Skip to main content

# ಪಾರಿವಾಳಗಳ ವಿಸ್ಮಯ ಜಗತ್ತು#

# ಪಾರಿವಾಳದ ಜಗತ್ತು ಗಮನಿಸಿ #

    ಶಾಲೆಗೆ ಹೋಗುವ ದಿನದಲ್ಲಿ ಪಾರಿವಾಳ ಸಾಕುವ ಹುಚ್ಚು ಈಗಿನ ಹಾಗೆ ಸಾಕು ಪಾರಿವಾಳ ಮಾರಾಟಕ್ಕೆ ನಮ್ಮ ಹಳ್ಳಿ ಕಡೆ ಸಿಗುತ್ತಿರಲಿಲ್ಲ ಹಾಗಾಗಿ ಕಾಡಿನ ಪಾರಿವಾಳ ಹಿಡಿಯಲು ನಾವೆಲ್ಲ ಗೆಳೆಯರು ಒದ್ದಾಡುತ್ತಿದ್ದು ನೆನಪಾಗಿ ನಗು ಬರುತ್ತೆ.
ಇತ್ತೀಚಿಗೆ FB ಗೆಳೆಯರಾದ ರೇವಣ ಸಿದ್ದಯ್ಯ ಎಂಬುವವರು ಪಾರಿವಾಳಗಳು ಬರದಂತೆ ತಡೆಯುವುದು ಹೇಗೆ ಎಂಬ post ಹಾಕಿದ್ದರು ಅದಕ್ಕೆ ಬಂದ ಉತ್ತರ ನೋಡುತ್ತಿದ್ದೆ ಆದರೆ ಅವು ಯಾವುದೂ ವಾಸ್ತವ ಉಪ ಶಮನ ಆಗಿರಲಿಲ್ಲ ನನ್ನ ಉತ್ತರ ನೋಡಿ ತುಂಬಾ ಸಂತೋಷ ಆಯಿತು ಅಂತ ಉತ್ತರಿಸಿದರು.
  1989 ರಲ್ಲಿ ರೈಸ್ ಮಿಲ್ ಕಟ್ಟಿದಾಗ ಅದರ ಗೋಡೆ 20 ಅಡಿ ಎತ್ತರ ಇತ್ತು ಅಲ್ಲಿ ಪಾರಿವಾಳಗಳು ನೂರಾರು ಗೂಡು ಮಾಡಿಕೊಂಡವು ಆದರೆ ಆ ಗೂಡಿಗೆ ಬೆಕ್ಕು, ಕಾಗೆ, ಹಾವು ತಲುಪದಂತ ಪ್ರದೇಶ ಆಗಿತ್ತು, ಬಾಯಿಗೆ ಎಟುಕದ ದ್ರಾಕ್ಷಿ ಹುಳಿ ಎಂಬಂತೆ ಬೆಕ್ಕುಗಳ ರೋದನ ಮತ್ತು ಪಾರಿವಾಳದ ಗೂಡು ತಲುಪಿ ಮೊಟ್ಟೆ ತಿನ್ನುವ ಸಾಹಸದಿಂದ ಹಾವುಗಳು ಕಟ್ಟಡದ ಸುತ್ತು ಸುಳಿಯುತ್ತಿದ್ದವು.
  2018 ರಲ್ಲಿ ರೈಸ್ ಮಿಲ್ ಕಟ್ಟಡ ತೆಗೆದು ಹೊಸ ಲಾಡ್ಜ ಕಟ್ಟಲು ಯೋಜನೆ ಮಾಡಿ ಕಟ್ಟಡ ತೆಗೆಯುವ ಕೆಲಸ ಪ್ರಾರಂಬಿಸಿದಾಗ ಪಾರಿವಾಳಗಳು 30 ವಷ೯ದಲ್ಲಿ ನಿಮಿ೯ಸಿಕೊಂಡ ಗೂಡು ಸುಮಾರು 200 ಅಡಿ ಇತ್ತು, ಆದರಲ್ಲಿ ಅವುಗಳ ಮರಿಗಳಿಗಾಗಿ ಮಾಡಿಕೊಂಡ ಬೆಚ್ಚನೆ ತಡಿಗಳು ಕೇಳಿದರೆ ಗಾಭರಿ ಆದೀತು, ಹಾವಿನ ಪೊರೆ, ಬೈಂಡಿOಗ್ ತಂತಿಗಳು, 2006ರಲ್ಲಿ ರದ್ದಾದ ಸರಾಯಿ  ಖಾಲಿ ಪ್ಯಾಕೆಟ್ಗಳು, ಬೀಡಿ ಪ್ಯಾಕೆಟಗಳು.
  ಸದರಿ ಕಟ್ಟಡ ತೆರವು ಮಾಡಿದ ನಂತರ ಪಾರಿವಾಳಗಳು ಹಳೆ ಲಾಡ್ಜನ ಚಾವಣಿ ಮೇಲೆ ಒಟ್ಟಾಗಿ ಕುಳಿತು ಕೊಳ್ಳಲು ಶುರು ಮಾಡಿದವು ಆದರೆ ನೂತನ ಕಾಂಕ್ರಿಟ್ ಕಟ್ಟಡದಲ್ಲಿ ಗೂಡು ನಿಮಿ೯ಸುವ ಅವಕಾಶ ಸಿಗಲಿಲ್ಲ, ನನಗೂ ಪಾಪ ಪ್ರಜ್ನೆ ಆದರೆ ಬದುಕಿನ ಅನಿವಾಯ೯.
