Skip to main content

Blog number 2107. ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ನಿಡುಗೋಡಿ ದಟ್ಟ ಅರಣ್ಯದ ಮಧ್ಯದಲ್ಲಿರುವ ನಿಗೂಡ ಜಲಪಾತ ಕುಂಚಿಕಲ್ ಪಾಲ್ಸ್ ನಮ್ಮ ದೇಶದ ಅತಿ ಎತ್ತರದ ಜಲಪಾತವೆಂದು ದಾಖಲೆ ಆಗಿರುವ ಹಿಮಾಚಲ ಪ್ರದೇಶದ ನೋಹಾಕಾಲಿಕೈ ಜಲಪಾತಕ್ಕಿಂತ ದೊಡ್ಡದೆಂದು ಹರಡಿರುವ ಸುದ್ದಿ ಸತ್ಯವಾ?

#ನನ್ನ_ಆತ್ಮೀಯ_ಗೆಳೆಯ_ಕುಣುಬಿ_ಈರಪ್ಪಣ್ಣರ_ಸಹೋದರ

#ಮಾಸ್ತಿಕಟ್ಟೆ_ಕೆಪಿಸಿ_ದೇವೇಂದ್ರ_ನನ್ನ_ಅತಿಥಿ

#ಕುಣುಬಿ_ಸಮಾಜ_ಸಂಘಟನೆಗೆ_ಈರಪ್ಪಣ್ಣರ_ಅಡಿಪಾಯ

#ವರಾಹಿ_ಡ್ಯಾಂ_ಇವರ_ಜಮೀನಿನ_ಮೇಲೆ_ನಿರ್ಮಾಣವಾಗಿದೆ

#ನಮ್ಮ_ಗ್ರಾಮ_ಪಂಚಾಯಿತಿ_ಘಂಟಿನಕೊಪ್ಪದಲ್ಲಿ_ಕೃಷಿ_ಮಾಡುತ್ತಿರುವ_ಕುಟುಂಬ

#ದೇವೇಂದ್ರರಿಗೆ_ಕೆಪಿಸಿ_ಕೆಲಸ_ಕೊಡಿಸಿದ_ಆರಗ_ಜ್ಞಾನೇಂದ್ರ

#ಈರಪ್ಪಣ್ಣ_ನೇತೃತ್ವದಲ್ಲಿ_ದೇಶದ_ಅತಿ_ದೊಡ್ಡ_ಜಲಪಾತ_ಕುಂಚಿಕಲ್_ಪಾಲ್ಸ್_ಅನ್ವೇಷಣೆ_ವಿಫಲವಾಗಿದ್ದು

#ಈಗಲೂ_ನಿಗೂಡವಾಗಿರುವ_ಪಾಲ್ಸ್_ನೋಡಿದವರು_ಯಾರು?

#ಅದನ್ನು_ಅಳೆದವರು_ಯಾರು?

#ಈ_ಬಗ್ಗೆ_ಸರ್ಕಾರ_ಸ್ಪಷ್ಟ_ಉತ್ತರ_ನೀಡೀತಾ?


