Skip to main content

Blog number 2101. ಕೋಟೆಕೊಪ್ಪದ ಪರಮಾಪ್ತ ಶಿಷ್ಟ ಶೇಖ್ ಮೀರೂ ಸಾಹೇಬರು ಪುತ್ರಿಯ ವಿವಾಹ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು.

#ಹೀಗೂ_ಇರುತ್ತಾರಾ?

#ಕೋಟೆಕೊಪ್ಪದ_ನನ್ನ_ಒಂದು_ಕಾಲದ_ಪರಮಾಪ್ತ

#ಮೀರೂ_ಸಾಹೇಬರು

#ಬುದ್ದಿವಂತ_ದೈರ್ಯವಂತ_ಚತುರ_ಕೆಲಸಗಾರ

#ಪರೋಪಕಾರಿ_ಜನನಾಯಕ

  ಕೋಟೆಕೊಪ್ಪ ಎಂಬ ಹಳ್ಳಿ ಆನಂದಪುರಂ ಹೋಬಳಿ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿಯ ಸಣ್ಣ ಹಳ್ಳಿ ಅಂಚೆ ನೀಚಡಿ ಇಲ್ಲಿನ ಬುಡನ್ ಸಾಹೇಬರ ಪುತ್ರ ಶೇಖ್ ಮೀರ್ ಸಾಬ್ ನನ್ನ ಶಿಷ್ಯ ಮತ್ತು ನನ್ನ ಯಡೇಹಳ್ಳಿ ಊರಿನ ಅಳಿಯನೂ ಹೌದು.
  ಬುದ್ಧಿವಂತ - ದೈಯ೯ವಂತ- ಚತುರ ಕೆಲಸಗಾರ, ಯಾವ ಕೆಲಸವೂ ಬರುವುದಿಲ್ಲ ಎನ್ನುವಂತಿಲ್ಲ ಅಷ್ಟೆ ಅಲ್ಲ ಪರೋಪಕಾರಿ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ (ಹಿರೇಬಿಲಗುಂಜಿ -ತ್ಯಾಗರ್ತಿ - ಗೌತಮಪುರ - ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ) ಪರಿಚಿತ ವ್ಯಕ್ತಿ.
  1995- 2000ರ ಅವಧಿಯಲ್ಲಿ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಈ ವ್ಯಾಪ್ತಿಯ ಜನಪರವಾಗಿ ತಮ್ಮ ಹಳ್ಳಿಯ ಅಭಿವೃದ್ದಿಗೆ ಕಾಳಜಿವಹಿಸುವ ಕೆಲವರನ್ನು ಅವರ ಹಳ್ಳಿಯಲ್ಲಿ ನಡೆಯುವ ಸರ್ಕಾರದ ಅಭಿವೃದ್ದಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡುವ ನನ್ನ ಆಪ್ತ ಬಳಗ ಮಾಡಿಕೊಂಡಿದ್ದೆ ಗುತ್ತಿಗೆದಾರ ಮತ್ತು ಇಂಜಿನಿಯರ್ ಗಳು ಮೊದ ಮೊದಲು ಇದನ್ನು ಸಹಿಸಲಿಲ್ಲ ಆದರೆ ನಾನು ನನ್ನ ಪಟ್ಟು ಬಿಡಲಿಲ್ಲ ಆದ್ದರಿಂದ ಒ0ದೇ ವರ್ಷ 12 ಜನ ಇಂಜಿನಿಯರ್ ಓಡಿ ಹೋದರು.
   ಈ ಆಪ್ತ ವಲಯದವರಿಗೆ ಎಸ್ಟಿಮೇಟ್ ನೋಡಿ ಅದರಂತೆ ಕೆಲಸ ಮಾಡಿಸುವ ಗುಣ ಮಟ್ಟ ಪರಿಶೀಲನೆ ಮಾಡುವ ತರಬೇತಿ ಕೊಟ್ಟಿದ್ದೆ ಅಷ್ಟೆ ಅಲ್ಲ ಅವರ ಹಳ್ಳಿಗಳಿಗೆ ಆದ್ಯತೆ ಮೇಲೆ ಆಗ ಬೇಕಾದ ಕಾಮಗಾರಿ ಪಟ್ಟಿ ಮಾಡುವುದು ಎಲ್ಲರೂ ಒಂದಾಗಿ ಪ್ರತಿ ವರ್ಷ ಪಾದಯಾತ್ರೆ ಮೂಲಕ ಸ್ಥಳ ಪರಿಶೀಲನೆ ಮಾಡುವುದು ಈ ಎಲ್ಲಾ ಗ್ರಾಮಾಭಿವೃದ್ಧಿ ಕೆಲಸಕ್ಕೆ ಎಲ್ಲಾ ಪಕ್ಷದವರನ್ನು ಭಾಗಿ ಆಗುವಂತೆ ಮಾಡುತ್ತಿದ್ದೆ.
  ಇಂತಹ ಆಪ್ತವಲಯದ ಪ್ರಮುಖರು ಈ ಕೋಟೆಕೊಪ್ಪದ ಮೀರೂ ಸಾಹೇಬರು,ಇವರಿಂದನೇ ಇವರ ಊರಿಗೆ ಕುಡಿಯುವ ನೀರಿನ ಯೋಜನೆ, ಕೆರೆ ದುರಸ್ತಿ ತೆರೆದ ಬಾವಿ, ವಿದ್ಯುತ್ ಸಂಪರ್ಕ ರಸ್ತೆ ಇತ್ಯಾದಿ ಮಾಡಲು ಸಾಧ್ಯವಾಯಿತು.
   ಇವರ ಹಳ್ಳಿಯ ಒಂದು ಕಡೆ ಇಪ್ಪತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ ಮೀರೂ ಸಾಹೇಬರ ಒತ್ತಾಯದಿಂದ ವಿದ್ಯುತ್ ಇಲಾಖೆಯ ಮೇಲಾದಿಕಾರಿಗಳ ಸಹಕಾರದಿಂದ ವಿದ್ಯುತ್ ಮಂಜೂರಾಗಿ ವಿದ್ಯುತ್ ಕಂಬಗಳು ಊರಿಗೆ ಬಂದಾಗ ಅವರಿಗೆಲ್ಲ ಸಂಭ್ರಮ.
  ಎಲ್ಲಾ ಮನೆಗಳಿಗೆ ವೈರಿಂಗ್ ಮಾಡಿಸಿ ಕೊಡುವ ಜವಾಬ್ದಾರಿ ಗ್ರಾಮದವರು ಮೀರೂ ಸಾಹೇಬರಿಗೆ ವಹಿಸಿದರು, ಮೀರೂ ಸಾಹೇಬರು ತಮ್ಮ ಪರಿಚಯದ ವೈರಿಂಗ್ ಮಾಡುವವನನ್ನ ಕರೆತಂದು ಗುತ್ತಿಗೆ ಕೊಡಿಸಿ ಮುಂಗಡ ಕೊಡಿಸಿದರು.
  ನಂತರ ಊರಿಗೆ ವಿದ್ಯುತ್ ಕಂಬ ನೆಟ್ಟು, ವೈರ್ ಎಳೆದು ಬೀದಿ ದೀಪ ಬೆಳಗಿದರೂ ಗುತ್ತಿಗೆದಾರ ನಾಪತ್ತೆ ಕೊನೆಗೂ ಆತ ಮುಂಗಡ ಹಣದೊಂದಿಗೆ ನಾಪತ್ತೆ ಇದನ್ನು ನನಗೆ ತಿಳಿಯದಂತೆ ಮೀರೂ ಸಾಹೇಬರೇ ಪರಿಹರಿಸಿದ ಕಥೆ ನನಗೆ ವಿಚಿತ್ರ ಅನ್ನಿಸಿತು.
   ಯಾವುದೇ ಕೆಲಸ ನೋಡಿದರೂ ಮಾಡಿ ತೋರಿಸುವ ಹುಟ್ಟು ಕೌಶಲ್ಯದ ಮೀರೂ ಸಾಹೇಬರು ಇಡೀ ಊರಿನ ಮನೆಗೆ ವೈರಿಂಗ್ ಮಾಡಿ ಅವರ ಮನೆ ದೀಪ ಬೆಳಗಿಸಿದ್ದರು ಈ ಮೂಲಕ ಊರಿಗೆ ಮೋಸ ಮಾಡಿ ಮುಂಗಡ ಹಣದೊಂದಿಗೆ ನಾಪತ್ತೆ ಆಗಿದ್ದ ವಿದ್ಯುತ್ ವೈರಿಂಗ್ ಗುತ್ತಿಗೆದಾರನ ಕೆಲಸ ಇವರೆ ಕಲಿತು ಮಾಡಿದ್ದು ಆಶ್ರಯ೯ವಾದರೂ ಸತ್ಯ.
  ಈಗ ಇವರ ಮಗ ಬೆಂಗಳೂರಲ್ಲಿ ವೈರಿಂಗ್ ಪ್ಲಂಬಿಂಗ್ ಕಲಿತು ಬಂದು ಸಾಗರದಲ್ಲಿ ಉತ್ತಮ ಕೆಲಸಗಾರನೆಂದು ಹೆಸರು ಗಳಿಸಿದ್ದಾರೆ.
   ಕೊನೆಯ ಪುತ್ರಿ ನಾಜಿಯಾ ವಿವಾಹ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು, ಇದು ಕೊನೆಯ ಮದುವೆ ಇನ್ನು ಏನಿದ್ದರೂ ಮೊಮ್ಮಕ್ಕಳ ಮದುವೆಗೆ ಕರೆಯಲು ಬರಬೇಕಷ್ಟೆ ಅಂದಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...