Skip to main content

Blog number 3414. ಅಂಜಲಿ ಎಂಬ ಮಂಗ ಸಾಕಿದ್ದೆ...

#ಅಂಜಲಿ

#ಒಂಬತ್ತು_ವರ್ಷದ_ಹಿಂದೆ_ಈ_ದಿನ_ನಮ್ಮ_ಮನೆಗೆ_ಬಂದಿದ್ದಳು

#ಮೇ_17_2016

#ಅದೇ_ವರ್ಷದ_ಆಗಸ್ಟ್_15ಕ್ಕೆ_ಬಿಡುಗಡೆ_ಮಾಡಿದೆ

#monkey #anjali #memories #petlovers 

  ಅಂಜಲಿ ಅದು ನಾವಿಟ್ಟ ಹೆಸರು ಅವಳ ಹೆಸರು ಬೇರೆ ಇರಬೇಕು ಅವಳು ನಮ್ಮೂರು ಬಂದು ಸೇರಿ ಊರಿನ ಬಾಲಕರ ಗಮನ ಸೆಳೆದದ್ದು ಹೇಗಂದರೆ...

 ಅವಳಿಗೆ ಮನುಷ್ಯರ ಸಹವಾಸ ಚೆನ್ನಾಗಿತ್ತು ಆದ್ದರಿಂದ ಮಕ್ಕಳೆಲ್ಲ ಕಡಲೆಕಾಯಿ ಬಾಳೆಹಣ್ಣು ತೋರಿಸಿದರೆ ಅವರ ಹತ್ತಿರ ಯಾವುದೇ ಭಯ ಇಲ್ಲದೆ ಬಂದು ಕೈಯಿಂದ ಸ್ವೀಕರಿಸಿ ಹೋಗುತ್ತಿದ್ದಳಂತೆ, ಇದರಿಂದ ಇವಳು ನಮ್ಮೂರಿನ ಲಾರಿ ಮಾಲೀಕರಾದ ಅಮೀರ್ ಸಾಹೇಬರ ಮಕ್ಕಳ ಜೊತೆಯಾಗಿ ಅವರ ಮನೆ ಸೇರಿದಳು.

   ಆದರೆ ಅವಳು ಕೆಲವೊಮ್ಮೆ ಜನರಿಗೆ ಕಚ್ಚಲು ಬರುವುದು ಸಿಟ್ಟಾಗುವುದು ಇವೆಲ್ಲ ಅವಳ ನೆಗೆಟಿವ್ ಅಂಶಗಳಾಗಿತ್ತು, ಅಮೀರ್ ಸಾಹೇಬರು ಅವರ ಮಗನ ಹತ್ತಿರ ಇದನ್ನು ನನಗೆ ಸಾಕಲು ಕಳಿಸಿ ಕೊಟ್ಟಿದ್ದರು, ನನಗೂ ಮಂಗ ಒಂದನ್ನು ಸಾಕುವ ಆಸೆ ಪೂರೈಸಿರಲಿಲ್ಲ ಇದು ಹೆಣ್ಣು ಮಂಗ ಆಗಿತ್ತು ತಕ್ಷಣ ಇದಕ್ಕೊಂದು ಬೋನು- ಚೈನು, ಬೋನಿನಿಂದ ಹೊರ ಬಿಟ್ಟಾಗ ನಮ್ಮ ಹಲಸಿನ ಮರ ಅಮಟೆ ಮರ ಮೇಲೆ ಹತ್ತಿ ಇಳಿಯುವಷ್ಟು ಉದ್ದದ ಸೊಂಟಕ್ಕೆ ಹಗ್ಗ ಹೀಗೆ ಎಲ್ಲ ವ್ಯವಸ್ಥೆ ಆಯಿತು. 

    ನಿತ್ಯ ಬೆಳಿಗ್ಗೆ ತಿನ್ನಲು ಹಸಿ ಶೇಂಗಾ, ಬಾಳೆಹಣ್ಣು - ಕ್ಯಾರೆಟ್ -ಸೌತೆಕಾಯಿ -ಪೇರಲೆ ಹಣ್ಣು ಇತ್ಯಾದಿ ಸಂಗ್ರಹವಾಯಿತು ನಂತರ ಅಂಜಲಿ ಅನ್ನುವ ನಾಮಕರಣವಾಯಿತು.

    ನಂತರ ಕೆಲವೊಮ್ಮೆಸಿಟ್ಟಾಗುವುದು ಕಚ್ಚಲು ಬರುವುದು ಇತ್ಯಾದಿ ಇದ್ದೇ ಇತ್ತು, ಇನ್ನೊಂದು ವಿಶೇಷ ಅಂದರೆ ಲಾಗ ಹಾಕು ಎಂದರೆ ಲಾಗ ಹೊಡೆದು ನಮ್ಮನ್ನೆಲ್ಲಾ ರಂಜಿಸುತ್ತಿದ್ದಳು ಒಮ್ಮೆ ಬೋನಿನಿಂದ ತಪ್ಪಿಸಿಕೊಂಡು ಇಡೀ ದಿನ ಮರಗಳ ಮೇಲೆ ಸುತ್ತುತ್ತಿದ್ದಳು, ತನ್ನ ಆಹಾರಕ್ಕೋಸ್ಕರ ಬಂದು ನನ್ನ ಹತ್ತಿರ ಕುಳಿತುಕೊಳ್ಳುತ್ತಿದ್ದಳು ಆದರೆ ಚೈನಿನಲ್ಲಿ ಬಂಧಿಸಲು ಹೋದರೆ ವಿರೋಧಿಸುತ್ತಿದ್ದಳು.

    ಇವಳಿಗೆ ಯಾವಾಗಲೂ ಗದರಿಸುತ್ತಿದ್ದ ಕೀಟಲೆ ಮಾಡುತ್ತಿದ್ದ ನಮ್ಮ ಸಿಬ್ಬಂದಿ ಮಂಜುಳಮ್ಮನ ಕಂಡರೆ ಅಂಜಲಿಗೆ ಆಗುತ್ತಿರಲಿಲ್ಲ ಬೋನಿನ ಒಳಗಿನಿಂದಲೇ ಅವಳಿಗೆ ಗುಟುರು ಹಾಕುತ್ತಿದ್ದವಳು ಅವತ್ತು ಬೋನಿನಿಂದ ತಪ್ಪಿಸಿಕೊಂಡವಳು ದೂರದ ಮರದ ಮೇಲೆ ಇದ್ದವಳು ಮಂಜುಳಮ್ಮನ ನೋಡಿ ಮರದಿಂದ ಹಾರಿ ಬಂದು ಅವಳ ಕಾಲಿಗೇ ಕಚ್ಚಿತ್ತು.

    ಇದರಿಂದ ನನ್ನ ಮೇಲೆ ಅಂಜಲಿ ಸಾಕಿದ ಕಾರಣದಿಂದ ಎಲ್ಲರೂ ಸಿಟ್ಟಾಗಿದ್ದರು, ಒಮ್ಮೆ ನಮ್ಮಲ್ಲಿ ಅತಿಥಿಯಾಗಿ ಬಂದ ಆಗಿನ ಬಳ್ಳಾರಿ ಸಂಸದರಾಗಿದ್ದ ಶ್ರೀರಾಮುಲು ಅವರು ಆಂಜನೇಯನನ್ನ ಬಂಧಿಸಿಡುವುದು ಸರಿಯಲ್ಲ ಎಂದಿದ್ದರು.

    ಅದೇ ವರ್ಷ ನಮ್ಮ ಸಾಗರದ ಪೊಲೀಸ್ ಇಲಾಖೆಗೆ ಎ ಎಸ್ ಪಿ ಆಗಿ ಬಂದಿದ್ದ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಒಮ್ಮೆ ಬಂದವರು ಇದು ಕಾನೂನು ಬಾಹಿರ ಆಗುತ್ತದೆ, ಯಾರಾದರೂ ದೂರು ನೀಡಿದರೆ ದೂರು ದಾಖಲಾಗುತ್ತದೆ ಆದ್ದರಿಂದ ಬಿಟ್ಟುಬಿಡಿ ಎಂದು ಸಲಹೆ ನೀಡಿದ್ದರು.

   ಈ ಎಲ್ಲಾ ಕಾರಣಗಳಿಂದ ಅಂಜಲಿಯನ್ನು ಬಿಡುಗಡೆ ಮಾಡುವ ತೀರ್ಮಾನ ಮಾಡಿದೆ ಅದು ಆಗಸ್ಟ್ 15 2016 ಬೆಳಿಗ್ಗೆ ಊರಿಂದ ದೂರದಲ್ಲಿ ಬಿಟ್ಟು ಬಂದೆವು, ಅಂಜಲಿ ಬೋನಿನ ಬಾಗಿಲು ತೆಗೆದ ನಂತರ ನಮ್ಮ ಕಡೆ ತಿರುಗಿಯೂ ನೋಡದೆ ಓಡಿ ಹೋದಳು ಆ ಸಮಯದಲ್ಲಿ ನನಗೆ ನಿರಾಸೆ ಬೇಸರ ಆದರೂ ಅವಳ ಸ್ವಾತಂತ್ರ ಅವಳ ಹಕ್ಕು ಎಂಬ ನೆಮ್ಮದಿ ನಮ್ಮದು ಆಯ್ತು.

 ಅವಳು ಸಮೀಪದ ಜನವಸತಿ ಕೇಂದ್ರಕ್ಕೆ ಹೋಗಿ ಅಲ್ಲಿಯೂ ಜನರ ಒಡನಾಟ ಪಡೆಯುತ್ತಾಳೆ ಯಾಕೆಂದರೆ ಅದು ಯಾರೋ ಸಾಕಿದ ತರಬೇತಿ ನೀಡಿದ ಮಂಗ ಇದಾದ್ದರಿಂದ ಎಂದು ನಾವು ಮಾತಾಡಿಕೊಂಡೆವು.

        ಈಗಲೂ ಅಂಜಲಿ ನೆನಪಾಗುತ್ತಾಳೆ ಮನುಷ್ಯ ಮತ್ತು ಪ್ರಾಣಿಗಳ ಸಂಬಂದವೇ ಹೀಗೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...