  ಇವತ್ತು ಮಾದರಿ ಶಿಕ್ಷಕ ಮಿತ್ರ ಮಂಜುನಾಥ್ ಆರ್. ಸಿ. ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ದಟ್ಟ ಅರಣ್ಯದ ಮಧ್ಯೆ ನಿಗೂಡವಾಗಿರುವ ಕುಂಚಿಕಲ್ ಪಾಲ್ಸ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಸುದ್ದಿ ವಿಡಿಯೋ ಹಂಚಿಕೊಂಡಿದ್ದರು.
https://www.facebook.com/share/v/3QUhXA3vswQfxBVc/?mibextid=qi2Omg
  ಈ ನಿಗೂಡ ಪಾಲ್ಸ್ ನೋಡಿದ್ದ ಕುಣುಬಿ ಈರಪ್ಪಣ್ಣ ಈ ಬಗ್ಗೆ ಆಸಕ್ತರಾಗಿದ್ದ ನಮ್ಮನ್ನು ಅಲ್ಲಿಗೆ ಕರೆದೊಯ್ಯುವ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಇದಕ್ಕಾಗಿ ನಾವು ನಮ್ಮದೇ ಒಂದು ತಂಡದೊಂದಿಗೆ ಸಜ್ಜಾಗಿದ್ದೆವು.
  ದುರ್ಗಮ ಮಾಗ೯ದಲ್ಲಿ ನಮ್ಮ ತಂಡ ಕರೆದೊಯ್ಯಲು ದಾರಿ ಮಾಡಿ ಕೊಡಲು, ಊಟ-ಉಪಹಾರ, ವನ್ಯ ಪ್ರಾಣಿಗಳ ದಾಳಿ ತಡೆಯಲು ಬಂದೂಕು ದಾರಿಗಳು, ವಿಡಿಯೋ ಪೋಟೋ ಗ್ರಾಪರ್ ಹೀಗೆ ತಯಾರಾಗಿದ್ದ ನಮ್ಮ ಕ್ಯಾರ್ ವಾನ್ ಕೊನೆಗೂ ಟೇಕ್ ಆಫ್ ಆಗಲಿಲ್ಲ.
   ನಾವೆಣಿಸಿದಂತೆ ಸರಾಗವಾಗಿ ನಡೆದಿದ್ದರೆ ಈ ನಿಗೂಡವಾದ ಹಾಗೂ ನಮ್ಮ ದೇಶದಲ್ಲೇ ಅತ್ಯಂತ ಎತ್ತರದ ವಾಟರ್ ಪಾಲ್ಸ್ ಪ್ರಪಂಚಕ್ಕೆ ಪರಿಚಯಿಸಿದ ಮೊದಲಿಗರು ಎಂಬ ದಾಖಲೆ ನಮ್ಮದಾಗಿಸಿಕೊಂಡು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಅವಕಾಶ ಇತ್ತು.
   ಈ ಯೋಜನೆ ಟೇಕ್ ಆಫ್ ಆಗದೇ ಇರಲು ಕಾರಣ ನಾವು ಹೋಗ ಬೇಕೆಂದಿದ್ದ ಸಮಯ ಕಾಳಿಂಗ ಸರ್ಪಗಳು ಮೊಟ್ಟೆ ಇಟ್ಟು ಕಾವು ಕೊಡುವ ಕಾಲವಾಗಿತ್ತು ಇದರ ಬಗ್ಗೆ ಜಾಗೃತೆವಹಿಸ ಬೇಕೆಂದು ಈರಪ್ಪಣ್ಣ ಹೇಳದಿದ್ದರೆ ಎಲ್ಲರೂ ಉತ್ಸಾಹದಿಂದ ಹೊರಡುತ್ತಿದ್ದರು....ಆದರೆ ಕಾಳಿಂಗ ಸರ್ಪದ ಕಥೆ ಒಬ್ಬೊಬ್ಬರಾಗಿ ಎಲ್ಲರೂ ನಿಗೂಡವಾದ ಕುಂಚಿಕಲ್ ಪಾಲ್ಸ್ ಎಕ್ಸ್ ಪ್ಲೋರಿಂಗ್ ಟೀಂನಿಂದ ಬರಕಾಸ್ತು ಆಗಲು ಕಾರಣವಾಯಿತು.
   ಕುಂಚಿಕಲ್ ಪಾಲ್ಸ್ ಇರುವುದು ಹೌದು ಅನುಮಾನವಿಲ್ಲ ಅದು ದಟ್ಟ ಅರಣ್ಯದ ಮಧ್ಯದಲ್ಲಿ ದಾರಿಯಿಲ್ಲದ ಪ್ರದೇಶದಲ್ಲಿದೆ. ಅಲ್ಲಿ ಅದರ ವೀಕ್ಷಣೆಗೆ ಸರಿಯಾದ ವೀವ್ ಪಾಯಿಂಟ್ ಕೂಡ ಇಲ್ಲದಂತೆ ಘಟ್ಟದ ಅಂಚಿನಿಂದ ದಟ್ಟ ಹಸಿರು ಮರಗಿಡ ಬಳ್ಳಿಗಳ ಮರೆಯಲ್ಲಿ ಮಳೆಗಾಲದಲ್ಲಿ ವರಾಹಿ ನದಿಯ ಒಂದು ಪಾತ್ರ ಅಲ್ಲಿ ದುಮ್ಮಿಕ್ಕುತ್ತದೆ ಅದರ ಪೂರ್ಣ ದೃಶ್ಯ ತುದಿಯಿಂದ ಬುಡದವರೆಗೆ ಒಂದೇ ಕೋನದಲ್ಲಿ ನೋಡಲು ಅಥವ ಸೆರೆಹಿಡಿಯಲು ಸಾಧ್ಯವೇ ಇಲ್ಲವಂತೆ.
 ಅದರ ಪೋಟೋ ಯಾರಾದರೂ ತೆಗೆದಿದ್ದಾರಾ? ಗೊತ್ತಿಲ್ಲ... ಅಷ್ಟೆ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೋ ವಿಡಿಯೋ ಈ ಪಾಲ್ಸ್ ನ ಅಸಲಿಯಾ ಅನ್ನುವುದು ಕೂಡ ಗೊತ್ತಿಲ್ಲ, ಹಾಗೆಯೆ ಈ ಕುಂಚಿಕಲ್ ಪಾಲ್ಸ್ ಎತ್ತರ ಮೀಟರ್ ಗಳಲ್ಲಿ ಕರಾರುವಕ್ಕಾಗಿ ನಮೂದಿಸಿದ್ದಾರೆ ಹಾಗಾದರೆ ಅಳತೆ ಮಾಡಿದವರು ಯಾರು? ಅದೂ ಗೊತ್ತಿಲ್ಲ.
   ಆದರೆ ದೇಶದ ಅತಿ ಎತ್ತರದ ಜಲಪಾತ ಹಿಮಾಚಲ ಪ್ರದೇಶದ #ನೋಹಾಕಾಲಿಕೈ ಪಾಲ್ಸ್ ಹೆಸರಲ್ಲಿದೆ ಅದು 1115 ಅಡಿ ಎತ್ತರದಿಂದ ದುಮ್ಮಿಕ್ಕುತ್ತಿದೆ.
  ನಮ್ಮ ಜಿಲ್ಲೆಯ ಕುಂಚಿಕಲ್ ಪಾಲ್ಸ್ ಎತ್ತರ 1433 ಅಡಿ ಎಂಬ ಸುದ್ದಿ ಸತ್ಯವಾಗಿದ್ದರೆ ದೇಶದ ಜಲಪಾತಗಳ ಪಟ್ಟಿ ಪರಿಷ್ಕರಣೆ ಆಗ ಬೇಕೆಂದು ನಾನು ಕೆಲ ವರ್ಷದ ಹಿಂದೆ ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಿ 
https://arunprasadhombuja.blogspot.com/2023/03/blog-number-1276.html.
   
  ಕುಣುಬಿ ಈರಪ್ಪಣ್ಣರ ಪ್ರೇರಣೆ ಒತ್ತಾಯದಿಂದ ಬಳ್ಳಿಬೈಲು ಮಂಜಪ್ಪ (ಈಗ ಸಾಗರ ನ್ಯಾಯಾಲಯದಲ್ಲಿ ವಕೀಲರು ಮತ್ತು ರಾಷ್ಟ್ರೀಯ ಕುಣುಬಿ ಸಂಘಟನೆ ಪದಾದಿಕಾರಿ) ಸಹಕಾರದಿಂದ ನಮ್ಮ ಊರು ಆನಂದಪುರಂನಲ್ಲಿ ಜಿಲ್ಲೆಯ ಮೊದಲ ಕುಣುಬಿ ಸಮಾಜದ ಸಮಾವೇಶ ಮತ್ತು ಎರಡನೆ ಸಮಾವೇಶ ಭಟ್ಕಳ ಸಮೀಪದ ನಾಗವಳ್ಳಿಯ ದೇವಗಾರಿನಲ್ಲಿ ನಡೆಸಿದ್ದೆವು.
  ವರಾಹಿ ವಿದ್ಯುತ್ ಯೋಜನೆಗೆ ಕಟ್ಟಿದ ಡ್ಯಾಂ ಈರಪ್ಪಣ್ಣರ ಕುಟುಂಬದ ಪಿತ್ರಾರ್ಜಿತ ಅಡಿಕೆ ತೋಟದ ಮೇಲೆ, ಅಲ್ಲಿ ಜಮೀನು ಕಳೆದುಕೊಂಡು ನಮ್ಮ ಊರಿನ ಸಮೀಪದ ಘಂಟಿನಕೊಪ್ಪದಲ್ಲಿ ಕೃಷಿ ಭೂಮಿ ಖರೀದಿಸಿ ಈರಪ್ಪಣ್ಣರ ಕುಟುಂಬಗಳು ಜೀವನ ನಡೆಸಿದ್ದಾರೆ.
   ಈರಪ್ಪಣ್ಣರ ಕಿರಿಯ ಸಹೋದರ ದೇವೇಂದ್ರರಿಗೆ KPC ಯಲ್ಲಿ ಅನುಕಂಪದ ಉದ್ಯೋಗ ಕೊಡಿಸಲು ಈರಪ್ಪಣ್ಣ ತುಂಬಾ ಶ್ರಮ ಪಟ್ಟರು, ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರು ನಮ್ಮ ಬೇಡಿಕೆ ಈಡೇರಿಸಿ ದೇವೇಂದ್ರರಿಗೆ ಉದ್ಯೋಗ ಕೊಡಿಸಿದ್ದು ಮರೆಯುವಂತಿಲ್ಲ.
   ಈರಪ್ಪಣ್ಣ ಮರಣಿಸಿದಾಗ ಅವರ ಸಮಾದಿ ಆಗುವ ತನಕ ನಾನು ರಾತ್ರಿ ಅಲ್ಲಿದ್ದೆ, ಕುಣುಬಿ ಸಮಾಜದವರ ಸಮಾದಿಗಳು ಆದಿವಾಸಿ ಗುಡ್ಡಗಾಡು ಜನಾಂಗದವರ ಶೈಲಿ ಮತ್ತು ಪದ್ದತಿಯದ್ದು.
  ಘಂಟಿನಕೊಪ್ಪದಲ್ಲಿ ನೆಲೆಸಿರುವ ಈ ಆರೇಳು ಕುಟುಂಬ ಈಗಲೂ ರೇಷನ್ ಕಾರ್ಡ್ ಕೂಡ ಹೊಂದಿಲ್ಲ ಎಂಬ ಸುದ್ದಿ ದೇವೇಂದ್ರರಿಂದ ತಿಳಿದು ಬೇಸರ ತರಿಸಿತು.
  ಈಗ ದೇವೇಂದ್ರ ಮಾಸ್ತಿಕಟ್ಟೆ ಪವರ್ ಹೌಸ್ ನಲ್ಲಿ ಉದ್ಯೋಗಿ ಆಗಿದ್ದಾರೆ ಇವತ್ತು ನನ್ನ ಆಫೀಸಿಗೆ ಬಂದಾಗ ಇದನ್ನೆಲ್ಲ ನೆನಪಿಸಿಕೊಂಡೆವು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