  ನೂರಾರು ಕುಟುಂಬದ ಪುನವ೯ಸತಿ ಗಮನಿಸುತ್ತಿದ್ದೆ, ಅನೇಕ ಕುಟುಂಬ ಬೇರೆಲ್ಲೊ ನೆಲೆಸಿದರೂ ನಿತ್ಯ ತಮ್ಮ ಹಳೆ ಜಾಗದಲ್ಲಿ ಬಂದು ಬಂದು ಬಾಂದವರ ಯೋಗಕ್ಷೇಮ ವಿಚಾರಿಸುತ್ತಿದ್ದವು, ಉಳಿದ ಕೆಲ ಕುಟುಂಬ ನನ್ನ ಮತ್ತು ನನ್ನ ಅಣ್ಣನ ಮನೆಯ ಬಿಸಿಲ ಮಚ್ಚೆಯಲ್ಲಿ ಠಿಕಾಣಿ ಶುರು ಮಾಡಿದವು, ಒಂದೆರಡು ದಿನದಲ್ಲಿ ಅಲ್ಲಿ ನರಕ ಸೃಷ್ಠಿ ಆಯಿತು, ಅಸಾಧ್ಯ ವಾಸನೆ, ಅಲ್ಲಿ ಪ್ರವೇಶವೇ ಸಾಧ್ಯವಿಲ್ಲ ಅನ್ನಿಸಿತ್ತು.
ಆಗಲೇ ನನಗೆ ಪಾರಿವಾಳದ ಜಗತ್ತಿನ ಬಗ್ಗೆ ತಿಳಿಯಲು ಪ್ರಯತ್ನಿಸಿದೆ.
ಕುಬೂತರು ಆ ಆ ಹಾಡು ಕೇಳಲು ಇಂಪು ಆದರೆ ಬಂದು ನೆಲೆ ನಿಂತ ಈ ವೈಲ್ಡ್ ಪಾರಿವಾಳ ?.
ಪಾರಿವಾಳಗಳಿ೦ದ ಶಾಶ್ವತ ಪರಿಹಾರ ಅಹಿಂಸಾ ರೀತಿ ಪರಿಶೀಲಿಸಿದಾಗ ಅನೇಕ ಮಾಗ೯ಗಳ ಗೆಳೆಯರಿಂದ ಪಡೆದೆ ಆದರೆ ಅವುಗಳಲ್ಲಿ ಅನೇಕವು ವಾಸ್ತವವಾಗಿ ಅಸಾಧ್ಯವಾಗಿತ್ತು ಆದರೆ ಪ್ರಕೃತಿ ಸಹಜವಾದ ಸರಳವಾದ ಉಪಾಯಗಳಿಂದ ಪಾರಿವಾಳ ನನ್ನ ವಾಸದ ಮನೆ ತೊರೆದವು.
  ಯಾವುದೇ ಚಲನೆಯ ವಸ್ತು ಮತ್ತು  ಶಬ್ದ ಪಾರಿವಾಳಗಳಗಳನ್ನ ದೂರಿಕರಿಸ ಬಹುದಾದ ಸರ೪ ಉಪಾಯ, ಗಂಟೆ, ಗೆಜ್ಜೆ ಶಬ್ದ, ಪತಾಕೆಗಳು, ಜೂಲದಂತ, ಜೋಕಾಲೆಯಂತ ಪೀಟೋಪಕರಣ, ವಿಂಡ್ ಚ್ಯಿಮ್ಗಳು ಪಾರಿವಾಳಕ್ಕೆ ಅಸಹನೀಯ.
ಇದನ್ನ ತಿಳಿಯಲು ಹೊರಟಾಗ ಸಿಕ್ಕ ಮಾಹಿತಿ ಕೂಡ ಆಮೂಲ್ಯ ಪಾರಿವಾಳವನ್ನ 1000 ಕಿ.ಮಿ.ದೂರ ಒಯ್ದು ಅಲ್ಲಿಂದ ಬಿಡುಗಡೆ ಮಾಡಿದರೆ ಅದರ ಮೂಲ ಸ್ಥಳಕ್ಕೆ ವಾಪಾಸಾಗುವ೦ತ ಮ್ಯಾಪ್ ಮತ್ತು ಕಂಪಾಸ್ ಗಳ ಜ್ಞಾನ ಅವುಗಳಲ್ಲಿದೆ, ಹಾಗಾಗಿ ಇವುಗಳನ್ನ ಸಂದೇಶ ರವಾನೆಗಾಗಿ ಬಳಸುತ್ತಿದ್ದರು.
  250 ರೂಪಾಯಿ0ದ 20 ಸಾವಿರ ತನಕ ಪಾರಿವಾಳದ ಬೆಲೆ ಇದೆ.
  ಪಾರಿವಾಳ ರಾಜರ ಕಾಲದಲ್ಲಿ ಅಂಚೆ ಸಂದೇಶಕ್ಕೆ ಬಳಕೆ ಆಗುತ್ತಿತ್ತು, ಶ್ರೀರಂಗ ಪಟ್ಟಣದ ಟಿಪ್ಪು ಬೇಸಿಗೆ ಆರಮನೆ ಸಮೀಪ ಬೃಹತ್ ಗಾತ್ರದ ಪಾರಿವಾಳಗಳ ಗೂಡಿನ ಸಂಕೀಣ೯ ನೋಡ ಬಹುದು.
  ಈಗ ಪಾರಿವಾಳಗಳ ಹಾರಲು ಬಿಟ್ಟು ಬೆಟ್ ಕಟ್ಟುವ ಜುಗಾರಿ ಪ್ರಸಿದ್ದವಾಗಿದೆ.
.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...