Skip to main content

Blog number 2120. ದೇಶದ ಪುಣ್ಯಕ್ಷೇತ್ರ ಕಾಶಿಯ ಕಪಿಲದಾರದಲ್ಲಿ ನಮ್ಮ ಕೆಳದಿ ಅರಸರ ಶಿಲಾಶಾಸನ ನಡೆದಾಡುವ ಕಲ್ಲಾಗಿ ಬಳಸುತ್ತಿರುವುದನ್ನ ಸಾಗರದ ಯುವ ವಕೀಲ ಪ್ರವೀಣ್ ಕೆ.ವಿ. ಬಯಲು ಮಾಡಿದ್ದಾರೆ.

#ನಮ್ಮ_ಊರಿನ_ಜನಪರ_ಹೋರಾಟಗಾರರು_ವಕೀಲರು_ಆದ_ಕೆ_ವಿ_ಪ್ರವೀಣ್

#ಕಾಶಿ_ಯಾತ್ರೆ_ಎಲ್ಲರಲ್ಲೊಬ್ಬರಂತೆ_ಮಾಡಲಿಲ್ಲ

#ಕಾಶಿ_ಕಪಿಲದಾರದ_ಕೊಳದಲ್ಲಿ_ಕೆಳದಿ_ಅರಸರ_ಶಿಲಾಶಾಸನ_ಕಾಲು_ದಾಟಿನ_ಕಲ್ಲು_ಆಗಿದ್ದನ್ನ

#ದಾಖಲಿಸಿದ್ದಾರೆ_ಅದರ_ವಿಡಿಯೋ_ಮಾಡಿ_ಸಾಮಾಜಿಕ_ಜಾಲತಾಣದಲ್ಲಿ_ಪೋಸ್ಟ್_ಮಾಡಿದ್ದು_ವೈರಲ್_ಆಗಿದೆ

#ಪುಣ್ಯಕ್ಷೇತ್ರ_ಕಾಶಿಯಲ್ಲಿ_ಕೆಳದಿ_ಅರಸರ_ಶಾಸನಕ್ಕೆ_ಈ_ಗತಿ_ಬಂದಿದ್ದಕ್ಕೆ_ಆಕ್ರೋಶ_ವೃಕ್ತವಾಗಿದೆ

#ಇದ_ಸರಿ_ಮಾಡುವ_ತನಕ_ಪ್ರವೀಣ್_ವಿರಮಿಸುವುದಿಲ್ಲ.

  ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಇರುವಕ್ಕಿ ಕೃಷಿ ವಿದ್ಯಾಲಯದ ಸಮೀಪದ ಕಲ್ಲುಕೊಪ್ಪದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾಗಿ ಬಂದು ನೆಲೆಸಿದ ವೀರಭದ್ರಪ್ಪ ಗೌಡರನ್ನ ಜನ ಪ್ರೀತಿಯಿಂದ ಮರಿಗೌಡರೆಂದು ಕರೆಯುತ್ತಾರೆ ಅವರ ಎರಡನೆ ಪುತ್ರರೇ ವಕೀಲರಾದ ಕೆ.ವಿ.ಪ್ರವೀಣ್.
  ಆನಂದಪುರಂ ಸರ್ಕಾರಿ ಕನ್ನಡಶಾಲೆಗೆ ನಿತ್ಯ ಸುಮಾರು ನಾಲ್ಕು ಕಿಲೋ ಮೀಟರ್ ನಡೆದು ಬರುತ್ತಿದ್ದ ಬಾಲಕ ಪ್ರವೀಣ್ ನಿತ್ಯ ನನ್ನ ಮನೆ ಎದುರು ಕೀಟಲೆ ಮಾಡುತ್ತಾ ನಗುತ್ತಾ ಹೋಗುತ್ತಿದ್ದವರು ಸಂಜೆ ವಾಪಾಸು ಹೋಗುವಾಗಲೂ ಅದೇ ಎನರ್ಜಿ ಇರುತ್ತಿತ್ತು ಇವರಲ್ಲಿ.
  ಕಟ್ಟರ್ ಹಿಂದುತ್ವವಾದಿ, ಬಿಜೆಪಿ ಪಕ್ಷದ ಅಭಿಮಾನಿ ಸಂಘಟಕರಾಗಿದ್ದಾರೆ ಆದರೆ ಬಿಜೆಪಿ ಪಕ್ಷ ಇವರಿಗೆ ಸರಿಯಾದ ಸ್ಥಾನ ಮಾನ ಈವರೆಗೆ ನೀಡಿಲ್ಲ.
  ಜನಪರವಾಗಿ ನ್ಯಾಯಾಲಯದಲ್ಲಿ ಹಣ ಪಡೆಯದೇ ಅನೇಕ ಹೋರಾಟಗಾರರ ಕೇಸು ನಡೆಸುವುದು ನೋಡಿದ್ದೇನೆ ನಮ್ಮ ಊರಿನ ಶ್ರೀವರಸಿದ್ದಿ ವಿನಾಯಕ ದೇವಸ್ಥಾನದ ಹುಂಡಿ ಕಳ್ಳತನವಾದಾಗ ಪೋಲಿಸರು ಕಳ್ಳನನ್ನ ಪತ್ತೆ ಮಾಡಿ ಹುಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಅದನ್ನು ನ್ಯಾಯಾಲಯದಲ್ಲಿ ಕೇಸು ನಡೆಸಿಕೊಟ್ಟವರು ಇವರು ಆದರೆ ದೇವಸ್ಥಾನದ ಕೇಸಿಗೆ ಒಂದೇ ಒಂದು ರೂಪಾಯಿ ಶುಲ್ಕ ಪಡೆಯಲಿಲ್ಲ.
  ಈ ಸೇವೆಗಾಗಿ ಜಾತ್ರೆಯಲ್ಲಿ ದೇವಸ್ಥಾನದಿಂದ ಸನ್ಮಾನ ಸಮಾರಂಭ ಇಟ್ಟಿದ್ದರು ಆದರೆ ಸನ್ಮಾನ ಬೇಡ ಅಂತ ನಿರಾಕರಿಸಿದ್ದರು.
   ಸೋನಿಯಾ ಗಾಂಧಿ ಮೇಲೆ ಕೇಸ್ ಹಾಕಿದ್ದಾರೆ ಅದು ವಜಾ ಆಗಿದ್ದರಿಂದ ಅಫೀಲು ಮಾಡಿದ್ದಾರೆ ಯಾರಾದರೂ ಕೆಣುಕಿದರೆ ಅವರನ್ನ ನ್ಯಾಯದ ತಕ್ಕಡಿಗೆ ಹಾಕದೆ ಬಿಡುವುದಿಲ್ಲ.
  ರಾಷ್ಟ್ರಮಟ್ಟದ ವಕೀಲರ ಪರಿಷತ್ ಗಳಲ್ಲಿ ನಡೆಯುವ ದೊಡ್ಡ ದೊಡ್ಡ ಸಭೆಯಲ್ಲಿ ಹಿಂದಿ ಇಂಗ್ಲಿಷಿನಲ್ಲಿ ತಮ್ಮ ಸುದೀರ್ಘವಾದ ಬಾಷಣ ಪ್ರಸ್ತುತಪಡಿಸುವ ವಿಡಿಯೋ ನೋಡಿದ್ದೇನೆ.
 ಇತ್ತೀಚಿಗೆ ಕಾಶಿಯಾತ್ರೆಗೆ ಇವರು ರೈಲಿನಲ್ಲಿದ್ದಾಗ ಶುಭ ಹಾರೈಸಿದ್ದೆ ನಮ್ಮ ದೇವಾಲಯದ ಸಮಿತಿಯ ಅಂಬಮ್ಮ (ಶ್ರೀಮತಿ ಅಂಬೂಜಾಕ್ಷಿ) ಮತ್ತು ಇತರರನ್ನ ತಮ್ಮ ಜೊತೆ ಕಾಶಿ ಅಯೋಧ್ಯ ಯಾತ್ರೆ ಮಾಡಿಸಿ ಕರೆತಂದಿದ್ದಾರೆ.
 ಈ ಸಂದರ್ಭದಲ್ಲಿ ಕಾಶಿಯ ಕಪಿಲದಾರದಲ್ಲಿ ಕೆಳದಿ ಇತಿಹಾಸದ ಶಿಲಾಶಾಸನವನ್ನ ಜನ ಓಡಾಡುವ ಕಲ್ಲನ್ನಾಗಿ ಬಳಸುವುದನ್ನ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ವೈರಲ್ ಆಗಿದೆ.
  ಕೆಳದಿ ಶಿಲಾ ಶಾಸನ ಸಂರಕ್ಷಣೆ ಮಾಡಿ ಸೂಕ್ತ ಸ್ಥಾನದಲ್ಲಿ ಅಳವಡಿಸುವ ತನಕ ಇವರು ವಿರಮಿಸುವವರಲ್ಲ.
  ಅನೇಕರು ಇವರ ಪೋಸ್ಟಿಗೆ ಇದೇನು ಹೊಸ ವಿಷಯವಲ್ಲ ಎಂಬಂತೆ ಕುಹಕವಾಡುವುದು ನೋಡಿದ್ದೇನೆ ಅದಕ್ಕೆ ಈ ಕೆಳಕಂಡ ಪ್ರತಿ ಕ್ರಿಯೆ ನನ್ನದು.
https://www.facebook.com/share/p/iRCd5EV2PGk77U35/?mibextid=oFDknk.
  #ಪ್ರಿಯ_ವಕೀಲರಾದ_ಪ್ರವೀಣರಿಗೆ
  ಎಲ್ಲಾ ಚರಿತ್ರೆ ನಡೆದದ್ದೇ.. ದಾಖಲಾದದ್ದೇ... ನೋಡಿದ್ದೇ ಇರಬಹುದು ಆದರೆ ಕೆಳದಿ ಇತಿಹಾಸದ ಶಾಸನ ಕಾಶಿಯಲ್ಲಿ ಜನ ದಾಟುವ ಕಲ್ಲಾಗಿದ್ದು ನೋವಿನ ಸಂಗತಿ.
   ಇದನ್ನು ತಾವು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿರುವುದರಿಂದ ನಮಗೆ ಗೊತ್ತಾಗಲು ಕಾರಣವಾಯಿತು.
   ಲಕ್ಷಾಂತರ - ಕೋಟ್ಯಾಂತರ ಜನ ಕಾಶಿಯಾತ್ರೆ ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ ಆದರೆ ನಿಮ್ಮದು ಅನ್ವೇಷಣಾ ಯಾತ್ರೆಯೂ ಹೌದು ಮತ್ತು ಕನ್ನಡ ನಾಡು-ನುಡಿ-ಜಲದ ಬಗ್ಗೆ ನಿಮಗಿರುವ ಕಾಳಜಿ ಕೂಡ.
  ಶಿವಮೊಗ್ಗ ಜಿಲ್ಲೆಯ ಒಂದಿಷ್ಟು ಜನರಿದ್ದಾರೆ ಅವರ ಕೆಲಸ ಜಿಲ್ಲೆಯ ಇತಿಹಾಸ ಪರಿಚಯಿಸುವ ಲೇಖನ ವಿಡಿಯೋ ಮಾಡಿ ಯಾರಾದರು ಪೋಸ್ಟ್ ಮಾಡಿದರೆ ತಗಾದೆ ತೆಗೆಯತ್ತಾರೆ.
  ಬೇರೆ ಜಿಲ್ಲೆಯ ಯೂಟ್ಯೂಬರುಗಳು  ನಮ್ಮ ಜಿಲ್ಲೆಯ ಇತಿಹಾಸ ಪರಿಚಯಿಸುವ ಕೆಲಸ ಮಾಡಿದರೆ ಪುರಾತತ್ವ ಇಲಾಖೆ (ASI) ಮತ್ತು ಅರಣ್ಯ ಇಲಾಖೆಗೆ ದೂರು ದಾಖಲಿಸುತ್ತಾ ಅಡೆ ತಡೆ ಮಾಡುತ್ತಾರೆ.
 ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಪುರಾತತ್ವ ಇಲಾಖೆಗೆ ಸೇರದೆ ಅರಣ್ಯ ಇಲಾಖೆಯಲ್ಲೇ ಇರುವ ಕೆಳದಿ ಮತ್ತು ಗೇರುಸೊಪ್ಪೆ ಅರಸರ ಕೋಟೆ-ಸ್ಮಾರಕಗಳ ಬಗ್ಗೆ ಯಾವ ಸಂಶೋಧನಾ ಸಂಸ್ಥೆಯೂ ಈವರೆಗೆ  ಕೆಲಸ ಮಾಡಿಲ್ಲ, ಮಾಡಿದ್ದರೆ ಈ ರೀತಿ ಶಿಲಾಶಾಸನಗಳು ಯಾರದೋ ಮನೆ ಹಿತ್ತಿಲ ಬಟ್ಟೆ ಒಗೆಯುವ ಕಲ್ಲಾಗುತ್ತಿರಲಿಲ್ಲ ಅಥವ ಚರಂಡಿ ಕಲ್ಲುಗಳಾಗುತ್ತಿರಲಿಲ್ಲ.
  ಅದಕ್ಕಾಗಿ ನನ್ನ ಅಭಿಯಾನ #ನಿಮ್ಮ_ಊರಿನ_ಇತಿಹಾಸ_ನೀವೇ_ಸಂರಕ್ಷಿಸಿ_ಮತ್ತು_ಅದನ್ನು_ದಾಖಲಿಸಿ ಇದಕ್ಕಾಗಿ ಸ್ಥಳೀಯ ಶಾಲಾ ವಿದ್ಯಾರ್ಥಿ ಶಿಕ್ಷಕರ ಜೊತೆ ಜನಜಾಗೃತಿ ಮಾಡಿ ಎನ್ನುವುದು.
  ಇತಿಹಾಸ ಉಳಿಸುವ ನಿಮ್ಮ ಕಾಳಜಿಗೆ ಅಭಿನಂದನೆಗಳು.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...