Skip to main content

Blog number 2100. ಶೃಂಗೇರಿ ಶ್ರೀನಿವಾಸ ಮೂರ್ತಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಾ ...

#ಆತ್ಮೀಯ_ಮಿತ್ರ_ಶೃಂಗೇರಿ_ಶ್ರೀನಿವಾಸ_ಮೂರ್ತಿ

#ಅವರ_ಬಾಲ್ಯದ_ಕಷ್ಟ_ತುತ್ತು_ತುತ್ತಿಗೂ_ಬರ

#ಹಣ_ಹೆಸರಿನ_ಹಿಂದೆ_ಓಡುವ_ಸಮಾಜ_ನಮ್ಮ_ಅಕ್ಕ_ಪಕ್ಕದ_ನತದೃಷ್ಟರನ್ನ_ಗಮನಿಸಲು_ಸಾಧ್ಯವೇ?

#ಬಾಲ್ಯದಿಂದಲೇ_ಕಷ್ಟವನ್ನೆ_ಹಾಸಿ_ಹೊದೆದು_ಬೂದಿಯಿಂದ_ಎದ್ದು_ಬಂದ_ಶ್ರೀನಿವಾಸ_ಮೂರ್ತಿ

#ವಾಸ್ತವವಾದಿ_ಪತ್ನಿ_ಪುತ್ರಿ_ಪುತ್ರ_ಹಸುಗಳು_ನಾಯಿ_ಬೆಕ್ಕುಗಳ_ಪುಟ್ಟ_ಪರಿವಾರ

#ದೂರದ_ಶೃಂಗೇರಿಯ_ದಟ್ಟ_ಕಾನನದ_ಬೆಟ್ಟದಲ್ಲಿ_ಪುಟ್ಟ_ಮನೆ_ಕೃಷಿ

#ಈಗ_ಅನಾರೋಗ್ಯದಿಂದ_ಆಸ್ಪತ್ರೆ_ಸೇರಿದ್ದಾರೆ

#ಚಿಕಿತ್ಸೆ_ಯಶಸ್ವಿಯಾಗಿ_ಗುಣವಾಗಿ_ಮನೆಗೆ_ಮರಳಿ_ಬರಲಿ_ಎಂದು_ದೇವರಲ್ಲಿ_ಪ್ರಾರ್ಥಿಸಿದ್ದೇನೆ.


   ಸಾಮಾಜಿಕ ಜಾಲತಾಣದಲ್ಲಿ ಕೆಲವರ ಗೆಳೆತನ ಪೂರ್ವಜನ್ಮದಿಂದ ಆಯಿತಾ ಅನ್ನಿಸುವಂತಾ ಮಿತ್ರತ್ವ ಬೆಳೆದು ಬಿಡುತ್ತದೆ, ಪೇಸ್ ಬುಕ್ ಅವರ ಸ್ವಭಾವ ಬಾಲ್ಯ ಎಲ್ಲಾ ಪರಿಚಯಿಸುವುದರಿಂದ ಶೃಂಗೇರಿಯ ಶ್ರೀನಿವಾಸ್ ಮೂರ್ತಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದರು.
   ಅವರ ತಂದೆ ಅಡಿಕೆ ಕೊಯ್ಲು ಮಾಡುತ್ತಾ ಸಂಸಾರ ನಿರ್ವಹಣೆ ಮಾಡುತ್ತಿದ್ದರು ಆಗಿನ ಬಡತನದ ಕಾಲದಲ್ಲಿ ಅವರ ಪ್ರಾಮಾಣಿಕ ದುಡಿಮೆ ಸಂಸಾರದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ, ಮಕ್ಕಳು ಚಿಕ್ಕವರಿರುವಾಗಲೇ ಅಡಿಕೆ ಮರದಿಂದ ಬಿದ್ದು ಮಣಿಪಾಲ್ ಸೇರಿದಾಗ ಈ ಸಂಸಾರದ ನೌಕೆ ದಿಕ್ಕು ತಪ್ಪಿತು ಇದೇ ದುರಂತದಲ್ಲಿ ತಂದೆ ಸಾವು ನಂತರ ತಾಯಿ, ಇದರಿಂದ ಈ ಕುಟುಂಬ ಇವರ ಸಹೋದರಿಯ ಪಾಲನೆಯಲ್ಲಿ ಕಷ್ಟದ ಕ್ಷಣ ಕ್ಷಣದ ಜೀವನ ಇವರು ಬರೆದ ಪೇಸ್ ಬುಕ್ ಲೇಖನದಲ್ಲಿ ಓದಿ ನಾನು ಕಣ್ಣೀರಾಗಿದ್ದೆ.
   ಇವರ ತೋಟದ ಮಧ್ಯ ಹರಿಯುವ ಹಳ್ಳಕ್ಕೆ ಇವರೆ ಸ್ವಂತ ಶ್ರಮದಿಂದ ಸಣ್ಣ ಸಿಮೆಂಟ್ ಕಿರು ಸೇತುವೆ ಮಾಡಿದ್ದು, ಸ್ವಂತ ಕೃಷಿ ಕೆಲಸ ಇದಕ್ಕೆ ಇವರಿಗೆ ಸಹಕರಿಸುವ ಮಕ್ಕಳು ಪತ್ನಿ ಹೀಗೆ ಎಲ್ಲವೂ ಇವರ ಜೀವನದ ತೆರೆದ ಪುಟಗಳು ಇವರ ಪೇಸ್ ಬುಕ್ ನಲ್ಲಿ ದಾಖಲಾಗಿದೆ.
   ಇವರ ಮಕ್ಕಳು ಜೋಗ ಜಲಪಾತವನ್ನು ನೋಡುವ ಆಸೆ ವ್ಯಕ್ತಪಡಿಸುತ್ತಿದ್ದ ಬಗ್ಗೆ ಬರೆದಿದ್ದರು, ನಾನು ಇವರ ಜೋಗ್ ಪ್ರವಾಸವನ್ನು ಸ್ಪಾನ್ಸರ್ ಮಾಡುವುದಾಗಿ ಮತ್ತು ನನ್ನ ಅತಿಥಿ ಆಗಿ ಬರಬೇಕಾಗಿ ವಿನಂತಿಸಿದ್ದೆ ಆದರೆ ಸ್ವಾಬಿಮಾನಿ ಶ್ರೀನಿವಾಸ್ ಮೂರ್ತಿ ಪ್ರವಾಸ ಮುಂದು ಹಾಕುತ್ತಲೇ ಬಂದಿದ್ದಾರೆ.
   ಇತ್ತೀಚಿಗೆ ಸಹಿಸಲಾಗದ ಬೆನ್ನುನೋವಿಂದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸಮೀಪದ ಕೋಟೇಶ್ವರದ ಸರ್ಜನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಇಲ್ಲಿನ ವೈದ್ಯರು ಶೃಂಗೇರಿಯ ಇವರ ಪರಿಚಿತರು, ಇವತ್ತು ಅಥವ ನಾಳೆ ಆಪರೇಷನ್ ಇದೆ ಅಂತ ನಿನ್ನೆ ರಾತ್ರಿ ಇವರಿಗೆ ಪೋನ್ ಮಾಡಿದಾಗ ತಿಳಿಸಿದರು.
   ಬಯಾಪ್ಸಿ ರಿಪೋರ್ಟ್ ಇನ್ನೂ ಬಂದಿಲ್ಲ ಈ ಬಗ್ಗೆ ಶ್ರೀನಿವಾಸ್ ಮೂರ್ತಿ ಕುಟುಂಬ ಧೈರ್ಯದಲ್ಲಿದೆ, ಏನೇ ವರದಿ ಬಂದರೂ ಎದುರಿಸುವ ದೈರ್ಯ ಶ್ರೀನಿವಾಸ್ ಮೂರ್ತಿ ಬಾಲ್ಯದಿಂದಲೇ ಕಲಿತಿದ್ದಾರೆ.
   ಶ್ರೀನಿವಾಸ್ ಮೂರ್ತಿಗೆ ದೇವರು ಆರೋಗ್ಯ ಭಾಗ್ಯ ನೀಡಬೇಕಿತ್ತು ಅಂತ ಅನ್ನಿಸಿತು, ಏನೇ ಆದರೂ ಅವರು ಮತ್ತು ಅವರ ಕುಟುಂಬ ದೃತಿಗೆಡ ಬೇಕಾಗಿಲ್ಲ ಅವರು ಗುಣವಾಗಿ ಮನೆಗೆ ಬಂದು ಮೊದಲಿನಂತಾಗುತ್ತಾರೆ ಅದಕ್ಕೆ ಸ್ವಲ್ಪ ಸಮಯ ಬೇಕು.
  ಶ್ರೀನಿವಾಸ್ ಮೂರ್ತಿ ಯಾರಿಂದಲೂ ಆರ್ಥಿಕ ಸಹಾಯ ಯಾಚಿಸುವವರಲ್ಲ ಅವರಿಗೆ ಗೆಳೆಯರಾದ ನಮ್ಮೆಲ್ಲರ ಹಾರೈಕೆ ಸದಾ ಅವರ ಮೇಲೆ ಇರಲಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