Skip to main content

BN-3427. ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ

#ಅಂಬಾರಗೊಡ್ಲು_ಕಳಸವಳ್ಳಿ_ಸೇತುವೆಗೆ

#ಸಿಗಂದೂರು_ಚೌಡೇಶ್ವರಿ_ಸೇತುವೆ_ಎಂದು_ಪುನರ್_ನಾಮಕರಣದ_ಸಂದರ್ಭದಲ್ಲಿ

#ಸಾಗರ_ರೈಲು_ನಿಲ್ದಾಣದ_ನಾಮಕರಣ_25ವರ್ಷದಿಂದ_ವಿಳಂಬವಾದ_ಬಗ್ಗೆ_ಆಕ್ಷೇಪವಿದೆ


#ಉದ್ದೇಶ_ಸದುದ್ದೇಶದ್ದು

#ಅಂತಿಮ_ಅನುಮೋದನೆ_ನೀಡಿದವರು

#ಉಪಪ್ರಧಾನಿ_ಲಾಲ್_ಕೃಷ್ಣ_ಅಡ್ವಾನಿ

#ಕಳೆದ_25_ವರ್ಷದಿಂದ_ರೈಲ್ವೆ_ಸಚಿವಾಲಯದಲ್ಲಿ

#ಕಡತ_ದೂಳಲ್ಲಿ_ಬಿದ್ದಿದೆ.

#ಕಾರಣ_ಏನಿರ_ಬಹುದು?

#naming #ambargodlu #tumar #siganduru #cablebridge #lohiya #railwaystation #memberofparliment 

    ಶಿವಮೊಗ್ಗ ಜಿಲ್ಲೆಯ ಸಂಸದರು ಅಂಬಾರ್ಗೊಡ್ಲು - ಕಳಸವಳ್ಳಿ ಸೇತುವೆಗೆ ನಾಮಕರಣವಾಗಿ  #ಸಿಗಂದೂರು_ಚೌಡೇಶ್ವರಿ ಸೇತುವೆ ಎಂದು ರಾಜ್ಯ ಸರ್ಕಾರ 
ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರದಿಂದ ಈಗಿನ ಹೆಸರಾದ #ಅಂಬಾರಗೊಡ್ಲುಕಳಸವಳ್ಳಿ ಸೇತುವೆ ಎಂಬ ಹೆಸರು ತಕ್ಷಣ ಬದಲಿಸುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

   ಸಂಸದರು ಹೊಸನಗರ ತಾಲೂಕಿನ ಅರಸಾಳು ರೈಲು ನಿಲ್ದಾಣದ ಹೆಸರನ್ನ #ಮಾಲ್ಗುಡಿ_ಡೇಸ್ ರೈಲು ನಿಲ್ದಾಣ ಎಂದು ಬದಲಿಸಿ ಅಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಚಿತ್ರಿಕರಣ ಆಗಿದ್ದ RK ನಾರಾಯಣರ ಕೃತಿ ಆಧಾರದ ಟೀವಿ ಸೀರಿಯಲ್ ಸ್ಮರಣಾರ್ಥ ರೈಲ್ವೆ ಮ್ಯೂಸಿಯಂ ಕೂಡ ಮಾಡಿದ್ದಾರೆ.

     ಆದರೆ ಇಡೀ ದೇಶದಲ್ಲೇ ಪ್ರಥಮ ಗೇಣಿ ಭೂಮಿ ಹೋರಾಟವಾದ #ಕಾಗೋಡು_ಸತ್ಯಾಗ್ರಹದಲ್ಲಿ ಶಾಂತವೇರಿ ಗೋಪಾಲಗೌಡ ಮತ್ತು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ಬೆಂಬಲಿಸಿ ಭಾಗವಹಿಸಲು ಬಂದು ಕಾಗೋಡಿನಲ್ಲಿ ರೈತ ಚಳವಳಿಗಾರರಿಗೆ ನೈತಿಕ ಬೆಂಬಲ ನೀಡಿ ಭಾಷಣ ಮಾಡಿ ವಾಪಾಸು ಬಂದು ಸಾಗರದ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದ ಖ್ಯಾತ ಸಮಾಜವಾದಿ ನೇತಾರ ಡಾಕ್ಟರ್ ರಾಮಮನೋಹರ್ ಲೋಹಿಯಾ ಅವರ ಬಂದನವಾಗಿತ್ತು.

   ಇದಕ್ಕಾಗಿ ಸಾಗರ ರೈಲು ನಿಲ್ದಾಣಕ್ಕೆ ಡಾಕ್ಟರ್ ರಾಮಮನೋಹರ ಲೋಹಿಯಾ ರೈಲು ನಿಲ್ದಾಣ ಎಂಬ ನಾಮಕರಣ ಮಾಡಲು ಆಗಿನ ಕೇಂದ್ರ ಸರ್ಕಾರದ ಉಪ ಪ್ರಧಾನಿ ಮತ್ತು ಗೃಹ ಸಚಿವ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಮನವಿ ಸಲ್ಲಿಸಿದ್ದೆವು.

   ಸಾಗರದ ರೈಲು ನಿಲ್ದಾಣದ ವೃತ್ತದಲ್ಲಿ ದಿನಾಂಕ 12 - ಜೂನ್ - 2000 ರಂದು  ನಾಮಫಲಕ ಅನಾವರಣ ಕಾರ್ಯಕ್ರಮ ಕಾಗೋಡು ಸತ್ಯಾಗ್ರಹದ ರೂವಾರಿ ಹೆಚ್.ಗಣಪತಿಯಪ್ಪರ ಅಧ್ಯಕ್ಷತೆಯಲ್ಲಿ ನಾಮ ಘೋಷಣೆ ನನ್ನಿಂದ ಆಯಿತು ನಾಮ ಫಲಕ ಉದ್ಘಾಟನೆ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಪ್ರಫುಲ್ಲಾ ಮಧುಕರ್ ನೇರವೇರಿಸಿದ್ದರು.

  ಈ ಕಾಯ೯ಕ್ರಮದಲ್ಲಿ ಲೋಹಿಯಾ ಜೊತೆ ಬಂದನಕ್ಕೆ ಒಳಗಾಗಿದ್ದ ಜಿ.ಆರ್.ಜಿ.ನಗರ್, ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತರಾದ ನಿನಾಸಂ ಸುಬ್ಬಣ್ಣ, ಸಾಹಿತಿಗಳಾದ ನಾ.ಡಿಸೋಜ, ಕೋಣಂದೂರು ವೆಂಕಪ್ಪ ಗೌಡರು, ವಿದಾನ ಪರಿಷತ್ ಸದಸ್ಯರಾದ ಜಿ. ಮಾದಪ್ಪ,,ಮಾಜಿ ಶಾಸಕರಾದ ಬಿ.ದರ್ಮಪ್ಪ ಸ್ವಾಮಿ ರಾವ್,  ಬಿ.ಆರ್.ಜಯಂತ್, ಕಲ್ಲೂರು ಮೇಘರಾಜ್, ಪಾಣಿ ರಾಜಪ್ಪ, ಮಲ್ಲಪ್ಪ ಗೌಡ, ರೈತ ಸಂಘದ ಕೆ.ಟಿ.ಗಂಗಾಧರ್, ವಿ.ರಾಜು ಶಿವಮೊಗ್ಗ, ರೈತ ಸಂಘದ ವಸಂತ್ ಕುಮಾರ್, ಸೇನಾಪತಿ ಗೌಡರು,ಪತ್ರಕರ್ತ ಕಬಸೆ ಅಶೋಕ ಮೂರ್ತಿ, ಹೋರಾಟಗಾರ ಟಿ. ಆರ್ ಕೃಷ್ಣಪ್ಪ ಮತ್ತು ಇದಕ್ಕಾಗಿ ದೆಹಲಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೋರಾಟಗಾರರು ಉಪಸ್ಥಿತರಿದ್ದರು.

  ನಮ್ಮ ಮನವಿಗೆ ಆಗಿನ ಕೇಂದ್ರ ಸರ್ಕಾರದಲ್ಲಿದ್ದ ಜಾರ್ಜ್ ಪರ್ನಾಂಡೀಸ್, ನಿತೀಶ್ ಕುಮಾರ್, ಶ್ರೀನಿವಾಸ ಪ್ರಸಾದ್, ರಾಜ್ಯಸಭಾ ಸದಸ್ಯ ಜವರೇ ಗೌಡರ ಶಿಪಾರಸ್ಸು ಪತ್ರಗಳು ಇತ್ತು.

  ನಿಯಮಾನುಸಾರವಾಗಿ ನಮ್ಮ ಮನವಿ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸಚಿವಾಲಯದಿಂದ ರವಾನೆ ಆಗಿತು ನಂತರ ಅಲ್ಲಿಂದ ಸಾಗರದ ಮುನ್ಸಿಪಲ್ ಕಛೇರಿ,ಶಿವಮೊಗ್ಗ ಜಿಲ್ಲಾದಿಕಾರಿಗಳ ಅನುಮೋದನೆಯೊಂದಿಗೆ ರಾಜ್ಯ ಸರ್ಕಾರ ತನ್ನ ನಿರಾಕ್ಷೇಪಣಾ ಪತ್ರ ಅಡ್ವಾನಿಯವರ ಕಛೇರಿಗೆ ತಲುಪಿ ಅಡ್ವಾನಿ ಅವರು ಸಾಗರ ರೈಲು ನಿಲ್ದಾಣದ ಹೆಸರಾದ #ಸಾಗರ_ಜಂಬಗಾರು ಬದಲಿಸಿ #ಡಾಕ್ಟರ್_ರಾಮಮನೋಹರ_ರೈಲು_ನಿಲ್ದಾಣ ಎಂದು ಮರು ನಾಮಕರಣ ಅನುಮೋದಿಸಿ ಕೇಂದ್ರ ರೈಲ್ವೆ ಇಲಾಖೆಗೆ ಅನುಷ್ಟಾನ ಮಾಡಲು ಆದೇಶ ಮಾಡಿ ಕಳಿಸಿದ ಕಡತ ಕಳೆದ 25 ವರ್ಷದಿಂದ ಉದ್ದೇಶ ಪೂರ್ವಕವಾಗಿ ಕಾಣದ ಕೈಗಳು ಅಲ್ಲೇ ತಡೆಹಿಡಿದಿದೆ.

   ಈ ಬಗ್ಗೆ ಹೊಸನಗರದ ಮಾಜಿ ಶಾಸಕರಾದ ಹಾಲಿ BJP ಪ್ರಮುಖ ಮುಖಂಡರಾದ ಸ್ವಾಮಿ ರಾವ್ ಅನೇಕ ಬಾರಿ ಸಾರ್ವಜನಿಕವಾಗಿ ಪತ್ರಿಕೆ ಮುಖಾಂತರವೂ ಸಂಸದರಿಗೆ ಮನವಿ ಮಾಡಿದ್ದರು.

   25 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ ಅಂಬಾರುಗೋಡ್ಲು - ಕಳಸವಳ್ಳಿ ಸೇತುವೆಯನ್ನ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಪುನರ್ ನಾಮಕರಣ ಮಾಡುವ ಮೊದಲೆ ಮಾಡ ಬಹುದಾ? ... ಎಂಬುದು ನನ್ನ ನಿರೀಕ್ಷೆ ಆಗಿದೆ.

   #ಸಾಗರ_ರೈಲುನಿಲ್ದಾಣದ_ಪುನರ್_ನಾಮಕರಣದ ಹೋರಾಟದ ವಿವರಗಳ ಸಚಿತ್ರ ಲೇಖನ ಕಾಮೆಂಟ್ ನಲ್ಲಿದೆ ನೋಡಿ ನ

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...