Skip to main content

Blog number 2093. ನಾವು ಎಳೆಯರು... ನಾವು ಗೆಳೆಯರು... 50 ವರ್ಷದ ಹಿಂದೆ ಈಗ ಆ ದಿನಗಳ ನೆನಪುಗಳು.

#ಸರ್ಕಾರಿ_ಮಾಧ್ಯಮಿಕ_ಶಾಲೆ_ಆನಂದಪುರಂ_ಶಾಲಾ_ಸಹಪಾಟಿಗಳು

#ಕಣ್ಣೂರು_ಮಂಜಪ್ಪ_ಹೊಸಕೊಪ್ಪದ_ನಾಗಪ್ಪ_ಕೋಟೆಕೊಪ್ಪದ_ಖಂಡೋಜಿ_ಶಿವಪ್ಪ

#ಗೆಳೆತನಗಳಲ್ಲಿ_ಕ್ಲಾಸ್_ಮೇಟ್_ಸಂಬಂದ_ವಿಶಿಷ್ಟವಾದದ್ದು

#ಜೀವಮಾನ_ಪೂರ್ತಿ_ನೆನಪಿಸಿಕೊಳ್ಳುವ_ಆದಿನಗಳ_ನೆನಪು

#ಹೀಗೆ_50_ವರ್ಷದ_ಹಿಂದೆ_ನಾವೆಲ್ಲ_ಒಂದೇ_ಶಾಲಾ_ಕೊಠಡಿಯಲ್ಲಿ_ವಿದ್ಯಾರ್ಥಿಗಳಾಗಿದ್ದೆವು.


  ನಾವೆಲ್ಲ 5 ನೇ ತರಗತಿಗೆ ಆನಂದಪುರಂನ ದಾಸಕೊಪ್ಪದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮಿಕ ಶಾಲೆಗೆ ಸೇರಿದಾಗ ಸುತ್ತ ಮುತ್ತಲಿನ ಹಳ್ಳಿಗಳಿಂದ ಪ್ರಾಥಮಿಕ ಶಿಕ್ಷಣ ಮುಗಿಸಿದ ಅನೇಕರು ಅವರ ಊರಲ್ಲಿ 1ನೇ ತರಗತಿಯಿಂದ 4ನೇ ತರಗತಿವರೆಗೆ ಮಾತ್ರ ಶಿಕ್ಷಣ ಇದ್ದಿದ್ದರಿಂದ ನಮ್ಮ ಜೊತೆ ಆದರು ಆಗೆಲ್ಲ 8 ರಿಂದ 10 ಕಿ.ಮಿ. ನಡೆದು ಬರುವುದು ದೊಡ್ಡ ವಿಷಯವಾಗಿರಲಿಲ್ಲ.
  ಬೆಳಿಗ್ಗೆ ಊಟ ಮಾಡಿ ಬರುತ್ತಿದ್ದ ಹಳ್ಳಿಯ ಮಕ್ಕಳು ಮತ್ತೆ ಆಹಾರ ಸೇವಿಸುವುದು ಸಂಜೆ ಶಾಲೆ ಬೆಲ್ ಹೊಡೆದಾಗ ನಡೆದು ಊರು ಸೇರಿ ಮನೆ ತಲುಪಿದಾಗಲೇ...
   ಆದರೆ ಬಾಲ್ಯದ ಆ ದಿನಗಳಲ್ಲಿ ಅದು ಕೊರತೆ ಅನ್ನಿಸುತ್ತಲೇ ಇರಲಿಲ್ಲ ಕಾಲಿಗೆ ಚಪ್ಪಲಿ ಯಾರೊಬ್ಬರೂ ದರಿಸುತ್ತಿರಲಿಲ್ಲ, ಆಗ ಬಳಸುತ್ತಿದ್ದ ಪೆನ್ನು ನಿಬ್ ನಿಂದ ಹರಿಯುವ ಇಂಕಿನಿಂದ ಬರೆಯುವ ಪೆನ್ನುಗಳು.
  ಆಗಿನ ಶಿಕ್ಷಕರೂ ಅತಿ ಕಡಿಮೆ ಸಂಬಳ ಪಡೆಯುವ ಬಡ ಶಿಕ್ಷಕರೇ ಆದರೆ ಅವತ್ತಿನ ಅವರ ಶ್ರಮ ಶಿಸ್ತು ಮಾತ್ರ ಈಗಿನ ಶಿಕ್ಷಣ ವ್ಯವಸ್ತೆಯಲ್ಲಿ ನಿರೀಕ್ಷಿಸಲು ಸಾಧ್ಯವೆ ಇಲ್ಲ.
  ಕಣ್ಣೂರಿನ ಮಂಜಪ್ಪ ನನ್ನ ಮಾದ್ಯಮಿಕ ಶಾಲೆಯ ಆಪ್ತ ಮಿತ್ರ ಪ್ರತಿ ದಿನ ನನಗೆ ಗರಡಿ ಮನೆ ಕುಸ್ತಿ ಪಟ್ಟು ಹೇಳಿಕೊಡುತ್ತಿದ್ದ, ಮಂಜಪ್ಪ ಗಾಜಿನ ಕಣ್ಣಿನ ಸುಂದರಾಂಗ ಆದ್ದರಿಂದ ಬೆಕ್ಕಿನ ಕಣ್ಣಿನ ಮಂಜಪ್ಪ ಅಂತನೂ ಕರೆಯುತ್ತಿದ್ದರು ಈಗ ಮಾದರಿ ಕೃಷಿಕನಾಗಿ, ಗ್ರಾಮ ಪಂಚಾಯಿತಿಯಲ್ಲಿ ಕೆಲ ಅವಧಿ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದಾರೆ.
   ಹೊಸಕೊಪ್ಪದ ನಾಗಪ್ಪ ಚುರುಕಾಗಿ ಆಟ ಓಟಗಳ ಹಸನ್ಮುಖಿ ಗೆಳೆಯ ಶಿಕ್ಷಕರಾಗಿ ಮುಖ್ಯೋಪಾದ್ಯಾಯರಾಗಿ ಸದ್ಯದಲ್ಲೇ ನಿವೃತ್ತಿ ಆಗಲಿದ್ದಾರೆ.
  ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಕೊಪ್ಪದ ಖಂಡೋಜಿ ಸೋಮಪ್ಪನವರು ಶಾಂತವೇರಿ ಗೋಪಾಲಗೌಡರ ಅನುಯಾಯಿಗಳು ಅವರ ಪುತ್ರ ಖಂಡೋಜಿ ಶಿವಪ್ಪನನ್ನ ಅವರ ಪತ್ನಿ ಸಹೋದರ ದಾಸಕೊಪ್ಪದ ಬೀರಪ್ಪರ ಮನೆಯಲ್ಲಿ ಓದಲು ಬಿಟ್ಟಿದ್ದರು ಈಗ ಶಿವಪ್ಪ ಹೊಸಂತೆಯಲ್ಲಿ ವಾಸ ಆಗಿದ್ದಾರೆ ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆದು ಬೆಲ್ಲ ಮಾರಾಟ ಮಾಡುತ್ತಾರೆ.
   ಮೊನ್ನೆ ನಮ್ಮ #ಶ್ರೀ_ಕೃಷ್ಣಸರಸ_ಕನ್ವೆನ್ಷನ್_ಹಾಲ್ ನಲ್ಲಿ ಮದುವೆಯಲ್ಲಿ ಭಾಗವಹಿಸಿದವರು ನನ್ನ ಬೇಟಿ ಮಾಡಲು ನನ್ನ ಆಫೀಸಿಗೆ ಬಂದಿದ್ದರು.
   ಮಾಧ್ಯಮಿಕ ಶಾಲೆ ದಿನಗಳಲ್ಲಿ ರೆಕ್ಕೆ ಬಂದ ಹಕ್ಕಿಯಂತೆ ನಮ್ಮ ನಮ್ಮ ಹೊಟ್ಟೆಪಾಡಿಗಾಗಿ ಹಾರಾಟ ಪ್ರಾರಂಬಿಸಿ 50 ವರ್ಷಗಳ ನಂತರ ಕಾಲು ಸೋತು ವಾಪಾಸು ಬಂದು ರೆಂಬೆ ಮೇಲೆ ಕೂತಂತೆ ಕಳೆದ ಜೀವನದ ಬಗ್ಗೆ ಮೆಲಕು ಹಾಕಿದೆವು ಪರಸ್ಪರ ಇನ್ನೊಮ್ಮೆ ಸಿಗೋಣ ಎಂದು ಹೋಗಿದ್ದಾರೆ.
  ಕ್ಲಾಸ್ ಮೇಟ್ ಸಂಬಂದ ಎಲ್ಲಾ ಸಂಬಂದಗಳಿಗಿಂತ ಹೆಚ್ಚು ಖುಷಿ ಕೊಡುವ ಸಂಬಂದವಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...