಣಿ_ಬಂದನ_ವಿರೋಧಿಸಿ
#ಅಂತಿಮ_ಕ್ಷಣದವರೆಗೆ_ಕವಣೆ_ಕಲ್ಲಿಂದ_ದಾಳಿ_ಮಾಡಿದ_ಕುಣುಬಿ_ಜನಾಂಗದ_ಸೈನಿಕರು
#ಕುಣುಬಿ_ಜನಾಂಗದ_ಕೆಂಪಿ_ಕೆಳದಿ_ಅರಸರಿಗೆ_ಹಾಕಿದ_ಶಾಪ
#ಕುಣುಬಿ_ಜನಾಂಗದ_ಸ್ವಾಮಿ_ನಿಷ್ಟೆಗೆ_ಪ್ರತೀಕವಾದ_ಇತಿಹಾಸದ_ದಾಖಲೆ
#ಯಮ_ಸಲ್ಲೇಖನ_ವೃತ_ಪಾಲಿಸಿ_ಇಕ್ಕೇರಿ_ಕೋಟೆಯಲ್ಲಿ_ಜಿನೈಕ್ಯಳಾಗುವ_ರಾಣಿಚೆನ್ನಬೈರಾದೇವಿ.
#gerusoppe #keladi #kunubi #tribals #ikkerifort #avinahalli #chennabyaradevi
ಶರಾವತಿ ನದಿ ದಂಡೆಯ ಏಕೈಕ ಸಾಮ್ರಾಜ್ಯವಾದ ಗೇರುಸೊಪ್ಪೆ ಸಾಮ್ರಾಜ್ಯವನ್ನು 54 ವರ್ಷವಾಳಿದ ಜೈನ ರಾಣಿ ಚೆನ್ನಬೈರಾದೇವಿಯನ್ನು ಯುರೋಪಿನವರು ಕಾಳುಮೆಣಸಿನ ರಾಣಿ ಎಂದೇ ಕರೆದರು.
ವರದಾನದಿ ದಂಡೆಯ ಕೆಳದಿ ರಾಜವಂಶದ 43 ವರ್ಷ ಆಳ್ವಿಕೆ ಮಾಡುವ, ಸಾಗರ ಪಟ್ಟಣ ಸದಾಶಿವ ಸಾಗರ ನಿರ್ಮಿಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ರಾಣಿ ಚೆನ್ನಾಬೈರಾದೇವಿಯನ್ನು ಗೇರುಸೊಪ್ಪೆಯಲ್ಲಿ ಬಂದಿಸಿ ಇಕ್ಕೇರಿ ಕೋಟೆಯ ಜೈಲಿಗೆ ಕರೆತರುತ್ತಾರೆ.
ಇದನ್ನು ವಿರೋಧಿಸಿ ಕೊನೆ ತನಕ ಹೋರಾಟ ಮಾಡಿದವರು ಗುಡ್ಡಗಾಡು ಜನಾಂಗದ ಸ್ವಾಮಿ ನಿಷ್ಟೆಗೆ ಹೆಸರಾದ ಕುಣುಬಿ ಜನಾಂಗದವರು.
ಕಣಿವೆಯ ಮೇಲಿಂದ ಕವಣೆ ಕಲ್ಲಿನಿಂದ ದಾಳಿ ಮಾಡುವ ಕುಣುಬಿ ಜನಾಂಗದ ಪ್ರಜೆಗಳ ಹೋರಾಟದ ವಿವರಗಳು ಈ ಘಟನೆ ನಡೆದ ಸಾಗರ ತಾಲ್ಲೂಕಿನವರೇ ಆದ ನಮಗೆ ಗೊತ್ತೇ ಇಲ್ಲದ ಚರಿತ್ರೆಗಳು ಆದರೆ ಇದು ರಾಣಿಯನ್ನ ಬಂದಿಸಿ ಕರೆ ತಂದ ಮಾಗ೯ದಲ್ಲಿರುವ ನೂರಾರು ಜೈನ ಮನೆತನಗಳಲ್ಲಿ ಮರೆಯದ ನೋವಿನ ಕಥೆಯಾಗಿ ಉಳಿದು ತಲೆಮಾರಿಂದ ತಲೆಮಾರಿಗೆ ಹರಿದು ಬಂದಿದೆ.
