#ಭಾಗ_4
#ನನ್ನ_ಪಾದಯಾತ್ರೆಗೆ_21_ವರ್ಷ
#ಹೊಳೆಬಾಗಿಲು_ಸೇತುವೆ
#ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ
#ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ
#ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ
#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ
21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.
ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.
ಅನೇಕ ಕಡೆ #ನೀವು_ಹೇಳುವುದೆಲ್ಲ_ಸರಿ_ಆದರೆ_ತುಮರಿ_ಸೇತುವೆ_ಸಾಧ್ಯವೇ_ಇಲ್ಲ ಅಂತ ಗೇಲಿ ಮಾಡುತ್ತಿದ್ದ ಮುಖ೦ಡರುಗಳು ಸಿಗುತ್ತಿದ್ದರು ಅಲ್ಲಿವರೆಗೆ ಸಾಗರದ ಜನ ಮನದಲ್ಲಿ ತುಮರಿ ಸೇತುವೆ ಅಸಾಧ್ಯ ಎಂಬ ಬಾವನೆ ಮನೆ ಮಾಡಿತ್ತು.
ತುಮರಿ ಸೇತುವೆಗೆ 19 - ಪೆಬ್ರವರಿ -2018 ಶoಕು ಸ್ಥಾಪನೆ ಆಯಿತು ಈಗ ದಿನಾಂಕ 14- ಜುಲೈ-2025 ಸೋಮವಾರ ಉದ್ಘಾಟನೆ ಆಗಲಿದೆ.
ಈಗಾಗಲೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಆಗಿ ರೈಲು ಬರುತ್ತಿದೆ, ಜೋಗ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಿ ಯೋಜನೆಯ ನೀಲನಕ್ಷೆ ಪ್ರಕಾರ ಕಾಮಗಾರಿ ನಡೆದಿದೆ, ಹಂದಿಗೋಡು ಕಾಯಿಲೆ ಸಕಾ೯ರದ ಗಮನ ಸೆಳೆದು ಹಿಂದೆ ಮುಖ್ಯಮ೦ತ್ರಿ ಆಗಿದ್ದ ಕುಮಾರಸ್ವಾಮಿ ಹಂದಿಗೋಡು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು ಇನ್ನು ಈ ಕಾಯಿಲೆಗೆ ಕಾರಣ ಸಂಶೋದನೆ ಆಗಬೇಕು, ಔಷದಿ ಕಂಡು ಹಿಡಿಯುವ ಕೆಲಸ ಆಗಬೇಕು.
ಸಾಗರ ರೈಲು ನಿಲ್ದಾಣದ ನಾಮಕರಣದ ಕೆಲಸ ಮಾತ್ರ ಕಾಣದ ಕೈಗಳಿಂದ ತಡೆ ಹಿಡಿದಿದೆ ಅದಕ್ಕೆ ಮುಕ್ತಿ ಸಿಗಬೇಕಾಗಿದೆ.
ಈ ಪಾದಯಾತ್ರೆಗೆ ಪ್ರೇರಣೆ ಮಾಜಿ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆಯವರು ಒಮ್ಮೆ ಅವರ ಮನೆಯಲ್ಲಿ ಅವರನ್ನ ಬೇಟಿ ಆದಾಗ ಅವರು ಅವರ ಹದಿಹರಯದ ವಯಸ್ಸಿನಲ್ಲಿ ಸಾಗರ ತಾಲ್ಲೂಕಿನಾಧ್ಯOತ ಪಾದ ಯಾತ್ರೆ ಮಾಡುವ ಆಸೆ ಪಟ್ಟಿದ್ದರಂತೆ ಆದರೆ ಅದು ಈಡೇರಲಿಲ್ಲ ಈಗ ನನಗೆ ವಯಸ್ಸು ಆಯಿತು ಸಾಧ್ಯವಿಲ್ಲ ನಿಮಗೆ ಪ್ರಾಯ ಇದೆ ಒಂದು ಪಾದಯಾತ್ರೆ ಮಾಡಿ ಬಿಡಿ ಎಂದದ್ದು ನನ್ನ ಈ ಪಾದಯಾತ್ರೆಗೆ ಕಾರಣವಾಯಿತು.
ಸಾಗರ ತಾಲ್ಲೂಕ್ ಅಭಿವೃದ್ಧಿಗಾಗಿ 2004 ರಲ್ಲಿ ಜನ ಜಾಗೃತಿಗಾಗಿ ನನ್ನ 360 ಕಿ.ಮಿ. ಪಾದಯಾತ್ರೆಯ ವಿವರಗಳು
ಶಿವಮೊಗ್ಗ ಜಿಲ್ಲಾ ಅಭಿವೃದ್ಧಿ ರಾಜಕಾರಣದಲ್ಲಿ ಆಸಕ್ತಿ ಇರುವವರಿಗೆ ಉಪಯೋಗ ಆದೀತು.
ತುಮರಿ ಸೇತುವೆ, ಶಿವಮೊಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ ಗೇಜ್ ಗೆ ಹಣ ಬಿಡುಗಡೆ, ಸಾಗರ ರೈಲು ನಿಲ್ದಾಣಕ್ಕೆ ಪುನರ್ ನಾಮಕರಣ, ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ ವಸತಿ ಮತ್ತು ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ 2004ರಲ್ಲಿ ನಾನು ನಡೆಸಿದ ಪಾದಯಾತ್ರ ದಿನಾಂಕ 21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ನಡೆಯಿತು.
ಸುಮಾರು 360 ಕಿ.ಮಿ. ಆನಂದಪುರಂನ ಮುರುಘಾಮಠದಿOದ (ಆಚಾಪುರ ಗ್ರಾಮ ಪಂಚಾಯತ) ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ,ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇನೆಲ್ಲೂರು, ಕಾಗೋಡು, ಸೈದೂರು,ಕಾನ್ಲೆ, ಶಿರವಂತೆ, ಯಡಜಿಗಳೆಮನೆ, ಖಂಡಕಾ, ತಾಳಗುಪ್ಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿದೇವರಬನ, ಬೇಸೂರು, ಆವಿನಳ್ಳಿ, ಹಳೆಇಕ್ಕೇರಿ, ಬೀಮನಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸೀಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು.
ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪರ ಮಾಗ೯ದಶ೯ನದಲ್ಲಿ ರೈತ ಸಂಘದ ವಸಂತ ಕುಮಾರರ ಸಹಕಾರದೊಂದಿಗೆ ಸುಮಾರು ನೂರು ಜನ ಗೆಳೆಯರ ತಂಡದೊಂದಿಗೆ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.
ಹೀಗೆ ಮಾಜಿ ಶಾಸಕರಾದ ಎಲ್.ಟಿ. ಹೆಗ್ಗಡೆಯವರ ಮಾತಿನ ಪ್ರಭಾವದಿ೦ದ ಅವತ್ತು ನಾನು ಮತ್ತು ನನ್ನ ಸಹಪಾಟಿಗಳು ಅನೇಕ ಪ್ರಗತಿ ಪರರ ಸಹಕಾರದಿಂದ ನಡೆಸಿದ ಪಾದಯಾತ್ರೆಯ ಜನ ಜಾಗೃತೆಯ ಪ್ರಮುಖ ಬೇಡಿಕೆಗಳು ಅನೂಷ್ಟಾನಗೊಳ್ಳುತ್ತಿರುವುದು ಸಂತೋಷ ತಂದಿದೆ.
ನನ್ನ ಮತ್ತು ನನ್ನ ಗೆಳೆಯರ ಈ ಪಾದಯಾತ್ರೆಯಿಂದ ಇದೆಲ್ಲ ಆಯಿತಾ? ಎಂದರೆ ನನ್ನ ಉತ್ತರ ಖಂಡಿತಾ ಇಲ್ಲ ಅಂತಲೇ ಆದರೆ ಜನರಲ್ಲಿ ತಮ್ಮ ಜನಪ್ರತಿನಿದಿಗಳಲ್ಲಿ ಈ ಬೇಡಿಕೆ ಇಡುವ ಜನಜಾಗೃತಿಯ ಕೆಲಸ ನಮ್ಮ ತಂಡದಿಂದ ಆಯಿತು, ಜನಪ್ರತಿನಿದಿಗಳು ಇದನ್ನು ಈಡೇರಿಸುವ ಭರವಸೆ ನೀಡಿ ಪ್ರಯುತ್ನ ಮಾಡುವ ದಿಶೆಯಲ್ಲಿ ಸಾಗಿದರು.
ತಾಲ್ಲೂಕಿನ ಅಭಿವೃದ್ದಿಯ ಬೇಡಿಕೆಯ ಒಂದು ಸಣ್ಣ ಕಿಡಿಯನ್ನು ನಾವು ಹಾರಿಸಲು ಯಶಸ್ವಿ ಆದೆವು ಅದು ದೊಡ್ಡ ಜ್ವಾಲೆ ಆಯಿತು ಜನರ ಬೇಡಿಕೆ ಈಡೇರಿತು.
ಜನಪರ ಹೋರಾಟಗಳೇ ಹಾಗೆ ಆದರೆ ಇದೆಲ್ಲ ಜನಮಾನಸದಲ್ಲಿ ಖಾಯಂ ಆಗಿ ನೆನಪಿನಲ್ಲಿ ಉಳಿಯುವುದಿಲ್ಲ ಉಳಿಯಲೂ ಬಾರದು "ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರೂ " ರಾಜಕುಮಾರ್ ಅವರ ಸಿನಿಮಾ ಹಾಡಿನಂತೆ.
Comments
Post a Comment