# ಕಲಿಯುಗದಲ್ಲಿ ನಿಜ ಸಂನ್ಯಾಸಿಗಳು ಜೈನ ಮುನಿಗಳು ಮಾತ್ರ#
ನನ್ನ ತಂದೆ ಕಾಲದಿಂದ ನಮ್ಮ ಸ್ಥಳ ಜೈನ ದಿಗಂಬರರಿಗೆ, ಮಾತಾಜಿಯವರಿಗೆ ಒಂದು ತ೦ಗುದಾಣ, ಈವರೆಗೆ 2006ರಿಂದ 20I9ರವರೆಗೆ ಎರಡು ಬಾರಿ ಶ್ರವಣಬೆಳಗೋಳದ ಗೊಮ್ಮಟೇಶ್ವರನಿಗೆ ಮಹಾಮಜ್ಜನ ನಡೆದಿದೆ (12 ವಷ೯ಕೊಮ್ಮೆ) ಇಲ್ಲಿವರೆಗೆ ನಮ್ಮಲ್ಲಿ ತಂಗಿದ ಜೈನ ಮುನಿ ಮತ್ತು ಮಾತೆಯರ ಸಂಖ್ಯೆ 1000ಕ್ಕೂ ಹೆಚ್ಚು.
ಜೈನ ಮುನಿ ಮಹಾರಾಜರ ಮತ್ತು ಮಾತೆಯರ ಸೇವೆ ಮಾಡಲು ಜೈನ ಸಮಾಜದ ಅನೇಕರು ಕಾತುರರಾಗಿರುತ್ತಾರೆ ಆದರೆ ಅವರು ಬರುವುದಿಲ್ಲ.
ಅದೇನೋ ಗೊತ್ತಿಲ್ಲ ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ (ಶ್ರೀ ಕೃಷ್ಣ ಸರಸ ಕನ್ವೆಷನ್ ಹಾಲ್, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)ದಲ್ಲಿ ಇವರುಗಳು ತಂಗುತ್ತಾರೆ ಮತ್ತು ನಮ್ಮನ್ನ ಆಶ್ರೀವದಿಸುತ್ತಾರೆ.
ಹುOಚದ ಹಿಂದಿನ ಸ್ವಾಮಿಗಳು ಸೂಚಿಸಿದ ಹೆಸರು ನನ್ನ ಲಾಡ್ಜ್ ಗೆ ಇಟ್ಟಿದ್ದೇನೆ ಅದು ಹೊಂಬುಜ ರೆಸಿಡೆನ್ಸಿ ಅಂತ ಅದಕೊಂದು ಹಿನ್ನೆಲೆ ಇದೆ ಕೇಳಿ, ದೂರದ ಗುಜರಾತಿನ ವಜ್ರ ವ್ಯಾಪಾರಿ ನಿಮ೯ಲ್ ಕುಮಾರ್ ಒಮ್ಮೆ ಹುಂಚದ ಹಿಂದಿನ ಸ್ವಾಮಿಗಳ ಬೇಟಿಗೆ ಬಂದವರು ನನ್ನ ಜೊತೆಯಲ್ಲಿ ಕರೆದೊಯ್ದಿದ್ದರು.
ಅಲ್ಲಿ ಸ್ವಾಮಿಗಳ ಬೇಟಿ ಆಯಿತು, ಹಿಂದಿನ ದಿನವಷ್ಟೆ ಅವರು ಅಮೇರಿಕಾ ದೇಶದ ಪ್ರವಚನ ಪ್ರವಾಸ ಮುಗಿಸಿ ಬಂದಿದ್ದರು, ನನ್ನ ಅವರ ಬೇಟಿ ಅದು ಮೊಟ್ಟ ಮೊದಲಿನದು, ನನ್ನ ಪರಿಚಯ ನಿಮ೯ಲ್ಕುಮಾರರು ಮಾಡಿದಾಗ ಅವರು ಕೇಳಿದ ಮೊದಲ ಪ್ರಶ್ನೆ ನಿಮ್ಮ ಕಲ್ಯಾಣ ಮಂಟಪದ ಮೇಲೆ ಏನು ಕಟ್ಟುತ್ತಿದೀರಿ? ಅಂತ, ಲಾಡ್ಜ್ ಅಂತ ಹೇಳಿದೆ, ನಂತರ ಗೊತ್ತಾಯಿತು ಅವರಿಗೆ ನಮ್ಮ ತಂದೆ ಕೃಷ್ಣಪ್ಪ ಪರಿಚಯ ಅಂತ.
