# ಜಿಲ್ಲಾಧಿಕಾರಿಗಳೆ ಸಾಗರ ತಾಲ್ಲೂಕಿನ ಈ ಪ್ರಮುಖ ಬ್ಲಾಕ್ ಸ್ಪಾಟ್ ನಿಮ್ಮ ಗಮನಕ್ಕೆ#
ತಾವು ಇತ್ತೀಚಿಗೆ ಜಿಲ್ಲೆಯಲ್ಲಿ ಹೆಚ್ಚು ಅಪಘಾತ ಆಗುವ Block Spot ಗಳ ತಿಳಿಸಲು ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದೀರಿ ಎಂದು ಪತ್ರಿಕೆಗಳಲ್ಲಿ ಓದಿದೆ.
ಸಾಗರ ತಾಲ್ಲೂಕಿನ ಈ block Spot ಗಳ ಬಗ್ಗೆ ತಾವು ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ.
1. ಶಿವಮೊಗ್ಗದಿಂದ ಸಾಗರ ಗಡಿ ಪ್ರವೇಶಿಸುವ ಗಿಳಾಲಗು೦ಡಿ ವೃತ್ತ ವೈಜ್ಞಾನಿಕವಾಗಿ ನಿಮಿ೯ಸಿಲ್ಲ, ರಾಷ್ಟ್ರಿಯ ಹೆದ್ದಾರಿಯಿಂದ ಗಿಳಾಲ ಗುಂಡಿ ಮಾಗ೯ವಾಗಿ ಕೆಂಚನಾಲ, ರಿಪ್ಪನ್ ಪೇಟೆ ಮಾಗ೯ಕ್ಕೆ ಸಾಗರದಿಂದ ಬರುವ ವಾಹನಗಳು ತಿರುಗಲು ಸರಿಯಾದ ವ್ಯವಸ್ಥೆ ಇಲ್ಲ ಅನೇಕ ಸಾವು ನೋವು ಆಗಿದೆ.
2.ಇಲ್ಲಿಂದ ಮುಂದೆ ಯಡೇಹಳ್ಳಿ ವೃತ್ತದಲ್ಲಿ ನಾಲ್ಕು ರಸ್ತೆ ಸೇರುತ್ತೆ, ಶಿವಮೊಗ್ಗದಿಂದ ಸಾಗರಕ್ಕೆ ಸಾಗುವ ರಾಷ್ಟ್ರಿಯ ಹೆದ್ದಾರಿಗೆ ರಿಪ್ಪನ್ ಪೇಟೆಯಿಂದ ಒಂದು ರಾಜ್ಯ ಹೆದ್ದಾರಿ, ಹೊಸನಗರ ಬಟ್ಟೆ ಮಲ್ಲಪ್ಪದಿ೦ದ ಒಂದು ಮುಖ್ಯ ರಸ್ತೆ (ಈಗ ಹಾವೇರಿ ಬೈಂದೂರು ರಾಷ್ಟ್ರಿಯ ಹೆದ್ದಾರಿ ಮೇಲ್ದಜೆ೯ಗೆ ಏರಿದೆ) ಸೇರುತ್ತದೆ ಯಾವುದೇ ಹಂಪ್ ಇರುವುದಿಲ್ಲ ನಿತ್ಯ ಅಪಘಾತ ನಡೆಯುತ್ತದೆ ಅನೇಕ ಸಾವು ನೋವು ಆಗಿದೆ.
3. ಇಲ್ಲಿ೦ದ ಮುಂದೆ ಸಾಗರ ಪ್ರಾರಂಭದಲ್ಲಿ ತ್ಯಾಗತಿ೯ ವೃತ್ತದಲ್ಲಿ ತ್ಯಾಗತಿ೯ ಯಿಂದ ಬಂದು ಸೇರುವ ರಸ್ತೆಗೆ ಶಿವಮೊಗ್ಗ ಸಾಗರದ ರಾಷ್ಟ್ರಿಯ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಕಾಣುವುದಿಲ್ಲ ಇದರಿ೦ದ ಅನೇಕ ಅಪಘಾತ ಸಾವು ನೋವು ಸಂಬವಿಸುತ್ತಿದೆ.
4.ಸಾಗರ ದಾಟಿದ ನಂತರ ವರದಳ್ಳಿ ವೃತ್ತ.
5. ಕಾನಲೆ ವೃತ್ತ.
6.ತಾಳಗುಪ್ಪದ ಕಾಗ೯ಲ್ ಮತ್ತು ಜೋಗ ಜಲಪಾದದ ವೃತ್ತ.
ಇವುಗಳ ಬಗ್ಗೆ ವೈಜ್ಞಾನಿಕವಾದ ಕ್ರಮದಲ್ಲಿ ರಸ್ತೆ ನಿಯಮದಂತೆ ಸುರಕ್ಷಿತ ವಾಹನ ಸಂಚಾರಕ್ಕೆ ಅವಶ್ಯ ಇರುವ ಮುಂಜಾಗೃತ ಕ್ರಮ ಮತ್ತು ಕಾಮಗಾರಿ ಮಾಡಿಸಬೇಕಾಗಿ ವಿನಂತಿ.
ಕೆ.ಅರುಣ್ ಪ್ರಸಾದ್
ಮಾಜಿ ಜಿ.ಪಂ.ಸದಸ್ಯ
ಆನಂದಪುರಂ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment