Skip to main content

BN 3430. ಭಾಗ - 2 . ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಜೊತೆ ಹೊಳೆಬಾಗಿಲು ಲಾಂಚ್ ಪ್ರಯಾಣ

#ಭಾಗ_ಎರಡು

#ಸಂಸದರಾದ_ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪನವರನ್ನೇ_ಬಿಟ್ಟು_ಹೋದ 

#ಹೊಳೆಬಾಗಿಲು_ಲಾಂಚ್_ಸಿಬ್ಬಂದಿಗಳು.


#sharavathirivet #sagar #govtofkarnataka #govtofindia #ambargodlu #kalasavalli #siganduru #cablebridge #SBangarappa #shivamogga #parlimentmember

   1996ರಲ್ಲಿ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು.

   ಆಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾದ ಕಾಗೋಡು ತಿಮ್ಮಪ್ಪನವರ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿರಲಿಲ್ಲ.

  ಅವರೆಲ್ಲ ಚುನಾವಣೆಯಲ್ಲಿ ಬಂಗಾರಪ್ಪನವರಿಗೆ ವಿರುದ್ಧವಾಗಿ ಕಾಂಗ್ರೇಸ್ ಅಭ್ಯರ್ಥಿ ಕೆ.ಜಿ. ಶಿವಪ್ಪನವರ ಪರವಾಗಿ ಕೆಲಸ ಮಾಡಿದ್ದರು.

   ಸಾಗರ ತಾಲೂಕಿನಲ್ಲಿ ಹರುನಾಥರಾವ್, ಮೊಹಮ್ಮದ್ ಕೊಯಾ, ಮೊಹಮದ್ ಖಾಸಿಂ,ಕಾಗೋಡು ಹೋರಾಟದ ನೇತಾರಗಣಪತಿಯಪ್ಪ ಮತ್ತು ಅನೇಕರ ಜೊತೆ ನಾನು ಸೇರಿ ಬಂಗಾರಪ್ಪನವರ ಗೆಲುವಿಗೆ ಕಟಿಬದ್ಧರಾಗಿ ಚುನಾವಣೆ ಮಾಡಿದೆವು ಚುನಾವಣೆಯಲ್ಲಿ ಬಂಗಾರಪ್ಪನವರು ಗೆಲ್ಲುತ್ತಾರೆ ಸಾಗರ ತಾಲೂಕಿನಲ್ಲಿ ಅವರಿಗೆ ಲೀಡ್ ಬರುತ್ತದೆ.

  ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಂಗಾರಪ್ಪನವರಿಗೆ ವಿರುದ್ಧ ಆಗಿದ್ದರೂ ಮತದಾರರು ಬಂಗಾರಪ್ಪನವರ ಕೈ ಬಿಡಲಿಲ್ಲ.

   ಸಂಸದರಾಗಿ ಆಯ್ಕೆ ಆದ ಬಂಗಾರಪ್ಪನವರನ್ನ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೋತ್ಸವ ಹಮ್ಮಿಕೊಂಡು ಪ್ರವಾಸ ಕಾರ್ಯಕ್ರಮ ನಿಗದಿ ಮಾಡಿದೆವು.

  ಅಂತಹ ಸಂದರ್ಭದಲ್ಲಿ ತುಮರಿ ಬ್ಯಾಕೋಡು ಭೇಟಿ ಕಾರ್ಯಕ್ರಮ ನಿಗದಿಯಾಯಿತು ಆ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಜಿ ಕೃಷ್ಣಮೂರ್ತಿ ಅವರು ಕೂಡ ಕಟ್ಟಾ ಕಾಂಗ್ರೆಸ್ಸಿಗರು ಆದರು ತಮ್ಮ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಲೋಕಸಭಾ ಸದಸ್ಯರು ಬರುತ್ತಾರೆಂದು ಅವರು ನನ್ನ ಜೊತೆಯಾದರು.

   ಕೆಲವು ಜೈನ ಮುಖಂಡರ ಮನೆಗಳಲ್ಲಿ ಒಳಾಂಗಣದಲ್ಲಿ ಸಣ್ಣ ಸಣ್ಣ ಅಭಿನಂದನಾ ಸಭೆ ನಡೆಯಿತು ಆಗ ಸ್ಥಳೀಯ ಕಾಂಗ್ರೇಸ್ ಮುಖಂಡರು ಬಂಗಾರಪ್ಪರನ್ನ ಬಾರೀ ವಿರೋದ ವ್ಯಕ್ತಪಡಿಸುತ್ತಿದ್ದರು.

   ಸ್ಥಳೀಯ ಜೈನ ಮುಖಂಡರ ಮನೆಯಲ್ಲಿ ಊಟದ ನಂತರ ಹಿಂದಿರುಗುವಾಗ ಸಿಗಂದೂರು ದೇವಾಲಯಕ್ಕೆ ಬರಲೇಬೇಕೆಂಬ ಒತ್ತಾಯದ ಅಹ್ವಾನ ದರ್ಮದರ್ಶಿ ರಾಮಪ್ಪನವರಿಂದ ಬಂದಿದ್ದರಿಂದ ಬಂಗಾರಪ್ಪನವರ ಜೊತೆ ನಾವೆಲ್ಲರೂ ಸಿಗಂದೂರಿಗೆ ಹೋಗಿದ್ದೆವು.

 ಅಲ್ಲಿ ದೇವರ ದರ್ಶನ ಪೂಜೆ ನಂತರ ರಾಮಪ್ಪನವರು ಗಂದದ ಹಾರ ಬಂಗಾರಪ್ಪನವರಿಗೆ ಅರ್ಪಿಸಿದರು ಅವರ ಮಹಡಿ ಮೇಲಿದ್ದ ಕಛೇರಿಯಲ್ಲಿ ಉಪ್ಪಿಟ್ಟು ಕೇಸರಿಬಾತಿನ ಉಪಹಾರವು ಅಯಿತು.

 ಅಲ್ಲಿಂದ ಹೊರಡುವಾಗಲೇ ಲಾಂಚ್ ಸಿಬ್ಬಂದಿಗಳಿಗೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಬಂಗಾರಪ್ಪನವರು ಲಾಂಚ್ ನಲ್ಲಿ  ಹೊಳೆ ದಾಟಿ ಸಾಗರಕ್ಕೆ ವಾಪಾಸಾಗಲಿದ್ದಾರೆ  ಎಂಬ ಸುದ್ದಿ ಕಳಿಸಲಾಗಿತ್ತು.

    ಬಂಗಾರಪ್ಪರ ಕ್ಯಾರ್ ವಾನ್ ಹೊಳೆಬಾಗಿಲಿನ ಕಳಸವಳ್ಳಿ  ದಂಡೆಯ ಮೇಲಿನ ಭಟ್ಟರ ಹೋಟೆಲ್ ಸಮೀಪಕ್ಕೆ ಬರುವಾಗಲೇ ಲಾಂಚ್ ಬಂಗಾರಪ್ಪನವರಿಗಾಗಿ ನಿಲ್ಲದೆ  ಪ್ರಯಾಣ ಪ್ರಾರಂಭಿಸಿತು.

  ಬಂಗಾರಪ್ಪನವರ ಜೊತೆ ಇದ್ದ ಸ್ಥಳೀಯ ಮುಖಂಡರುಗಳು ಲಾಂಚ್ ಸಿಬ್ಬಂದಿಗಳಿಗೆ ಕೂಗಿ ಕೂಗಿ ವಾಪಸ್ ಬರಲು ವಿನಂತಿಸಿದರು ಆದರೆ ಲಾಂಚ್ ಸಿಬ್ಬಂದಿಗಳು ವಿನಂತಿಗೆ ಸೊಪ್ಪು ಹಾಕದೆ ಆ ಕಡೆಯ ಅಂಬಾರಗೋಡ್ಲು ದಂಡೆ ಕಡೆಗೆ ಪ್ರಯಾಣ ಪ್ರಾರಂಭಿಸಿ ಬಿಟ್ಟರು. 

    ಇದರಿಂದ ನಮಗೆಲ್ಲ ಬೇಸರವಾಯಿತು ಆದರೆ ಬಂಗಾರಪ್ಪನವರು ಇದನ್ನು ವಿಶೇಷವಾಗಿ ಪರಿಗಣಿಸದೆ "ಹೋಗಲಿ ಬಿಡಿ ಜನರಿಗೆ ತೊಂದರೆ ಯಾಕೆ" ಎಂದರು ಆಗ ನಾನು ಭಟ್ಟರ ಹೋಟೆಲಿನಿಂದ ಕುರ್ಚಿ ಒಂದನ್ನು ತಂದು ಬಂಗಾರಪ್ಪನವರಿಗೆ ಕುಳ್ಳಿರಿಸಿದೆ.

 ಬಂಗಾರಪ್ಪನವರು ಇನ್ನೆರಡು ಕುರ್ಚಿ ಹೋಟೆಲ್ ನಿಂದ ತರಲು ತಮ್ಮ ಸಹಾಯಕರಿಗೆ ಹೇಳಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ನಾನು ಮತ್ತು ಎಂ. ಜಿ. ಕೃಷ್ಣಮೂರ್ತಿಗೆ  ಜೊತೆಯಲ್ಲಿ ಕುಳಿತುಕೊಳ್ಳಲು ತಿಳಿಸಿ ತಮ್ಮ ಸಂಗಡಿಗರಿಗೆಲ್ಲ ದೂರ ಹೋಗಲು ತಿಳಿಸಿದರು.

  ಆಗ ಬಂಗಾರಪ್ಪನವರು ಇದು ಉದ್ದೇಶಪೂರ್ವಕದ ದ್ವೇಷದ ರಾಜಕಾರಣ ಬೋಟಿನ ಸಿಬ್ಬಂದಿಗಳು ಅನಿವಾರ್ಯವಾಗಿ ಅವರ ಮಾತು ಕೇಳಲೇಬೇಕಲ್ವಾ... ಎಂದು ನಮ್ಮಿಬ್ಬರಿಗೆ ಸಮಾಧಾನದ ಮಾತಾಡಿದರು.

   ಆಗಲೇ ನಾವು ಇಲ್ಲಿನ ಸೇತುವೆ ಅನಿವಾರ್ಯತೆ ಬಗ್ಗೆ ಬಂಗಾರಪ್ಪನವರಿಗೆ ವಿವರಿಸಿದೆವು ಕರೂರು -ಬಾರಂಗಿ ಹೋಬಳಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಜಿ. ಕೃಷ್ಣಮೂರ್ತಿ ಯೋಜನೆಗೆ ಹಣ ಜಾಸ್ತಿ ಬೇಕು ಆದರೆ ಇದು ಅತ್ಯವಶ್ಯಕ ಎಂಬುದನ್ನು ಒತ್ತಿ ಹೇಳಿದರು.

   ಆಗ ಬಂಗಾರಪ್ಪನವರು ನಾನು ಮುಖ್ಯಮಂತ್ರಿ ಆಗಿದ್ದಾಗ ಯಾರು ನನ್ನ ಗಮನಕ್ಕೆ ಈ ವಿಷಯ ತರಲಿಲ್ಲ ತಂದಿದ್ದರೆ ಪ್ರಯತ್ನಿಸಬಹುದಾಗಿತ್ತು ಎಂಬ ಮಾತಾಡಿದರು.

   ಅದೇ ಸಂದರ್ಭದಲ್ಲಿ ಸಿಗಂದೂರು ರಾಮಪ್ಪನವರು ಸೊರಬದಲ್ಲಿ ಮಂಡಲ ಪಂಚಾಯಿತಿ ಚುನಾವಣೆಯಲ್ಲಿ ಬಂಗಾರಪ್ಪನವರ ಗುಂಪಿನ ವಿರುದ್ಧ ಸೆಡ್ಡು ಹೊಡೆದದ್ದು ಆ ಚುನಾವಣೆಯಲ್ಲಿ ಸಿಗಂದೂರು ರಾಮಪ್ಪನವರು ಬಂಗಾರಪ್ಪರ ಬಳಗದ ವಿರುದ್ದ ಹೋರಾಟ ಮಾಡಲಿಕ್ಕಾಗದ ಬಗ್ಗೆ ಬಂಗಾರಪ್ಪನವರು ವಿವರಿಸಿದ್ದರು.

 ಅದೇ ಸಂದರ್ಭದಲ್ಲಿ ಎಂ.ಜಿ. ಕೃಷ್ಣಮೂರ್ತಿ ಅವರು ಬಂಗಾರಪ್ಪನವರು ಒಮ್ಮೆ ಕೃಷಿ ಮಂತ್ರಿಗಳಾಗಿದ್ದಾಗ ತುಮರಿ ಭಾಗದ ಪ್ರವಾಸಕ್ಕೆ ಬಂದಾಗ ನಡೆದ ಘಟನೆ ಒಂದನ್ನು ನೆನಪಿಸಿದ್ದರು ಅದು ಕೃಷಿ ಮಂತ್ರಿ ಬಂಗಾರಪ್ಪರ ಕಾರ್ಯಕ್ರಮ ಮುಗಿದ ನಂತರ ಬಂಗಾರಪ್ಪನವರ ಜೊತೆ ಫೋಟೋ ತೆಗೆಸಿಕೊಳ್ಳಲು ಮಹಿಳೆಯರ ಗುಂಪೊಂದು ಅಪೇಕ್ಷೆ ಪಟ್ಟಿತ್ತು ಆಗ ದೂರದಲ್ಲಿದ್ದ ಇನ್ನೊಂದು ಮಹಿಳಾ ಗುಂಪು ನೋಡಿ ಬಂಗಾರಪ್ಪನವರು ಮೊದಲಿಗೆ ಆ ಮಹಿಳೆಯರ ಗುಂಪಿನಲ್ಲಿ ಹೋಗಿ ನಿಂತು ಫೋಟೋ ತೆಗೆಸಿಕೊಂಡು ಆಗ ಅವರು ಹೇಳಿದ್ದು "ನೋಡಿ ನಮ್ಮ ದೀವರ ಜಾತಿಯ ಆರ್ಥಿಕ ಮಟ್ಟ ಯಾವ ರೀತಿ ಇದೆ" ಅಂತ  ಆ ಗುಂಪಿನ ಮಹಿಳೆಯರು ಹರಿದ ಜಾಕಿಟು ಸೀರೆ ಉಟ್ಟು ಬಂದಿದ್ದರಿಂದ ಬಂಗಾರಪ್ಪನವರು ಈ ರೀತಿ  ಹೇಳಿದ್ದರಂತೆ.

     ಆಗ ಕಾಂಗ್ರೇಸ್ ಪಕ್ಷದ ತಾಲ್ಲೂಕು ಪದಾಧಿಕಾರಿ ಆಗಿದ್ದ ಎಂ.ಜಿ. ಕೃಷ್ಣಮೂರ್ತಿ ಅವರು "ಸರ್ ಇವರಲ್ಲ ಜೈನ ಸಮುದಾಯದವರು" ಎಂದಾಗ ಬಂಗಾರಪ್ಪ ಅಚ್ಚರಿ ಪಟ್ಟು ಅಲ್ಲಿನ ದೀವರಿಗಿಂತ ಕಷ್ಟದ ಪರಿಸ್ಥಿತಿಯಲ್ಲಿ ಜೈನರು ಇದ್ದಾರೆಂಬುದು ನಂಬಲಿಕ್ಕೆ ಸಾಧ್ಯವಿಲ್ಲ ಎಂದಿದ್ದನ್ನ ನೆನಪು ಮಾಡಿದರು ಬಂಗಾರಪ್ಪನವರು ಅವತ್ತಿನ ಘಟನೆ ನೆನಪಿಸಿಕೊಂಡರು.

   ಸುಮಾರು ಒಂದು ಗಂಟೆ ಕಾಲ ನಾನು ಮತ್ತು ಎಂ. ಜಿ. ಕೃಷ್ಣಮೂರ್ತಿ ಬಂಗಾರಪ್ಪರ ಜೊತೆ ಕಳಸವಳ್ಳಿಯ ಶರಾವತಿ ನದಿ ದಂಡೆಯ ಮೇಲೆ ಕುಳಿತು ಲಾಂಚ್ ಅಂಬಾರಗೋಡ್ಲು ದಂಡೆಗೆ ತಲುಪಿ ವಾಪಾಸು ಬರುವುದನ್ನ ವೀಕ್ಷಿಸುತ್ತಾ ರಾಜಕಾರಣದ ಮಾತುಗಳು ನಡೆಸಿದ್ದು ಒಂದು ಅವಿಸ್ಮರಣೀಯ ನೆನಪುಗಳು.

  ಅಷ್ಟರಲ್ಲಿ ಲಾಂಚ್ ವಾಪಾಸು ಕಳಸವಳ್ಳಿ ದಂಡೆಗೆ ಬಂದು ನಿಂತಿತು ನಾವೆಲ್ಲರೂ ಬಂಗಾರಪ್ಪರ ಜೊತೆ ನಡೆದು ಹೋಗಿ ಲಾಂಚ್ ಹತ್ತಿಕೊಂಡೆವು ಬಂಗಾರಪ್ಪರ ವಾಹನಗಳೂ ಲಾಂಚ್ ಗೆ ಏರಿಸಲಾಯಿತು.

    ತಪ್ಪು ಮಾಡಿದ ಲಾಂಚ್ ಸಿಬ್ಬಂದಿಗಳು ಭಯದಿಂದ ಬಂಗಾರಪ್ಪನವರ ಎದುರು ಸುಳಿದಾಡಲೇ ಇಲ್ಲ.

   ಈ ರೀತಿ ದ್ವೇಷದ ರಾಜಕಾರಣಕ್ಕೆ ಲಾಂಚ್ ಸಿಬ್ಬಂದಿಗಳು ಆಯುಧವಾಗುತ್ತಿದ್ದ ಪ್ರಕರಣಗಳು ಈ ಭಾಗದಲ್ಲಿ ರಾಜಕಾರಣಕ್ಕೆ ಮಾತ್ರ ಅಲ್ಲ ಸ್ಥಳೀಯ ವೈಯಕ್ತಿಕ ಜಗಳ ದ್ವೇಷಗಳಿಗೂ ಭಾಗಿ ಆಗಬೇಕಾಗಿದ್ದ ಸಂದರ್ಭಗಳೂ ಇತ್ತು ಇನ್ನು ಮುಂದೆ ಸೇತುವೆ ಇಂತದ್ದೆಲ್ಲದಕ್ಕೆ ಅಂತ್ಯ ಹಾಡಲಿದೆ.
(ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ದಿನಾಂಕ 14- ಜುಲೈ-2025ರ ಉದ್ಘಾಟನೆ ಸಂದರ್ಭದ ಲೇಖನ)

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...