#ಮುರುಗನಹುಳಿ ಅಡುಗೆ ಮನೆಯಿ೦ದ ಈಗ ಏನೆಲ್ಲ ಬಳಕೆಗೆ ಗೊತ್ತಾ?#
ಮೊನ್ನೆ ಕಾರವಾರದ ಪೋಲಿಸ್ ಠಾಣೆ ರಸ್ತೆಗೆ ಹೋಗಿದ್ದೆ, ಈ ಮಾಗ೯ದಲ್ಲಿ ಹೋಗುವಾಗ ಇಲ್ಲಿನ ಬೇಟಿ ಖಾಯಂ ಏಕೆಂದರೆ ಇಲ್ಲಿ ಪಶ್ಚಿಮ ಘಟ್ಟದ ಅನೇಕ ಅಪರೂಪದ ಹಣ್ಣು, ಜಾಷದಿಗಳು, ಕಾಳು ಕಡಿ, ದೇಸಿ ತರಕಾರಿಗಳು ಮಾರಾಟಕ್ಕೆ ಸ್ಥಳಿಯ ಮಹಿಳೆಯರು ತಂದಿರುತ್ತಾರೆ, ಇದೇ ರೀತಿ ಅಂಕೋಲ, ಕುಮಟ ಮತ್ತು ಹೊನ್ನವರಗಳಲ್ಲೂ ನಿಧಿ೯ಷ್ಟ ಸ್ಥಳ ಮತ್ತು ಸಮಯದಲ್ಲಿ ಹಾಲಕ್ಕಿ ಮಹಿಳೆಯರು ಹಾಜರಿರುತ್ತಾರೆ.
ಮೊನ್ನೆ ಕಾರವಾರದಲ್ಲಿ ಜುಮ್ಮನಕಾಯಿ, ಬಿಡಿಸಿದ ಹಸಿ ಗೋಡOಬಿ ಬೀಜಗಳು, ನಾಟಿ ಹರಿವೆ ಸೊಪ್ಪಿನ ದಂಟುಗಳು, ಉಪ್ಪಿನ ಮಾವಿನ ಹುಳಿ, ವಿವಿದ ತಳಿಯ ಮಾವಿನ ಮಿಡಿ ಇವುಗಳ ಮಧ್ಯ ಮುರುಗನ ಹುಳಿ ಹಣ್ಣು ರಾರಾಜಿಸುತ್ತಿತ್ತು.
ಗೋವಾದಲ್ಲಿ ಕೋಕಂ, ದಕ್ಷಿಣ ಕನ್ನಡದಲ್ಲಿ ಪುನರ್ ಪುಳಿ, ಕೇರಳದಲ್ಲಿಮಲಬಾರ್ ಹುಣಸೆ ಅನ್ನುವ ಇದನ್ನ ಇಂಗ್ಲೀಷ್ನಲ್ಲಿ GARCINIA INDICA ಎನ್ನುತ್ತಾರೆ.
ಕೋಕಂ ಜೂಸ್, ಸೋಲ ಕಡಿ, ಮೀನು ಸಾರಿಗೆ ಇದನ್ನ ಹೆಚ್ಚು ಬಳಸುತ್ತಾರೆ ಆದರೆ ಪಶ್ಚಿಮ ಘಟ್ಟದ 7 ತಳಿಗಳು ಈಗ ವಿಶ್ವದಾದ್ಯಂತ ದೇಹ ಸೌಂದಯ೯ ವೃದ್ಧಿಗಾಗಿ, ತೂಕ ನಿಯಂತ್ರಿಸಲು ಹೆಚ್ಚು ಬಳಕೆ ಆಗುತ್ತಿದೆ.
ಅಂಕೋಲದ ಬಾಳೆಗುಳಿ ಕತ್ರಿಯಲ್ಲಿ ಮಿತ್ರ M.R.ಶೆಟ್ಟರ ಗಣ್ಯ ಕೆಮಿಕಲ್ಸ್ ನಲ್ಲಿ ಈ ಹಣ್ಣಿನಿಂದ ಬಿಳಿಯ ಬಣ್ಣದ Garcinia ಪೌಡರ್ ತಯಾರಾಗಿ ವಿದೇಶಕ್ಕೆ ರಪ್ತಾಗುತ್ತದೆ.
ಅಷ್ಟೆ ಏಕೆ ನೀವು ಮಧ್ಯ ಪಾನ ಪ್ರಿಯರಾಗಿದ್ದರೆ ಡಯಟ್ ಮ್ಯಾಕ್ಡೊವೆಲ್ ವಿಸ್ಕಿ ಖರೀದಿಸಿದರೆ ಅದರಲ್ಲಿ ನಮ್ಮ ಪಶ್ಚಿಮ ಘಟ್ಟದ ಮುರುಗನ ಹುಳಿಯ ಸಾರಂಶ ಮಿಶ್ರವಾಗಿರುತ್ತದೆ, ಇದು ತೂಕ ನಿಯ೦ತ್ರಣ ಮತ್ತು ಡಯಾಬಿಟಿಕ್ ನಿಯಂತ್ರಣ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment