# ಶಿವಮೊಗ್ಗ ಜಿಲ್ಲೆಯ ಮಹಿಳೆ ಹೊನ್ನೆ ಮರಡು ಜಲ ಸಾಹಸ ಕೇಂದ್ರದ ಶ್ರೀಮತಿ ನೋಮಿತೋ ಕಾಮದಾರ್ ಗೆ ರಾಷ್ಟ್ರಿಯ ಮಹಿಳಾ ಪುರಸ್ಕಾರ ಸಿಕ್ಕಿರುವುದು ನಮ್ಮ ಜಿಲ್ಲೆಗೊಂದು ಹಿರಿಮೆ #
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ್ ಪಾಲ್ಸ್ ಸಮೀಪದ ಲಿಂಗನ ಮಕ್ಕಿ ಆಣೆಕಟ್ಟಿನ ಹಿನ್ನೀರಿನ ಹೊನ್ನೆ ಮರಡು ಎ೦ಬಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ EXPLORE INDIA ಎಂಬ ಕಾಯ೯ಕ್ರಮದಲ್ಲಿ ಪ್ರಾರಂಭವಾದ ಈ ಪಶ್ಚಿಮ ಘಟ್ಟದ ಸಾಹಸ ತರಬೇತಿ, ಪರಿಸರ ಪಾಠಶಾಲೆ ಇವತ್ತು ದೇಶ ವಿದೇಶದಲ್ಲಿ ಪ್ರಖ್ಯಾತಗೊಂಡಿದೆ.
ಹೊನ್ನೆ ಮರಡು ಸ್ವಾಮಿ ಮತ್ತು ಅವರ ಪತ್ನಿ ನೋಮಿತೊ ಕಾಮದಾರ್ ತಮ್ಮ ಅದ೯ ಆಯುಸ್ಸು ಇಲ್ಲಿ ಸವೆಸಿದ್ದಾರೆ, ಇಲ್ಲಿನ
ಸಂಸ್ಥೆ ಒಂದು ಹಂತಕ್ಕೆ ತರಲು ಅನೇಕ ರೀತಿ ಹೆಣಗಿದ್ದಾರೆ, ಒಂದು ಕಾಲದ ಇವರ ಸಹೋದ್ಯೋಗಿಗಳೆ ಇವರಿಗೆ ಈಗ ಶತೃಗಳಾಗಿದ್ದಾರೆ, ಕೆಲವರಿಗೆ ವಿನಂತಿಸಿದೆ ನಿಮ್ಮ ಕಹಿ ಘಟನೆ ಮರೆತುಬಿಡಿ, ತಪ್ಪಿದ್ದರೆ ಕ್ಷಮಿಸಿ ಬಿಡಿ ಅಂತಲೂ.
ಮೊನ್ನೆ ಮಹಿಳಾ ದಿನಾಚರಣೆಯoದು ಕೇಂದ್ರ ಸಕಾ೯ರ ಶ್ರೀಮತಿ ನೋಮಿತೊ ಕಾಮದಾರ್ ಗೆ ರಾಷ್ಟ್ರೀಯ ಮಹಿಳಾ ಪುರಸ್ಕಾರ ನೀಡಿದೆ, ರಾಷ್ಟ್ರಪತಿ ಶ್ರೀ ಕೊವಿಂದರವರು ಪ್ರಶಸ್ತಿ ನೀಡಿದರು.
ಶ್ರೀಮತಿ ನೋಮಿತೊ ಪಶ್ಚಿಮ ಘಟ್ಟದ ಪರಿಸರದ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಸಾಹಸಿ ಮಹಿಳೆ, 5 - 6 ವಷ೯ದ ಹಿಂದೆ ನಮ್ಮಲ್ಲಿ ಬಂದವರು ನಮ್ಮ ಕಾಟೇಜಿನ ಹೊರ ಅಂಗಣದಲ್ಲಿ ಚಹ ಸ್ವೀಕರಿಸುವಾಗ ಸಾವಿರಾರು ಸಂಖ್ಯೆಯ ಗಿಳಿಗಳು ಒಂದಾಗಿ ಹಾರಿಹೋಗುವುದು ನೋಡಿ, ದಿನಾ ಗಮನಿಸಿ ಇವು ಪ್ರತಿನಿತ್ಯ ಬೆಳಿಗ್ಗೆ ಸಂಜೆ ಇದೇ ಮಾಗ೯ದಲ್ಲಿ ನಿಗದಿತ ಸಮಯದಲ್ಲೇ ಹಾರಿ ಹೋಗುತ್ತೆ ಅಂದಿದ್ದರು ನಂತರ ನಾನು ನಿತ್ಯ ಗಮನಿಸಿದೆ ಬೆಳಿಗ್ಗೆ ಸೂಯೋ೯ದಯದ ನಂತರ ಮತ್ತು ಸಂಜೆ ಸೂಯಾ೯ಸ್ತದ ಸಮಯದಲ್ಲಿ ಸಾವಿರಾರು ಗಿಳಿಗಳು ಹಾರಿ ಹೋಗಿ ಬರುತ್ತದೆ, ಇದು ಸೆಪ್ಟೆಂಬರ್ ನಿಂದ ಜನವರಿ ತನಕ ಹೆಚ್ಚು ಇರುತ್ತದೆ ನಂತರದ ತಿಂಗಳಲ್ಲಿ ಗಿಳಿಗಳು ಹಾರಾಡುತ್ತವಾದರೂ ಸಂಖ್ಯೆ ಕಡಿಮೆ ಹೀಗೆ ಇವರಿಂದ ನಮ್ಮ ಪರಿಸರದ ಪಾಠ ಕಲಿತೆ.
ವಷ೯ ಪೂತಿ೯ ಪರಿಸರ, ಸಾಹಸಗಳ ಕಾಯ೯ಕ್ರಮ ನಡೆಸುವ ಇವರಿಗೆ ರಾಷ್ಟ್ರೀಯ ಪುರಸ್ಕಾರದ ಗರಿ ಸಿಕ್ಕಿರುವುದು ಶಿವಮೊಗ್ಗ ಜಿಲ್ಲೆಗೆ ಒಂದು ಹಿರಿಮೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment