# ಶಿವಮೊಗ್ಗ ಜಿಲ್ಲೆಯ ಮಹಿಳೆ ಹೊನ್ನೆ ಮರಡು ಜಲ ಸಾಹಸ ಕೇಂದ್ರದ ಶ್ರೀಮತಿ ನೋಮಿತೋ ಕಾಮದಾರ್ ಗೆ ರಾಷ್ಟ್ರಿಯ ಮಹಿಳಾ ಪುರಸ್ಕಾರ ಸಿಕ್ಕಿರುವುದು ನಮ್ಮ ಜಿಲ್ಲೆಗೊಂದು ಹಿರಿಮೆ #
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ್ ಪಾಲ್ಸ್ ಸಮೀಪದ ಲಿಂಗನ ಮಕ್ಕಿ ಆಣೆಕಟ್ಟಿನ ಹಿನ್ನೀರಿನ ಹೊನ್ನೆ ಮರಡು ಎ೦ಬಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ EXPLORE INDIA ಎಂಬ ಕಾಯ೯ಕ್ರಮದಲ್ಲಿ ಪ್ರಾರಂಭವಾದ ಈ ಪಶ್ಚಿಮ ಘಟ್ಟದ ಸಾಹಸ ತರಬೇತಿ, ಪರಿಸರ ಪಾಠಶಾಲೆ ಇವತ್ತು ದೇಶ ವಿದೇಶದಲ್ಲಿ ಪ್ರಖ್ಯಾತಗೊಂಡಿದೆ.
ಹೊನ್ನೆ ಮರಡು ಸ್ವಾಮಿ ಮತ್ತು ಅವರ ಪತ್ನಿ ನೋಮಿತೊ ಕಾಮದಾರ್ ತಮ್ಮ ಅದ೯ ಆಯುಸ್ಸು ಇಲ್ಲಿ ಸವೆಸಿದ್ದಾರೆ, ಇಲ್ಲಿನ
ಸಂಸ್ಥೆ ಒಂದು ಹಂತಕ್ಕೆ ತರಲು ಅನೇಕ ರೀತಿ ಹೆಣಗಿದ್ದಾರೆ, ಒಂದು ಕಾಲದ ಇವರ ಸಹೋದ್ಯೋಗಿಗಳೆ ಇವರಿಗೆ ಈಗ ಶತೃಗಳಾಗಿದ್ದಾರೆ, ಕೆಲವರಿಗೆ ವಿನಂತಿಸಿದೆ ನಿಮ್ಮ ಕಹಿ ಘಟನೆ ಮರೆತುಬಿಡಿ, ತಪ್ಪಿದ್ದರೆ ಕ್ಷಮಿಸಿ ಬಿಡಿ ಅಂತಲೂ.
ಮೊನ್ನೆ ಮಹಿಳಾ ದಿನಾಚರಣೆಯoದು ಕೇಂದ್ರ ಸಕಾ೯ರ ಶ್ರೀಮತಿ ನೋಮಿತೊ ಕಾಮದಾರ್ ಗೆ ರಾಷ್ಟ್ರೀಯ ಮಹಿಳಾ ಪುರಸ್ಕಾರ ನೀಡಿದೆ, ರಾಷ್ಟ್ರಪತಿ ಶ್ರೀ ಕೊವಿಂದರವರು ಪ್ರಶಸ್ತಿ ನೀಡಿದರು.
ಶ್ರೀಮತಿ ನೋಮಿತೊ ಪಶ್ಚಿಮ ಘಟ್ಟದ ಪರಿಸರದ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಸಾಹಸಿ ಮಹಿಳೆ, 5 - 6 ವಷ೯ದ ಹಿಂದೆ ನಮ್ಮಲ್ಲಿ ಬಂದವರು ನಮ್ಮ ಕಾಟೇಜಿನ ಹೊರ ಅಂಗಣದಲ್ಲಿ ಚಹ ಸ್ವೀಕರಿಸುವಾಗ ಸಾವಿರಾರು ಸಂಖ್ಯೆಯ ಗಿಳಿಗಳು ಒಂದಾಗಿ ಹಾರಿಹೋಗುವುದು ನೋಡಿ, ದಿನಾ ಗಮನಿಸಿ ಇವು ಪ್ರತಿನಿತ್ಯ ಬೆಳಿಗ್ಗೆ ಸಂಜೆ ಇದೇ ಮಾಗ೯ದಲ್ಲಿ ನಿಗದಿತ ಸಮಯದಲ್ಲೇ ಹಾರಿ ಹೋಗುತ್ತೆ ಅಂದಿದ್ದರು ನಂತರ ನಾನು ನಿತ್ಯ ಗಮನಿಸಿದೆ ಬೆಳಿಗ್ಗೆ ಸೂಯೋ೯ದಯದ ನಂತರ ಮತ್ತು ಸಂಜೆ ಸೂಯಾ೯ಸ್ತದ ಸಮಯದಲ್ಲಿ ಸಾವಿರಾರು ಗಿಳಿಗಳು ಹಾರಿ ಹೋಗಿ ಬರುತ್ತದೆ, ಇದು ಸೆಪ್ಟೆಂಬರ್ ನಿಂದ ಜನವರಿ ತನಕ ಹೆಚ್ಚು ಇರುತ್ತದೆ ನಂತರದ ತಿಂಗಳಲ್ಲಿ ಗಿಳಿಗಳು ಹಾರಾಡುತ್ತವಾದರೂ ಸಂಖ್ಯೆ ಕಡಿಮೆ ಹೀಗೆ ಇವರಿಂದ ನಮ್ಮ ಪರಿಸರದ ಪಾಠ ಕಲಿತೆ.
ವಷ೯ ಪೂತಿ೯ ಪರಿಸರ, ಸಾಹಸಗಳ ಕಾಯ೯ಕ್ರಮ ನಡೆಸುವ ಇವರಿಗೆ ರಾಷ್ಟ್ರೀಯ ಪುರಸ್ಕಾರದ ಗರಿ ಸಿಕ್ಕಿರುವುದು ಶಿವಮೊಗ್ಗ ಜಿಲ್ಲೆಗೆ ಒಂದು ಹಿರಿಮೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment