Skip to main content

Blog number 2130. ಕುಂಚಿಕಲ್ ಪಾಲ್ಸ್ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ

#ಕುಂಚಿಕಲ್_ಪಾಲ್ಟ್_ಮೊದಲ_ವಿಡಿಯೋ_ಮಾಡಿದ್ದ

#ಸಮಾಜಸೇವಕರಾದ_ನಗರ_ನಾರಾಯಣ_ಕಾಮತರ_ಸಂದೇಶ_ಬಂದಿದೆ

#ಅವರ_ಮಿತ್ರ_ಅನಂತಮೂರ್ತಿ_ಶೆಣೈೆ_ಇತ್ತೀಚಿನ_ಕೆಲವು_ವಿಡಿಯೋ_ಕಳಿಸಿದ್ದಾರೆ

#ಯಾರು_ಯಾವಾಗ_ತೆಗೆದದ್ದು_ಎಂಬ_ಮಾಹಿತಿ_ಸಿಕ್ಕಿಲ್ಲ

#ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ

https://youtu.be/xHxHlUyB6cM?feature=shared.


ಅರುಣ್ ಪ್ರಸಾದ್ ಸರ್.. 
ಕುಂಚಕಲ್ ಜಲಪಾತದ ಕುರಿತ ನೈಜ ಚಿತ್ರಣ ಹಾಗೂ ಅದರ ಕರಾರುವಾಕ್ ಎತ್ತರದ ಕುರಿತ ಮಾಹಿತಿಗೆ ತಾವು ಪ್ರಯತ್ನಿಸುತ್ತಾ  ಸತತ ವಾಗಿ ಮಾಹಿತಿ ಸಂಗ್ರಹಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ. ನಿಮ್ಮ ಜೊತೆ ನಮ್ಮ ಚಾರಣದ ಮಾಹಿತಿ ಹಂಚಿಕೊಂಡ ನಂತರ ನಮಗೆಲ್ಲರಿಗೂ ಹೌದಲ್ಲವೇ ...
ನಮ್ಮಲ್ಲೇ ಇಂತಹದೊಂದು ಅಧ್ಬುತ ನಿಸರ್ಗ ನಿರ್ಮಿತ ಜಲಪಾತ ವಿದ್ದಾಗ  ಯಾಕೆ ಇದು ಗುರುತು ಮಾಡಲಾಗಿಲ್ಲ ಎಂಬ ಯೋಚನೆಯೂ  ಬೆನ್ನುಹತ್ತಿದೆ ಹಾಗಾಗಿ ಮೊನ್ನೆಯಿಂದ ಮಾಹಿತಿ ಸಂಗ್ರಹಕ್ಕೆ ಪ್ರಯತ್ನ ಪಡುತ್ತಿದ್ದೇವೆ. ಬಲ್ಲ ಮಾಹಿತಿಯ ಪ್ರಕಾರ 2008 ರಲ್ಲಿ  ಕರ್ನಾಟಕ ಪವರ್ ಕಾರ್ಪೋರೇಶನ್ ವತಿಯಿಂದ ವರಾಹಿಯ ನದಿಯ ಬಗ್ಗೆ ಯಡೂರು ನಿಂದ ಆರಂಭ ವಾಗಿ ಸಮುದ್ರ ಸೇರುವ ಗಂಗೊಳ್ಳಿಯ ವರೆಗೂ ಸರ್ವೇ ಮಾಡಲಾಗಿದ್ದು ಆದ್ರೆ ಜಲಪಾತದ ಎತ್ತರದ ಕುರಿತ ಮಾಹಿತಿ  ತಿಳಿಯುತ್ತಿಲ್ಲ. ಆದರೆ ಈ ಜಲಪಾತದ ಕುರಿತು ಸಿಕ್ಕ ಇನ್ನೊಂದು ಮಾಹಿತಿಯೂ ಅತ್ಯಂತ ಕುತೂಹಲ ಹಾಗೂ ಭಯಾಶ್ಚರ್ಯವೂ ಆಯಿತು. 
ಈ ಸರ್ವೇ ನೆಡೆಯುವ ವೇಳೆ ಸರ್ವೆಗೆ  ಬಂದಂತಹ ವ್ಯಕ್ತಿಗಳು ಜಲಪಾತದ ಬೃಹತ್ ಬಂಡೆಗಳ ಮೇಲಿಂದ ಕೆಳಕ್ಕೆ ಇಳಿಯಲಾಗದೆ ಬಂಡೆಗಳಿಗೆ ಗುಳಿ ಗಳನ್ನು ಹೊಡೆದು ಅದಕ್ಕೆ ರೋಪ್ ಗಳನ್ನು ಹಾಕಿಕೊಂಡು ಕೆಳಕ್ಕೆ ಹಂತ ಹಂತ ವಾಗಿ ಇಳಿಯುತ್ತಾ ತೆರಳಿದ್ದರಂತೆ ಹಾಗೆಯೇ ಘಟ್ಟದ ಮೇಲಿನ ತಂಡವೇ ಬೇರೆ ಹಾಗೂ ಜಲಪಾತ ಆಳಕ್ಕೆ ಕಡಿದಾಗಿರುವುದರಿಂದ ಘಟ್ಟದ ಕೆಳಗಿನಿಂದ ರಸ್ತೆಯ ಮಾರ್ಗವಾಗಿ ಸುತ್ತಾಗಿ ವಾಹನದ ಮೂಲಕ ಇನ್ನೊಂದು ತಂಡ ಜಲಪಾತದ ಬುಡದಲ್ಲಿ ಬಂದು ಸೇರಬೇಕಾಯ್ತು ಹಾಗೆ ಕೆಳಗಿನ ಕಡೆಯಿಂದ ಮೇಲೆ ಬರುವಲ್ಲಿ ಅತಿ ದೊಡ್ಡ ಬಂಡೆಗಳ ಸೀಳು ಗಳ ಮದ್ಯೆ ಹಾಗೆ ಕೊರಕಲು ಗುಂಡಿಗಳನ್ನು ನೋಡಿಯೇ ಜೀವಭಯ ಆದ ಬಗ್ಗೆಯು ಮಾಹಿತಿ ಕೊಟ್ಟಿದ್ದಾರೆ ಸರ್. ಇಂತಹ ನಿಸರ್ಗ ನಿರ್ಮಿತ ಪುರಾತನ ವಾರಾಹಿ ನದಿಯ ಈ ಜಲಪಾತ ನೈಜ ಎತ್ತರ ಹಾಗೂ ಅದರ ನೈಸರ್ಗಿಕ ಸೌಂದರ್ಯವು ದಾಖಲೆ ಗೊಂಡು ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಸಮೀಪದ ಕುಂಚಕಲ್ ಜಲಪಾತವು ಮುಂದಿನ ದಿನಗಳಲ್ಲಿ ಅತ್ಯಂತ ಸುಂದರ ಜಲಪಾತದ ಪಟ್ಟಿಯಲ್ಲಿ ಸೇರಲಿ ಎಂಬ ಮಹದಾಸೆಯೂ ನಮ್ಮಲಿದೆ. 
ನಿಮ್ಮ ಪ್ರಯತ್ನಕ್ಕೆ ಮತ್ತೊಮ್ಮೆ ಧನ್ಯವಾದಗಳು ಸರ್ 
ನಿಮ್ಮವ ನಗರ ಸಿ.ನಾರಾಯಣ ಕಾಮತ್.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...