ಕುಣುಬಿ ಜನಾಂಗದ ಕೆಂಪಿ ಎಂಬ ಮಹಿಳೆ ವಿಪಲ ಹೋರಾಟ ಮಾಡುತ್ತಾಳೆ, ರಾಣಿಯನ್ನ ಬಂದಿಸಿ ತರುತ್ತಿದ್ದ ಮೇನೆಯನ್ನು ತನ್ನ ಎರೆಡು ಕೈಗಳಿಂದ ಗಟ್ಟಿಯಾಗಿ ಹಿಡಿದು ಮೇನೆ ಹೋಗಲು ಬಿಡದಿದ್ದಾಗ ಅವಳ ಎರೆಡೂ ಕೈಗಳನ್ನ ಕೆಳದಿ ರಾಜರು ತುಂಡರಿಸುತ್ತಾರೆ.
ತನ್ನೆರೆಡು ಕೈಗಳನ್ನ ಕಳೆದುಕೊಂಡಾಗ ಆಕೆ ನೋವಿನಿಂದ - ಸಿಟ್ಟಿನಿಂದ - ಆಕ್ರೋಷದಿಂದ -ದುಃಖದಿಂದ ತನ್ನ ರಾಣಿ ಚೆನ್ನಬೈರಾದೇವಿಯ ಬಂಧಿಸಿ ಕರೆದೊಯ್ಯುತ್ತಿರುವ ಕೆಳದಿ ಅರಸೊತ್ತಿಗೆಯ ಈ ಅಕ್ರಮ ವಿರೋದಿಸಿ ಶಾಪ ಹಾಕುತ್ತಾಳೆ ನಂತರ ಅಲ್ಲೇ ಕುಣುಬಿ ಜನಾಂಗದ ಕೆಂಪಿ ಜೀವ ಬಿಡುತ್ತಾಳೆ.
ಈ ಶಾಪವೇ ಕೆಳದಿ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು ಎನ್ನುವ ಜನಪದ ಕಥೆಗಳಿದೆ.
ಕೆಳದಿ ಅರಸರಿಂದ ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಬಂದನಕ್ಕೆ ಒಳಗಾದಾಗ ರಾಣಿಗೆ 75 ವರ್ಷದ ವೃದ್ಧಾಪ್ಯ.
ಬಂದನದಲ್ಲಿ ಇಕ್ಕೇರಿ ಕೋಟೆಯ ಜೈಲು ಸೇರಿದ ರಾಣಿ ಚೆನ್ನಬೈರಾದೇವಿ ಮೌನ ವೃತ ಆಚರಣೆ ಪ್ರಾರಂಬಿಸುತ್ತಾಳೆ.
ನಂತರ ಇಕ್ಕೇರಿ ಕೋಟೆಯಲ್ಲಿನ ಜೈಲಿನಲ್ಲಿ ರಾಣಿ ಜೈನ ಧರ್ಮದ ಸಂಪ್ರದಾಯದಂತೆ ಯಮ ಸಲ್ಲೇಖನ ವೃತ ನಿಯಮಗಳನ್ನು ಪಾಲಿಸಿ ಜನೈಕ್ಯಳಾಗುತ್ತಾಳೆ.
ಆವಿನಹಳ್ಳಿಯಲ್ಲಿ ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಜೈನ ಸಂಪ್ರದಾಯದಂತೆ ಮಾಡಲಾಗಿದೆ.
ಈ ಸಮಾದಿಯನ್ನು ಸ್ಥಳೀಯರು ದೇವಸ್ಥಾನವಾಗಿ ಪೂಜಿಸುತ್ತಿದ್ದಾರೆ ಇದನ್ನ ರಾಷ್ಟ್ರೀಯ ಸ್ಮಾರಕವಾಗಿ ಈ ವರೆಗೆ ಮಾಡಲಾಗಲಿಲ್ಲ.
Comments
Post a Comment