ಮುಂದೆ ಲಾಡ್ಜ್ ಗೆ ಏನು ಹೆಸರಿಡುತ್ತೀರಿ ಅಂದಾಗ ಇನ್ನು ನಿದಾ೯ರ ಮಾಡಿಲ್ಲ ನೀವು ಸಲಹೆ ಕೊಡಿ ಅಂದಾಗ ಅವರು ಹೊಂಬುಜ ಅಂತ ಯಾಕೆ ಇಡಬಾರದೆಂದರು, ಹೊಂಬುಜದ ಅಥ೯ ಕೇಳಿದೆ, ಅವರೆಂದರು ಸಾವಿರ ವಷ೯ದ ಹಿಂದೆ ಈ ಎಲ್ಲಾ ಪ್ರದೇಶ ಆಳಿದ ರಾಜನ ಹೆಸರು, ಸಂಸ್ಕೃತ ದಲ್ಲಿ ಉದಯಿಸುತ್ತಿರುವ ಸೂಯ೯ನ ಸುವಣ೯ ಬುಜಗಳು ಅಂದರು.
ನೀವು ಬ೦ದು ಉದ್ಘಾಟಿಸುವುದಾದರೆ ಆ ಹೆಸರೇ ಇಡುತ್ತೇನೆ ಅಂದೆ, ಅದಾದ ನಂತರ ಮೂರು ತಿಂಗಳಲ್ಲಿ ಸ್ವಾಮೀಜಿ ಇಹಲೋಕ ತ್ಯಜಿಸಿದರು, ಅವರು ಪ್ರವಚನಗಳಿಂದಲೇ ಭಕ್ತರಿ೦ದ ಸ್ಟೀಕರಿಸಿದ ಹಣ 600 ಕೋಟಿಗೂ ಹೆಚ್ಚು!
ಈ ಘಟನೆ ನಡೆದ 2 ವಷ೯ದ ನಂತರ ನನ್ನ ಲಾಡ್ಜ್ ಪ್ರಾರಂಬಿಸ ಬೇಕಾದಾಗ ಹೆಸರಿಗಾಗಿ ಹುಡುಕಾಟ ಪ್ರಾರ೦ಬಿಸಿದಾಗ ನೆನಪಾಯಿತು, ಹಾಗಾಗಿ ಹೊಂಬುಜ ರೆಸಿಡೆನ್ಸಿ ಅಂತಲೇ ನಾಮಕರಣ ಮಾಡಿದೆ.
ಮೊನ್ನೆ ಬಂದು ತಂಗಿದ ಜೈನ ಮಹಾಮುನಿಗಳು ಶ್ರೀ ಪ್ರಮುಖ ಸಾಗರರರು, ಶ್ರವಣಬೆಳಗೋಳ ಮತ್ತು ದಮ೯ಸ್ಥಳದ ಬಾಹುಬಲಿ ಮಹಾ ಮಸ್ತಾಬಿಷೇಕ ಮುಗಿಸಿ ಹೊಂಬುಜ ಕ್ಷೇತ್ರ ಸಂದಶಿ೯ಸಿ ಗೋವಾ ಸಾಗುವಾಗ ನಮ್ಮ ಕಲ್ಯಾಣ ಮಂದಿರದಲ್ಲಿ ತಂಗಿದ್ದರು.
ಇವರು ಹಿಮಾಲಯ ತಪ್ಪಲಿನ ಬದರಿಯಲ್ಲಿ ಹಿಮಪಾತವಾಗುವಾಗ ದಿಗOಬರರಾಗಿ ಒಂದು ತಿಂಗಳು ತಂಗಿದ್ದರು ಅಲ್ಲಿ ಪ್ರವಚನ ನೀಡಿದ್ದರು, ಈ ಬಗ್ಗೆ ನನ್ನ ಪ್ರಶ್ನೆಗೆ ವಿಡಿಯೋದಲ್ಲಿ ಉತ್ತರಿಸಿದ್ದಾರೆ.
ಸಾದು ಸ೦ತರು ತಂಗುವ ಅವರನ್ನ ಸತ್ಕರಿಸುವ ಭಾಗ್ಯ ದೇವರೇ ನನ್ನ ಗುರು ಹಿರಿಯರ ಆಶ್ರೀವಾದದಿಂದ ಅನುಗ್ರಹಿಸಿದ್ದಾರೆ ಎಂದೇ ಬಾವಿಸಿದ್ದೇನೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment