# ಅರಸಾಳು ರೈಲು ನಿಲ್ದಾಣ ಇನ್ನು ಮುಂದೆ ಮಾಲ್ಗುಡಿ ರೈಲು ನಿಲ್ದಾಣ #
ಅರಸಾಳು ಎಂಬ ಸಣ್ಣ ಹಳ್ಳಿ ಶಿವಮೊಗ್ಗ ಹೊಸನಗರ ಮಧ್ಯದ ದಟ್ಟ ಅರಣ್ಯದಲ್ಲಿತ್ತು, ಸ್ವಾತಂತ್ರ ಪೂವ೯ದಲ್ಲಿ ಜೋಗ ಜಲಪಾತ ಸಂಪಕಿ೯ಸಲು ರೈಲು ಮಾಗ೯ ನಿಮಾ೯ಣ ಪ್ರಾರಂಭವಾದಾಗ ಅರಸಾಳು ರೈಲು ನಿಲ್ದಾಣದ ಪ್ರಸ್ತಾಪ ಇರಲಿಲ್ಲ.
ರಿಪ್ಪನ್ ಪೇಟೆ ರೈಲು ನಿಲ್ದಾಣ ಪ್ರಸ್ತಾವನೆಯಲ್ಲಿ ಸೇರಿತ್ತು ಅಲ್ಲಿಂದ ಆನಂದಪುರಂ, ಸಾಗರ, ತಾಳಗುಪ್ಪ ರೈಲು ಮಾಗ೯ದ ಯೋಜನೆ ಆಗಿತ್ತು.
ಇದೇ ಸಂದಭ೯ದಲ್ಲಿ ವೈಸ್ ರಾಯ್ ಲಾಡ್೯ ರಿಪ್ಪನ್ ಈ ಮಾಗ೯ದಲ್ಲಿ ಬಂದಾಗ ಈ ಭಾಗದ ಪ್ರಮುಖರೆಲ್ಲ ಸೇರಿ ಸನ್ಮಾನಿಸಿ ಅವರ ಬೇಟಿಯ ಸವಿ ನೆನಪಿಗಾಗಿ ಲಾಡ್೯ ರಿಪ್ಪನ್ ರ ಹೆಸರನ್ನ ಚಿರಸ್ಥಾಯಿಗೊಳಿಸಲು ತಮ್ಮ ಹಳ್ಳಿಗೆ ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಿಸುತ್ತಾರೆ, ಇದರಿಂದ ಸಂಪ್ರೀತರಾದ ವೈಸ್ ರಾಯರಿಗೆ ತಮ್ಮ ಊರಿಗೆ ಯಾವುದೇ ಕಾರಣಕ್ಕೂ ರೈಲು ಮಾಗ೯ ಹಾಕಬಾರದಾಗಿ ಮನವಿ ಮಾಡುತ್ತಾರೆ ಅದಕ್ಕೆ ಸಕಾರಣವಾಗಿ ರೈಲು ಮಾಗ೯ದಿಂದ ರೈಲು ನಿಲ್ದಾಣ ಆದರೆ ಬರುವ ಪ್ರಯಾಣಿಕರಿಂದ ಪ್ಲೇಗ್ ರೋಗ ಬಂದು ಹರಡುವುದರಿಂದ ಸಾವು ನೋವು ಉಂಟಾಗುತ್ತೆ ಎ೦ದು ವಿನಂತಿಸುತ್ತಾರೆ.
ಈ ರೀತಿ ಮೂಡ ನಂಬಿಕೆ ಲಾಡ್೯ ರಿಪ್ಪನ್ ಗೆ ಇರದಿದ್ದರು ಜನರ ಪ್ರೀತಿಗಾಗಿ ರೈಲು ಮಾಗ೯ ಅರಸಾಳಿನಿಂದಲೇ ಕೆಂಚನಾಲಮಾಗ೯ವಾಗಿ ಆನಂದಪುರಂಗೆ ಸಂಪಕಿ೯ಸುವ ಬದಲಿ ಮಾಗ೯ ನಿಮಿ೯ಸುತ್ತಾರೆ ಹಾಗಾಗಿ ಅರಸಾಳು ರೈಲು ನಿಲ್ದಾಣ ಮಾಡುತ್ತಾರೆ.
ಅರಸಾಳು ಈಗಲೂ ಮೀಸಲು ಅರಣ್ಯದ ಮದ್ಯ ಇದೆ, 1970ರ ದಶಕದಲ್ಲಿ ಖೆಡ್ಡಮಾಡಿ ಪುಂಡು ಆನೆ ಹಿಡಿದಿದ್ದರು, ಬ್ರಿಟಿಷರು ನಿಮಿ೯ಸಿರುವು ಬೃಹತ್ ಸಾಗುವಾನಿ ಪ್ಲಾಂಟೇಶನ್ ಇದೆ, ಅರಣ್ಯ ಅಧಿಕಾರಿಗಳ ಬಿಡದಿ, ಕಚೇರಿಗಳಿದೆ, ಚಚ್೯ ಇದೆ. ಈಗ ಅರಸಾಳು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ ಮತ್ತು ಈ ಮಾಗ೯ದ ಪ್ರಮುಖ ಊರಾಗಿದೆ.
ಈ ಊರನ್ನ ಕನ್ನಡದ ಖ್ಯಾತ ನಟ, ನಿದೇ೯ಶಕ ಶಂಕರ್ ನಾಗ್ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಕನ್ನಡಿಗ R.K.ನಾರಾಯಣ್ ರ ಮಾಲ್ಗುಡಿ ಡೇಸ್ ಎಂಬ ಕಥೆಯನ್ನ ದೂರದಶ೯ನಕ್ಕೆ ದಾರಾವಾಹಿ ಮಾಡಿದಾಗ ಚಿತ್ರಿಕರಣಕ್ಕೆ ಬಳಸಿಕೊಂಡಿದ್ದರು.
ಕನ್ನಡದ ನಟ ಸಾವ೯ ಬೌಮ ಡಾ.ರಾಜ್ ಕುಮಾರರ ಅಕಸ್ಮಿಕ ಸಿನಿಮಾ ಕೂಡ ಇಲ್ಲಿ ಚಿತ್ರಿಕರಣ ಮಾಡಿದ್ದರು.
ನಂತರ ಮೀಟರ್ ಗೇಜ್ ರದ್ದು ಮಾಡುವ ಪೂವ೯ದಲ್ಲಿ ಅರಸಾಳು ರೈಲು ನಿಲ್ದಾಣವನ್ನ ರದ್ದು ಮಾಡಿದ್ದರು, ಬ್ರಾಡ್ ಗೇಜ್ ಪರಿವತ೯ನೆಗೆ ರೈಲ್ವೇ ಇಲಾಖೆ ಈ ಮಾಗ೯ ನಷ್ಟ ಅಂತ ರೈಲು ಮಾಗ೯ವನ್ನ ರದ್ದು ಮಾಡಿತ್ತು, ನಂತರ ಜನರ ಹೋರಾಟ ಒತ್ತಾಯಗಳಿಗೂ ರೈಲ್ವೇ ಇಲಾಖೆ ಮಣಿಯಲಿಲ್ಲ ಆಗ ಮುಖ್ಯಮಂತ್ರಿಗಳಾಗಿದ್ದ ನಮ್ಮ ಜಿಲ್ಲೆಯವರೆ ಆದ ಯಡೂರಪ್ಪ ಕೆ-ರೈಡ್ ಯೋಜನೆಯಲ್ಲಿ ರಾಜ್ಯ ಸಕಾ೯ರದ ಸಹಭಾಗಿತ್ವದಲ್ಲಿ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮಾಗ೯ ನಿಮಿ೯ಸಲು ಕಾರಣಕತ೯ರಾದರು.
ಈಗ ಅವರ ಮಗ ರಾಘವೇಂದ್ರ ಸಂಸದರಾಗಿ ಎಲ್ಲಾ ರೈಲು ನಿಲ್ದಾಣಗಳ ಮೇಲ್ದಜೆ೯ಗೇರಿಸುತ್ತಿದ್ದು ಅರಸಾಳು ರೈಲು ನಿಲ್ದಾಣ ಕೂಡ ನವೀಕರಣಗೊಳಿಸಿ ಮಾಲ್ಗುಡಿ ಡೇಸ್ ಸ್ಮರಣಾಥ೯ ಅರಸಾಳು ನಿಲ್ದಾಣ "ಮಾಲ್ಗುಡಿ ಅರಸಾಳು" ಎ೦ದು ಪುನರ್ ನಾಮಕರಣ ಆಗಲಿದೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment